ಮಾದಹಳ್ಳಿಯಲ್ಲಿ ಸ್ಥಾಪನೆಯಾಗಿರುವ ಶ್ರೀ ಉಕ್ಕಿನಕಂತೆ ಮಠವು ಪುರಾಣಪ್ರಸಿದ್ದಿಯನ್ನು ಪಡೆದಿದೆ. ಪುರಾತನ ಪರಂಪರೆಯ ಶ್ರೀಮಠದ ಸ್ಥಾಪಕ ಗುರುಗಳೆಂದುಪರಮ ಪೂಜ್ಯ ಶ್ರೀ ಉಕ್ಕಿನಕಂತೆ ಮಹಾಸ್ವಾಮಿಗಳನ್ನು ಗುರುತಿಸˉÁಗಿದೆಯಾದರೂಸ್ಪಷ್ಟತೆಯಿಲ್ಲ. ಶ್ರೀಮಠದ ಪರಂಪರೆಯಲ್ಲಿ ಈವರೆಗೂ 17 ಜನ ಶ್ರೀಗಳು ಪಟ್ಟಕ್ಕೆಬಂದಿದ್ದಾರೆಂದು ಹೇಳˉÁಗಿದ್ದು ಮಠದ ಆವರಣದಲ್ಲಿ 15 ಗದ್ದುಗೆಗಳನ್ನುಕಾಣಬಹುದಾಗಿದೆ.ಶ್ರೀಮಠದ ಪರಂಪರೆಯಲ್ಲಿ ಬಂದಿರುವ ಶ್ರೀಗಳ ಬಗ್ಗೆ ಖಚಿತ ಮಾಹಿತಿಗಳಕೊರತೆಯಿದ್ದು 15ನೇ ಶ್ರೀಗಳಾದ ಶ್ರೀ ಷ.ಬ್ರ. ಜಡೆ ಮಹಾಂತ ಸ್ವಾಮಿಗಳ ನಂತರದಪರಂಪರೆಯ ಬಗ್ಗೆ ಮಾಹಿತಿ ಲಭ್ಯವಿದೆ ಹಾಗೂ ಪರಂಪರೆಯಲ್ಲಿ ಬಂದಿರುವ ಶ್ರೀಬೂದಿಸ್ವಾಮಿಗಳು ಪವಾಡ ಪುರುಷರೆಂದು ಹೇಳˉÁಗಿದ್ದು ಇವರ ಹೆಸರು ಪ್ರಚಲಿತದಲ್ಲಿದೆ.15ನೇ ಶ್ರೀಗಳಾದ ಶ್ರೀ ಜಡೆ ಮಹಾಂತ ಸ್ವಾಮಿಗಳು ಮಠದ ಅಗಾದ ಆಸ್ತಿಯನ್ನುಕ್ರಮಬದ್ದಗೊಳಿಸಿ ಶ್ರೀಮಠದ ಆದಾಯ ಮೂಲಗಳನ್ನು ಹೆಚ್ಚಿಸಿದ್ದರು.ಪರಂಪರೆಯ ಹಿಂದಿನ ಶ್ರೀಗಳಾದ ಶ್ರೀ ಷ.ಬ್ರ. ತೋಂಟದಾರ್ಯ ಸ್ವಾಮಿಗಳು1975ರಲ್ಲಿ ಶ್ರೀಮಠದ ಅಧಿಕಾರ ವಹಿಸಿಕೊಂಡು ತಮ್ಮ ಕಾˉÁವಧಿಯಲ್ಲಿ ಮಠ ಪ್ರಜ್ವಲವಾಗಿಬೆಳಗುವಂತೆ ಮಾಡಿದ್ದರು. ಮಹಾ ಪಂಡಿತರಾಗಿದ್ದ ಶ್ರೀಗಳು ಯೋಗಸಿದ್ದಿಯನ್ನು ಪಡೆದಮಹಾಚೇತನರು. ಇಂತಹ ಶ್ರೀಗಳು 2003ರ ಮಾರ್ಚ್ 24ರಲ್ಲಿ ಈಗಿನ ಶ್ರೀಗಳಾದ ಶ್ರೀಷ.ಬ್ರ. ಸಾಂಬ ಸದಾಶಿವ ಮಹಾಸ್ವಾಮಿಗಳನ್ನು ತಮ್ಮ ಉತ್ತರಾಧಿಕಾರಿಗಳನ್ನಾಗಿಪಟ್ಟಾಧಿಕಾರದ ಅನುಗ್ರಹ ನೀಡಿ 2003ರ ಜೂನ್ನಲ್ಲಿ ಲಿಂಗೈಕ್ಯರಾದರು.ಈಗಿನ ಶ್ರೀಗಳು ಶ್ರೀಮಠಕ್ಕೆ ಪಟ್ಟಾಧಿಕಾರ ಸ್ವೀಕರಿಸುವ ಮೊದಲು ಯಳಂದೂರುತಾಲ್ಲೂಕು ಹೊನ್ನೂರು ಮಠದ ಪಟ್ಟದಲ್ಲಿದ್ದರು. ಶ್ರೀಗಳು ಶ್ರೀಮಠವನ್ನು ಸುತ್ತೂರು ಶ್ರೀಗಳಮಾರ್ಗದರ್ಶನದಲ್ಲಿ ಭಕ್ತರ ಸಹಕಾರದೊಂದಿಗೆ ಸಮರ್ಥವಾಗಿ ಮುನ್ನಡೆಸಿಕೊಂಡುಬಂದಿದ್ದಾರೆ. ಶ್ರೀಮಠದ ಸುತ ್ತಮುತ ್ತ ಬಹು ಹಿಂದೆ ಮಾದಹಳ್ಳಿ ಗ್ರಾಮಅಸ್ತಿತ್ತ್ವದಲ್ಲಿತ್ತೆಂಬುದಕ್ಕೆ ಕುರುಹುಗಳಿದ್ದು ಪ್ರಸ್ತುತ ಶ್ರೀಮಠದ ಸುತ್ತಮುತ್ತ 1.5 ಕಿ.ಮೀ.ಅಂತರದೊಳಗೆ ಯಾವುದೇ ಗ್ರಾಮವಿಲ್ಲ.
Swamiji
Swamiji Name :
ಶ್ರೀ ಷ.ಬ್ರ. ಸಾಂಬಸದಾಶಿವ ಮಹಾಸ್ವಾಮಿಗಳು
Date of Birth :
05-02-1959
Place :
ಬಸವಹಟ್ಟಿ, ಚಾಮರಾಜನಗರ ತಾ||
Pattadikara :
24-03-2003
Programs
ಪ್ರತಿ ಅಮವಾಸ್ಯೆಗೆ ರುದ್ರಾಭಿಷೇಕ, ಪೂಜೆ, ಪ್ರವಚನ, ಮಹಾಪ್ರಸಾದ ಕಾರ್ತೀಕ ಮಾಸದ ಕೊನೆಯ ಕಾರ್ತೀಕದಲ್ಲಿ ವಿಶೇಷ ಕಾರ್ಯಕ್ರಮಗಳು ಪಾಲ್ಗುಣ ಮಾಸದಲ್ಲಿ ಶ್ರೀ ಗುರು ಬೂದಿಸ್ವಾಮಿಗಳ ಆರಾಧನೆ ¥ತಿÀ್ರ ಐದು ವರ್ಷಕ್ಕೊಮ್ಮೆ "ಉಕ್ಕಿನಕಂತೆ ಜನಕ" ಉತ್ಸವವು ಬಹಳ ವಿಜೃಂಭಣೆಯಿಂದ ನಡೆಯುತ್ತದೆ
Institutions
ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢಶಾˉÉ ವಿದ್ಯಾರ್ಥಿ ನಿಲಯ, ಹುಣಸೂರು
Full Address Kannada
ಶ್ರೀ ಉಕ್ಕಿನಕಂತೆ ಮಠ ಮಾದಹಳ್ಳಿ, ಬನ್ನಿಕೊಪ್ಪ ಪೋಸ್ಟ್ - 571 103 ಹುಣಸೂರು ತಾ||, ಮೈಸೂರು ಜಿˉÉ್ಲ