ಮೈಸೂರು ಜಿಲ್ಲೆ ಹೆಗ್ಗಡದೇವನಕೋಟೆ ತಾಲ್ಲೂಕು ಕೇಂದ್ರದಿಂದ 13 ಕಿ.ಮೀ.ದೂರದಲ್ಲಿರುವ ಬಿಡಗಲು ಗ್ರಾಮದಿಂದ 1 ಕಿ.ಮೀ. ಅಂತರದಲ್ಲಿರುವ ಶ್ರೀ ಪಡುವಲುವಿರಕ್ತಮಠವು ತನ್ನ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಈ ಭಾಗದಜನರಲ್ಲಿ ಧಾರ್ಮಿಕ ಅರಿವನ್ನು ಮೂಡಿಸುವಲ್ಲಿ ಯಶಸ್ವಿಯಾಗಿದೆ. ಸುಮಾರು 350ವರ್ಷಗಳ ಹಿಂದೆ ಸ್ಥಾಪಿತಗೊಂಡಿರುವ ಶ್ರೀ ಪಡುವಲು ವಿರಕ್ತ ಮಠದ ಕರ್ತೃಗುರುಗಳುಪೂಜ್ಯ ಶ್ರೀ ಕಾಳವಡೆಯ ಗುರುಗಳು.ಉತ್ತರದ ಕಡೆಯಿಂದ ಸಂಚಾರ ಹೊರಟು ಅಲ್ಲಲ್ಲಿ ಅನುಷ್ಠಾನಗೊಳ್ಳುತ್ತಕೊನೆಯಲ್ಲಿ ಬಿಡಗಲು ಗ್ರಾಮಕ್ಕೆ ಆಗಮಿಸಿರುವ ಕರ್ತೃಗುರುಗಳು ತಮ್ಮ ಅನುಷ್ಟಾನಶಕ್ತಿಯಿಂದ ಅಪಾರ ಸಂಖ್ಯೆಯ ಭಕ್ತಬಳಗವನ್ನು ಹೊಂದಿ ಅವರುಗಳ ಸಹಕಾರದೊಂದಿಗೆಶ್ರೀಮಠವನ್ನು ಸ್ಥಾಪಿಸಿದ್ದಾರೆ. ಕರ್ತೃಗುರುಗಳಿಗೆ ಶ್ರೀ ಕಾಳವಡೆಯ ಗುರುಗಳೆಂದು ಹೆಸರುಬರಲು ಕಾರಣ ಶ್ರೀಗಳು ಅನುಷ್ಠಾನಕ್ಕೆ ಕೂತ ಸಂದರ್ಭದಲ್ಲಿ ಕಾಳಿಂಗ ಸರ್ಪವೊಂದುಬಂದು ಗುರುಗಳಿಗೆ ಸ್ಪರ್ಶಿಸಿದಾಗ ಗುರುಗಳು ತಮ್ಮ ತಪಶ್ಶಕ್ತಿಯಿಂದಲೇ ಅದನ್ನುನಿಗ್ರಹಿಸಿದರೆಂದು ಪ್ರತೀತಿಯಿರುವುದು.ಕರ್ತೃಗುರುಗಳ ನಂತರದಲ್ಲಿ ಶ್ರೀ ಮ.ನಿ.ಪ್ರ. ಶಿವನಂಜಯ್ಯ ಸ್ವಾಮಿಗಳು, ಶ್ರೀಮ.ನಿ.ಪ್ರ. ಪುಟ್ಟಯ್ಯ ಸ್ವಾಮಿಗಳು, ಶ್ರೀ ಮ.ನಿ.ಪ್ರ. ಗುರುಪಾದ ಸ್ವಾಮಿಗಳು ಹಾಗೂ ಹಿಂದಿನಶ್ರೀಗಳಾದ ಶ್ರೀ ಮ.ನಿ.ಪ್ರ. ಶಿವಸ್ವಾಮಿಗಳು ಅಧಿಕಾರ ನಡೆಸಿದ್ದಾರೆ. ಹಿಂದಿನ ಶ್ರೀಗಳು 1981ರಸೆಪ್ಟೆಂಬರ್ 08 ರಂದು ಲಿಂಗೈಕ್ಯರಾಗಿದ್ದು ಇವರಿರುವಾಗಲೇ ಈಗಿನ ಶ್ರೀಗಳನ್ನುನೇಮಿಸಿದ್ದರು.ಪ್ರಸ್ತುತ ಶ್ರೀಗಳಾದ ಶ್ರೀ ಮ.ನಿ.ಪ್ರ. ಮಹಾದೇವ ಸ್ವಾಮಿಗಳು 1981ರ ನವೆಂಬರ್02ರಂದು ಶ್ರೀಮಠದ ಪಟ್ಟಾಧಿಕಾರ ವಹಿಸಿಕೊಂಡಿದ್ದು ಶ್ರೀಮಠವನ್ನುಅಭಿವೃದ್ದಿಗೊಳಿಸುತ್ತಿದ್ದಾರೆ. ಶ್ರೀಗಳು ಭಕ್ತರ ಸಹಕಾರದೊಂದಿಗೆ 2007ರಲ್ಲಿ ಶ್ರೀಮಠವನ್ನುಜೀರ್ಣೋದ್ಧಾರಗೊಳಿಸಿದ್ದು ಇನ್ನೂ ಹೆಚ್ಚಿನ ಅಭಿವೃದ್ದಿ ಕಾರ್ಯಗಳಿಗೆ ಯೋಜನೆರೂಪಿಸಿಕೊಂಡು ಕಾರ್ಯೋನ್ಮುಖರಾಗಿದ್ದಾರೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಮಹಾದೇವ ಸ್ವಾಮಿಗಳು
Date of Birth :
22-07-1975
Place :
ಮೂಡುಗೂರು, ಗುಂಡ್ಲುಪೇಟೆ ತಾ||
Pattadikara :
02-11-1981
Photo :
Programs
ಪ್ರತಿ ತಿಂಗಳು ಹುಣ್ಣಿಮೆಗೆ “ಶಿವಾನುಭವ ಸಮ್ಮೇಳನ” ಕಾರ್ಯಕ್ರಮ ನಡೆಯುತ್ತದೆ
ಕಾರ್ತೀಕ ಮಾಸದ ಸೋಮವಾರದಂದು ವಿಶೇಷ ಪೂಜೆ & ದೀಪೋತ್ಸವ
ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ ಹಾಗೂ ಪ್ರವಚನ
ಧನುರ್ಮಾಸದಲ್ಲಿ ನಿತ್ಯ ವಿಶೇಷ ಪೂಜೆಗಳು
Photos
Full Address Kannada
ಶ್ರೀ ಪಡವಲು ವಿರಕ್ತ ಮಠ ಬಿಡಗಲು,
ಸರಗೂರು ಪೋಸ್ಟ್ - 571 121
ಹೆಚ್.ಡಿ.ಕೋಟೆ ತಾ||, ಮೈಸೂರು ಜಿಲ್ಲೆ