ಇಂಡಿ ತಾಲ್ಲೂಕಿನ ಬಂಥನಾಳ ಗ್ರಾಮದಲ್ಲಿ ಸುಮಾರು 1730 ರ ಸುಮಾರಿನಲ್ಲಿಶ್ರೀ ಮ.ನಿ.ಪ್ರ. ವೃಷಭಲಿಂಗಾರ್ಯ ಶಿವಯೋಗಿಗಳಿಂದ ಸ್ಥಾಪಿತಗೊಂಡಿರುವ ಶ್ರೀ ವೃಷಭಲಿಂಗೇಶ್ವರ ಸಂಸ್ಥಾನ ಮಠವು ತನ್ನ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಮೂಲಕ ಈ ಭಾಗದಲ್ಲಿ ಹೆಸರು ಮಾಡಿದೆ. ಮೊದಲು ಸಂಸಾರಿಗಳಾಗಿದ್ದ ಕರ್ತೃಗುರುಗಳುತದನಂತರ ಸಂಸಾರ ತ್ಯಜಿಸಿ ಸಂಚಾರ ಹೊರಟು ಬಂಥನಾಳಕ್ಕೆ ಆಗಮಿಸುತ್ತಾರೆ. ಶ್ರೀಬಸವಲಿಂಗ ಸ್ವಾಮಿಗಳೆಂಬ ಮೂಲನಾಮ ಹೊಂದಿದ್ದ ಶ್ರೀಗಳು ಶ್ರೀ ವೃಷಭಲಿಂಗಾರ್ಯಶಿವಯೋಗಿಗಳೆಂಬ ಅಭಿದಾನ ಪಡೆದು ಮಠದ ಕರ್ತೃಗುರುಗಳಾಗಿ ಶ್ರೀಮಠವನ್ನು ಪ್ರಸಿದ್ಧಿಗೆತಂದರು. ನಂತರದಲ್ಲಿ ಶ್ರೀ ಶಂಕರಲಿಂಗ ಶಿವಯೋಗಿಗಳು ಹಾಗೂ ಶ್ರೀ ಚನ್ನಬಸವಶಿವಯೋಗಿಗಳು ಮಠದ ಅಧಿಕಾರವನ್ನು ವಹಿಸಿಕೊಂಡು ಸಮರ್ಥವಾಗಿ ಮುನ್ನಡೆಸಿದ್ದಾರೆ.1916ರಲ್ಲಿ ಶ್ರೀಮಠದ ಅಧಿಕಾರ ವಹಿಸಿಕೊಂಡ ಹಿಂದಿನ ಶ್ರೀಗಳಾದ ಶ್ರೀ ಸಂಗನಬಸವ ಶಿವಯೋಗಿಗಳು ಶ್ರೀಮಠವನ್ನು ಉತ್ತುಂಗಕ್ಕೆ ಕೊಂಡೊಯ್ದರು. ಶ್ರೀಗಳು ಮೊದಲುಯರನಾಳು ಮಠದ ಉತ್ತರಾಧಿಕಾರಿಗಳಾಗಿದ್ದು ನಂತರ ಶ್ರೀ ಚನ್ನಬಸವ ಶಿವಯೋಗಿಗಳಆಕರ್ಷಣೆಗೆ ಒಳಗಾಗಿ ಬಂಥನಾಳಕ್ಕೆ ಬಂದು ಶ್ರೀಮಠದ ಉತ್ತರಾಧಿಕಾರಿಗಳಾಗಿನೇಮಕಗೊಂಡು ಶ್ರೀಮಠವನ್ನು ಸರ್ವಾಂಗೀಣವಾಗಿ ಅಭಿವೃದ್ಧಿಪಡಿಸಿದ್ದಾರೆ.ಶ್ರೀಗಳು ಕೇವಲ ಧಾರ್ಮಿಕ, ಸಾಮಾಜಿಕವಾಗಿ ಅಲ್ಲದೇ ದೇಶದ ಸ್ವಾತಂತ್ರ್ಯಹೋರಾಟದಲ್ಲಿಯೂ ಮುಂಚೂಣಿಯಲ್ಲಿದ್ದವರು. ಇವರ ಸ್ವಾತಂತ್ರ್ಯ ಹೋರಾಟದಚಟುವಟಿಕೆಗಳನ್ನು ಗಮನಿಸಿದ ಕರ್ನಾಟಕದ ಗಾಂಧಿ ಹರ್ಡೇಕರ್ ಮಂಜಪ್ಪನವರುಶ್ರೀಮಠಕ್ಕೆ ಬಂದು ಗುರುಗಳ ಕೃಪಾಶೀರ್ವಾದ ಪಡೆದು ಈ ಭಾಗದ ಹೋರಾಟಗಾರರನ್ನುಹುರಿದುಂಬಿಸಿದ್ದರು. ಶ್ರೀಗಳು ವಿಜಯಪುರದಲ್ಲಿ ಶಿವಾನುಭಮಂಟಪ ಪೂಜೆ ಹಾಗೂಪುರಾಣ ಪ್ರವಚನಗಳನ್ನು ಪ್ರಾರಭಿಸಿ ನಂತರದಲ್ಲಿ ನಾಡಿನಾದ್ಯಂತ 771 ಶಿವಾನುಭಮಂಟಪಪೂಜೆಯನ್ನು ಆಚರಿಸಿ ಧರ್ಮ ಜಾಗೃತಿ ಮಾಡಿದ ಮಹಾಮಹಿಮರು.ಈಗಿನ ಶ್ರೀಗಳಾದ ಶ್ರೀ ವೃಷಭಲಿಂಗ ಶಿವಯೋಗಿಗಳು 1971ರಲ್ಲಿ ಅಧಿಕಾರಕ್ಕೆಬಂದು ಹಿರಿಯ ಗುರುಗಳಂತೆಯೇ ಶ್ರೀಮಠವನ್ನು ಧಾರ್ಮಿಕ, ಸಾಮಾಜಿಕ ಹಾಗೂಸಾಂಸ್ಕøತಿಕವಾಗಿ ಹೆಚ್ಚು ಅಭಿವೃದ್ಧಿಪಡಿಸಿ ಭಕ್ತರಿಗೆ ಸೂಕ್ತಮಾರ್ಗದರ್ಶನ ನೀಡುತ್ತಿದ್ದಾರೆ.
Swamiji
Swamiji Name :
ಶ್ರೀ ಮ.ನಿ.ಪ್ರ. ವೃಷಭಲಿಂಗ ಶಿವಯೋಗಿಗಳು
Place :
ಹುನಗುಂದ, ಬಾಗಲಕೋಟೆ ಜಿ||
Pattadikara :
1971
Photo :
Programs
ಪ್ರತಿ ಅಮವಾಸ್ಯೆಗೆ "ಶಿವಾನುಭವ ಗೋಷ್ಠಿ" ಮೇ ತಿಂಗಳಲ್ಲಿ ಲಿಂ|| ಶ್ರೀಗುರು ಸಂಗನಬಸವ ಶಿವಯೋಗಿಗಳ ಪುಣ್ಯಾರಾಧನೆ.
ಶಿವರಾತ್ರಿಗೆ ಶ್ರೀ ಮಠದ ರಥೋತ್ಸವ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳು.
Photos
Full Address Kannada
ಶ್ರೀ ವೃಷಭಲಿಂಗೇಶ್ವರ ಸಂಸ್ಥಾನ ಮಠ
ಬಂಥನಾಳ - 586 215
ಇಂಡಿ ತಾ||, ವಿಜಯಪುರ ಜಿ||