ಬಸವನಬಾಗೇವಾಡಿ ಪಟ್ಟಣದ ಮದ್ಯಭಾಗದಲ್ಲಿ ಶ್ರೀ ರಾಚೋಟೇಶ್ವರ ಸ್ವಾಮಿಗಳಿಂದ 15ನೇ ಶತಮಾನದಲ್ಲಿ ಸ್ಥಾಪಿತಗೊಂಡಿರುವ ಶ್ರೀ ವಿರಕ್ತಮಠವು ವಿಜಯನಗರದಅರಸ ಶ್ರೀ ಪ್ರೌಢದೇವರಾಯನ ನೆರವಿನಿಂದ ಹಾಗೂ ಕತೃಗುರುಗಳ ಅನುಷ್ಠಾನ ಬಲದಿಂದಈ ಭಾಗದ ಪ್ರಮುಖ ಧಾರ್ಮಿಕ ಕೇಂದ್ರವಾಗಿ ರೂಪುಗೊಂಡಿತೆಂದು ತಿಳಿದುಬರುತ್ತದೆ.ಸದಾ ˉÉೂೀಕಸಂಚಾರದಲ್ಲಿರುತ್ತಿದ್ದ ಶ್ರೀ ರಾಚೋಟೇಶ್ವರ ಸ್ವಾಮಿಗಳು ಬಸವನ ಬಾಗೇವಾಡಿಗೆಆಗಮಿಸಿ ಶ್ರೀ ವಿರಕ್ತಮಠವನ್ನು ಸ್ಥಾಪಿಸಿ ಅಭಿವೃದ್ಧಿಗೊಳಿಸಿದ್ದು ಶ್ರೀಮಠಕ್ಕೆ ರಾಜಾಶ್ರಯವುದೊರಕುವಂತೆ ಮಾಡಿ ಮತ್ತೆ ಸಂಚಾರ ಹೊರಟಿದ್ದಾರೆ.ಶ್ರೀಮಠದ ಗುರುಪರಂಪರೆಯಲ್ಲಿ ಇಲ್ಲಿಯವರೆಗೂ 11 ಜನ ಶ್ರೀಗಳು ಅಧಿಕಾರನಡೆಸಿದ್ದಾರೆ ಎಂದು ಹೇಳˉÁಗಿದ್ದು 5ನೇ ಶ್ರೀಗಳಾದ ಶ್ರೀ ರಾಚೋಟೇಶ್ವರ ಸ್ವಾಮಿಗಳುಧರ್ಮಚಿಂತಕರಾಗಿ ಹಾಗೂ ಸಾಹಿತ್ಯಿಕವಾಗಿಯೂ ಸಾಧನೆ ಮಾಡಿದ್ದರು. ಷಟ್ಸ್ಥಲಜ್ಞಾನಸಾರಾಮೃತ ಬಸವಣ್ಣನವರ ಷಟ್ಸ್ಥಳ ವಚನಗಳು, ಚನ್ನಬಸವಣ್ಣನವರ ಷಟ್ಸ್ಥಲವಚನಗಳು ಎಂಬ ಮೂಲಕೃತಿಗಳ ಹಸ್ತಪ್ರತಿಯನ್ನು ನಕಲು ಮಾಡಿ ಪ್ರಸಾರಗೊಳಿಸಿದ್ದರು.ಏಳನೇ ಶ್ರೀಗಳಾದ ಶ್ರೀ ಶಿವಲಿಂಗ ಸ್ವಾಮಿಗಳ ಕಾಲದಲ್ಲಿ ಶ್ರೀಮಠವು ಹೆಚ್ಚು ಪ್ರಸಿದ್ಧಿಗೊಂಡಿದ್ದು ತೋರುತ್ತದೆ. ಶ್ರೀಗಳು ತಪೋನಿಷ್ಠರಾಗಿ ಭಕ್ತರ ಮನಸ್ಸಿನ ಭವರೋಗಗಳನ್ನುದೂರಮಾಡಿದ ಕಾರ್ಯಸಿದ್ದಿ ಪುರುಷರಾಗಿದ್ದರು ಎಂದು ತಿಳಿದು ಬರುತ್ತದೆ.ಈಗಿನ ಹಿರಿಯ ಶ್ರೀಗಳಾದ ಶ್ರೀ ಮುರುಘೇಂದ್ರ ಸ್ವಾಮಿಗಳು 1979ರ ಅಕ್ಟೋಬರ್24ರಲ್ಲಿ ಶ್ರೀಮಠದ ಅಧಿಕಾರ ವಹಿಸಿಕೊಂಡು ಶ್ರೀಮಠದ ಸರ್ವಾಂಗೀಣ ಅಭಿವೃದ್ಧಿಯಲ್ಲಿಶ್ರಮಿಸುತ್ತಿದ್ದಾರೆ. ತಮ್ಮ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಈ ಭಾಗದಜನರಲ್ಲಿ ಜಾಗೃತ ಭಾವನೆ ಬೆಳೆಯುವಂತೆ ಮಾಡುವಲ್ಲಿ ಶ್ರಮಿಸುತ್ತಿದ್ದಾರೆ. ಶ್ರೀಗಳು ಸಾಹಿತ್ಯಿಕವಾಗಿಯೂ ಕಾರ್ಯತತ್ಪರರಾಗಿದ್ದು ಅನೇಕ ಧಾರ್ಮಿಕ ಗ್ರಂಥಗಳನ್ನು ಪ್ರಕಟಿಸಿದ್ದಾರೆ.ಹಾಗೂ ಇತ್ತೀಚೆಗೆ 2014ರ ಮೇ 11ರಲ್ಲಿ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳನ್ನು ತಮ್ಮಉತ್ತರಾಧಿಕಾರಿಗಳನ್ನಾಗಿ ಅಧಿಕಾರಕ್ಕೆ ತಂದಿದ್ದು ಉಭಯರೂ ಶ್ರೀಮಠದ ಸರ್ವಾಂಗೀಣಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಮುರುಘೇಂದ್ರ ಮಹಾಸ್ವಾಮಿಗಳು
Date of Birth :
01-06-1952
Place :
ಸಿರಬೂರು, ವಿಜಯಪುರ ತಾ||
Pattadikara :
24-10-1979
Photo :
Swamiji Name :
ಶ್ರೀ ಮ.ನಿ.ಪ್ರ. ಸಿದ್ದಲಿಂಗ ಮಹಾಸ್ವಾಮಿಗಳು
Date of Birth :
31-1-1985
Place :
ಬಸವನಬಾಗೇವಾಡಿ
Pattadikara :
11-5-2014
Photo :
Programs
ಪ್ರತಿ ಸೋಮವಾರ, ಶುಕ್ರವಾರ, ಅಮವಾಸ್ಯೆ, ಹುಣ್ಣಿಮೆಗೆ ಶಿವಾನುಭವ ಗೋಷ್ಠಿ.
ಶಿವರಾತ್ರಿಗೆ ಸಾಮೂಹಿಕ ಇಷ್ಟಲಿಂಗ ಪೂಜೆ ಹಾಗೂ ಕಾರ್ಯಕ್ರಮಗಳು.
ಬಸವಜಯಂತಿ ಮತ್ತು ಅಕ್ಕಮಹಾದೇವಿ ಜಯಂತಿ ವಿಶೇಷ ಆಚರಣೆ.
ಶ್ರಾವಣ ಮಾಸದಲ್ಲಿ ನಿತ್ಯ ವಿಶೇಷ ಪೂಜೆ ಹಾಗೂ ವಚನ ಅಭಿಯಾನ.
ಜುಲೈ ತಿಂಗಳಲ್ಲಿ ಲಿಂ. ಶ್ರೀ ಮ.ನಿ.ಪ್ರ. ಶಿವಲಿಂಗಸ್ವಾಮಿಗಳ
ಪುಣ್ಯಾರಾಧನೆ.