ಕಲಬುರಗಿ ಜಿಲ್ಲೆ ಜೇವರ್ಗಿ ತಾಲ್ಲೂಕಿನ ಸೊನ್ನ ಗ್ರಾಮವು ತಾಲ್ಲೂಕುಕೇಂದ್ರದಿಂದ 15 ಕಿ.ಮೀ.ದೂರದಲ್ಲಿದ್ದು ಈ ಗ್ರಾಮದಲ್ಲಿ ಅಸ್ತಿತ್ವದಲ್ಲಿರುವ ಶ್ರೀ ವಿರಕ್ತಮಠವುಶ್ರೀಮಂತ ಪರಂಪರೆಯನ್ನು ಹೊಂದಿದ ಸಮೃದ್ಧ ಮಠವಾಗಿ ಬೆಳೆದಿದ್ದು ಈ ಭಾಗದಪ್ರಮುಖ ವೀರಶೈವ ಮಠಗಳಲ್ಲಿ ಒಂದಾಗಿದೆ. ಸುಮಾರು 17ನೇ ಶತಮಾನದಲ್ಲಿಸ್ಥಾಪಿತಗೊಂಡಿರುವ ಶ್ರೀ ವಿರಕ್ತಮಠದ ಕರ್ತೃಗುರುಗಳು ಶ್ರೀ.ಮ.ನಿ.ಪ್ರ. ಸಿದ್ದಲಿಂಗಶಿವಯೋಗಿಗಳು.ಹದಿನೇಳನೆಯ ಶತಮಾನದಲ್ಲಿ ಶ್ರೀ ಸಿದ್ದಲಿಂಗ ಶಿವಯೋಗಿಗಳು ಆಂಧ್ರದಅನಂತಪುರ ಜಿಲ್ಲೆಯ ಕಡೆಯಿಂದ ಸಂಚಾರ ಬಂದು ನಾಡಿನ ನಾನಾ ಕಡೆಗಳಲ್ಲಿ ಅನುಷ್ಠಾನಕೈಗೊಂಡು ಧರ್ಮಪ್ರಸಾರ ಮಾಡುತ್ತಾ ಸೊನ್ನ ಗ್ರಾಮಕ್ಕೆ ಆಗಮಿಸುತ್ತಾರೆ. ಗುರುಗಳುಬಾಲ್ಯದಿಂದಲೂ ಬಸವಾದಿ ಶಿವಶರಣರ ತತ್ತ್ವಗಳಿಗೆ ಮನಸೋತು ಅವುಗಳನ್ನುಜನಮನದಲ್ಲಿ ಮೂಡಿಸಬೇಕೆಂಬ ಮಹಾದಾಸೆಯಿಂದ ಸಂಚಾರ ಹೊರಟವರು. ಸೊನ್ನಗ್ರಾಮದಲ್ಲಿ ಅನುಷ್ಠಾನ ಮಾಡುತ್ತಾ, ಬಂದ ಭಕ್ತರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಿದ್ದಶ್ರೀಗಳು ಮತ್ತೆ ಸಂಚಾರ ಹೊರಡಲು ಅನುವಾದಾಗ ಭಕ್ತರ ಒತ್ತಾಸೆಯ ಮೇರೆಗೆ ಸೊನ್ನಗ್ರಾಮದಲ್ಲಿಯೇ ನೆಲೆನಿಂತು ಶ್ರೀ ವಿರಕ್ತಮಠವನ್ನು ಸ್ಥಾಪಿಸಿದರು.ಗುರುಗಳು ಶ್ರೀಮಠದಲ್ಲಿ ನಿತ್ಯ ಶಿವಾನುಭವಗೋಷ್ಠಿಗಳ ಮೂಲಕ ಸಮಷ್ಠಿಸಮಾಜದ ಅಭಿವೃದ್ದಿಗೆ ಶ್ರಮಿಸುತ್ತಾ ಭಕ್ತರನ್ನು ಸಂಸ್ಕಾರಯುತವಾಗಿ ಬಾಳುವಂತೆ ಪ್ರೇರಣೆನೀಡಿದರು. ಶ್ರೀಗಳು ಮಠದಲ್ಲಿ ಬಂದ ಭಕ್ತರಿಗೆ ಅನ್ನ ಹಾಗೂ ಜ್ಞಾನದಾಸೋಹಗಳನ್ನುಮಾಡುತ್ತಾ ಅವರ ಸಹಕಾರದೊಂದಿಗೆ ಮಠವನ್ನು ಸದೃಢಗೊಳಿಸಿದರು. ಕರ್ತೃಗುರುಗಳನಂತರದ ಪರಂಪರೆಯಲ್ಲಿ ಈಗ 7ನೇ ಶ್ರೀಗಳು ಶ್ರೀಮಠವನ್ನು ಮುನ್ನಡೆಸುತ್ತಿದ್ದು, ಈಮಧ್ಯದ ಪರಂಪರೆಯ ಬಗ್ಗೆ ಸ್ಪಷ್ಟತೆಯಿಲ್ಲ.ಶ್ರೀಮಠದ 2 ರಿಂದ 4ನೇ ಶ್ರೀಗಳ ತನಕದ ಇತಿಹಾಸ ಕಣ್ಮರೆಯಾಗಿದ್ದು 5ನೇಶ್ರೀಗಳಾದ ಶ್ರೀ.ಮ.ನಿ.ಪ್ರ. ಶಿವಾನಂದ ಶಿವಯೋಗಿಗಳು ಕಾಯಕಯೋಗಿಗಳಾಗಿ ಮಠವನ್ನುಹೆಚ್ಚು ಅಭಿವೃದ್ಧಿಪಡಿಸಿದರು. ಇವರ ಕಾಲದಲ್ಲಿ ಧರ್ಮೋಪದೇಶಗಳು ಹಾಗೂಅನ್ನದಾಸೋಹ ಕಾರ್ಯ ನಿರಂತರವಾಗಿ ನಡೆದು ಬಂದಿದ್ದು ಶ್ರೀಗಳು “ಮಹಾದಾಸೋಹಮೂರ್ತಿ” ಗಳೆಂದೇ ಪ್ರಸಿದ್ದರಾಗಿದ್ದರು. ಇಂತಹ ಮಹಾಯೋಗಿಯು ಶತಾಯುಷಿಗಳಾಗಿಸಾರ್ಥಕ ಜೀವನ ನಡೆಸಿ 1978ರಲ್ಲಿ ಲಿಂಗೈಕ್ಯರಾಗಿದ್ದಾರೆ. ಇವರ ನಂತರ ಇವರಕರಕಮಲಸಂಜಾತರಾಗಿದ್ದ ಶ್ರೀ.ಮ.ನಿ.ಪ್ರ. ಗುರುಸಿದ್ದ ಮಹಾಸ್ವಾಮಿಗಳು ಮಠವನ್ನುಮುನ್ನಡೆಸಿದರು. ಹಿಂದಿನ ಶ್ರೀಗಳಿರುವಾಗಲೇ ಶ್ರೀಮಠದ ಅಧಿಕಾರ ವಹಿಸಿಕೊಂಡಿದ್ದಶ್ರೀಗಳು ಗುರುಗಳಂತೆಯೇ ತಾವೂ ದೀನ ದಲಿತರ ಬಗ್ಗೆ ಅಪಾರ ಕಾಳಜಿಯನ್ನಿಟ್ಟುಕೊಂಡುಅವರ ಉದ್ದಾರಕ್ಕೆ ಶ್ರಮಿಸಿದರು. ಸಮಾಜದಲ್ಲಿನ ಜಾತೀಯತೆಯನ್ನು ನಿರ್ಮೂಲನೆಮಾಡಬೇಕೆಂಬ ಆದರ್ಶವನ್ನಿಟ್ಟುಕೊಂಡು ಶ್ರಮಿಸಿದ ಶ್ರೀಗಳು 1992ರಲ್ಲಿ ಲಿಂಗೈಕ್ಯರಾದರು.ಈಗಿನ ಪೀಠಾಧ್ಯಕ್ಷರಾದ ಶ್ರೀ.ಮ.ನಿ.ಪ್ರ.ಡಾ|| ಶಿವಾನಂದ ಮಹಾಸ್ವಾಮಿಗಳು1997ರ ಮೇ 19ರಲ್ಲಿ ಶ್ರೀಮಠದ ಅಧಿಕಾರವನ್ನು ವಹಿಸಿಕೊಂಡು ಶ್ರೀಮಠವನ್ನುಪ್ರಗತಿಪಥದತ್ತ ಕೊಂಡೊಯ್ಯುತ್ತಿದ್ದಾರೆ. ಶ್ರೀಗಳು ಮುದ್ದೆಬಿಹಾಳ ತಾಲ್ಲೂಕು ಮಡಕೇಶ್ವರಗ್ರಾಮದಲ್ಲಿ ಜನಿಸಿದ್ದು ಪ್ರಾಥಮಿಕ ಶಿಕ್ಷಣವನ್ನು ಸೊನ್ನ ಗ್ರಾಮದಲ್ಲಿ ಮುಗಿಸಿ, ಹುಬ್ಬಳ್ಳಿ ಹಾಗೂಗದಗಗಳಲ್ಲಿ ಪದವಿ ಶಿಕ್ಷಣವನ್ನು ಪೂರ್ಣಗೊಳಿಸಿದರು. ಮತ್ತು ಶಿವಯೋಗ ಮಂದಿರದಲ್ಲಿಸಂಸ್ಕøತ ಅಧ್ಯಯನವನ್ನು ಮಾಡಿ ಶ್ರೀಮಠಕ್ಕೆ ಮರಳಿದರು. ಹಿಂದಿನ ಗುರುಗಳಿರುವಾಗಲೇಶ್ರೀಮಠದ ಉತ್ತರಾಧಿಕಾರಿಗಳಾಗಿ ನೇಮಕಗೊಂಡಿದ್ದ ಶ್ರೀಗಳು ತಮ್ಮ ವಿದ್ಯಾಭ್ಯಾಸವನ್ನುಪೂರ್ಣಗೊಳಿಸಿ, ಮಠದ ವ್ಯವಸ್ಥೆಯನ್ನು ಸರಿಪಡಿಸಿ ನಂತರವಷ್ಟೇ ಶ್ರೀಮಠದ ಅಧಿಕಾರಸ್ವೀಕರಿಸಿದರು.ಶ್ರೀ.ಮ.ನಿ.ಪ್ರ. ಶಿವಾನಂದ ಮಹಾಸ್ವಾಮಿಗಳು ತಮ್ಮ ಪ್ರಕರ ಧಾರ್ಮಿಕ ಚಿಂತನೆಗಳಮೂಲಕ ಹೆಸರಾದವರು. ವೀರಶೈವ ಧರ್ಮವನ್ನು ಬಸವಾದಿ ಶರಣರು ಕಂಡ ರೀತಿಯಲ್ಲಿಬೆಳೆಸಲು ಶ್ರಮಿಸುತ್ತಿದ್ದಾರೆ. ಸಮಾಜದಲ್ಲಿನ ಮೂಢನಂಬಿಕೆ, ಕಂದಾಚಾರ, ದುಶ್ಚಟಗಳವಿರುದ್ಧ ಹೋರಾಡುತ್ತಿರುವ ಶ್ರೀಗಳು ಸಮಾಜದಲ್ಲಿ ಪರಿವರ್ತನೆ ತರಲು ಮುಂದಾಗಿದ್ದಾರೆ.1993ರಲ್ಲಿ ಶ್ರೀಮಠದಲ್ಲಿ ಅನಾಥಾಶ್ರಮವನ್ನು ಸ್ಥಾಪಿಸಿರುವ ಶ್ರೀಗಳು ಜಾತ್ಯತೀತವಾಗಿಎಲ್ಲರಿಗೂ ಸಮಾನ ಅವಕಾಶಕೊಟ್ಟು ನಡೆಸುತ್ತಿದ್ದಾರೆ. ಮಠದಲ್ಲಿ ಸಾಮೂಹಿಕವಿವಾಹಗಳನ್ನು ನಡೆಸುತಿದ್ದಾರೆ. ಆಗಾಗ ಪಾದಯಾತ್ರೆಯ ಮೂಲಕ ಸುತ್ತಮುತ್ತಲಿನಹಳ್ಳಿಗಳಿಗೆ ಬೇಟಿ ನೀಡುತ್ತಾ ಅವರಲ್ಲಿ ಸಾಮಾಜಿಕ ಅರಿವನ್ನು ಮೂಡಿಸುತ್ತಾ ಬಂದಿದ್ದಾರೆ.ಶ್ರೀಗಳು ಶ್ರೀಮಠದ ಅಧಿಕಾರ ವಹಿಸಿಕೊಂಡಂದಿನಿಂದ ಶ್ರೀಮಠವುಸರ್ವತೋಮುಖವಾಗಿ ಅಭಿವೃದ್ಧಿಯಾಗುತ್ತಿದೆ. ಮಠದ ಧಾರ್ಮಿಕ ಆದರಣೆಗಳನ್ನುವಿಸ್ತಾರಗೊಳಿಸಿರುವ ಶ್ರೀಗಳು ಧರ್ಮವನ್ನು ಔಪಚಾರಿಕ ನೆಲೆಗಟ್ಟಿನಲ್ಲಿ ಬೆಳೆಸುತ್ತಿದ್ದಾರೆ.ಶ್ರೀಮಠದ ಕಟ್ಟಡವನ್ನು ನವೀಕರಿಸಿರುವ ಶ್ರೀಗಳು ಮಹಾದ್ವಾರವನ್ನು ನಿರ್ಮಿಸಿದ್ದಾರೆ.ಜೊತೆಯಲ್ಲಿ ಮತ್ತೊಂದು ಹೊಸ ಕಟ್ಟಡ, ಶಿವಾನುಭವ ಮಂಟಪಗಳನ್ನೊಳಗೊಂಡಸಮುಚ್ಚಯವನ್ನು ನಿರ್ಮಿಸಿದ್ದಾರೆ. ಮಠದ ಆಸ್ತಿಯನ್ನು ಅಭಿವೃದ್ಧಿಪಡಿಸಿರುವ ಶ್ರೀಗಳುಮಠದ ಆದಾಯ ಮೂಲವನ್ನಾಗಿ ಮಾಡಿಕೊಂಡಿದ್ದಾರೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಡಾ. ಶಿವಾನಂದ ಮಹಾಸ್ವಾಮಿಗಳು
Date of Birth :
01-06-1963
Place :
ಮಡಿಕೇಶ್ವರ, ಮುದ್ದೇಬಿಹಾಳ ತಾ||
Pattadikara :
19-05-1997
Photo :
Programs
ಶ್ರಾವಣ ಮಾಸದಲ್ಲಿ ನಿತ್ಯ ಪ್ರವಚನ, ಭಜನೆ ಹಾಗೂ ವಿಶೇಷ ಪೂಜೆ
ಆಗಿ ಹುಣ್ಣಿಮೆಗೆ ಹಿಂದಿನ ದಿನ ಶ್ರೀ ಮಠದ ಜಾತ್ರೆ, ಶ್ರೀ ಸಿದ್ದಲಿಂಗೇಶ್ವರ ರಥೋತ್ಸವ
ಬಸವ ಜಯಂತಿ ಆಚರಣೆ
ಪ್ರತಿ ವರ್ಷ ಭಾದ್ರಪದ ಷಷ್ಠಿಮಿತಿಗೆ ಲಿ||ಶ್ರೀ.ಮ.ನಿ.ಪ್ರ.ಶಿವಾನಂದ ಶಿವಯೋಗಿಗಳ ಪುಣ್ಯಸ್ಮರಣೋತ್ಸವ,
ಪ್ರತಿವರ್ಷ ಜನವರಿ 24ರಂದು ಲಿಂ|| ಶ್ರೀ.ಮ.ನಿ.ಪ್ರ.ಗುರುಸಿದ್ದ ಮಹಾಸ್ವಾಮಿಗಳ ಪುಣ್ಯಾರಾಧನೆ, ಆರೋಗ್ಯ ಶಿಬಿರ
ಹಾಗೂ ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳು.
Institutions
ಕಿರಿಯ / ಹಿರಿಯ ಪ್ರಾಥಮಿಕ /
ಪ್ರೌಢ ಶಾಲೆ
ಪದವಿ ಪೂರ್ವ/ಪದವಿ ಕಾಲೇಜ್
ಐ.ಟಿ.ಐ ಕಾಲೇಜ್ / ಅನಾಥಾಶ್ರಮ
ವಿದ್ಯಾರ್ಥಿ ನಿಲಯ
Photos
Full Address Kannada
ಶ್ರೀ ವಿರಕ್ತಮಠ ಸೊನ್ನ - 585 310
ಜೇವರ್ಗಿ ತಾ||, ಕಲಬುರಗಿ ಜಿಲ್ಲೆ