ಚನ್ನಪಟ್ಟಣವು ಗುಡಿ ಕೈಗಾರಿಕೆಗಳಿಂದ ಪ್ರಸಿದ್ದಿ ಪಡೆದಿದ್ದು ಇಲ್ಲಿನ ಬೊಂಬೆಉದ್ಯಮವು ವಿಶ್ವವಿಖ್ಯಾತಿಗೊಂಡಿದೆ. ಇಂತಹ ಚನ್ನಪಟ್ಟಣದ ಬಿ.ಎಂ.ರಸ್ತೆಯಲ್ಲಿಅಸ್ತಿತ್ತ್ವದಲ್ಲಿರುವ ಶ್ರೀ ವಿರಕ್ತ ಮಠವು ಕುಡಿನೀರು ಕಟ್ಟೆ ವಿರಕ್ತ ಮಠವೆಂದೇ ಪ್ರಸಿದ್ದಿ ಪಡೆದಿದೆ.ಈ ಮಠದ ಹೆಸರು ಹೇಳುವಂತೆ ಕುಡಿಯುವ ನೀರಿನ ಕಟ್ಟೆ ನಿರ್ಮಿಸಿ ಜನಜಾನುವಾರುಗಳಿಗೆ ನೀರನ್ನು ಈ ಮಠ ದೊರೆಕಿಸಿಕೊಡುತ್ತಿದ್ದರಿಂದ ಕುಡಿನೀರು ಕಟ್ಟೆ ಶ್ರೀವಿರಕ್ತ ಮಠವೆಂದು ಹೆಸರು ಬಂದಿದೆ.ಕುಡಿನೀರು ಕಟ್ಟೆ ಶ್ರೀ ವಿರಕ್ತ ಮಠದ ಸ್ಥಾಪಕರು ಎಂದು ಗುರುತಿಸˉÁಗಿರುವಗುರುಗಳು ಜೀವಂತ ಸಮಾದಿಯಾಗಿದ್ದಾರೆ. ಇವರ ನಂತರ ಮಠವು ಮಠಾದೀಶರಿಲ್ಲದೇಖಾಲಿ ಉಳಿದ ಕಾರಣ ಕರ್ತೃ ಗುರುಗಳ ಹೆಸರನ್ನು ಹಾಗೂ ಮಠದ ಪರಂಪರೆಯದಾಖˉÉಗಳನ್ನು ಗುರುತಿಸˉÁಗಿಲ್ಲ. ಜೀವಂತ ಸಮಾದಿಯಾದ ಗುರುಗಳ ಗದ್ದುಗೆಗಳಜೊತೆಗೆ ಇನ್ನೂ ಐದು ಗದ್ದುಗೆಗಳು ಶ್ರೀಮಠದಲ್ಲಿದ್ದು ನಿಖರವಾಗಿ ಗುರುತಿಸಲುಸಾಧ್ಯವಾಗುವುದಿಲ್ಲ.ಶ್ರೀಮಠದ ಪರಂಪರೆಯಲ್ಲಿ ಶ್ರೀ. ಮ.ನಿ.ಪ್ರ.ಸ್ವ. ಚನ್ನಬಸವಸ್ವಾಮಿಗಳು,ಕೋˉÁರದ ಕಡೆಯಿಂದ ಶ್ರೀಮಠಕ್ಕೆ ಬಂದು ಐಕ್ಯಗೊಂಡ ಶ್ರೀ.ಮ.ನಿ.ಪ್ರ.ಸ್ವ. ಮುಮ್ಮಡಿನಿರ್ಮಾಮಿಡಿ ಸ್ವಾಮಿಗಳು, ಶ್ರೀ ಮ.ನಿ.ಪ್ರ.ಸ್ವ. ಚರಮೂರ್ತಿ ಶಿವರುದ್ರ ಸ್ವಾಮಿಗಳು, ಹಿಂದಿನಗುರುಗಳಾದ ಶ್ರೀ. ಮ.ನಿ.ಪ್ರ.ಸ್ವ. ಚರಮೂರ್ತಿ ಶಾಂತ ಮಲ್ಲಿಕಾರ್ಜುನ ಸ್ವಾಮಿಗಳನ್ನುಗುರುತಿಸಬಹುದಾಗಿದ್ದು ಇವರುಗಳ ನಿಖರ ಕಾಲಮಾನ ತಿಳಿದು ಬರುವುದಿಲ್ಲ.ಈ ರೀತಿಯಾಗಿ ಅಸ್ಪಷ್ಟ ಇತಿಹಾಸವಿರುವ ಶ್ರೀ ಮಠವು ಚನ್ನಪಟ್ಟಣದ ಸರ್ವಜನಾಂಗದ ದಾರಿದೀಪವಾಗಿ ಬೆಳೆದು ಬಂದಿದೆ. ಇಂತಹ ಮಠದ ಉತ್ತರಾಧಿಕಾರಿಗಳಾಗಿ1996ರ ಜುˉÉೈ 23ರಂದು ಮಠದ ಪಟ್ಟಾಧಿಕಾರವನ್ನು ವಹಿಸಿಕೊಂಡು ಶ್ರೀ ಮಠವನ್ನುಸಮರ್ಥವಾಗಿ ಮುನ್ನಡೆಸುತ್ತಿರುವ ಈಗಿನ ಶ್ರೀಗಳಾದ ಶ್ರೀ. ಮ.ನಿ..ಪ್ರ.ಸ್ವ. ಚರಮೂರ್ತಿಶಿವರುದ್ರ ಮಹಾಸ್ವಾಮಿಗಳು ಸಿದ್ದಗಂಗೆಯಲ್ಲಿ ಸಂಸ್ಕøತ ಹಾಗೂ ವೇದಾದ್ಯಯನ ಮಾಡಿದವಿದ್ಯಾ ಸಂಪನ್ನರು. ಶ್ರೀಗಳು ಸಿದ್ದಗಂಗೆ ಹಾಗೂ ಇತರ ಹಲವು ಹಿರಿಯ ಗುರುಗಳಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿದ್ದು ಸಮಷ್ಟಿ ಸಮಾಜದ ಶ್ರೇಯೋಭಿವೃದ್ದಿಗಾಗಿಅವಿರತ ಶ್ರಮಿಸುತ್ತಿದ್ದಾರೆ.
Swamiji
Swamiji Name :
ಶ್ರೀ ಮ.ನಿ.ಪ್ರ..ಸ್ವ ಚರಮೂರ್ತಿ ಶಿವರುದ್ರ ಮಹಾಸ್ವಾಮಿಗಳು
Date of Birth :
09-07-1977
Place :
ಚನ್ನಪಟ್ಟಣ, ರಾಮನಗರ ಜಿ||
Pattadikara :
28-08-1996
Photo :
Programs
ಅಮವಾಸೆಗೆ ವಿಶೇಷ ಪೂಜೆ ಕಾರ್ತಿಕ ಮಾಸದಲ್ಲಿ ದೀಪೆÇೀತ್ಸವ ಭಾದ್ರಪದ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ