ರಾಮನಗರ ಜಿˉÉ್ಲ ಕನಕಪುರ ತಾಲ್ಲೂಕಿನ ತೋಟಹಳ್ಳಿ ಗ್ರಾಮದಲ್ಲಿಅಸ್ತಿತ್ತ್ವದಲ್ಲಿರುವ ಶ್ರೀ ವಿರಕ್ತ ಮಠವು ತನ್ನ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಮೂಲಕ ಈ ಭಾಗದಲ್ಲಿ ಪ್ರಚಲಿತದಲ್ಲಿದೆ. ಶ್ರೀ ವಿರಕ್ತ ಮಠವು ಪುರಾತನ ಇತಿಹಾಸವನ್ನುಹೊಂದಿದ್ದು ಶ್ರೀ ತೋಂಟದ ಸಿದ್ದಲಿಂಗೇಶ್ವರರ ಕಾಲದಲ್ಲಿ ಮಠ ಸ್ಥಾಪನೆಗೊಂಡಿರಬಹುದುಎಂದು ಹೇಳˉÁಗುತ್ತಿದೆ.ಶ್ರೀ ವಿರಕ್ತ ಮಠದ ಗುರುಪರಂಪರೆಯ ಬಗ್ಗೆ ಸ್ಪಷ್ಟತೆಯಿಲ್ಲ. ಇಲ್ಲಿಯವರೆಗೂ 10ಜನ ಶ್ರೀಗಳು ಶ್ರೀ ಮಠವನ್ನು ಮುನ್ನಡೆಸಿದ್ದು ಈಗಿನವರು 11ನೇ ಶ್ರೀಗಳೆಂದುಹೇಳˉÁಗುತ್ತದೆ. ಆದರೆ ಶ್ರೀಮಠದ ಕರ್ತೃಗುರುಗಳ ಬಗ್ಗೆ ತಿಳಿದುಬರುವುದಿಲ್ಲ. ಊರಒಳಗಿರುವ ಶ್ರೀಮಠದ ಮೂಲ ಕಟ್ಟಡದಲ್ಲಿ ಐದು ಗದ್ದುಗೆಗಳು ಸಾˉÁಗಿ ಕಟ್ಟಲ್ಪಟ್ಟಿದ್ದು ಊರಹೊರಗೆ ನೂತನವಾಗಿ ನಿರ್ಮಾಣಗೊಂಡಿರುವ ಮಠದಲ್ಲಿ ಹಿಂದಿನ ಶ್ರೀಗಳ ಗದ್ದುಗೆಯನ್ನುಕಾಣಬಹುದು.ಶ್ರೀಮಠದ ಪರಂಪರೆಯಲ್ಲಿ 9ನೇ ಶ್ರೀಗಳಾದ ಶ್ರೀ ಚನ್ನವiಲ್ಲಿಕಾರ್ಜುನ ಸ್ವಾಮಿಗಳಹೆಸರು ಬಹುವಾಗಿ ಕೇಳಿಬರುತ್ತದೆ. ಶ್ರೀಗಳ ಕಾಲದಲ್ಲಿ ಮೈಸೂರು ಒಡೆಯರಿಂದ ದಾನ ದತ್ತಿದೊರೆತ ಬಗ್ಗೆ ಕುರುಹುಗಳಿದ್ದು ಶ್ರೀ ಚನ್ನವiಲ್ಲಿಕಾರ್ಜುನ ಸ್ವಾಮಿಗಳು ಬಹಳಪ್ರಭಾವಯುತವಾಗಿ ಶ್ರೀಮಠವನ್ನು ಮುನ್ನಡೆಸಿದ್ದರು ಎನ್ನಬಹುದು. ಶ್ರೀಮಠದ ಹಿಂದಿನಶ್ರೀಗಳಾದ ಶ್ರೀ ಮ.ನಿ.ಪ್ರ. ಬಸವಲಿಂಗ ಸ್ವಾಮಿಗಳು 1954ರಲ್ಲಿ ಶ್ರೀಮಠದ ಅಧಿಕಾರ ಸ್ವೀಕರಿಸಿಮಠವನ್ನು ಸುಸ್ಥಿತಿಗೆ ತರುವಲ್ಲಿ ಬಹುವಾಗಿ ಶ್ರಮಿಸಿದ್ದಾರೆ. ತಮ್ಮ ಜೀವಿತಾವದಿಯಲ್ಲಿಯೇ1997ರ ಮಾರ್ಚ್ 23ರಂದು ಈಗಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಬಸವಪ್ರಭು ಸ್ವಾಮಿಗಳನ್ನುಅಧಿಕಾರಕ್ಕೆ ತಂದ ಶ್ರೀಗಳು 2004ರ ನವೆಂಬರ್ 05ರಂದು ಲಿಂಗೈಕ್ಯರಾದರು.ಈಗಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಬಸವಪ್ರಭು ಸ್ವಾಮಿಗಳು ಹಿಂದಿನ ಶ್ರೀಗಳಮಾರ್ಗದರ್ಶನದಲ್ಲಿ ಪರಿಪಕ್ವಗೊಂಡು ಶ್ರೀ ಮಠವನ್ನು ಮುನ್ನಡೆಸಿಕೊಂಡು ಬಂದಿದ್ದಾರೆ.ಶ್ರೀ ಬಸವಲಿಂಗ ಸ್ವಾಮಿಗಳ ಗದ್ದುಗೆಯನ್ನು ಊರ ಹೊರಗಿನ ಸ್ಥಳದಲ್ಲಿ ನಿರ್ಮಿಸಿದ ಶ್ರೀಗಳುಇತ್ತೀಚೆಗೆ 2015ರ ಮೇ 02ರಂದು ಗದ್ದುಗೆ ಕೇಂದ್ರವಾಗಿಟ್ಟು ಕಟ್ಟಿಸಿರುವ ಊರ ಹೊರಗಿನಮಠಕ್ಕೆ ಶ್ರೀಮಠವನ್ನು ಸ್ಥಳಾಂತರಿಸಿಕೊಂಡು ಮುಂದುವರೆಯುತ್ತಿದ್ದಾರೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಬಸವ ಪ್ರಭು ಸ್ವಾಮಿಗಳು
Date of Birth :
06-07-1979
Place :
ಡಿ.ಆಲಸಹಳ್ಳಿ, ಮಳವಳ್ಳಿ ತಾ||
Pattadikara :
23-03-1997
Photo :
Programs
¥ತಿÀ್ರ ಅಮವಾಸ್ಯೆ ಹಾಗೂ ಹುಣ್ಣಿಮೆಗಳಲ್ಲಿ ವಿಶೇಷ ಪೂಜೆ ಶ್ರೀಗಳ ದರ್ಶನ ಶಿವರಾತ್ರಿಯಲ್ಲಿ ವಿಶೇಷ ಪೂಜೆ £ವ Àಂಬರ್ ತಿಂಗಳಲ್ಲಿ ಲಿಂ|| ಶ್ರೀ ಮ.ನಿ.ಪ್ರ. ಬಸವಲಿಂಗ ಮಹಾಸ್ವಾಮಿಗಳ ಆರಾಧನೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಕಾರ್ತಿಕ ಮಾಸದಲ್ಲಿ ದೀಪೆÇೀತ್ಸವ, ವಿಶೇಷ ಪೂಜೆ
Photos
Full Address Kannada
ಶ್ರೀ ವಿರಕ್ತ ಮಠ ತೋಟಹಳ್ಳಿ, ಅಚ್ಚಲು ಪೋಸ್ಟ್ - 562 117 ಕನಕಪುರ ತಾ||, ರಾಮನಗರ ಜಿˉÉ್ಲ