ಬೆಂಗಳೂರು ನಗರದ ವೀರಶೈವ ಲಿಂಗಾಯತ ಮಠಗಳ ಐತಿಹಾಸಿಕಪರಂಪರೆಯಲ್ಲಿ ತನ್ನದೇ ಆದ ವೈಶಿಷ್ಟ್ಯಪೂರ್ಣ ಇತಿಹಾಸವುಳ್ಳದ್ದು ಗಾಂಧಿನಗರದಶ್ರೀ ತಿಪ್ಪಶೆಟ್ಟಿ ಮಠ. ನಗರದ ಹೃದಯಭಾಗದಂತಿರುವ ಗಾಂಧಿನಗರ ಬಡಾವಣೆಯಲ್ಲಿಅಸ್ತಿತ್ತ್ವದಲ್ಲಿರುವ ಶ್ರೀ ತಿಪ್ಪಶೆಟ್ಟಿಮಠವು ಚಿತ್ರದುರ್ಗ ಶ್ರೀ ಮುರುಘರಾಜೇಂದ್ರ ಬೃಹನ್ಮಠದಶಾಖಾಮಠವಾಗಿ ಬೆಳೆದು ಬಂದಿದೆ. 19ನೇ ಶತಮಾನದ ಆರಂಭದಲ್ಲಿ (1800)ಬೆಂಗಳೂರು ಪಟ್ಟಣದ ಪ್ರಸಿದ್ದ ವರ್ತಕರಾಗಿದ್ದ ತಿಪ್ಪಶೆಟ್ಟರು ಶ್ರೀ ಮ.ನಿ.ಪ್ರ. ಗುರುಸಿದ್ದಮಹಾಸ್ವಾಮಿಗಳಿಗೆ ಮಠವೊಂದನ್ನು ಕಟ್ಟಿಸಿಕೊಟ್ಟರು. ಆ ಮಠವೇ ಶ್ರೀ ತಿಪ್ಪಶೆಟ್ಟಿ ಮಠ.ಮುಂದೆ ಈ ಮಠಕ್ಕೆ ಮೈಸೂರಿನ ಮುಮ್ಮಡಿ ಕೃಷ್ಣರಾಜ ಒಡೆಯರು ಭೂಧಾನ ನೀಡಿರುವದಾಖಲೆಗಳಿವೆ.ಮಠದ ಕರ್ತೃಗುರುಗಳ ನಂತರ ಶ್ರೀ ಇಮ್ಮಡಿ ಗುರುಸಿದ್ದ ಮಹಾಸ್ವಾಮಿಗಳುಮಠವನ್ನು ಮುನ್ನಡೆಸಿ ತಮ್ಮ ಜೀವಿತಾವದಿಯಲ್ಲಿಯೇ ಮೂರನೇ ಗುರುಗಳಾದ ಶ್ರೀಮ.ನಿ.ಪ್ರ. ಮಹಾಂತ ದೇಶಿಕೇಂದ್ರ ಮಹಾಸ್ವಾಮಿಗಳಿಗೆ ಅಧಿಕಾರವನ್ನು ನೀಡಿದ್ದಾರೆ. ಶ್ರೀಮಹಾಂತ ದೇಶಿಕೇಂದ್ರ ಸ್ವಾಮಿಗಳು ವಿದ್ವಾಂಸಕರಾಗಿ, ಇಪ್ಪತ್ತೇಳಕ್ಕೂ ಅಧಿಕ ಮೌಲಿಕಗ್ರಂಥಗಳನ್ನು ರಚಿಸಿ ವೀರಶೈವ ಕವಿಗಳೆಂದೇ ಹೆಸರಾದರು. “ರಾಜೇಶ್ವರ ಶತಕ”, “ಸಿರಿಯಾಳಚರಿತ್ರೆ”, “ರೇಣುಕ ಸ್ತೋತ್ರ”, “ಅಂಬಾಸ್ತೋತ್ರ”, “ಸತ್ಯಹರಿಶ್ಚಂದ್ರ ಮಹಾರಾಯನ ಚರಿತ್ರೆ” ಹೀಗೆಮೊದಲಾದ 27 ಕೃತಿಗಳನ್ನು ರಚಿಸಿದ್ದಲ್ಲದೇ 9 ಸಂಪಾದಿತ ಕೃತಿಗಳನ್ನು ರಚಿಸಿ ಕನ್ನಡಚಂಪೂ ಸಾಹಿತ್ಯ ಪ್ರಕಾರಕ್ಕೆ ಅಮೋಘವಾದ ಕೊಡುಗೆಗಳನ್ನು ನೀಡಿ 1920ರಲ್ಲಿಲಿಂಗೈಕ್ಯರಾದರು.ಪರಂಪರೆಯು ಮುಂದಿನ ಗುರುಗಳಾಗಿ ಬಂದ ಶ್ರೀ ಪುಟ್ಟ ನಂಜುಂಡಸ್ವಾಮಿಗಳು ಅಧಿಕಾರಕ್ಕೆ ಬಂದ ಕೆಲವೇ ವರ್ಷಗಳಲ್ಲಿ 1931ರಲ್ಲಿ ಲಿಂಗೈಕ್ಯಾದರು. ನಂತರದಲ್ಲಿಶ್ರೀಮಠಕ್ಕೆ ಶ್ರೀ ಗುರುಸಿದ್ದರಾಜ ದೇಶಿಕೇಂದ್ರ ಸ್ವಾಮಿಗಳು ಅಧಿಕಾರಸ್ಥರಾಗಿದ್ದು ಮುಂದೆ1960ರಲ್ಲಿ ಶ್ರೀಮಠದ ಸಂಪೂರ್ಣ ಜವಾಬ್ದಾರಿಯನ್ನು ಚಿತ್ರದುರ್ಗ ಬೃಹನ್ಮಠದಜಯವಿಭವ ಜಗದ್ಗುರುಗಳಿಗೆ ವಹಿಸಿಕೊಟ್ಟು ತಾವು ವಿಶ್ರಾಂತ ಜೀವನಕ್ಕೆ ತೆರಳಿದರು.ಅಲ್ಲಿಂದ ಮುಂದೆ ಶ್ರೀಮಠವು ಚಿತ್ರದುರ್ಗ ಬೃಹನ್ಮಠದ ನೇರ ಆಡಳಿತಕ್ಕೆ ಒಳಪಟ್ಟಿದೆ. ಶ್ರೀಮುರುಘಾ ಸಂಸ್ಥಾನದವರು ಶ್ರೀ ತಿಪ್ಪಶೆಟ್ಟಿ ಮಠವನ್ನು ನಗರದ ಪ್ರಮುಖ ಸಾಂಸ್ಕøತಿಕಕೇಂದ್ರವನ್ನಾಗಿ ರೂಪಿಸಲು ಶ್ರಮಿಸಿದ್ದಾರೆ.