ಮೈಸೂರು ಜಿˉÉ್ಲ ಟಿ. ನರಸೀಪುರ ತಾಲ್ಲೂಕಿನ ಮುಡುಕನಪುರ ಗ್ರಾಮವುತಾಲ್ಲೂಕು ಕೇಂದ್ರದಿಂದ 14 ಕಿ.ಮೀ. ದೂರದಲ್ಲಿದ್ದು ಈ ಗ್ರಾಮದ ಮಧ್ಯಭಾಗದಲ್ಲಿ 1985ರಮೇ 14ರಲ್ಲಿ ಸ್ಥಾಪಿತಗೊಂಡಿರುವ ಶ್ರೀ ಸುತ್ತೂರು ಖಾಸಾ ಶಾಖಾ ಹಲವಾರ ಮಠವು ತನ್ನಧಾರ್ಮಿಕ ಆಚರಣೆಗಳ ಮೂಲಕ ಈ ಭಾಗದ ಜನರಲ್ಲಿ ಧಾರ್ಮಿಕ ಪ್ರಜ್ಞೆಯನ್ನುಮೂಡಿಸುತ್ತಿದೆ. ಶ್ರೀಮಠದ ಸ್ಥಾಪನೆಗೆ ಕಾರಣಕರ್ತರು ಸುತ್ತೂರಿನ ಲಿಂ|| ಶ್ರೀ ಜಗದ್ಗುರು ಡಾ.ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು.ಶ್ರೀ ಮಠವು ಮುಡುಕನಪುರದಲ್ಲಿ ಸ್ಥಾಪಿತಗೊಳ್ಳುವ ಮುಂಚೆ ಇಲ್ಲಿಗೆ 1 ಕಿ.ಮೀ.ದೂರದಲ್ಲಿನ ಹಲವಾರ ಗ್ರಾಮದ ವ್ಯಾಪ್ತಿಯಲ್ಲಿ ಅಸ್ತಿತ್ವದಲ್ಲಿದ್ದು 680 ವರ್ಷಗಳಇತಿಹಾಸವನ್ನು ಹೊಂದಿದೆ. ಮೂಲಮಠವನ್ನು ಸ್ಥಾಪಿಸಿದವರು ಪೂಜ್ಯ ಶ್ರೀ ಸಂಗನಬಸವಮಹಾಸ್ವಾಮಿಗಳೆಂದು ಗುರುತಿಸˉÁಗಿದ್ದು ಅವರ ಗದ್ದುಗೆ ಅಲ್ಲಿ ಸ್ಥಾಪಿತಗೊಂಡಿದೆ. ಈಭಾಗದ ಜನಪದ ಕಥೆಯ ಪ್ರಕಾರ ಮೂಲಮಠದ ಸ್ಥಳದಲ್ಲಿ ಶ್ರೀ ಮುನೇಶ್ವರರೆಂಬುವವರುತಮ್ಮ ಉಗ್ರ ಪವಾಡಗಳಿಂದ ಜನರನ್ನು ಭಯಭೀತಗೊಳಿಸಿದ್ದು ಆಗ ಜನರ ಕೋರಿಕೆಯಂತೆಶ್ರೀ ಮಹಾದೇಶ್ವರರು ಇಲ್ಲಿ ಅನುಷ್ಠಾನಗೊಂಡು ಶ್ರೀ ಮುನೇಶ್ವರರ ಉಗ್ರ ನಡವಳಿಕೆಗಳನ್ನುದೂರಮಾಡಿದರಂತೆ. ಈ ರೀತಿಯಾಗಿ ಶ್ರೀ ಮಹದೇಶ್ವರರ ಅನುಷ್ಠಾನ ಮತ್ತುಅನುಗ್ರಹದಿಂದ ಪ್ರಸಿದ್ಧಗೊಂಡಿದ ಮೂಲಮಠದಲ್ಲಿ ಅನೇಕ ಗುರುಗಳು ಅಧಿಕಾರಕ್ಕೆಬಂದಿದ್ದರೆಂದು ತಿಳಿದುಬರುತ್ತದೆ.ಈ ರೀತಿಯಾಗಿ ಬೆಳೆದು ಬಂದ ಪುರಾತನ ಮಠದ ಪರಂಪರೆಯ ಗುರುಗಳುಶ್ರೀಮಠದಲ್ಲಿ ವಾಸ್ತವ್ಯ ಮಾಡದೆ ಸದಾ ಸಂಚಾರಿಗಳಾಗಿದ್ದ ಕಾರಣ ಮಠವುಅಭಿವೃದ್ಧಿಗೊಳ್ಳದೇ ಉಳಿಯಿತು ಎಂದು ಹೇಳˉÁಗುತ್ತಿದ್ದು ಕಾಲಕ್ರಮೇಣ ಮಠವು ಖಾಲಿಉಳಿದಿದೆ. ಶ್ರೀಮಠದಲ್ಲಿ ಮಠಾಧೀಶರು ಯಾರು ಇಲ್ಲದ್ದರಿಂದ ಸುತ್ತೂರು ಮಠವೇ ಇಲ್ಲಿನಧಾರ್ಮಿಕ ಆಚರಣೆಗಳನ್ನು ನಡೆಸಿಕೊಂಡು ಬಂದಿತ್ತು.ಶ್ರೀಮಠವು ದೀರ್ಘ ಕಾಲ ಖಾಲಿ ಉಳಿದು ಜೀರ್ಣಗೊಂಡಿದ್ದ ಸಮಯದಲ್ಲಿಸುತ್ತೂರು ಮಠದ ಹಿಂದಿನ ಶ್ರೀಗಳಾದ ಲಿಂ|| ಶ್ರೀ ಜಗದ್ಗುರು ಡಾ. ಶಿವರಾತ್ರಿ ರಾಜೇಂದ್ರಮಹಾಸ್ವಾಮಿಗಳು ಪೂಜ್ಯ ಶ್ರೀ ಷಡಕ್ಷರ ದೇಶಿಕೇಂದ್ರ ಮಹಾಸ್ವಾಮಿಗಳನ್ನು ಈ ಮಠಕ್ಕೆನೇಮಿಸಿದ್ದು ಶ್ರೀ ಷಡಕ್ಷರ ಮಹಾಸ್ವಾಮಿಗಳು ಗುರುಗಳ ಪ್ರೇರಣೆಯಂತೆ ಮೂಲಮಠದಿಂದಒಂದು ಕಿ.ಮೀ. ದೂರದ ಮುಡುಕನಪುರ ಗ್ರಾಮದಲ್ಲಿ ನೂತನ ಮಠವನ್ನು ಸ್ಥಾಪಿಸಿ 1985ರಮೇ 14ರಂದು ಪಟ್ಟಾಧಿಕಾರದ ಅನುಗ್ರಹ ಸ್ವೀಕರಿಸಿದರು.125ನಂಜನಗೂಡು ತಾಲ್ಲೂಕು ಸುತ್ತೂರಿನಲ್ಲಿ 1969ರ ಆಗಸ್ಟ್ 19ರಲ್ಲಿ ಜನಿಸಿದ ಪೂಜ್ಯಶ್ರೀ ಷಡಕ್ಷರ ದೇಶಿಕೇಂದ್ರ ಮಹಾಸ್ವಾಮಿಗಳು ಬಾಲ್ಯದಿಂದಲೂ ಆಧ್ಯಾತ್ಮಿಕ ಒಲವನ್ನುಬೆಳೆಸಿಕೊಂಡು ಬಂದವರು. ಶ್ರೀಗಳು ಕನ್ನಡ ಮತ್ತು ಜನಪದ ವಿಷಯದಲ್ಲಿ ಸ್ನಾತಕೋತ್ತರಪದವಿಯನ್ನು ಪಡೆದಿದ್ದು, ವೀರಶೈವ ಧರ್ಮದ ತತ್ವಗಳ ಬಗೆಗಿನ ಅಧ್ಯಯನದಿಂದಆಳವಾದ ಅರಿವನ್ನು ಹೊಂದಿದ್ದಾರೆ. ಶ್ರೀಗಳು ಉತ್ತಮ ವಾಗ್ಮಿಗಳಾಗಿದ್ದು ವೀರಶೈವಧರ್ಮದ ತತ್ವಾಚರಣೆಗಳ ಬಗೆಗೆ ಜನರಲ್ಲಿ ಅರಿವನ್ನು ಮೂಡಿಸುತ್ತಾ ಧರ್ಮವನ್ನುಪ್ರಚುರಪಡಿಸುತ್ತಿದ್ದಾರೆ.ಪ್ರಗತಿಪರ ಚಿಂತಕರೂ, ಸಮಾಜ ಸೇವಾಪರರೂ ಆಗಿರುವ ಶ್ರೀಗಳು ಶ್ರೀಮಠದವತಿಯಿಂದ ಅನೇಕ ಸಮಾಜಹಿತ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮಾಜದಅಭಿವೃದ್ಧಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಶ್ರೀಗಳು ಮುಡುಕನಪುರದಲ್ಲಿ ನೂತನಕಟ್ಟಡವನ್ನು ನಿರ್ಮಿಸಿ ಅಧಿಕಾರವಹಿಸಿಕೊಂಡು ಮೂಲಮಠವಾದ ಹಲವಾರಿನಲ್ಲಿರುವಮಠದ ಅಭಿವೃದ್ಧಿಯೆಡೆಗೂ ಗಮನಹರಿಸಿದ್ದಾರೆ. ಮೂಲ ಮಠದಲ್ಲಿ 3 ಗದ್ದುಗೆಗಳನ್ನುಕಾಣಬಹುದಾಗಿದ್ದು ಶ್ರೀಗಳು ಇವುಗಳನ್ನು ಅಭಿವೃದ್ಧಿಪಡಿಸಿ ಪರಂಪರೆಯ ಉಳಿದಗುರುಗಳು ಹಾಗೂ ಅವರ ಗದ್ದುಗೆಗಳ ಸಂಶೋಧನೆ ಮಾಡುವ ಯೋಜನೆಯನ್ನುಹೊಂದಿದ್ದಾರೆ.ಶ್ರೀ ಷಡಕ್ಷರ ದೇಶಿಕೇಂದ್ರ ಮಹಾಸ್ವಾಮಿಗಳು ಶ್ರೀಮಠದಲ್ಲಿ ನಿತ್ಯ ಧಾರ್ಮಿಕಆಚರಣೆಗಳನ್ನು ನಡೆಸಿಕೊಂಡು ಬಂದಿದ್ದು ಸುತ್ತೂರು ಶ್ರೀ ಶಿವರಾತ್ರೀಶ್ವರ ಸಂಸ್ಥಾನ ಮಠದಶ್ರೀಗಳ ಮಾರ್ಗದರ್ಶನದಲ್ಲಿ ಶ್ರೀಮಠದಲ್ಲಿ ವಿಶೇಷ ಸಂದರ್ಭಗಳಲ್ಲಿ ವಿಶೇಷ ಧಾರ್ಮಿಕಆಚರಣೆಗಳನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಶ್ರೀಗಳು ಕಳೆದ ಮೂರು ದಶಕಗಳಲ್ಲಿಮುಡುಕನಪುರ ಹಾಗೂ ಹಲವಾರವಿನ ಮಠಗಳನ್ನು ಸರ್ವತೋಮುಖವಾಗಿ ಅಭಿವೃದ್ಧಿಪಡಿಸಿದ್ದು ಇನ್ನೂ ಹೆಚ್ಚಿನ ಕಾರ್ಯಯೋಜನೆ ಹೊಂದಿದ್ದಾರೆ.
Swamiji
Swamiji Name :
ಪೂಜ್ಯ ಶ್ರೀ ಷಡಕ್ಷರ ದೇಶಿಕೇಂದ್ರ ಮಹಾಸ್ವಾಮಿಗಳು
Date of Birth :
17-08-1969
Place :
ಸುತ್ತೂರು, ನಂಜನಗೂಡು ತಾ||
Pattadikara :
14-05-1985
Photo :
Programs
ಪ್ರತಿ ಅಮವಾಸÉಗೆ ಶ್ರೀ ಮಠದಲ್ಲಿ ವಿಶೇಷ ಪೂಜೆ
ಶ್ರೀಮಠದಲ್ಲಿ ಪ್ರತಿ ಹಬ್ಬಗಳ ಆಚರಣೆ
Photos
Full Address Kannada
ಶ್ರೀ ಸುತ್ತೂರು ಖಾಸಾ ಶಾಖಾ ಹಲವಾರ ಮಠ
ಮುಡುಕನಪುರ, ಚಿದರವಳ್ಳಿ ಪೋಸ್ಟ್ - 571 102
ಟಿ. ನರಸೀಪುರ ತಾ||, ಮೈಸೂರು ಜಿಲ್ಲೆ