ಕರ್ತೃ – ಶ್ರೀ ಷ.ಬ್ರ. ಸಿದ್ಧರಾಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು
ರಾಯಚೂರು ಜಿˉÉ್ಲಯ ತಾಲ್ಲೂಕು ಕೇಂದ್ರವಾದ ದೇವದುರ್ಗ ಪಟ್ಟಣವುಪುರಾತನ ವೀರಶೈವ ಧರ್ಮಕೇಂದ್ರವಾಗಿದ್ದು ಈ ಪಟ್ಟಣದ ಹೊರವಲಯದಲ್ಲಿ ಹರಿಯುವಕೃಷ್ಣಾ ನದಿ ತೀರದಲ್ಲಿ ಸ್ಥಾಪಿತಗೊಂಡಿರುವ ಶ್ರೀ ಸಿದ್ಧರಾಮೇಶ್ವರ ಸಂಸ್ಥಾನ ಮಠವು ತನ್ನಪ್ರಾಚೀನತೆಯಿಂದಾಗಿ, ಭವ್ಯ ಪರಂಪರೆಯಿಂದಾಗಿ ಜನಮಾನಸದಲ್ಲಿ ಬೇರೂರಿದೆ.ಸುಮಾರು 900 ವರ್ಷಗಳ ಇತಿಹಾಸವಿದೆಯೆಂದು ಹೇಳˉÁಗುವ ಶ್ರೀಮಠದಮೂಲಪುರುಷರು ಶ್ರೀ ಷ.ಬ್ರ. ಸಿದ್ಧರಾಮೇಶ್ವರ ಶಿವಾಚಾರ್ಯರು, ಪೂಜ್ಯರು ಮೂಲತಃಶ್ರೀಶೈಲ ಕ್ಷೇತ್ರದಲ್ಲಿ ಅನುಷ್ಠಾನಗೈದು ಶ್ರೀಶೈಲ ಜಗದ್ಗುರುಗಳ ಕೃಪಾಶೀರ್ವಾದಕ್ಕೆ ಪಾತ್ರರಾಗಿˉÉೂೀಕಸಂಚಾರ ಮಾಡುತ್ತಾ ದೇವದುರ್ಗ ಪಟ್ಟಣಕ್ಕೆ ಬಂದು ನೆˉÉನಿಂತು ಶ್ರೀ ಶಿಖರ ಮಠವನ್ನು ಸ್ಥಾಪಿಸಿದರೆಂದು ಹೇಳˉÁಗುತ್ತದೆ.ಪೂಜ್ಯ ಶ್ರೀಗಳು ಪವಾಡ ಪುರುಷರಾಗಿದ್ದು ತಮ್ಮ ಅನುಷ್ಠಾನಬಲದಿಂದ, ಪವಾಡಗಳಿಂದ ಭಕ್ತರನ್ನುದ್ಧರಿಸಿದರು. ತಮ್ಮ ಧರ್ಮಬೋಧನೆಗಳಿಂದ ಭಕ್ತರಲ್ಲಿ ಧರ್ಮಜಾಗೃತಿಮೂಡಿಸುತ್ತಾ ಅವರಿಗೆ ವೀರಶೈವಧರ್ಮ-ತತ್ವಾನುಷ್ಠಾನಗಳನ್ನು ತಿಳಿಸಿಕೊಡುತ್ತಾ ಸನ್ಮಾರ್ಗದಲ್ಲಿ ಮುನ್ನಡೆಸಿದರು. ಇವರ ಕೀರ್ತಿ ನಾಡಿನಗಲಕ್ಕೂ ಪಸರಿಸಿತ್ತು ಎಂದು ತಿಳಿದುಬರುತ್ತದೆ.ಹೀಗಿರುವಾಗˉÉೀ ಹೊಸಪೇಟೆ ತಾಲ್ಲೂಕಿನ ಬುಕ್ಕಸಾಗರ ಗ್ರಾಮದ ಶ್ರೀಕರಿಸಿದ್ದೇಶ್ವರ ಸಂಸ್ಥಾನ ಮಠದ ಪೂಜ್ಯರಾದ ಶ್ರೀ ಷ.ಬ್ರ. ಯರಗುಂಬಳ ಶಿವಾಚಾರ್ಯರುಸಂಚಾರ ಮಾಡುತ್ತಾ ಶ್ರೀ ಶಿಖರ ಮಠಕ್ಕೆ ಆಗಮಿಸುತ್ತಾರೆ. ಶ್ರೀ ಗುರು ಸಿದ್ದರಾಮೇಶ್ವರಶಿವಾಚಾರ್ಯರ ಹೃದಯಪೂರ್ವಕ ಆತಿಥ್ಯಕ್ಕೆ ಮನಸೋತ ಪೂಜ್ಯರು ಬಹುಕಾಲ ಶ್ರೀಮಠದˉÉ್ಲೀ ನೆˉÉನಿಂತು ಭಕ್ತರಿಗೆ ಸೂಕ್ತ ಮಾರ್ಗದರ್ಶನ ಮಾಡಿದರೆಂದು ತಿಳಿದುಬರುತ್ತದೆ.ಉಭಯ ಶ್ರೀಗಳು ಪಂಚಾಚಾರ್ಯ ರತ್ನಗಳೆನಿಸಿ ಭಕ್ತರಿಗೆ ಸನ್ಮಾರ್ಗ ತೋರಿಇಲ್ಲಿಯೇ ಜೀವಂತ ಸಮಾಧಿ ಹೋದರೆಂದು ಹೇಳˉÁಗಿದ್ದು ಇಂದಿಗೂ ಕಾರ್ತೀಕಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆಯನ್ನು ಆಚರಿಸುತ್ತಾ ಬರˉÁಗುತ್ತಿದೆ.ಅಂದಿನಿಂದ ಇಂದಿನವರೆಗೂ ಮುನ್ನಡೆದು ಬಂದಿರುವ ಗುರುಪರಂಪರೆಯು ಅನೇಕಮಠಾಧೀಶರ ಮೂಲಕ ಸಾಗಿ ಬಂದಿದೆ.ಕಲಬುರ್ಗಿ ಜಿˉÉ್ಲ ಸುರಪುರ ತಾಲ್ಲೂಕಿನ ಅರಳಹಳ್ಳಿಯಲ್ಲಿ ಜನಿಸಿ ತಮ್ಮ 9ನೇವಯಸ್ಸಿನಲ್ಲಿಯೇ ಶ್ರೀಮಠದ ಉತ್ತರಾಧಿಕಾರಿಗಳಾಗಿ ನೇಮಕ ಹೊಂದಿದವರು 12ನೇಪೀಠಾಧಿಪತಿಗಳಾದ ಶ್ರೀ ಷ.ಬ್ರ. ಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮಿಗಳು. ಶ್ರೀಗಳು ಚಿಕ್ಕವಯಸ್ಸಿನಲ್ಲಿಯೇ ಅಧಿಕಾರ ವಹಿಸಿಕೊಂಡು ಶ್ರೀಮಠದ ಧಾರ್ಮಿಕ ಹಾಗೂ ಸಾಮಾಜಿಕಕಾರ್ಯಗಳನ್ನು ಚುರುಕುಗೊಳಿಸಿದ ಶ್ರೀಗಳು ಕ್ರಿಯಾತ್ಮಕವಾಗಿ ಧಾರ್ಮಿಕ ಚಟುವಟಿಕೆಗಳುನಡೆಯುವಂತೆ ವ್ಯವಸ್ಥೆ ಮಾಡಿದ್ದಲ್ಲದೆ ಶ್ರೀಮಠದ ಜೀರ್ಣಾಭಿವೃದ್ಧಿಯನ್ನು ಮಾಡಿದರು.ಪೂಜ್ಯ ಶ್ರೀಗಳು ಅಪಾರ ಸಂಖ್ಯೆಯ ಭಕ್ತವರ್ಗವನ್ನು ಹೊಂದಿ ಅವರ ಸಹಕಾರದೊಂದಿಗೆ ಶ್ರೀಮಠವನ್ನು ಅಭಿವೃದ್ಧಿಪಥದತ್ತ ಕೊಂಡೊಯ್ದರು. ಮಠದ ಕಟ್ಟಡವನ್ನುವಿಸ್ತಾರವಾಗಿ ನವೀಕರಣಗೊಳಿಸಿದರು. ತಮ್ಮ ಆಶೀರ್ವಚನಗಳ ಮೂಲಕ, ಧರ್ಮಬೋಧನೆಗಳ ಮೂಲಕ ಅಪಾರ ಶಿಷ್ಯಬಳಗವನ್ನು ಹೊಂದಿದ್ದ ಶ್ರೀಗಳು ಶತಾಯುಷಿಗಳಾಗಿಶ್ರೀಮಠದಲ್ಲಿ ಲಿಂಗೈಕ್ಯರಾದರು.ಈಗಿನ ಶ್ರೀಗಳಾದ ಶ್ರೀ ಷ.ಬ್ರ. ಕಪಿಲ ಸಿದ್ದರಾಮ ಶಿವಾಚಾರ್ಯ ಸ್ವಾಮಿಗಳುಹಿರಿಯ ಶ್ರೀಗಳಿರುವಾಗˉÉೀ ಶ್ರೀಮಠಕ್ಕೆ ಉತ್ತರಾಧಿಕಾರಿಗಳಾಗಿ ನೇಮಕಗೊಂಡು 1990ರಜುˉÉೈ 07ರಂದು ಪಟ್ಟಾಧಿಕಾರವನ್ನು ಸ್ವೀಕರಿಸಿದರು. ಚಿಕ್ಕ ವಯಸ್ಸಿನಲ್ಲಿಯೇ ಶ್ರೀಮಠಕ್ಕೆಆಗಮಿಸಿ ಗುರುಗಳ ಸೇವೆಯಲ್ಲಿ ತೊಡಗಿದ್ದ ಶ್ರೀಗಳು ಮುಂದೆ ಉಜ್ಜಯಿನಿ ಪೀಠದಲ್ಲಿಸಂಸ್ಕøತ ವೇದಾಧ್ಯಯನವನ್ನು ಮಾಡಿ ಪರಿಣಿತಿ ಗಳಿಸಿದರು. ಹಿರಿಯ ಗುರುಗಳಕರಸಂಜಾತರಾಗಿ ಅವರ ಆಶೀರ್ವಾದದೊಂದಿಗೆ ಶ್ರೀ ಉಜ್ಜಯಿನಿ ಹಾಗೂ ಶ್ರೀ ಕೇದಾರಜಗದ್ಗುರುಗಳ ಸಾನಿಧ್ಯದಲ್ಲಿ ಶ್ರೀ ಶಿಖರ ಸಂಸ್ಥಾನ ಮಠದ ಪಟ್ಟಾಧಿಕಾರ ಸ್ವೀಕರಿಸಿದರು.ತಮ್ಮ 20ನೇ ವಯಸ್ಸಿನಲ್ಲಿಯೇ ಶ್ರೀ ಶಿಖರ ಮಠದ ಹಿರಿದಾದ ಜವಾಬ್ದಾರಿಯನ್ನುಹೊತ್ತುಕೊಂಡ ಶ್ರೀಗಳು ಪರಂಪರೆಯ ತತ್ವಗನುಗುಣವಾಗಿ ಹಿರಿಯ ಗುರುಗಳಮಾರ್ಗದರ್ಶನದಲ್ಲಿ ಶ್ರೀಮಠವನ್ನು ಮುನ್ನಡೆಸಿದ್ದಾರೆ. ಶ್ರೀಮಠದ ಏಳಿಗೆಗಾಗಿ ತಮ್ಮಜೀವನವನ್ನೇ ಮುಡಿಪಾಗಿಟ್ಟಿರುವ ಶ್ರೀಗಳು ಈ ಭಾಗದ ಭಕ್ತರ ಕಣ್ಮಣಿಯಾಗಿ, ಸರಳಸಜ್ಜನಿಕೆಯ ಸಾಕಾರಮೂರ್ತಿಯಾಗಿ ಶ್ರೀಮಠವನ್ನು ಮುನ್ನಡೆಸುತ್ತಿದ್ದಾರೆ. ಹಾಗೂಶ್ರೀಮಠದಲ್ಲಿ ಧಾರ್ಮಿಕ ಆಚರಣೆಗಳೊಂದಿಗೆ ಸಾಮಾಜಿಕ ಕಾರ್ಯಕ್ರಮಗಳಿಗೆ ಹೆಚ್ಚು ಒತ್ತುನೀಡುತ್ತಾ ಬಂದಿದ್ದಾರೆ. ಶ್ರೀಮಠದಲ್ಲಿ ಧರ್ಮ ಜಾಗೃತಿ ಮಾಡಿಕೊಂಡು ಬರುವುದರಜೊತೆಯಲ್ಲಿ ಶ್ರೀಮಠದ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ.
Swamiji
Swamiji Name :
ಶ್ರೀ ಷ.ಬ್ರ. ಅಭಿನವ ಕಪಿಲ ಸಿದ್ದರಾಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
1-1-1970
Place :
ಅರಳಹಳ್ಳಿ, ಸುರಪುರ ತಾ||
Pattadikara :
7-7-1990
Photo :
Programs
¥ತಿÀ್ರ ಅಮವಾಸ್ಯೆ ಮತ್ತು ಹುಣ್ಣಿಮೆಗಳಲ್ಲಿ ವಿಶೇಷ ಪೂಜೆ. ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ ಹಾಗೂ ಪುರಾಣ ಪ್ರವಚನ. ಕಾರ್ತೀಕ ಮಾಸದಲ್ಲಿ ಗೌರಿಹುಣ್ಣಿಮೆ ನಂತರ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ, ರಥೋತ್ಸವ ಹಾಗೂ ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳು.
Photos
Full Address Kannada
ಶ್ರೀ ಸಿದ್ದರಾಮೇಶ್ವರ ಸಂಸ್ಥಾನ ಶಿಖರ ಮಠ ದೇವದುರ್ಗ - 584 111 ದೇವದುರ್ಗ ತಾ||, ರಾಯಚೂರು ಜಿ||