ಸೇಡಂ ಪಟ್ಟಣದ ಜಂಗಮವಾಡ ಪ್ರದೇಶದಲ್ಲಿ ಸುಮಾರು 600 ವರ್ಷಗಳಇತಿಹಾಸವಿರುವ ಶ್ರೀ ಶಿವಶಂಕರೇಶ್ವರ ಮಠವು ಅಸ್ತಿತ್ವದಲ್ಲಿದ್ದು ತನ್ನ ಶ್ರೀಮಂತಪರಂಪರೆಯಿಂದ ಈ ಭಾಗದ ಪ್ರಮುಖ ಧಾರ್ಮಿಕ ಕೇಂದ್ರವಾಗಿ ಬೆಳೆದುಬಂದಿದೆ. ಶ್ರೀಮದ್ರಂಭಾಪುರಿ ಪೀಠದ ಶಾಖಾಮಠವಾಗಿ ಪಂಚಪೀಠಗಳ ಸಂಪ ್ರದಾಯದಲ್ಲಿಬೆಳೆದುಬಂದಿರುವ ಶ್ರೀಮಠದ ಕರ್ತೃಗುರುಗಳೆಂದು ಪೂಜ್ಯ ಶ್ರೀ ಕಂಭರಾಧ್ಯಮಹಾಸ್ವಾಮಿಗಳನ್ನು ಗುರುತಿಸಲಾಗಿದೆ.ಶ್ರೀ ಕಂಭರಾಧ್ಯ ಮಹಾಸ್ವಾಮಿಗಳು ಸಂಚಾರದಲ್ಲಿ ಸೇಡಂ ಭಾಗಕ್ಕೆ ಬಂದು ಇಲ್ಲಿನಶ್ರೀ ಈಶ್ವರ ಗವಿಯಲ್ಲಿ ಅನುಷ್ಠಾನಗೊಂಡು ದೀರ್ಘಕಾಲ ನೆಲೆಸಿ, ತಮ್ಮದರ್ಮೋಃಪದೇಶಗಳ ಮೂಲಕ ಭಕ್ತರನ್ನು ಉದ್ದರಿಸಿದರು. ಗುರುಗಳ ಪ್ರಭಾವಕ್ಕೆ ಒಳಗಾದಇಲ್ಲಿನ ದೇಶಮುಖರು ಗುರುಗಳಿಗೆ ಮಠ ಸ್ಥಾಪಿಸಲು ಮುಂದಾದರು. ಆದರೆ ಗುರುಗಳುಅದಕ್ಕೆ ಒಪ್ಪದೇ ಈಶ್ವರ ಗವಿಯಲ್ಲಿಯೇ ಇದ್ದು ಅಲ್ಲಿಯೇ ಲಿಂಗೈಕ್ಯರಾಗಿದ್ದು ಅವರಗದ್ದುಗೆಯನ್ನು ನಿರ್ಮಿಸಿ ನಿತ್ಯ ಪೂಜೆಗೆ ಒಳಪಡಿಸಲಾಯಿತು. ನಂತರದಲ್ಲಿ ಪೂಜ್ಯ ಶ್ರೀಶಿವಶಂಕರ ಮಹಾಸ್ವಾಮಿಗಳು ಸಂಚಾರ ಕೈಗೊಂಡು ಈ ನಾಡಿಗೆ ಆಗಮಿಸಿ ಈಶ್ವರಗವಿಯಲ್ಲಿ ನೆಲೆ ನಿಂತಾಗ ದೇಶಮುಖರು ಗುರುಗಳಿಗೆ ತಾವು ಇಲ್ಲಿಯೇ ನೆಲೆಗೊಳ್ಳಬೇಕುತಮಗೆ ಮಠ ಸ್ಥಾಪಿಸಿ ಕೊಡುತ್ತೇವೆಂದು ಭಿನ್ನಹಿಸಿಕೊಂಡರು. ಅದಕ್ಕೆ ಒಪ್ಪಿದ ಶ್ರೀಗಳುದೇಶಮುಖರು ಕಟ್ಟಿದ ಕಟ್ಟಡದಲ್ಲಿ ಶ್ರೀಮಠವನ್ನು ಸ್ಥಾಪಿಸಿದ್ದು ಈ ಕಾರಣದಿಂದಾಗಿ ಶ್ರೀಮಠಕ್ಕೆಶ್ರೀ ಶಿವಶಂಕರೇಶ್ವರ ಮಠವೆಂದು ಹೆಸರು ಬಂದಿತು.ಈಗಿನ ಶ್ರೀಗಳಾದ ಶ್ರೀ.ಷ.ಬ್ರ. ಶಿವಶಂಕರ ಶಿವಾಚಾರ್ಯ ಸ್ವಾಮಿಗಳು 1976ರಲ್ಲಿಶ್ರೀಮಠದ ಪಟ್ಟಾಧಿಕಾರವನ್ನು ವಹಿಸಿಕೊಂಡು ಬಂದಿದ್ದು ಶ್ರೀಮಠವನ್ನುಸರ್ವಾಂಗೀಣವಾಗಿ ಅಭಿವೃದ್ಧಿಪಡಿಸಲು ಶ್ರಮಿಸಿದ್ದಾರೆ. ಗುರುಗಳು ಹಾವೇರಿ ಮತ್ತುಕೇದಾರಗಳಲ್ಲಿ ಸಂಸ್ಕøತ, ವೇದಾಧ್ಯಯನವನ್ನು ಮಾಡಿ ವಿದ್ವತ್ ಗಳಿಸಿಕೊಂಡಿದ್ದಾರೆ.ಶ್ರೀಗಳು ಸಂಚಾರ ಮುರ್ತಿಗಳಾಗಿ ನಾಡಿನ ನಾನಾ ಭಾಗಗಳಲ್ಲಿ ಸಂಚರಿಸಿ ವೀರಶೈವಧರ್ಮವನ್ನು ಬೆಳೆಸುತ್ತಿದ್ದಾರೆ. ಶ್ರೀಮಠದ ಪರಂಪರದಲ್ಲಿ ಸ್ಥಿರ ಹಾಗೂ ಚರಪಟ್ಟಾಧ್ಯಕ್ಷರೆಂದುಇಬ್ಬರು ಶ್ರೀಗಳನ್ನು ನೇಮಿಸುವ ಸಂಪ್ರದಾಯ ಬೆಳೆದು ಬಂದಿದ್ದು ಪ್ರಸ್ತುತ ಶ್ರೀ ಶಿವಶಂಕರಶಿವಾಚಾರ್ಯ ಸ್ವಾಮಿಗಳೊಬ್ಬರೇ ಶ್ರೀಮಠವನ್ನು ಮುನ್ನಡೆಸುತ್ತಿದ್ದಾರೆ.
Swamiji
Swamiji Name :
ಶ್ರೀ ಷ.ಬ್ರ. ಶಿವಶಂಕರ ಶಿವಾಚಾರ್ಯ ಸ್ವಾಮಿಗಳು
Date of Birth :
1948
Place :
ಚಿಕ್ಕುಂಬಿ, ಸವದತ್ತಿ ತಾ||
Pattadikara :
1976
Photo :
Programs
ಶ್ರಾವಣ ಮಾಸದಲ್ಲಿ ನಿತ್ಯ ತ್ರಿಕಾಲ ಪೂಜೆ ಹಾಗೂ ಸಂಜೆ ಪಾದಪೂಜೆ
ವೈಶಾಖ ಶುದ್ಧ ಏಕಾದಶಿಯಂದು ಯಾದಗಿರಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ
Institutions
ಉಚಿತ ವಿದ್ಯಾರ್ಥಿ ನಿಲಯ
Photos
Full Address Kannada
ಶ್ರೀ ಶಿವಶಂಕರೇಶ್ವರ ಮಠ
ಜಂಗಮವಾಡ, ಸೇಡಂ - 585 222
ಸೇಡಂ ತಾ||, ಕಲಬುರಗಿ ಜಿಲ್ಲೆ