ಶ್ರೀ ಮ.ನಿ.ಪ್ರ. ಜಗದ್ಗುರು ಡಾ|| ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳು
ಕಲಬುರಗಿ ಜಿಲ್ಲೆ ಜೇವರ್ಗಿ ತಾಲ್ಲೂಕಿನ ನೆಲೋಗಿ ಗ್ರಾಮವು ತಾಲ್ಲೂಕುಕೇಂದ್ರದಿಂದ 22 ಕಿ.ಮೀ.ದೂರದಲ್ಲಿದ್ದು ಈ ಗ್ರಾಮದಲ್ಲಿ ಸ್ಥಾಪಿತಗೊಂಡಿರುವ ಶ್ರೀಶಿವಾನಂದೇಶ್ವರ ವಿರಕ್ತಮಠವು ತನ್ನ ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕಕಾರ್ಯಚಟುವಟಿಕೆಗಳ ಮೂಲಕ ಈ ಭಾಗದ ಪ್ರಮುಖ ಧಾರ್ಮಿಕ ಕೇಂಧ್ರಗಳಲ್ಲಿ ಒಂದಾಗಿಬೆಳೆದಿದೆ. ಶ್ರೀಮಠವನ್ನು 1992 – 93 ರಲ್ಲಿ ಶ್ರೀ.ಮ.ನಿ.ಪ್ರ.ಸಿದ್ದಲಿಂಗ ಮಹಾಸ್ವಾಮಿಗಳುಸ್ಥಾಪಿಸಿದ್ದಾರೆ.ಸುರಪುರದ ವೆಂಕಟಪ್ಪನಾಯಕನ ಮಂತ್ರಿಯಾಗಿದ್ದ ಶ್ರೀ ವೀರಪ್ಪ ಮತ್ತು ಅವರಸಹೋದರ ಶ್ರೀ ಕಡ್ಲೆಪ್ಪನವರು ಸುತ್ತಮುತ್ತಲಿನ ಪ್ರಾಂತ್ಯಗಳಲ್ಲಿ ನೂರು ಮಠಗಳನ್ನುಸ್ಥಾಪಿಸಿದ್ದು ಅದೇ ರೀತಿ ನೆಲೋಗಿ ಗ್ರಾಮದಲ್ಲಿ ಮಠವನ್ನು ಸ್ಥಾಪಿಸಿ ವೀರಶೈವ ಧರ್ಮವುಬೆಳೆಯುವಂತೆ ಮಾಡಿದರು. ಅಂದು ಪ್ರಾರಂಭಗೊಂಡ ಮಠದಲ್ಲಿ ಕೆಲಕಾಲ ಧಾರ್ಮಿಕಆಚರಣೆಗಳು ನಡೆದು ವೀರಶೈವ ಧರ್ಮದ ಪ್ರಗತಿಗೆ ಕಾರಣವಾಯಿತು. ಆದರೆಪರಂಪರೆಯ ಬಗ್ಗೆ ಸೂಕ್ತವಾದ ದಾಖಲೆಗಳಿಲ್ಲದ ಕಾರಣ ಸ್ಪಷ್ಟತೆಯಿಲ್ಲ. ಈ ರೀತಿಯಾಗಿಮಠವು ಜೀರ್ಣಗೊಂಡಿತಾದರೂ ಜಾಗೃತಸ್ಥಳವಾಗಿ ಗುರುತಿಸಿಕೊಂಡಿದೆ.ಈ ರೀತಿ ಪುರಾತನ ಕಾಲದಿಂದಲೂ ಗುರುತಿಸಿಕೊಂಡಿದ್ದ ಸ್ಥಳದಲ್ಲಿ `1992ರಲ್ಲಿಶ್ರೀ.ಮ.ನಿ.ಪ್ರ. ಸಿದ್ದಲಿಂಗ ಮಹಾಸ್ವಾಮಿಗಳು ಮಠವನ್ನು ಸ್ಥಾಪಿಸಿದ್ದು ಮಠದಲ್ಲಿ ಸೊನ್ನದ ಶ್ರೀಶಿವಾನಂದ ಮಹಾಸ್ವಾಮಿಗಳ ತೊರುಗದ್ದುಗೆಯನ್ನು ನಿರ್ಮಿಸಿ ಶ್ರೀ ಶಿವಾನಂದೇಶ್ವರಮಠವೆಂದು ಕರೆದರು. ಶ್ರೀಗಳು ಹುಬ್ಬಳ್ಳಿ ಹಾಗೂ ಶಿವಯೋಗ ಮಂದಿರಗಳಲ್ಲಿ ವಿದ್ಯಾಭ್ಯಾಸಪೂರ್ಣಗೊಳಿಸಿದ್ದು ನೆಲೋಗಿ ಗ್ರಾಮಕ್ಕೆ ಬಂದು ಮಠಕ್ಕೆ ನೂತನ ಕಟ್ಟಡವನ್ನು ನಿರ್ಮಿಸಿಜೊತೆಯಲ್ಲಿಯೇ 1993ರಲ್ಲಿ ಶ್ರೀ ತೋಂಟದಾರ್ಯ ವಿದ್ಯಾಪೀಠವನ್ನು ಸ್ಥಾಪಿಸಿ ಗ್ರಾಮೀಣಬಡ ಮಕ್ಕಳಿಗೆ ನೆರವಾಗಿದ್ದಾರೆ.ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ತಾಲ್ಲೂಕಿನ ಮೂಲೆ ಮೂಲೆಗಳಲ್ಲಿನ ಹಳ್ಳಿಗಳಿಗೆಪಾದಯಾತ್ರೆಯ ಮೂಲಕ ತೆರಳಿ ಧರ್ಮಜಾಗೃತಿಯನ್ನುಂಟು ಮಾಡಿದ್ದಾರೆ. ಸಮಾಜದಲ್ಲಿನಪಿಡುಗುಗಳಾದ ಮಧ್ಯಪಾನ, ದೇವದಾಸಿ ಪದ್ಧತಿ, ವರದಕ್ಷಿಣೆ ಕಿರುಕುಳದಂತಹ ಪಿಡುಗುಗಳವಿರುದ್ಧ ಹೋರಾಡುತ್ತಾ ನೊಂದವರಿಗೆ ಸಹಾಯಹಸ್ತ ಚಾಚುತ್ತಾ ಬಂದಿದ್ದಾರೆ. ಶ್ರೀಮಠದಲ್ಲಿ ಶಿಶುಪಾಲನಾ ಕೇಂದ್ರ, ವೃದ್ಧಾಶ್ರಮಗಳನ್ನು ತೆರೆದು ಅನೇಕ ಜನರಿಗೆ ಆಶ್ರಯಕಲ್ಪಿಸಿದ್ದಾರೆ. ಹಾಗೂ ಮಠದಲ್ಲಿ ದೇವದಾಸಿ ಮಕ್ಕಳಿಗೆ ಮತ್ತು ಅಂಗವಿಕಲ ಮಕ್ಕಳಿಗೆ ಆಶ್ರಯಕಲ್ಪಿಸಿ, ಇವರುಗಳಿಗೆ ಸಮಾಜದಲ್ಲಿ ಒಂದು ಸ್ಥಾನ ಕಲ್ಪಿಸಿಕೊಡಲು ಗುರುಗಳುನೆರವಾಗುತ್ತಿರುವುದು ಪ್ರಶಂಸನಾರ್ಹ. 205ಗುರುಗಳು ಪ್ರತಿ ವರ್ಷ ಉಚಿತ ನೇತ್ರಚಿಕಿತ್ಸಾ ಶಿಬಿರ ಹಾಗೂ ಈ ಭಾಗದಲ್ಲಿಅತಿಯಾಗಿ ಕಾಣಿಸಿಕೊಳ್ಳುವ ಆನೇಕಾಲು ರೋಗದ ತಡೆಗೆ ಉಚಿತ ತಪಾಸಣಾ ಶಿಬಿರಗಳನ್ನುಏರ್ಪಡಿಸಿ ಚಿಕಿತ್ಸೆಯನ್ನು ಕೊಡಿಸುತ್ತಿದ್ದಾರೆ. ಸಾಮೂಹಿಕ ವಿವಾಹಗಳು ಹಾಗೂಅಂತರಜಾತೀಯ ವಿವಾಹಗಳನ್ನು ಮಾಡಿಸುವ ಮೂಲಕ ಜಾತ್ಯಾತೀತ ಸಮಾಜದನಿರ್ಮಾಣಕ್ಕೆ ಗುರುಗಳು ಪ್ರಯತ್ನಿಸುತ್ತಿದ್ದಾರೆ. ಪ್ರತಿ ವರ್ಷ ಮಠದಲ್ಲಿ ಬಸವಜಯಂತಿಯನ್ನುಅರ್ಥಪೂರ್ಣವಾಗಿ ಆಚರಿಸಿ ಸಾಮಾಜಿಕ ಸುಧಾರಣೆಗೆ ನೆರವಾಗಬಲ್ಲಂತಹಕಾರ್ಯಕ್ರಮಗಳನ್ನು ರೂಪಿಸಿ ಜ್ಞಾನ ಮತ್ತು ಅನ್ನದಾಸೋಹವನ್ನು ನೀಡುತ್ತಿದ್ದಾರೆ. ಹಾಗೂಆಗಾಗ್ಗೆ ಬಸವಾದಿ ಶರಣರ ಪುರಾಣಗಳನ್ನು ಹೇಳಿಸುವ ಮೂಲಕ ಸಮಾಜದಲ್ಲಿಪರಿವರ್ತನೆ ತರುತ್ತಿದ್ದಾರೆ.ಶ್ರೀ.ಮ.ನಿ.ಪ್ರ.ಸಿದ್ದಲಿಂಗ ಮಹಾಸ್ವಾಮಿಗಳು ನಾಡಿನಾದ್ಯಂತ ಪಂಚಮಸಾಲಿಸಮಾಜದ ಸಂಘಟನೆಗೋಸ್ಕರ ನಿರಂತರವಾಗಿ ಕರ್ನಾಟಕದ ಮೂರು ಸಾವಿರ ಗ್ರಾಮಗಳಲ್ಲಿಪಾದಯಾತ್ರೆ ಕೈಗೊಂಡು ಸಮಾಜವನ್ನು ಸದೃಡವಾಗಿ ಸಂಘಟಿಸಿದರು. 2008ರಲ್ಲಿಪಂಚಮಸಾಲಿ ಸಮಾಜದ ಮುಖಂಡರು ತಮ್ಮ 15 ವರ್ಷಗಳ ಪರಿಶ್ರಮದಿಂದ ದಾವಣಗೆರೆಜಿಲ್ಲೆ ಹರಿಹರದಲ್ಲಿ ಸ್ಥಾಪಿಸಿದ ಶ್ರೀ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ2008ರ ಚರ ಪಟ್ಟಾಧ್ಯಕ್ಷರಾಗಿ 2008ರ ಫೆಬ್ರವರಿ 18ರಂದು ಅಧಿಕಾರ ಸ್ವೀಕರಿಸಿದ ಶ್ರೀಗಳುಜಗದ್ಗುರು ಪೀಠವನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ.ಶ್ರೀ.ಮ.ನಿ.ಪ್ರ. ಸಿದ್ದಲಿಂಗ ಮಹಾಸ್ವಾಮಿಗಳು 2008ರಿಂದ ಹರಿಹರದಪಂಚಮಸಾಲಿ ಜಗದ್ಗುರು ಪೀಠದ ಜೊತೆಯಲ್ಲಿ ಶ್ರೀಮಠದ ಅಧಿಕಾರವನ್ನುಮುನ್ನಡೆಸುತ್ತಿದ್ದು ಶ್ರೀಮಠವನ್ನು ಅಭಿವೃದ್ಧಿಪಥದತ್ತ ಕೊಂಡೊಯ್ದಿದ್ದಾರೆ. ಶ್ರೀಗಳುಬಸವಣ್ಣನವರ ವಚನಗಳನ್ನು ಸಂಗ್ರಹಿಸಿ ಸಣ್ಣ ಹೊತ್ತಿಗೆಗಳಲ್ಲಿ ಮುದ್ರಿಸಿ ಭಕ್ತರಿಗೆ ಹಾಗೂಸಾಹಿತ್ಯಾಸಕ್ತರಿಗೆ ಸುಲಭವಾಗಿ ದೊರೆಯುವಂತೆ ಮಾಡಿದ್ದಾರೆ. ಗುರುಗಳು ಕ್ರಿಯಾಶೀಲರಾಗಿಮಠದ ಆಸ್ತಿಯನ್ನು ಕಾನೂನು ಬದ್ಧಗೊಳಿಸಿ ಹೆಚ್ಚು ಆದಾಯಬರುವಂತೆ ಮಾಡಿದ್ದು ಸದಾಸಮಾಜದ ಹಿತಚಿಂತನೆಯಲ್ಲಿ ತೊಡಗಿಕೊಂಡು ಸಮಾಜವನ್ನು ಅಭಿವೃದ್ಧಿಪಡಿಸುತ್ತಿದ್ದಾರೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಜಗದ್ಗುರು ಡಾ|| ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳು
Date of Birth :
01-06-1967
Place :
ಸೊನ್ನ, ಜೇವರ್ಗಿ ತಾ||
Photo :
Programs
ಸೆಪ್ಟೆಂಬರ್ನಲ್ಲಿ ಲಿಂ|| ಶ್ರೀ ಶಿವಾನಂದ
ಶಿವಯೋಗಿಗಳ ಪುಣ್ಯಾರಾಧನೆ
ಸೆಪ್ಟೆಂಬರ್ 17 ರಂದು ಹೈದರಾಬಾದ್
ಕರ್ನಾಟಕ ವಿಮೋಚನೆ ದಿನಾಚರಣೆ
ಶ್ರಾವಣ ಮಾಸದಲ್ಲಿ ನಿತ್ಯ ವಿಶೇಷ ಪೂe
Institutions
ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢ ಶಾಲೆ
ಅನಾಥಾಶ್ರಮ ಗೋ ಶಾಲೆ