ದೊಡ್ಡಮರುಳವಾಡಿ ಗ್ರಾಮದ ಮಧ್ಯಭಾಗದಲ್ಲಿ ಅಸ್ತಿತ್ತ್ವದಲ್ಲಿರುವ ಶ್ರೀಶಿವಮಠವು ವಿರಕ್ತ ಸಂಪ್ರದಾಯವನ್ನು ಪಾಲಿಸಿಕೊಂಡು ಬಂದಿದ್ದು ಪುರಾತನಇತಿಹಾಸವನ್ನು ಹೊಂದಿದೆ. ಪುರಾತನ ಕಾಲದಲ್ಲಿ ಸ್ಥಾಪನೆಗೊಂಡಿದ್ದ ಶ್ರೀ ಶಿವಮಠವುಕಾˉÁನಂತರ ಜೀರ್ಣಗೊಂಡು ತನ್ನ ಅಸ್ತಿತ್ತ್ವವನ್ನು ಕಳಿದುಕೊಳ್ಳುವ ಹಂತದಲ್ಲಿದ್ದಾಗಕನಕಪುರ ದೇಗುಲ ಮಠದ ಶ್ರೀ ಇಮ್ಮಡಿ ಮಹಲಿಂಗ ಸ್ವಾಮಿಗಳ ಅನುಗ್ರಹದಲ್ಲಿ ಮತ್ತೆಪ್ರಚಲಿತಕ್ಕೆ ಬಂದಿತು.ಶ್ರೀಮಠವು ಸುಮಾರು 250 ವರ್ಷಗಳಿಗೂ ಹಿಂದಿನ ಇತಿಹಾಸ ಹೊಂದಿದ್ದುಇತಿಹಾಸದ ಸ್ಪಷ್ಟ ಚಿತ್ರಣ ತಿಳಿಯದಾಗಿದೆ. ಮಠದ ಆವರಣ, ದೇವಸ್ಥಾನದ ಪಕ್ಕ ಹಾಗೂಮಠದ ಜಮೀನಿನಲ್ಲಿ ಕೆಲವು ಗದ್ದುಗೆಗಳು ದೊರಕಿದ್ದು ಅವು ಯಾವ ಶ್ರೀಗಳದ್ದು ಎಂದುÀಗುರುತಿಸˉÁಗುತ್ತಿಲ್ಲ. ಊರಿನ ಹೊರಭಾಗದ ಹೊಲದಲ್ಲಿ ಒಂದು ಕ್ರಿಯಾ ಸಮಾದಿದೊರೆತಿದ್ದು ಪಕ್ಕದಲ್ಲಿಯೇ ಮಠದ ಹೊಳೆ ಎಂಬ ಹೊಳೆ ಹರಿಯುತ್ತಿದ್ದು ಬಹುಶಃ ಈಸ್ಥಳವೇ ಶ್ರೀಮಠದ ಮೂಲವಾಗಿದ್ದಿರಬಹುದು.ಶ್ರೀಮಠವು ಬಹುಕಾಲ ಖಾಲಿ ಉಳಿದು ಜೀರ್ಣಗೊಂಡಿದ್ದ ಸಮಯದಲ್ಲಿಲಿಂಗೈಕ್ಯ ಪೂಜ್ಯ ಶ್ರೀ ನಂಜಯ್ಯ ಸ್ವಾಮಿಗಳು ಶ್ರೀಮಠವನ್ನು ಧಾರ್ಮಿಕ ಆಚರಣೆಗಳಿಗೆಅಣಿಗೊಳಿಸಿಕೊಂಡು ಮುನ್ನಡೆಸಿದ್ದರು. ಶ್ರೀ ನಂಜಯ್ಯ ಸ್ವಾಮಿಗಳು ಗೃಹಸ್ತರಾಗಿದ್ದುಕೊಂಡುಕೆಲಕಾಲ ಧಾರ್ಮಿಕ ಆಚರಣೆಗಳನ್ನು ನಡೆಸಿ 1970ರಲ್ಲಿ ಲಿಂಗೈಕ್ಯರಾದರು. ಆ ನಂತರಊರಿನ ಗ್ರಾಮಸ್ಥರ ಅಪೇಕ್ಷೆಯಂತೆ ಕನಕಪುರದ ದೇಗುಲ ಮಠದ ಲಿಂ. ಶ್ರೀ.ಮ.ನಿ.ಪ್ರ.ಇಮ್ಮಡಿ ಮಹಾಲಿಂಗ ಸ್ವಾಮಿಗಳ ಮಾರ್ಗದರ್ಶನದಲ್ಲಿ ಈಗಿನ ಶ್ರೀಗಳಾದ ಶ್ರೀ. ಮ.ನಿ.ಪ್ರ.ಮೃತ್ಯುಂಜಯ ಸ್ವಾಮಿಗಳು 1972ರ ಫೆಬ್ರವರಿ 02ರಂದು ಅಧಿಕಾರ ಸ್ವೀಕರಿಸಿದರು.ಶ್ರೀ ಮೃತ್ಯುಂಜಯ ಸ್ವಾಮಿಗಳು ಮಹಾಶರಣ ಶಿವಾನುಭವಿ ಲಿಂ|| ಶ್ರೀನಂಜುಂಡಪ್ಪನವರು ಕನಕಪುರ ಹಾಗೂ ಕನಕಪುರ ದೇಗುಲಮಠದಲ್ಲಿ ಶಿವಾನುಭವಶಿಕ್ಷಣವನ್ನು ಪಡೆದರು. ಆ ನಂತರ ಶ್ರೀಮಠಕ್ಕೆ ಆಗಮಿಸಿದ ಶ್ರೀಗಳು ಶ್ರೀಮಠವನ್ನು ತಮ್ಮಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಜ್ಯಾತಾತೀತವಾಗಿಮುನ್ನಡೆಸಿಕೊಂಡು ಬರುತ್ತಿದ್ದಾರೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಮೃತ್ಯುಂಜಯ ಸ್ವಾಮಿಗಳು
Date of Birth :
26-10-1951
Place :
ಬಿಲಗೆರೆ ಹುಂಡಿ, ನರಸೀಪುರ ತಾ||
Pattadikara :
02-02-1972
Photo :
Programs
ಪ್ರತಿ ವರ್ಷ ಮೇ ತಿಂಗಳಲ್ಲಿ (ವೈಶಾಖ ಮಾಸದಲ್ಲಿ) 3 ದಿನಗಳ ಕಾಲ ಶಿವಾನುಭವ ಶಿಬಿರ ಸ್ವಾಮಿ ವಿವೇಕಾನಂದ ಜಯಂತಿ ಆಚರಣೆ
Institutions
ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢಶಾˉÉ ವಿದ್ಯಾರ್ಥಿ ನಿಲಯ