ಮಾಗಡಿ ಪಟ್ಟಣದಿಂದ ಕೇವಲ 3ಕಿ.ಮೀ ದೂರದಲ್ಲಿರುವ ಗುಮ್ಮಸಂದ್ರ ಗ್ರಾಮದಹೊರವಲಯದಲ್ಲಿ ಅಸ್ತಿತ್ತ್ವದಲ್ಲಿರುವ ಶ್ರೀ ರುದ್ರಮುನೇಶ್ವರ ಮಠವು ವಿರಕ್ತ ಮಠವಾಗಿದ್ದುತನ್ನ ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳ ಮೂಲಕ ಈ ಭಾಗದಲ್ಲಿ ಧಾರ್ಮಿಕವಾತಾವರಣವನ್ನು ನೆˉÉಗೊಳಿಸಿದೆ. ಶ್ರೀಮಠದ ಕರ್ತೃಗುರುಗಳೆಂದು ಶ್ರೀ ಮ.ನಿ.ಪ್ರ.ರುದ್ರಮುನೇಶ್ವರ ಮಹಾಸ್ವಾಮಿಗಳನ್ನು ಗುರುತಿಸˉÁಗಿದ್ದು ಶ್ರೀಮಠವು ಶ್ರೀ ಯಡೆಯೂರುಸಿದ್ದಲಿಂಗೇಶ್ವರರ ಕಾಲಘಟ್ಟದಲ್ಲಿ ಸ್ಥಾಪಿತಗೊಂಡಿದೆ ಎಂದು ತಿಳಿದುಬರುತ್ತದೆ.ಉತ್ತರದ ಕಡೆಯಿಂದ ಬಂದ ಶ್ರೀ ರುದ್ರಮುನೇಶ್ವರ ಮಹಾಸ್ವಾಮಿಗಳು ತಮ್ಮಅನುಷ್ಟಾನಗಳಿಂದ, ಆಚರಣೆಗಳಿಂದ ಪ್ರಸಿದ್ದಗೊಂಡಿದ್ದರೆಂದು, ಈ ಗುರುಗಳು ನಾಡಪ್ರಭುಕೆಂಪೇಗೌಡರಿಗೆ ದೀಕ್ಷೆ ಕೊಟ್ಟವರೆಂದು ಹೇಳˉÁಗುತ್ತದೆ. ಹಾಗೂ ನಾಡಪ್ರಭು ಕೆಂಪೇಗೌಡರುಮಾಗಡಿ ಕೋಟೆಯ ಸುತ್ತ ಅಷ್ಟ ಮಠಗಳನ್ನು ನಿರ್ಮಿಸಿದ್ದರೆಂದು ಅವುಗಳಲ್ಲಿ ಶ್ರೀರುದ್ರಮುನೇಶ್ವರ ಮಠವು ಒಂದು ಎಂದು ಹೇಳˉÁಗುತ್ತದೆ.ಕರ್ತೃಗುರುಗಳ ನಂತರದ ಪರಂಪರೆಯ ಬಗ್ಗೆ ಸ್ಪಷ್ಟತೆಯಿಲ್ಲ. ಶ್ರೀಮಠವುನೂರಾರು ವರುಷ ಖಾಲಿ ಉಳಿದಿರುವುದರಿಂದ ಶ್ರೀಮಠದ ಇತಿಹಾಸ ಖಚಿತವಾಗಿತಿಳಿದುಬರುವುದಿಲ್ಲ. ಶ್ರೀಮಠದಲ್ಲಿ ಮೂರು ಗದ್ದುಗೆಗಳಿದ್ದು ಒಂದು ಕರ್ತೃಗುರುಗಳದ್ದೆಂದು,ಇನ್ನೊಂದು ಪರಂಪರೆಯಲ್ಲಿನ 2ನೇ ಶ್ರೀಗಳಾದ ಶ್ರೀ ಗಂಗಾಧರ ಸ್ವಾಮಿಗಳದ್ದೆಂದುಗುರುತಿಸಿˉÁಗಿದೆ. ಹಿಂದಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಚಂದ್ರಶೇಖರ ಸ್ವಾಮಿಗಳು ಹುಟ್ಟುಅಂದರಾಗಿದ್ದು ತಮ್ಮ ಆಧ್ಯಾತ್ಮಿಕ ಸಾಧನೆಗಳಿಂದ ಪ್ರಸಿದ್ಧರಾಗಿದ್ದರು. ಶ್ರೀಗಳುತಾವಿರುವಾಗˉÉೀ ಈಗಿನ ಶ್ರೀಗಳನ್ನು ಪಟ್ಟಕ್ಕೆ ತಂದು 1983ರಲ್ಲಿ ಲಿಂಗೈಕ್ಯರಾದರು.ಈಗಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಚಂದ್ರಶೇಖರ ಮಹಾಸ್ವಾಮಿಗಳು 1977ರಫೆಬ್ರವರಿ 02 ರಂದು ಶ್ರೀಮಠದ ಅಧಿಕಾರ ಸ್ವೀಕರಿಸಿದ್ದು ಇವರ ಕಾˉÁವಧಿಯಲ್ಲಿ ಶ್ರೀಮಠವುಸರ್ವಾಂಗೀಣವಾಗಿ ಅಭಿವೃದ್ಧಿಯಾಗುವತ್ತ ಮುನ್ನಡೆಯುತ್ತಿದೆ. ಶ್ರೀಗಳು ಶ್ರೀಮಠವನ್ನುಜೀರ್ಣೋದ್ಧಾರಗೊಳಿಸಿದ್ದು ವಿಸ್ತರಿಸಿದ್ದಾರೆ ಹಾಗೂ ಹಲವಾರು ಸಾಮಾಜಿಕ ಮತ್ತುಧಾರ್ಮಿಕ ಕಾರ್ಯಕ್ರಮಗಳ ಮೂಲಕ ಭಕ್ತರನ್ನು ಧಾರ್ಮಿಕ ಚಿಂತನೆಗೆ ಒಳಪಡಿಸುತ್ತಿದ್ದುಅವರಲ್ಲಿ ಧಾರ್ಮಿಕ ಅರಿವನ್ನು ಮೂಡಿಸುತ್ತಿದ್ದಾರೆ.
Swamiji
Swamiji Name :
ಶ್ರೀ ಶ್ರೀ ಚಂದ್ರಶೇಖರ ಮಹಾಸ್ವಾಮಿಗಳು
Date of Birth :
08-06-1963
Place :
ಕಾಳಾರಿ, ಮಾಗಡಿ ತಾ||
Pattadikara :
02-02-1977
Photo :
Programs
ಪ್ರತಿ ತಿಂಗಳು "ಶಿವಾನುಭವ ಗೋಷ್ಠಿ" ಹಾಗೂ "ಚಿಂತನ ಗೋಷ್ಠಿ"ಗಳು ನಡೆಯುತ್ತದೆ ಕಾರ್ತಿಕ ಮಾಸದಲ್ಲಿ ದೀಪೋತ್ಸವ ಬಸವ ಜಯಂತಿ ಹಾಗೂ ಶರಣರ ಜಯಂತಿಗಳನ್ನು ಆಚರಿಸˉÁಗುತ್ತದೆ. ಶಾª್ರÀಣದಲ್ಲಿ ನಿತ್ಯ ರುದ್ರಾಭಿಷೇಕ ಮತ್ತು ಅರಿವಿನ ಗೋಷ್ಠಿ ಮಾಘ ಮಾಸದಲ್ಲಿ ಸಾಮೂಹಿಕ ಇಷ್ಟಲಿಂಗ ಮಹಾಪೂಜೆ ಶಿವರಾತ್ರಿಯಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು
Photos
Full Address Kannada
ಶ್ರೀ ರುದ್ರಮುನೇಶ್ವರ ಮಠ ಗುಮ್ಮಸಂದ್ರ, ಹೊಸಪೇಟೆ ಪೋಸ್ಟ್ - 562 120 ಮಾಗಡಿ ತಾ||, ರಾಮನಗರ ಜಿˉÉ್ಲ