ಇಂಡಿ ತಾಲ್ಲೂಕು ಕೇಂದ್ರದಿಂದ 24 ಕಿ.ಮೀ. ದೂರದಲ್ಲಿರುವ ಅಗರಖೇಡಗ್ರಾಮದಲ್ಲಿ ಶ್ರೀ ಮ.ನಿ.ಪ್ರ. ಪ್ರಭುಲಿಂಗೇಶ್ವರ ಶಿವಯೋಗಿಗಳಿಂದ ಸ್ಥಾಪಿತಗೊಂಡಿರುವ ಶ್ರೀಪ್ರಭುಲಿಂಗೇಶ್ವರ ವಿರಕ್ತಮಠವು ತನ್ನ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಮೂಲಕ ಈ ಭಾಗದ ಜನರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಮೂಡಿಸುವಲ್ಲಿ ಯಶಸ್ವಿಯಾಗಿದೆ.ಶ್ರೀ ಪ್ರಭುಲಿಂಗೇಶ್ವರ ವಿರಕ್ತಮಠದ ಸ್ಥಾಪಕರು ಶ್ರೀ ಮ.ನಿ.ಪ್ರ. ಪ್ರಭುಲಿಂಗೇಶ್ವರಶಿವಯೋಗಿಗಳೇ ಆದರೂ ಸ್ಥಾಪನೆಯ ನಿಖರವಾದ ಸಮಯ ತಿಳಿದುಬರುವುದಿಲ್ಲಕರ್ತೃಗುರುಗಳು ಶ್ರೀಮಠವನ್ನು ಸ್ಥಾಪಿಸಿ ಗ್ರಾಮದಲ್ಲಿ ಧಾರ್ಮಿಕ ವಾತಾವರಣವನ್ನುನೆˉÉಗೊಳಿಸಿದರು ಎನ್ನˉÁಗಿದೆ. ತದನಂತರ ಶ್ರೀಮಠದ ಅಧಿಕಾರ ವಹಿಸಿಕೊಂಡ ಶ್ರೀಮ.ನಿ.ಪ್ರ. ಮುರುಘೇಂದ್ರ ಶಿವಯೋಗಿಗಳು ಶ್ರೀಮಠವನ್ನು ಅಭಿವೃದ್ಧಿಗೊಳಿಸಿದರು.ಹಿಂದಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ವಿರೂಪಾಕ್ಷಯ್ಯ ಮಹಾಸ್ವಾಮಿಗಳು ಶ್ರೀಮಠದಅಧಿಕಾರ ವಹಿಸಿಕೊಂಡು ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಅಭಿವೃದ್ಧಿಪಡಿಸಿದ್ದು ಈಗಿನಶ್ರೀಗಳಾದ ಶ್ರೀ ಮ.ನಿ.ಪ್ರ. ಅಭಿನವ ಪ್ರಭುಲಿಂಗ ಸ್ವಾಮಿಗಳನ್ನು ಚಿಕ್ಕವಯಸ್ಸಿನಲ್ಲಿಯೇ ತಮ್ಮಉತ್ತರಾಧಿಕಾರಿಗಳನ್ನಾಗಿ ನೇಮಕ ಮಾಡಿಕೊಂಡು 1991ರ ಮೇ 16ರಲ್ಲಿ ಲಿಂಗೈಕ್ಯರಾಗಿದ್ದಾರೆ.ಈಗಿನ ಶ್ರೀಗಳಾದ ಶ್ರೀ ಮ.ನಿ.ಪ್ರ ಅಭಿನವ ಪ್ರಭುಲಿಂಗ ಸ್ವಾಮಿಗಳು ಹುಟ್ಟಿನಿಂದˉÉೀ ಶ್ರೀಮಠದ ಉತ್ತರಾಧಿಕಾರಿಗಳಾಗಿ ಬೆಳೆದವರಾಗಿದ್ದಾರೆ. ತಮ್ಮ ವಿದ್ಯಾಭ್ಯಾಸವನ್ನುಪೂರ್ಣಗೊಳಿಸಿದ ಶ್ರೀಗಳು ವೀರಶೈವ ಧರ್ಮಾಚರಣೆಗಳ ಬಗ್ಗೆ ಅಧ್ಯಯನ ಮಾಡಿ 2012ರಏಪ್ರಿˉï 29ರಲ್ಲಿ ಶ್ರೀಮಠದ ಪೀಠಾಧಿಪತಿಗಳಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಶ್ರೀಗಳು ಹೆಚ್ಚುಕ್ರಿಯಾಶೀಲರಾಗಿ ಶ್ರೀಮಠದ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಅಭಿವೃದ್ಧಿಕಾರ್ಯಗಳನ್ನು ಚುರುಕುಗೊಳಿಸಿದ್ದಾರೆ.ಶ್ರೀಮಠದಲ್ಲಿ ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ, ಕಾರ್ತೀಕ ಮಾಸದಲ್ಲಿ ನಿತ್ಯದೀಪೋತ್ಸವ ಕಾರ್ಯಕ್ರಮಗಳು ನಡೆಯುತ್ತವೆ ಹಾಗೂ ಹೋಳಿ ಹುಣ್ಣಿಮೆ ಅದ ಮೂರನೇದಿನಕ್ಕೆ ಕರ್ತೃ ಶ್ರೀ ಮ.ನಿ.ಪ್ರ. ಪ್ರಭುಲಿಂಗೇಶ್ವರ ಶಿವಯೋಗಿಗಳ ಪುಣ್ಯಾರಾಧನೆಯ ನಿಮಿತ್ತ 11ದಿನಗಳ ಕಾಲ ಪುರಾಣ ಪ್ರವಚನ ಕಾರ್ಯಕ್ರಮವನ್ನು ಆಯೋಜಿಸˉÁಗಿರುತ್ತದೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಅಭಿನವ ಪ್ರಭುಲಿಂಗ ಸ್ವಾಮಿಗಳು
Date of Birth :
1-7-1990
Place :
ಅಗರಖೇಡ, ಇಂಡಿ ತಾ||
Pattadikara :
29-4-2012
Programs
ಪ್ರತಿ ಅಮವಾಸ್ಯೆಗೆ ರುದ್ರಾಭಿಷೇಕ ಹಾಗೂ ಪೂಜೆ.
ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ.
ಹೋಳಿ ಹುಣ್ಣಿಮೆ ಆದ 3ನೇ ದಿನಕ್ಕೆ ಕರ್ತೃ ಶ್ರೀ ಮ.ನಿ.ಪ್ರ. ಪ್ರಭುಲಿಂಗೇಶ್ವರ ಶಿವಯೋಗಿಗಳ ಪುಣ್ಯ ಸ್ಮರಣೋತ್ಸವ ಹಾಗೂ ಪುರಾಣ (11ದಿನಗಳ ಕಾಲ)