ಕರ್ತೃ – ಪೂಜ್ಯ ಶ್ರೀ ಮರಿ ತೋಂಟದಾರ್ಯ ಶಿವಾಚಾರ್ಯ ಮಹಾಸ್ವಾಮಿಗಳು
ಟಿ.ನರಸೀಪುರ ತಾಲ್ಲೂಕು ಕೇಂದ್ರದಿಂದ ಕೇವಲ 5 ಕಿ.ಮೀ. ದೂರದಲ್ಲಿರುವವೀರಪ್ಪ ಒಡೆಯರ ಹುಂಡಿ ಗ್ರಾಮದ ಹೊರವಲಯದಲ್ಲಿ ಸ್ಥಾಪಿತಗೊಂಡಿರುವ ಶ್ರೀ ಪಟ್ಟದಮಠವು ತನ್ನ ಧಾರ್ಮಿಕ ಆಚರಣೆಗಳ ಮೂಲಕ ಈ ಭಾಗದಲ್ಲಿ ಧಾರ್ಮಿಕವಾತಾವರಣವನ್ನು ನೆˉÉಗೊಳಿಸಿದೆ. ಶ್ರೀ ಪಟ್ಟದ ಮಠವು ಶ್ರೀಮದ್ ರಂಭಾಪುರಿ ಪೀಠದಶಾಖಾ ಮಠವಾಗಿದ್ದು ಶಿಷ್ಯವರ್ಗದ ಪರಂಪರೆಯಲ್ಲಿ ಬೆಳೆದುಬಂದಿದೆ.1953ರ ಮೇ 15ರಲ್ಲಿ ಸ್ಥಾಪಿತಗೊಂಡ ಶ್ರೀಮಠದ ಸ್ಥಾಪನೆಗೆ ಶ್ರಮಿಸಿದವರುದೇವನೂರು ಮಠದ ಶ್ರೀ ತೋಂಟದಾರ್ಯ ಮಹಾಸ್ವಾಮಿಗಳು ಹಾಗೂ ಮಾಡರಹಳ್ಳಿಯಲಿಂ|| ಶ್ರೀ ಷ.ಬ್ರ. ಚನ್ನಮಲ್ಲಿಕಾರ್ಜುನ ಮಹಾಸ್ವಾಮಿಗಳು. ಶ್ರೀ ಪಟ್ಟದ ಮಠದ ಪ್ರಥಮಗುರುಗಳಾಗಿ ನೇಮಕಗೊಂಡ ಶ್ರೀ ಮರಿತೋಂಟದಾರ್ಯ ಶಿವಾಚಾರ್ಯಮಹಾಸ್ವಾಮಿಗಳು ಮೈಸೂರಿನಲ್ಲಿ ವಿದ್ಯಾಭ್ಯಾಸಕ್ಕೆ ತೆರಳಿ ಸುತ್ತೂರು ಮಠದ ಗುರುಕುಲದಲ್ಲಿವಿದ್ಯಾಭ್ಯಾಸ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಶ್ರೀಗಳ ಪಾಂಡಿತ್ಯವನ್ನು ಕಂಡ ಹುಣಸೂರುತಾಲ್ಲೂಕು ಮಾದಳ್ಳಿಯ ಶ್ರೀ ಉಕ್ಕಿನಕಂತೆ ಮಠದ ಭಕ್ತರು 1975ರಲ್ಲಿ ತಮ್ಮ ಮಠಕ್ಕೆಅಧಿಕಾರಕ್ಕೆ ತಂದುಕೊಂಡರು. ಇವರು 2004ರಲ್ಲಿ ಲಿಂಗೈಕ್ಯರಾಗಿದ್ದು ಶ್ರೀಗಳ ಗದ್ದುಗೆಯುಮಾದಳ್ಳಿಯ ಮಠದಲ್ಲಿದೆ.ಕರ್ತೃಗಳು ಮಾದಳ್ಳಿ ಮಠಕ್ಕೆ ಹೋದ ನಂತರ 1975ರ ಆಗಸ್ಟ್ 17ರಲ್ಲಿ ಶ್ರೀಮಠದಪಟ್ಟಾಧಿಕಾರದ ಅನುಗ್ರಹವನ್ನು ಮಾಡರಹಳ್ಳಿ ಮಠದ ಲಿಂ|| ಶ್ರೀ ಷ.ಬ್ರ. ಚನ್ನಮಲ್ಲಿಕಾರ್ಜುನಮಹಾಸ್ವಾಮಿಗಳಿಂದ ಸ್ವೀಕರಿಸಿ ಅಧಿಕಾರಕ್ಕೆ ಬಂದವರು ಪ್ರಸ್ತುತ ಶ್ರೀಗಳಾದ ಶ್ರೀ ಷ.ಬ್ರ.ರೇಣುಕಾ ಶಿವಾಚಾರ್ಯ ಸ್ವಾಮಿಗಳು. ಶ್ರೀಗಳು ತುಮಕೂರಿನ ಸಿದ್ದಗಂಗಾ ಮಠದಲ್ಲಿಸಂಸ್ಕøತ, ವಿದ್ವತ್ ಮಾಧ್ಯಮವನ್ನು ಅಭ್ಯಸಿಸಿದ್ದು ಭಕ್ತರಿಗೆ ಸೂಕ್ತ ಮಾರ್ಗದರ್ಶನನೀಡುತ್ತಿದ್ದಾರೆ. ಮಠದ ಜಮೀನನ್ನು ಅಭಿವೃದ್ಧಿಪಡಿಸಿ ಆದಾಯದ ಮೂಲವನ್ನಾಗಿಮಾಡಿಕೊಂಡಿರುವ ಶ್ರೀಗಳು ಇತ್ತೀಚೆಗೆ ಶ್ರೀಮಠವನ್ನು ಜೀರ್ಣೋದ್ಧಾರಗೊಳಿಸಿದ್ದಾರೆ.ಶ್ರೀಗಳು ಶ್ರೀಮಠದಲ್ಲಿ ನಿತ್ಯ ಧಾರ್ಮಿಕ ಆಚರಣೆಗಳೊಂದಿಗೆ ಧನುರ್ಮಾಸ ಮತ್ತು ಕಾರ್ತೀಕಮಾಸಗಳಲ್ಲಿ ವಿಶೇಷ ಧಾರ್ಮಿಕ ಆಚರಣೆಗಳನ್ನು ನಡೆಸುತ್ತಾರೆ ಹಾಗೂ ಪ್ರತಿ ವರ್ಷ ಆಗಸ್ಟ್17ರಂದು ತಮ್ಮ ಪಟ್ಟಾಧಿಕಾರ ಸ್ಮರಣೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾರೆ.
Swamiji
Swamiji Name :
ಶ್ರೀ ಷ.ಬ್ರ. ರೇಣುಕಾ ಶಿವಾಚಾರ್ಯ ಸ್ವಾಮಿಗಳು
Date of Birth :
15-09-1955
Place :
ಹಣಕೋಳ, ಮಳವಳ್ಳಿ ತಾ||
Pattadikara :
17-08-1975
Photo :
Programs
ಧನುರ್ಮಾಸ ಮತ್ತು ಕಾರ್ತಿಕ ಮಾಸದಲ್ಲಿ ವಿಶೇಷ ಪೂಜೆ
ಶ್ರೀಗಳ ಪಟ್ಟಾಧಿಕಾರದ ಸ್ಮರಣೋತ್ಸವ
Photos
Full Address Kannada
ಶ್ರೀ ಪಟ್ಟದ ಮಠ ವೀರಪ್ಪ ಒಡೆಯರ ಹುಂಡಿ,
ಹಳೇ ಸೋಸಲೆ ಪೋ. ಟಿ. ನರಸೀಪುರ ತಾ|| ಮೈಸೂರು ಜಿಲ್ಲೆ