ಮಂಡ್ಯ ಜಿˉÉ್ಲಯ ಮಳವಳ್ಳಿ ತಾಲ್ಲೂಕಿನ ಚಿಕ್ಕಬಾಗಿಲು ಗ್ರಾಮವು ತಾಲ್ಲೂಕುಕೇಂದ್ರದಿಂದ 23 ಕಿ.ಮೀ. ದೂರದಲ್ಲಿದ್ದು ಈ ಗ್ರಾಮದ ಮಧ್ಯಭಾಗದಲ್ಲಿ ಅಸ್ತಿತ್ತ್ವದಲ್ಲಿರುವಶ್ರೀ ಪಟ್ಟದ ಮಠವು ಶ್ರೀ ಸುತ್ತೂರು ಶಿವರಾತ್ರೀಶ್ವರ ಮಠದ ಶಾಖಾ ಮಠವಾಗಿಪ್ರಚಲಿತದಲ್ಲಿದೆ. ಶ್ರೀ ಪಟ್ಟದ ಮಠದ ಸ್ಥಾಪಕ ಗುರುಗಳೆಂದು ಪೂಜ್ಯ ಶ್ರೀ ಜಡೆಮಹಾಸ್ವಾಮಿಗಳನ್ನು ಗುರುತಿಸˉÁಗಿದ್ದು ಕಾಲಮಾನದ ಬಗ್ಗೆ ತಿಳಿದು ಬರುವುದಿಲ್ಲ.ಕರ್ತೃ ಗುರುಗಳಾದ ಶ್ರೀ ಜಡೆ ಮಹಾಸ್ವಾಮಿಗಳ ನಂತರ ಶ್ರೀ ಭಿಕ್ಷದ ಸ್ವಾಮಿಗಳು,ಶ್ರೀ ನೆಲ್ಲಿಗೆರೆ ಸ್ವಾಮಿಗಳು ಹಾಗೂ ಶ್ರೀ ಬಸಪ್ಪಸ್ವಾಮಿಗಳು ಶ್ರೀ ಮಠವನ್ನು ಮುನ್ನಡೆಸಿದ್ದುಪ್ರಸ್ತುತ 5ನೇ ಶ್ರೀಗಳಾಗಿ ಶ್ರೀ ಗುರುಬಸವ ಸ್ವಾಮಿಗಳು ಅಧಿಕಾರದಲ್ಲಿದ್ದಾರೆ. ಹಿಂದಿನಶ್ರೀಗಳಾದ ಶ್ರೀ ಬಸಪ್ಪ ಸ್ವಾಮಿಗಳು 2009ರಲ್ಲಿ ಲಿಂಗೈಕ್ಯರಾದ ನಂತರ ಗ್ರಾಮದ ಭಕ್ತರೇ ಹಳೇಮಠವನ್ನು ಜೀರ್ಣೋದ್ಧಾರ ಮಾಡಿದ್ದು ತದ ನಂತರ 2010ರಲ್ಲಿ ಪ್ರಸ್ತುತ ಶ್ರೀಗಳನ್ನುಉತ್ತರಾಧಿಕಾರಿಗಳಾಗಿ ಕರೆತಂದರು.1963ರಲ್ಲಿ ನಂಜನಗೂಡು ತಾಲ್ಲೂಕು ಯಲಹಳ್ಳಿ ಗ್ರಾಮದಲ್ಲಿ ಜನಿಸಿದ ಶ್ರೀಗುರುಬಸವ ಸ್ವಾಮಿಗಳು 2010ರಲ್ಲಿ ಶ್ರೀ ಪಟ್ಟದ ಮಠದ ಉತ್ತರಾಧಿಕಾರಿಗಳಾಗಿ ಆಗಮಿಸಿ ಶ್ರೀಮಠದ ಧಾರ್ಮಿಕ ಆಚರಣೆಗಳನ್ನು ಚುರುಕುಗೊಳಿಸಿದರು. ಭಕ್ತರ ಸಹಕಾರದೊಂದಿಗೆ ಶ್ರೀಮಠವನ್ನು ಸಮರ್ಥವಾಗಿ ಮುನ್ನಡೆಸುತ್ತಿರುವ ಶ್ರೀ ಗುರುಬಸವ ಸ್ವಾಮಿಗಳು ಶ್ರಾವಣಹಾಗೂ zs Àನುರ್ಮಾಸಗಳಲ್ಲಿ ನಿತ್ಯ ವಿಶೇಷ ಪೂಜಾ ಕಾರ್ಯಕ್ರಮಗಳನ್ನುಹಮ್ಮಿಕೊಳ್ಳುತ್ತಿದ್ದಾರೆ.
Swamiji
Swamiji Name :
ಪೂಜ್ಯ ಶ್ರೀ ಗುರುಬಸವ ಸ್ವಾಮಿಗಳು
Date of Birth :
1963
Place :
ಯಲಹಳ್ಳಿ, ನಂಜನಗೂಡು ತಾ||
Photo :
Programs
ಧನುರ್ಮಾಸದಲ್ಲಿ ನಿತ್ಯ ವಿಶೇಷ ಪೂಜೆ ಮತ್ತು ಕಾರ್ಯಕ್ರಮಗಳು
ಶ್ರಾವಣ ಮಾಸದಲ್ಲಿ ನಿತ್ಯ ವಿಶೇಷ ಪೂಜೆ
Photos
Full Address Kannada
ಶ್ರೀ ಪಟ್ಟದ ಮಠ
ಚಿಕ್ಕಬಾಗಿಲು - 571 463
ಮಳವಳ್ಳಿ ತಾ||, ಮಂಡ್ಯ ಜಿಲ್ಲೆ