ಮುಷ್ಟೂರಿನಲ್ಲಿ ಇದ್ದಂತಹ ಶಿಲಾಶಾಸನದ ಪ್ರಕಾರ ಮತ್ತು ಶ್ರೀ ಬಿ.ಎಲ್.ರೈಸ್ಶಾಸನಶಾಸ್ತ್ರ ವಿಭಾಗ, ಹಂಪಿ ಇವರು 16.2.2009 ರಲ್ಲಿ ಕೊಟ್ಟಂತಹ ಆಧಾರದ ಮೇಲೆ ಶ್ರೀಓಂಕಾರೇಶ್ವರ ಮಠವು 9ನೇ ಶತಮಾನದಲ್ಲಿ ಸ್ಥಾಪನೆಯಾಗಿರಬಹುದೆಂದು ಹೇಳಲಾಗಿದೆ.ಕದಂಬರ ಕಾಲದಲ್ಲಿದ್ದ ದತ್ತಿ ಪಡೆದ ದೇವಾಲಯ ಹಾಳಾದಾಗ ಜೈವಯ್ಯನರ ವಿಕಬಯ್ಯನಮಗನಾದ ದೇವರ ದಾಸನಾಥವರ್ಮನು ಈ ದೇವಾಲಯದ ಪಾಣಿಪೀಠ ಮುಂತಾದ ಶಿಲ್ಪಗಳನ್ನು ಮಾಡಿಸಿ ದೇವಾಲಯದಲ್ಲಿ ಶಾಸನ ಬರೆಸಿದನೆಂಬ ವಿವರವಿದೆ. ಈ ದೇವಾಲಯದಲ್ಲಿ ಇರುವ ಶಿವಲಿಂಗವನ್ನು ಅಂದಿನ ರಾಜರು ಪ್ರತಿಷ್ಠಾಪಿಸಿದ್ದು, ಶಿವಲಿಂಗಕ್ಕೆ ಶಿವಕಳೆನೀಡಿದವರು ಈ ಮಠದ ಮೂಲಗುರುಗಳೇ ಎಂದು ಹೇಳಲಾಗುತ್ತದೆ ಆದರೆ ಅವರ ಹೆಸರುಲಭ್ಯವಾಗಿಲ್ಲ.ಕಾಲಾನಂತರ ಶ್ರೀ ನಾಗಲಿಂಗಸ್ವಾಮಿಗಳು ಇಲ್ಲಿಗೆ ಬಂದ ಮೇಲೆ ಈ ಸ್ಥಳದಲ್ಲಿಮಠವನ್ನು ಸ್ಥಾಪಿಸಿ ಬೆಳಕಿಗೆ ತಂದಿದ್ದಾರೆ. ಮುಷ್ಟೂರಿನಲ್ಲಿ ಜನಿಸಿದ ಶ್ರೀಗಳು ಆಧ್ಯಾತ್ಮದಹುಚ್ಚಿನಿಂದ ಬಾಲ್ಯದಲ್ಲಿಯೇ ಲೀಲೆಗೈದ ಮಹಾಪುರುಷರಿವರು. ಶಿವನ ಮೇಲಿನ ಅತೀವಭಕ್ತಿಯಿಂದ ಹುಚ್ಚನಂತೆ ವರ್ತಿಸತೊಡಗಿ ಶ್ರೀ ಹುಚ್ಚಪ್ಪಸ್ವಾಮಿಗಳೆಂದು ಹೆಸರಾದರು. ನಂತರಲೋಕಸಂಚಾರವನ್ನು ಕೈಗೊಂಡು ಅನೇಕ ಧರ್ಮಕ್ಷೇತ್ರಗಳನ್ನು ಸುತ್ತಿ ಮರಳಿ ಬಂದ ಶ್ರೀಗಳುಶ್ರೀ ಓಂಕಾರೇಶ್ವರ ದೇವಾಲಯದ ಹಳೇ ಕಟ್ಟಡವನ್ನು ತೆಗೆಸಿ ನೂತನ ಕಟ್ಟಡವನ್ನುನಿರ್ಮಿಸಿದ್ದಲ್ಲದೆ ದೇವಾಲಯಕ್ಕೆ ಕಳಸವೇರಿಸಿದರು. ಶ್ರೀಗಳು ಸದಾ ಸಂಚಾರದಲ್ಲಿದ್ದು ತಮ್ಮಜೀವಿತದ ಕೊನೆಯಲ್ಲಿ ಮುಷ್ಟೂರಿಗೆ ಆಗಮಿಸಿ ಜೀವ ಸಮಾಧಿಯಾದರು.ನಂತರ 1976 ರಲ್ಲಿ ಪಟ್ಟಾಧಿಕಾರ ವಹಿಸಿಕೊಂಡ ಶ್ರೀ ಷ.ಬ್ರ. ರುದ್ರಮುನಿಶಿವಾಚಾರ್ಯ ಸ್ವಾಮಿಗಳು ಮಠದ ಆಡಳಿತವನ್ನು ವಹಿಸಿಕೊಂಡು ಧಾರ್ಮಿಕ, ಸಾಮಾಜಿಕಮತ್ತು ಶೈಕ್ಷಣಿಕವಾಗಿ ಬೆಳೆಸಿಕೊಂಡು ಹೋಗುವುದರ ಜೊತೆಗೆ ಅನಾಥ ಮಕ್ಕಳಿಗೋಸ್ಕರಅನಾಥಾಶ್ರಮವನ್ನು ಸುಸಜ್ಜಿತವಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. ಶ್ರೀಗಳು ಇತ್ತೀಚೆಗೆಶಿಥಿಲಗೊಂಡ ಮಠವನ್ನು ಸುಮಾರು 1 ಕೋಟಿಗಿಂತಲೂ ಹೆಚ್ಚು ಹಣವನ್ನು ಖರ್ಚುಮಾಡಿಜೀರ್ಣೋದ್ಧಾರ ಮಾಡುತ್ತಿದ್ದಾರೆ.
Swamiji
Swamiji Name :
ಶ್ರೀ ಷ.ಬ್ರ. ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
28-2-1950
Place :
ಸಂಕ್ಲಿಪುರ, ಕುಂದಗೋಳ ತಾ.
Pattadikara :
1976
Photo :
Programs
ಪ್ರತಿ ಸೋಮವಾರ ಶ್ರೀ ಓಂಕಾರೇಶ್ವರ ದೇವರ ಪಲ್ಲಕ್ಕಿ ಉತ್ಸವ.
ಪ್ರತಿ ಅಮಾವಾಸ್ಯೆ, ಹುಣ್ಣಿಮೆಗೆ ಮಹಾರುದ್ರಾಭಿಷೇಕ.
ಶಿವರಾತ್ರಿ, ಯುಗಾದಿ ಹಾಗೂ ದಸರಾದಲ್ಲಿ ವಿಶೇಷ ಪೂಜೆ ಶ್ರಾವಣ ಮಾಸದಲ್ಲಿ ಧಾರ್ಮಿಕ ಕಾರ್ಯಕ್ರಮಗಳು
ಮಾಘ ಮಾಸದಲ್ಲಿ ರಥೋತ್ಸವ ಶ್ರೀ ನಾಯಕನಹಟ್ಟಿ ರಥೋತ್ಸವದ ಸಂದರ್ಭದಲ್ಲಿ ಶ್ರೀ ಮಠದಲ್ಲಿ ಮಹಾದಾಸೋಹದ ಕಾರ್ಯಕ್ರಮ
Institutions
ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢ ಶಾಲೆ
ಪದವಿ ಪೂರ್ವ ಕಾಲೇಜ್ ವಿದ್ಯಾರ್ಥಿ ನಿಲಯ / ಅನಾಥಾಶ್ರಮ