ರಾಮನಗರ ಜಿˉÉ್ಲ ಕನಕಪುರ ತಾಲ್ಲೂಕು ಕೇಂದ್ರದಿಂದ 15 ಕಿ.ಮೀ.ದೂರದಲ್ಲಿರುವ ಸಾತನೂರು ಗ್ರಾಮದ ಹೊರವಲಯದಲ್ಲಿ ಅಸ್ತಿತ್ತ್ವದಲ್ಲಿರುವ ಶ್ರೀನಿರ್ವಾಣೇಶ್ವರ ವಿರಕ್ತ ಮಠವು ಕನಕಪುರ ಶ್ರೀ ದೇಗುಲ ಮಠದ ಶಾಖಾಮಠವಾಗಿ ವಿರಕ್ತಸಂಪ್ರದಾಯವನ್ನು ಪಾಲಿಸಿಕೊಂಡು ಬರುತ್ತಿದೆ. ಶ್ರೀಮಠದ ಸ್ಥಾಪಕರು ಯಾರು ಹಾಗೂಅವರ ಕಾಲಮಾನ ಯಾವುದು ಎಂಬುದರ ಬಗ್ಗೆ ಖಚಿತ ಇಲ್ಲವಾದರೂ ಶ್ರೀಮಠವುಸುಮಾರು 100 ವರ್ಷದ್ದು ಎಂದು ಹೇಳˉÁಗುತ್ತದೆ.ಶ್ರೀಮಠದ ಇತಿಹಾಸದಲ್ಲಿ ಬಹುಶಃ ಕರ್ತೃಗುರುಗಳ ನಂತರ ಹಿಂದಿನ ಶ್ರೀಗಳಾದಶ್ರೀ ಮ.ನಿ.ಪ್ರ. ಸಿದ್ದಲಿಂಗ ಮಹಾಸ್ವಾಮಿಗಳು ಅಧಿಕಾರಕ್ಕೆ ಬಂದಿದ್ದು. ಇವರ ಕಾಲದಲ್ಲಿಶ್ರೀಮಠವು ಹೆಚ್ಚು ಪ್ರಚಲಿತಕ್ಕೆ ಬಂದಿದೆ. ಶ್ರೀ ಸಿದ್ದಲಿಂಗ ಸ್ವಾಮಿಗಳದ್ದು ಸರಳ ಸ್ವಭಾವ,ಧರ್ಮ ಪ್ರಜ್ಞೆಯನ್ನು ಹೊಂದಿ ಸಮಾಜವನ್ನು ಧಾರ್ಮಿಕ ನೆˉÉಗಟ್ಟಿನಲ್ಲಿ ರೂಪಿಸಬೇಕುಎಂದು ಶ್ರಮಿಸಿದವರು. ಮಠದ ಜಮೀನನ್ನು ಅಭಿವೃದ್ದಿ ಪಡಿಸಿ ಶ್ರೀಮಠಕ್ಕೆ ಆದಾಯಮೂಲವನ್ನಾಗಿ ಪರಿವರ್ತಿಸಿದ್ದ ಶ್ರೀಗಳು 2001 ರಲ್ಲಿ ಲಿಂಗೈಕ್ಯರಾದರು.ಶ್ರೀ ಸಿದ್ದಲಿಂಗ ಸ್ವಾಮಿಗಳ ನಂತರ ಶ್ರೀ ಮಠಕ್ಕೆ ಪೀಠಾಧಿಪತಿಗಳಾಗಿ ಬಂದ ಶ್ರೀಮ.ನಿ.ಪ್ರ. ನಿಜಗುಣ ಸ್ವಾಮಿಗಳು 2001ರ ಮಾರ್ಚ್ 19ರಲ್ಲಿ ಪಟ್ಟಾಧಿಕಾರ ಸ್ವೀಕರಿಸಿದರು.ಕನಕಪುರ ದೇಗುಲ ಮಠದಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಮಾಡಿ ಶ್ರೀ ಮಠಕ್ಕೆ ಆಗಮಿಸಿದ ಶ್ರೀಗಳು.ಹಿಂದಿನ ಶ್ರೀಗಳ ಆಶೀರ್ವಾದ ಬಲದಿಂದ ಮುನ್ನಡೆದಿದ್ದು. ಶ್ರೀಮಠದ ಧಾರ್ಮಿಕ ಹಾಗೂಸಮಾಜಿಕ ಚಟುವಟಿಕೆಗಳನ್ನು ಚುರುಕುಗೊಳಿಸಿದ್ದಾರೆ ಹಾಗೂ ಭಕ್ತರ ಸಹಕಾರದೊಂದಿಗೆಶ್ರೀಮಠದ ಜೀರ್ಣಾಭಿವೃದ್ದಿ ಮಾಡಿರುವ ಶ್ರೀಗಳು ಇನ್ನೂ ಹೆಚ್ಚಿನ ಅಭಿವೃದ್ದಿ ಕಾರ್ಯಗಳಿಗೆಶ್ರಮಿಸುತ್ತಿದ್ದಾರೆ.ಶ್ರೀಗಳು ಶ್ರೀಮಠದಲ್ಲಿ ಪ್ರತಿ ನಿತ್ಯ ಧಾರ್ಮಿಕ ಆಚರಣೆಗಳೊಂದಿಗೆ ಪ್ರತಿಹುಣ್ಣಿಮೆಯಲ್ಲಿ ರುದ್ರಾಭಿಷೇಕ ಹಾಗೂ ವಿಶೇಷ ಪೂಜೆ ನಡೆಸುತ್ತಾರೆ. ಪ್ರತಿ ವರ್ಷ ಫೆಬ್ರವರಿಮಾಸದಲ್ಲಿ ಲಿಂ. ಮ.ನಿ.ಪ್ರ. ಸಿದ್ದಲಿಂಗ ಸ್ವಾಮಿಗಳ ಆರಾಧನಾ ಮಹೋತ್ಸವ ಆಯೋಜಿಸುವಶ್ರೀಗಳು ಬಸವಜಯಂತಿ ಆಚರಣೆ ನಡೆಸುತ್ತಾರೆ.
Swamiji
Swamiji Name :
ಶ್ರೀ ಮ.ನಿ.ಪ್ರ. ನಿಜಗುಣ ಸ್ವಾಮಿಗಳು
Date of Birth :
12-06-1978
Place :
ತೆಂಕಹಳ್ಳಿ, ಮಳವಳ್ಳಿ ತಾ||
Pattadikara :
19-03-2001
Photo :
Programs
ಪ್ರತಿ ಹುಣ್ಣಿಮೆಗೆ ರುದ್ರಾಭಿಷೇಕ, ವಿಶೇಷ ಪೂಜೆ ಶಿವರಾತ್ರಿಗೆ ವಿಶೇಷ ಪೂಜೆ ಮಾಘ ಮಾಸದಲ್ಲಿ ಲಿಂ. ಶ್ರೀ ಮ.ನಿ.ಪ್ರ. ಸಿದ್ದಲಿಂಗ ಸ್ವಾಮಿಗಳ ಪುಣ್ಯಾರಾಧನೆ ಬಸವ ಜಯಂತಿ ಆಚರಣೆ