ಕರ್ತೃ – ಶ್ರೀ ಶ್ರೀ ಡಾ. ಚನ್ನಬಸವರಾಜ ದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು
ಬೆಂಗಳೂರಿನ ಹೃದಯಭಾಗ ಬಸವನಗುಡಿ ಪ್ರದೇಶದಲ್ಲಿ ಗೂಳೂರಿನ ಶ್ರೀನಿಡುಮಾಮಿಡಿ ಮಹಾಸಂಸ್ಥಾನ ಮಠದ ಹಿಂದಿನ ಜಗದ್ಗುರುಗಳಾದ ಶ್ರೀ ಶ್ರೀ ಜಗದ್ಗುರುಡಾ. ಚನ್ನಬಸವರಾಜ ದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು 1948ರಲ್ಲಿ ಶ್ರೀನಿಜಾನುಭವ ನಿವಾಸವನ್ನು ಸ್ಥಾಪನೆ ಮಾಡಿದರು. ಈಗಿನ ಶ್ರೀಗಳಾದ ಶ್ರೀ ಶ್ರೀ ವೀರಭದ್ರಚನ್ನಮಲ್ಲ ಮಹಾಸ್ವಾಮಿಗಳು ಆ ಸ್ಥಳದಲ್ಲಿಯೇ 1991ರಲ್ಲಿ ಡಾ. ಜ.ಚ.ನಿ. ರಾಷ್ಟ್ರೀಯಸೇವಾಪೀಠವನ್ನು ಸ್ಥಾಪಿಸಿದರು. ಮುಂದೆ 2008ರಲ್ಲಿ ಮಠದ ಅರ್ಧ ಭಾಗವನ್ನು ಶ್ರೀವೀರಶೈವ ತತ್ತ್ವ ಪ್ರಚಾರ ಸಂಘಕ್ಕೆ ನೀಡಿದ್ದು, ಸಂಘದವರು ಡಾ. ಶ್ರೀ ಜ.ಚ.ನಿ. ಪ್ರಾರ್ಥನಾಮಂದಿರವನ್ನು ನಿರ್ಮಿಸಿದ್ದಾರೆ. ಶ್ರೀ ಜ.ಚ.ನಿಯವರು ನಿರ್ಮಿಸಿದ್ದ ಮಠವುಶಿಥಿಲಾವಸ್ಥೆಯಲ್ಲಿದ್ದುದರಿಂದ ಈಗಿನ ಪೂಜ್ಯರು ಹಳೇ ಮಠವನ್ನು ತೆಗೆದು ಹೊಸದಾಗಿ ಶ್ರೀಜ.ಚ.ನಿ. ಅಧ್ಯಯನ ಪೀಠ ಮತ್ತು ಸಂಶೋಧನಾ ಸಂಸ್ಥೆಯನ್ನು ಸ್ಥಾಪಿಸಿರುತ್ತಾರೆ. 2015ರಲ್ಲಿಈ ಕಟ್ಟಡದ ನಿರ್ಮಾಣ ಕಾರ್ಯ ಪೂರ್ಣಗೊಂಡಿರುತ್ತದೆ.ಶ್ರೀ ಶ್ರೀ ವೀರಭದ್ರ ಚನ್ನಮಲ್ಲ ಮಹಾಸ್ವಾಮಿಗಳು ತಮ್ಮ ಪ್ರಮುಖಕಾರ್ಯಾಲಯವನ್ನಾಗಿ ಬೆಂಗಳೂರಿನ ಈ ಕೇಂದ್ರವನ್ನೇ ಮಾಡಿಕೊಂಡಿದ್ದು ತಮ್ಮಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕಾರ್ಯಚಟುವಟಿಕೆಗಳನ್ನು ಇಲ್ಲಿಂದಲೇನಿರ್ವಹಿಸುತ್ತಿದ್ದಾರೆ. ಸದಾ ತಮ್ಮ ಸಮಾಜಮುಖಿ ಹೋರಾಟಗಳ ಮೂಲಕ ನಾಡಿನ ಗಮನಸೆಳೆದಿರುವ ಶ್ರೀಗಳು ತಮ್ಮ ಹೋರಾಟಗಳ ರೂಪುರೇಷೆಗಳನ್ನು ಇಲ್ಲಿಯೇ ರೂಪಿಸುತ್ತಾರೆ.ಅದು ಮಡೆ ಮಡೆ ಸ್ನಾನದಂತಹ ಮೌಢ್ಯಗಳ ವಿರುದ್ದದ್ದಾಗಲೀ, ಪ್ರಗತಿಪರ ಚಿಂತಕರ ಹತ್ಯೆವಿರೋಧದ ಹೋರಾಟಗಳಾಗಲೀ, ಜಾತಿ ವ್ಯವಸ್ಥೆಗಳ ವಿರುದ್ದದ ಹೋರಾಟಗಳಾಗಲೀಎಲ್ಲಾ ರೀತಿಯ ಸಮಾಜಮುಖಿ ಹೋರಾಟಗಳನ್ನು ರೂಪಿಸುತ್ತಾ ಜನರಲ್ಲಿ ಅರಿವನ್ನುಮೂಡಿಸುತ್ತಾ ಆಳುವ ಸರ್ಕಾರದವರಿಗೆ ಚುರುಕು ಮುಟ್ಟಿಸುತ್ತಿರುತ್ತಾರೆ.ಒಂದೇ ಒಂದು ಜಾತಿ ಮಾನವಜಾತಿ, ಒಂದೇ ಒಂದು ಧರ್ಮ ಮಾನವ ಧರ್ಮಎಂಬ ತತ್ತ್ವದಲ್ಲಿ ನಂಬಿಕೆ ಇರಿಸಿರುವ ಶ್ರೀಗಳು ಸಮಾನತೆ, ಸಾಮಾಜಿಕ ನ್ಯಾಯ, ಕೋಮುಸೌಹಾರ್ದ, ಮಾನವೀಯತೆಯ ಪ್ರಮುಖ ಪ್ರಸಾರಕರಾಗಿದ್ದಾರೆ. ಶ್ರೀಗಳು ಮಾನವ ಹಕ್ಕುಗಳಪ್ರತಿಪಾದಕರಾಗಿ ದಲಿತ, ಹಿಂದುಳಿ, ಅಲ್ಪಸಂಖ್ಯಾತರ, ಸ್ತ್ರೀಯರ ಹಿತಕ್ಕಾಗಿಪ್ರತಿಪಾದಿಸುತ್ತಿರುವ ವಿಚಾರಗಳಿಂದಾಗಿ ಸಮಾಜಕ್ಕೆ ಮಾದರಿಯಾಗಿದ್ದಾರೆ.
Swamiji
Swamiji Name :
ಪರಮ ಪೂಜ್ಯ ಶ್ರೀ ಶ್ರೀ ವೀರಭದ್ರ ಚನ್ನಮಲ್ಲ ಮಹಾಸ್ವಾಮಿಗಳು
Date of Birth :
01-06-1960
Place :
ಚಿತ್ರದುರ್ಗ
Pattadikara :
27-12-1990
Photo :
Programs
ಮಾರ್ಚ್ 8 - ಮಹಿಳಾ ದಿನಾಚರಣೆ ಮತ್ತು ಶಕ್ತಿಶ್ರೀ ಪ್ರಶಸ್ತಿ ಪ್ರಧಾನ
ನವಂಬರ್ - ಕನ್ನಡ ಕಟ್ಟಾಳು ಪ್ರಶಸ್ತಿ ಪ್ರಧಾನ ಸಮಾರಂಭ
ಡಿಸಂಬರ್ 10 - ಮಾನವ ಹಕ್ಕುಗಳ ದಿನಾಚರಣೆ ಮತ್ತು
ಮಾನವತಾ ಪ್ರಶಸ್ತಿ ಪ್ರಧಾನ
ಆಗಾಗ್ಗೆ ಪ್ರಗತಿಪರ ಮಠಾಧೀಶರ ಕಾರ್ಯಾಗಾರ,
ಸಮಾವೇಶ ಹಾಗೂ ಕಾರ್ಯಕ್ರಮಗಳು
Institutions
ಶ್ರೀ ಜ.ಚ.ನಿ. ಅಧ್ಯಯನ ಪೀಠ ಮತ್ತು ಸಂಶೋಧನಾ ಸಂಸ್ಥೆ
Photos
Full Address Kannada
# 49/1, ಶ್ರೀ ನಿಡುಮಾಮಿಡಿ ಮಠ,
ಶ್ರೀ ಜ.ಚ.ನಿ. ಅಧ್ಯಯನ ಪೀಠ & ಸಂಶೋಧನ ಸಂಸ್ಥೆ
ಹೆಚ್.ಬಿ. ಸಮಾಜ ರಸ್ತೆ,
ಬಸವನಗುಡಿ, ಬೆಂಗಳೂರು - 560 004