ಬೆಂಗಳೂರು ಮಹಾನಗರದ ಹೃದಯಭಾಗದಂತಿರುವ ಅಕ್ಕಿಪೇಟೆಯ ಮುಖ್ಯರಸ್ತೆಯು ಬಂದು ಓ.ಟಿ.ಸಿ. ರಸ್ತೆಗೆ ಕೂಡುವ ಚೌಕದಲ್ಲಿ ಬಳೇಪೇಟೆಗೆ ಹೊಂದಿಕೊಂಡಂತೆಇರುವ ಶ್ರೀ ಮುತ್ತಿನಕಂತೆ ಮಠವು ಸುಮಾರು ಒಂದು ಶತಮಾನಕ್ಕೂ ಪೂರ್ವದಇತಿಹಾಸವನ್ನು ಹೊಂದಿದೆ. ಶ್ರೀಶೈಲ ಪೀಠದ ಪರಂಪರೆಯ ಶಾಖಾಮಠವಾಗಿ ಪುತ್ರವರ್ಗದಸಂಪ್ರದಾಯದಲ್ಲಿ ಬೆಳೆದು ಬಂದಿರುವ ಶ್ರೀಮಠದ ಕರ್ತೃಗುರುಗಳೆಂದು ಶ್ರೀ ಷ.ಬ್ರ. ಈಶ್ವರಶಿವಾಚಾರ್ಯ ಮಹಾಸ್ವಾಮಿಗಳನ್ನು ಗುರುತಿಸಲಾಗಿದೆ.ಕೆಲ ಗ್ರಂಥಗಳಲ್ಲಿ ಉಲ್ಲೇಖವಾಗಿರುವಂತೆ ಪೂರ್ವದಲ್ಲಿ ಶ್ರೀಮಠದ ಮೂಲಮಠವು ಈಗಿನ ರಾಜಾಜಿನಗರದ ಸಿದ್ದರಾಮನದಿಣ್ಣೆಯಲ್ಲಿರುವ ಗವಿಮಠವೇ ಆಗಿತ್ತು.ಕಾರಣಾಂತರಗಳಿಂದ ಇದು ಅರಳೇಪೇಟೆಗೆ ಸೇರಿದ್ದ ಚೌಕಿಮಠಕ್ಕೆ ವರ್ಗಾವಣೆಯಾಗಿತ್ತು.ನಂತರ ಆ ಪ್ರದೇಶವು ರೈಲ್ವೇ ನಿಲ್ದಾಣಕ್ಕಾಗಿ ಸರ್ಕಾರದ ಸ್ವಾಧೀನಕ್ಕೆ ಹೋದಾಗ ಶ್ರೀಮಠದಕರ್ತೃಗಳಾದ ಶ್ರೀ ಈಶ್ವರ ಶಿವಾಚಾರ್ಯರು ಈಗಿನ ಸ್ಥಳದಲ್ಲಿ ನೂತನ ಮಠವನ್ನುನಿರ್ಮಾಣ ಮಾಡಿದರು ಎನ್ನಲಾಗಿದೆ.ಶ್ರೀಮಠದ ಎರಡನೇ ಶ್ರೀಗಳಾದ ಶ್ರೀ ಷ.ಬ್ರ. ಶಿವಕುಮಾರ ಶಿವಾಚಾರ್ಯಮಹಾಸ್ವಾಮಿಗಳದು ಆಯುರ್ವೇದ ಕ್ಷೇತ್ರದಲ್ಲಿ ಎದ್ದು ಕಾಣುವಂತಹ ಹೆಸರು. ಇವರುಆಸ್ಥಾನ ವಿದ್ವಾನ್ ಪಂಡಿತರತ್ನರಾಗಿ “ಆರೋಗ್ಯ ದರ್ಪಣ” ಎಂಬ ಆರ್ಯುವೈದ್ಯಗ್ರಂಥವನ್ನು ರಚಿಸಿ ಹೆಸರಾದರು. ಇವರ ಸಾಹಿತ್ಯ ಹಾಗೂ ಧಾರ್ಮಿಕ ಕೃಷಿಗೆ ಸರ್ಕಾರವುರಾಜ್ಯ ಪ್ರಶಸ್ತಿ ನೀಡಿದ್ದು, ಆಯುರ್ವೇದ ವಿದ್ವಾನ್ ಎಂಬ ಬಿರುದನ್ನು ನೀಡಿ ಗೌರವಿಸಿದೆ.ಶ್ರೀಮಠದ ಮೂರನೇ ಶ್ರೀಗಳಾದ ಶ್ರೀ ಷ.ಬ್ರ. ಸೋಮಶೇಖರ ಶಿವಾಚಾರ್ಯಸ್ವಾಮಿಗಳು ಕನ್ನಡ, ಸಂಸ್ಕøತ, ಹಿಂದಿ ಹಾಗೂ ತರ್ಕಶಾಸ್ತ್ರಗಳ ಪಂಡಿತೋತ್ತಮರಾಗಿಬೆಂಗಳೂರಿನ ಸರ್ಕಾರಿ ಸಂಸ್ಕøತ ಕಾಲೇಜಿನಲ್ಲಿ ತರ್ಕಶಾಸ್ತ್ರದ ಉಪನ್ಯಾಸಕರಾಗಿ ಸೇವೆಸಲ್ಲಿಸಿದವರು. ತಮ್ಮ ವಿದ್ವತ್ನಿಂದ ನಾಡಿನ ಹರಗುರು ಚರಮೂರ್ತಿಗಳ ಪ್ರಶಂಸೆಗೆಪಾತ್ರರಾಗಿದ್ದ ಶ್ರೀಗಳು 1996ರ ಫೆಬ್ರವರಿ 28ರಂದು ಈಗಿನ ಶ್ರೀಗಳಾದ ಶ್ರೀ ಷ.ಬ್ರ.ಶಿವಕುಮಾರ ಶಿವಾಚಾರ್ಯರನ್ನು ಪಟ್ಟಕ್ಕೆ ತಂದು 2004ರ ಸೆಪ್ಟೆಂಬರ್ 13 ರಂದುಐಕ್ಯರಾಗಿದ್ದಾರೆ. ಪ್ರಸ್ತುತ ಶ್ರೀ ಶಿವಕುಮಾರ ಶಿವಾಚಾರ್ಯರು ಪರಂಪರೆಗೆ ಅನುಗುಣವಾಗಿಶ್ರೀಮಠವನ್ನು ಪ್ರಗತಿಪಥದಲ್ಲಿ ಕೊಂಡೊಯ್ಯುತ್ತಿದ್ದಾರೆ.
Swamiji
Swamiji Name :
ಶ್ರೀ ಷ.ಬ್ರ. ಶಿವಕುಮಾರ ಶಿವಾಚಾರ್ಯ ಸ್ವಾಮಿಗಳು
Date of Birth :
10-02-1968
Place :
ಬೆಂಗಳೂರು
Pattadikara :
28-02-1996
Photo :
Programs
ಪ್ರತಿ ಹುಣ್ಣಿಮೆ, ಅಮವಾಸ್ಯೆಗೆ ವಿಶೇಷ ಪೂಜೆ ¸
ಸೆಪ್ಟೆಂಬರ್ ತಿಂಗಳಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ
Photos
Full Address Kannada
ಶ್ರೀ ಮುತ್ತಿನಕಂತೆ ಮಠ
# 3, ಪಾರ್ಕ್ ರಸ್ತೆ ಕ್ರಾಸ್, ಅಕ್ಕಿಪೇಟೆ ಸರ್ಕಲ್
ಬೆಂಗಳೂರು - 560 053