ಕಲಬುರಗಿ ಜಿಲ್ಲೆ ಜೇವರ್ಗಿ ತಾಲ್ಲೂಕು ಕೇಂದ್ರದಿಂದ 40 ಕಿ.ಮೀ. ದೂರದಲ್ಲಿರುವಯಡ್ರಾಮಿ ಗ್ರಾಮದ ಮಧ್ಯಭಾಗದಲ್ಲಿ ಶ್ರೀ ಮುರುಘೇಂದ್ರ ಶಿವಯೋಗಿ ವಿರಕ್ತಮಠವುಸ್ಥಾಪಿತಗೊಂಡಿದ್ದು ಕಳೆದ ನಾಲ್ಕುನೂರು ವರ್ಷಗಳಿಂದ ಈ ಭಾಗದಲ್ಲಿ ಧಾರ್ಮಿಕವಾತಾವರಣವನ್ನು ನೆಲೆಗೊಳಿಸಿದೆ. ಶ್ರೀಮಂತ ಪರಂಪರೆಯುಳ್ಳ ಶ್ರೀಮಠದ ಕರ್ತೃಗುರುಗಳುಪೂಜ್ಯ ಶ್ರೀ ಮುರುಘೇಂದ್ರ ಶಿವಯೋಗಿಗಳು.ಶ್ರೀ ಮುರುಘೇಂದ್ರ ಶಿವಯೋಗಿಗಳು ತಮ್ಮ ಆಧ್ಯಾತ್ಮ ಸಾಧನೆಯ ಮೂಲಕಶಿವಯೋಗ ಸಿದ್ದಿಯನ್ನು ಪಡೆದು ಸಮಾಜದ ಶ್ರೇಯೋಭಿವೃದ್ಧಿಗೆ ಶ್ರಮಿಸಿದ್ದರು. ಇಂದಿಗೂಶ್ರೀಮಠವನ್ನು ಕರ್ತೃಗುರುಗಳ ಹೆಸರಿನಿಂದಲೇ ಗುರುತಿಸಲಾಗುತ್ತಿದ್ದು ಶ್ರೀಮಠದ ಮುಂದಿನಪರಂಪರೆಯು ಮಸುಕಾಗಿದೆ. ಶ್ರೀಮಠದ ಪರಂಪರೆಯಲ್ಲಿ ಈವರೆಗೂ 8 ಜನ ಶ್ರೀಗಳುಅಧಿಕಾರ ನಡೆಸಿದ್ದಾರೆಂದು ತಿಳಿದು ಬರುತ್ತಿದ್ದು ಸೂಕ್ತ ದಾಖಲೆಗಳ ಕೊರತೆಯಿಂದಾಗಿಸ್ಪಷ್ಟವಾಗಿ ಗುರುತಿಸಲು ಸಾಧ್ಯವಿಲ್ಲ. ಹಿಂದಿನ ಶ್ರೀಗಳಾದ ಶ್ರೀ.ಮ.ನಿ.ಪ್ರ. ಶಿವಲಿಂಗಮಹಾಸ್ವಾಮಿಗಳು ಶ್ರೀಮಠವನ್ನು ಅಭಿವೃದ್ಧಿಪಡಿಸಿ ಈಗಿನ ಶ್ರೀಗಳನ್ನು ತಮ್ಮಉತ್ತರಾಧಿಕಾರಿಯನ್ನಾಗಿ ನೇಮಿಸಿಕೊಂಡು 1952ರಲ್ಲಿ ಲಿಂಗೈಕ್ಯರಾಗಿದ್ದಾರೆ.ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಶ್ರೀಮಠದ ಉತ್ತರಾಧಿಕಾರಿಗಳಾಗಿ ನೇಮಕಗೊಂಡಈಗಿನ ಶ್ರೀಗಳಾದ ಶ್ರೀ.ಮ.ನಿ.ಪ್ರ. ಸಿದ್ದರಾಮ ಮಹಾಸ್ವಾಮಿಗಳು ಧಾರವಾಡ,ಬೆಂಗಳೂರುಗಳಲ್ಲಿ ತಮ್ಮ ಕಾಲೇಜು ಶಿಕ್ಷಣ ಮುಗಿಸಿ ಶಿವಯೋಗಮಂದಿರದಲ್ಲಿ 3 ವರ್ಷಗಳಕಾಲ ಸಂಸ್ಕøತ, ವೇದ ಇತ್ಯಾದಿಗಳನ್ನು ಆಳವಾಗಿ ಅಧ್ಯಯನ ಮಾಡಿದರು. ತಮ್ಮ ವಿದ್ಯಾಭ್ಯಾಸಪೂರ್ಣಗೊಳಿಸಿ ಮಠಕ್ಕೆ ಮರಳಿದ ಶ್ರೀಗಳು 1975ರ ಮೇ 13 ರಲ್ಲಿ ಶ್ರೀಮಠದ ಅಧಿಕಾರಸ್ವೀಕರಿಸಿ ಮಠದ ಚಿತ್ರಣವನ್ನೇ ಬದಲಾಯಿಸಿದ್ದಾರೆ.ಶ್ರೀ.ಮ.ನಿ.ಪ್ರ. ಸಿದ್ದರಾಮ ಮಹಾಸ್ವಾಮಿಗಳು ಮಠದ ಹಳೆಯ ಕಟ್ಟಡ ತೆಗೆಸಿಹೊಸ ಕಟ್ಟಡವನ್ನು ನಿರ್ಮಿಸಿದ್ದು ತಮ್ಮ ಕಾಯಕಯೋಗದಿಂದ ಮಠವನ್ನು ಆರ್ಥಿಕವಾಗಿಸದೃಡಗೊಳಿಸುತ್ತಿದ್ದಾರೆ. ಮಠದ ಆಸ್ತಿಯಾಗಿರುವ ಜಮೀನನ್ನು ಅಭಿವೃದ್ಧಿಪಡಿಸಿ ಮಠದಧಾರ್ಮಿಕ ಹಾಗೂ ದಾಸೋಹ ಕ್ರಿಯೆಗಳಿಗೆ ಆದಾಯದ ಮೂಲವನ್ನಾಗಿಮಾಡಿಕೊಂಡಿದ್ದಾರೆ. ಶ್ರೀಗಳು ಇತ್ತೀಚೆಗೆ 2006ರಲ್ಲಿ ತಮ್ಮ ಉತ್ತರಾಧಿಕಾರಿಯನ್ನಾಗಿ ಪೂಜ್ಯಶ್ರೀ ಸಿದ್ದಲಿಂಗ ದೇವರನ್ನು ಆಯ್ಕೆ ಮಾಡಿಕೊಂಡಿದ್ದು ಉಭಯ ಶ್ರೀಗಳು ಶ್ರೀಮಠವನ್ನುಸರ್ವಾಂಗೀಣವಾಗಿ ಅಭಿವೃದ್ಧಿಪಡಿಸುತ್ತಿದ್ದಾರೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಸಿದ್ದರಾಮ ಮಹಾಸ್ವಾಮಿಗಳು
Date of Birth :
12-06-1945
Place :
ಸತ್ಯಂಪೇಟೆ, ಸುರಪುರ ತಾ||
Pattadikara :
13-05-1975
Photo :
Programs
ಶ್ರಾವಣ ಮಾಸದಲ್ಲಿ ನಿತ್ಯ ಪುರಾಣ ಪ್ರವಚನ ಹಾಗೂ ಭಜನೆ
ಶಿವರಾತ್ರಿ ಮತ್ತು ಬಸವಜಯಂತಿ ಆಚರಣೆ
Institutions
ವಿದ್ಯಾರ್ಥಿ ನಿಲಯ
Photos
Full Address Kannada
ಶ್ರೀ ಮುರುಘೇಂದ್ರ ಶಿವಯೋಗಿ ವಿರಕ್ತಮಠ
ಯಡ್ರಾಮಿ - 585 325
ಜೇವರ್ಗಿ ತಾ|| ಕಲಬುರಗಿ ಜಿಲ್ಲೆ