ಕರ್ತೃ – ಶ್ರೀ ಷ.ಬ್ರ. ವಿರೂಪಾಕ್ಷ ದೇಶಿಕೇಂದ್ರ ಮಹಾಸ್ವಾಮಿಗಳು
ಬೆಂಗಳೂರು ನಗರದ ಕೆಲವೇ ಪುರಾತನ ಪಟ್ಟದ ಮಠಗಳಲ್ಲಿ ಒಂದಾಗಿರುವ ಶ್ರೀಮಹಾಂತಿನ ಮಠವು ಈಗಿನ ಚಿಕ್ಕಪೇಟೆಯೊಳಗೆ ಹಾದು ಹೋಗುವ ಓ.ಟಿ.ಸಿ. ರಸ್ತೆ ಹಾಗೂಆರ್ಕಾಟ್ ಶ್ರೀನಿವಾಸಾಚಾರ್ ರಸ್ತೆ ಇವೆರಡೂ ಕೂಡುವ ಚೌಕದಲ್ಲಿ ಪಶ್ಚಿಮಕ್ಕೆ ಇದೆ. ಶ್ರೀಮದ್ರಂಭಾಪುರಿ ಪೀಠದ ಪರಂಪರೆಯ ಶಾಖಾ ಮಠವಾಗಿ ಬೆಳೆದು ಬಂದಿರುವ ಶ್ರೀಮಠದಕರ್ತೃಗುರುಗಳೆಂದು ಶ್ರೀ ಷ.ಬ್ರ. ವಿರೂಪಾಕ್ಷ ದೇಶಿಕೇಂದ್ರ ಮಹಾಸ್ವಾಮಿಗಳನ್ನುಗುರುತಿಸಲಾಗಿದೆ.ಶ್ರೀಮಠದ ಲಭ್ಯ ದಾಖಲೆಗಳ ಪ್ರಕಾರ ಶ್ರೀಮಠವು 1800ಕ್ಕಿಂತಲೂಪೂರ್ವದಲ್ಲಿಯೇ ಅಸ್ತಿತ್ವದಲ್ಲಿದ್ದಂತೆ ತೋರಿಬರುತ್ತದೆ. ಕರ್ತೃಗಳು ಶ್ರೀಮಠವನ್ನು ಸ್ಥಾಪಿಸಿಅಭಿವೃದ್ಧಿಪಡೆಸಿ ಭಕ್ತರನ್ನು ಪೊರೆದಿದ್ದು ಇಲ್ಲಿಯೇ ನಿರ್ವಿಕಲ್ಪ ಸಮಾಧಿ ಹೊಂದಿದರೆಂದುಹೇಳಲಾಗುತ್ತದೆ. ಈಗ ಮಠದ ಮಧ್ಯಭಾಗದಲ್ಲಿ ಶ್ರೀ ವಿರೂಪಾಕ್ಷ ದೇಶಿಕೇಂದ್ರಮಹಾಸ್ವಾಮಿಗಳ ಗದ್ದುಗೆ ಸ್ಥಾಪಿತಗೊಂಡಿದ್ದು ನಿತ್ಯ ಪೂಜೆಗೆ ಒಳಪಟ್ಟಿದೆ. ಆದರೆ ಕರ್ತೃಗಳಕಾಲಮಾನ ಹಾಗೂ ಅವರ ನಂತರದಲ್ಲಿ ಬಂದಿದ್ದಿರಬಹುದಾದ ಗುರುಗಳ ಬಗ್ಗೆಸ್ಪಷ್ಟತೆಯಿಲ್ಲ.ಶ್ರೀಮಠದ ಪರಂಪರೆ ಕುರಿತ ದಾಖಲೆಗಳ ಪ್ರಕಾರ ಪರಂಪರೆಯಲ್ಲಿ ಕ್ರಿ.ಶ. 1810ರಿಂದ 1876ರವರೆಗೆ ಶ್ರೀ ಷ.ಬ್ರ. ಕೆಂಪನಂಜೇ ಶಿವಾಚಾರ್ಯ ಮಹಾಸ್ವಾಮಿಗಳುಆಡಳಿತದಲ್ಲಿದ್ದರೆಂಬುದು ತೋರಿಬರುತ್ತದೆ. ಇವರ ನಂತರ ಕೆಲ ಕಾಲ ಖಾಲಿ ಉಳಿದಿರುವಶ್ರೀಮಠಕ್ಕೆ ಶ್ರೀ ಶಿವರುದ್ರ ದೇವರು ಹಾಗೂ ಶ್ರೀ ವೀರಭದ್ರ ದೇವರು ಎಂಬುವವರುಉತ್ತರಾಧಿಕಾರಿಗಳಾಗಿದ್ದು ಮಠವನ್ನು ಮುನ್ನಡೆಸಿದ್ದಾರೆ. ಇವರ ನಂತರ 1934ರಲ್ಲಿ ಶ್ರೀಮಠಹಾಗೂ ವಿಭೂತಿಪುರ ಮಠಗಳೆರಡರ ಪೀಠಾಧ್ಯಕ್ಷರಾಗಿ ಬಂದ ಶ್ರೀ ಷ.ಬ್ರ. ಗಂಗಾಧರಶಿವಾಚಾರ್ಯರು ಮಠವನ್ನು ಅಭಿವೃದ್ಧಿಪಡಿಸಿದ್ದರು.ಶ್ರೀ ಷ.ಬ್ರ. ಗಂಗಾಧರ ಶಿವಾಚಾರ್ಯರು 1947ರಲ್ಲಿ ರಂಭಾಪುರಿ ಪೀಠದಜಗದ್ಗುರುಗಳಾಗಿ ನೇಮಕಗೊಂಡಿದ್ದು ತದನಂತರ ಶ್ರೀ ರಂಭಾಪುರಿ ಪೀಠದ ಜಗದ್ಗುರುಗಳನೇರ ಆಡಳಿತದಲ್ಲಿ ಶ್ರೀ ಮಹಾಂತಿನ ಮಠ ಟ್ರಸ್ಟ್ (ರಿ)ನ ಅಡಿಯಲ್ಲಿ ಶ್ರೀಮಠದ ಧಾರ್ಮಿಕಆಚರಣೆಗಳನ್ನು ಮುನ್ನಡೆಸಿಕೊಂಡು ಬರಲಾಗುತ್ತಿದೆ. ಇದೀಗ ಶ್ರೀಮಠವನ್ನುಸಂಪೂರ್ಣವಾಗಿ ಕೆಡವಿದ್ದು ಅಭಿವೃದ್ಧಿ ಕಾರ್ಯಗಳು ತ್ವರಿತಗತಿಯಲ್ಲಿ ನಡೆಯುತ್ತಿವೆ.
Swamiji
Swamiji Name :
ಶ್ರೀ ಮದ್ ರಂಭಾಪುರಿ ವೀರಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ 1008 ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು
Photo :
Programs
ಶಿವರಾತ್ರಿಗೆ ಮಹಾಪೂಜೆ ರೇಣುಕ ಜಯಂತಿ ಆಚರಣೆ
ಪಂಚಚಾಚಾರ್ಯ ಜಗದ್ಗುರುಗಳ ಜಯಂತ್ಯುತ್ಸವ ಹಾಗೂ ಪುಣ್ಯಾರಾಧನೆ ಕಾರ್ಯಕ್ರಮಗಳು
Photos
Full Address Kannada
ಶ್ರೀ ಮಹಾಂತಿನ ಮಠ ಟ್ರಸ್ಟ್
ಓ.ಟಿ.ಸಿ. ರಸ್ತೆ, ಚಿಕ್ಕಪೇಟೆ
ಸರ್ಕಲ್ ಬೆಂಗಳೂರು - 560 053