ಬಸವನಬಾಗೇವಾಡಿ ತಾಲ್ಲೂಕಿನ ಸಾಸನೂರು ಗ್ರಾಮದ ಹೊರ ಭಾಗದಲ್ಲಿರುವಶ್ರೀ ಮಡಿವಾಳೇಶ್ವರ ಹಿರೇಮಠವು ಶ್ರೀ ಮಡಿವಾಳೇಶ್ವರ ಶಿವಾಚಾರ್ಯ ಸ್ವಾಮಿಗಳಿಂದಸ್ಥಾಪಿಸಲ್ಪಟ್ಟಿದ್ದು ಧಾರ್ಮಿಕ ಆಚರಣೆಗಳನ್ನು ನಡೆಸಿಕೊಂಡು ಬರುತ್ತಿದೆ. ಶ್ರೀ ಮಠವು ಶ್ರೀಉಜ್ಜಯಿನಿ ಪೀಠದ ಶಾಖಾ ಮಠವಾಗಿದ್ದು ಪುತ್ರವರ್ಗದ ಪರಂಪರೆಯಲ್ಲಿ ಬೆಳೆದುಬಂದಿದೆ.ಕರ್ತೃಗುರುಗಳಾದ ಶ್ರೀ ಷ.ಬ್ರ. ಮಡಿವಾಳೇಶ್ವರ ಶಿವಾಚಾರ್ಯ ಸ್ವಾಮಿಗಳುಮೊದಲು ಸಾಸನೂರು ಗ್ರಾಮದ ಒಳಭಾಗದಲ್ಲಿ ಶ್ರೀಮಠವನ್ನು ಸ್ಥಾಪಿಸಿದ್ದು ಅವರಕಾಲಮಾನದ ಬಗ್ಗೆಯಾಗಲಿ ಹಾಗೂ ನಂತರ ಬಂದಿರುವ ಗುರುಗಳ ಬಗ್ಗೆಯಾಗಲಿಯಾವುದೇ ಮಾಹಿತಿಗಳು ಲಭ್ಯವಿಲ್ಲ. ಈಗ ಕಾಣಸಿಗುವ ಊರ ಹೊರಗಿನ ಮಠವನ್ನುಈಗಿನ ಶ್ರೀಗಳಾದ ಶ್ರೀಮಹಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ನಿರ್ಮಿಸಿದ್ದಾರೆ.ಈಗಿನ ಶ್ರೀಗಳಾದ ಶ್ರೀ ಮಹಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ತಮ್ಮ 10ನೇವಯಸ್ಸಿನಲ್ಲಿಯೇ ಶ್ರೀಮಠದ ಉತ್ತರಾಧಿಕಾರಿಗಳಾಗಿ ನೇಮಕಗೊಂಡಿದ್ದು ತದನಂತರಹಾವೇರಿ, ಸಿಂದಗಿ, ಗದಗ, ಡಂಬಳಗಳಲ್ಲಿ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ ಶ್ರೀಮಠಕ್ಕೆಬಂದು 1990 ರಲ್ಲಿ ಪಟ್ಟಾಧಿಕಾರವನ್ನು ವಹಿಸಿಕೊಂಡಿದ್ದಾರೆ.ಶ್ರೀಗಳು ಶ್ರೀಮಠದ ಅಧಿಕಾರ ವಹಿಸಿಕೊಂಡ ನಂತರ ಶ್ರೀಮಠವು ಅಭಿವೃದ್ಧಿಪಥದತ್ತ ಸಾಗಿದೆ. ಶ್ರೀಗಳು ಊರ ಹೊರಗಿನ ಜಾಗದಲ್ಲಿ ನೂತನ ಕಟ್ಟಡವನ್ನು ನಿರ್ಮಿಸಿಶ್ರೀಮಠವನ್ನು ಅಲ್ಲಿಗೆ ಸ್ಥಳಾಂತರಿಸಿದ್ದಾರೆ. ಹಾಗೂ ವಿಶೇಷ ಸಂದರ್ಭಗಳಲ್ಲಿ ಅನ್ನದಾಸೋಹನಡೆಸುತ್ತಾ ಜೊತೆಯಲ್ಲಿ ಶ್ರೀ ಮಠಕ್ಕೆ ಬರುವ ಭಕ್ತರಿಗೆ ಜ್ಞಾನದಾಸೋಹವನ್ನು ಸಹಮಾಡುತ್ತಾರೆ.ಶ್ರಿಮಠದಲ್ಲಿ ಪ್ರತಿನಿತ್ಯ ಧಾರ್ಮಿಕ ಆಚರಣೆಗಳೊಂದಿಗೆ ಶ್ರಾವಣ ಮಾಸದಲ್ಲಿಶ್ರೀಮಠದ ರಥೋತ್ಸವವು ಜರುಗುತ್ತಿದ್ದು ವಿಜೃಂಭಣೆಯ ಜಾತ್ರೆಯು ನಡೆಯುತ್ತಿದೆ.ಜಾತ್ರಾಮಹೋತ್ಸವಕ್ಕೆ ಹೆಚ್ಚಿನ ಸಂಖ್ಯೆಯ ಭಕ್ತರು ಪಾˉÉ್ಗೂಂಡು ಗುರುಗಳ ದರ್ಶನಪಡೆಯುತ್ತಾರೆ. ಹಾಗೂ ಬಸವ ಜಯಂತಿಯಿಂದ ಒಂದು ತಿಂಗಳ ಕಾಲ ಪುರಾಣಪ್ರವಚನದ ಆಯೋಜನೆಯಾಗಿರುತ್ತದೆ.
Swamiji
Swamiji Name :
ಶ್ರೀ ಷ.ಬ್ರ. ಮಹಾಂತಲಿಂಗ ಶಿವಾಚಾರ್ಯ ಸ್ವಾಮಿಗಳು
Date of Birth :
1-6-1955
Place :
ಸಾಸನೂರು, ಬಸವನಬಾಗೇವಾಡಿ ತಾ||
Pattadikara :
1990
Photo :
Programs
ಶ್ರಾವಣ ಮಾಸದಲ್ಲಿ ಶ್ರೀಮಠದ ರಥೋತ್ಸವ ಹಾಗೂ ಜಾತ್ರೆ.
ಬಸವ ಜಯಂತಿಯಿಂದ ಒಂದು ತಿಂಗಳ ಕಾಲ ಪುರಾಣ ಪ್ರವಚನ.