Shree Kottala Basaveshwara Devalaya (Samsthana)- Sedam
Claimed
ಶ್ರೀ ಕೊತ್ತಲ ಬಸವೇಶ್ವರ ದೇವಾಲಯ (ಸಂಸ್ಥಾನ) - ಸೇಡಂ
Average Reviews
Description
ಶ್ರೀ ಕೊತ್ತಲ ಬಸವೇಶ್ವರ ದೇವಾಲಯ (ಸಂಸ್ಥಾನ) – ಸೇಡಂ
ಕರ್ತೃ – ಪೂಜ್ಯ ಶ್ರೀ ಸಪ್ಪಾರ್ಣಾ ಶಿವಯೋಗಿಗಳು
ಕಲಬುರಗಿ ಜಿಲ್ಲೆಯ ತಾಲ್ಲೂಕು ಕೇಂದ್ರಗಳಲ್ಲಿ ಒಂದಾದ ಸೇಡಂ ಪಟ್ಟಣವುಪುರಾತನ ಕಾಲದಿಂದಲೂ ವೀರಶೈವೀಯರ ಶ್ರದ್ಧಾಭಕ್ತಿಯ ಕೇಂದ್ರಗಳ ತಾಣವಾಗಿದೆ.ಅಂತಹ ಕೇಂದ್ರಗಳಲ್ಲಿ ಪ್ರಮುಖವಾದದ್ದು ಶ್ರೀ ಕೊತ್ತಲ ಬಸವೇಶ್ವರ ದೇವಾಲಯ(ಸಂಸ್ಥಾನ). ಸುಮಾರು ಒಂದು ಶತಮಾನಕ್ಕೂ ಅಧಿಕ ಇತಿಹಾಸವನ್ನು ಹೊಂದಿರುವಶ್ರೀಮಠದ ಸಂಸ್ಥಾಪಕ ಗುರುಗಳು ಪೂಜ್ಯ ಶ್ರೀ ಸಪ್ಪಾರ್ಣಾ ಶಿವಯೋಗಿಗಳು.ಪುರಾತನ ಕಾಲದ ಶ್ರೀ ಕೊತ್ತಲ ಬಸವೇಶ್ವರ ದೇವಾಲಯವು ಈ ಭಾಗದಲ್ಲಿಯೇಸುಪ್ರಸಿದ್ಧವಾಗಿದ್ದು ಅಪಾರ ಸಂಖ್ಯೆಯ ಭಕ್ತಬಳಗವನ್ನು ಹೊಂದಿದೆ. ಇಂತಹ ಸ್ಥಳದಲ್ಲಿಸುಮಾರು 100 ವರ್ಷಗಳ ಹಿಂದೆ ಸ್ಥಾಪಿತಗೊಂಡಿರುವ ಶ್ರೀ ಕೊತ್ತಲ ಬಸವೇಶ್ವರಸಂಸ್ಥಾನವು ತನ್ನ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಂಸ್ಕøತಿಕ ಚಟುವಟಿಕೆಗಳಮೂಲಕ ಈ ಭಾಗದಲ್ಲಿ ಪ್ರಮುಖ ಧಾರ್ಮಿಕ ಕೇಂದ್ರವಾಗಿ ಗುರುತಿಸಿಕೊಂಡಿದೆ.ಕರ್ತೃಗುರುಗಳಾದ ಪೂಜ್ಯ ಶ್ರೀ ಸಪ್ಪಾರ್ಣಾ ಶಿವಯೋಗಿಗಳು ಶ್ರೀಮಠವನ್ನು ಸ್ಥಾಪಿಸಿಭಕ್ತರನ್ನು ಸನ್ಮಾರ್ಗದಲ್ಲಿ ಮುನ್ನಡೆಸಿದ್ದು ಇವರ ನಂತರ ಮೂವರು ಶ್ರೀಗಳು ಶ್ರೀಮಠವನ್ನುಮುನ್ನಡೆಸಿದ್ದಾರೆ.ಕರ್ತೃಗುರುಗಳ ನಂತರ ಶ್ರೀ ಮ.ನಿ.ಪ್ರ. ಸಿದ್ದರಾಮ ಮಹಾಸ್ವಾಮಿಗಳು ಶ್ರೀಮಠದಅಧಿಕಾರ ಸ್ವೀಕರಿಸಿದ್ದು ಕರ್ತೃಗುರುಗಳ ಹಾದಿಯಲ್ಲಿ ಶ್ರೀಮಠವನ್ನು ಸಮರ್ಥವಾಗಿಮುನ್ನಡೆಸಿದರು. ಇವರ ನಂತರ ಶ್ರೀಮಠದ ಪಟ್ಟಕ್ಕೆ ಬಂದವರು ಹಿಂದಿನ ಶ್ರೀಗಳಾದ ಶ್ರೀಮ.ನಿ.ಪ್ರ. ಮಡಿವಾಳಯ್ಯ ಮಹಾಸ್ವಾಮಿಗಳು. ಇವರ ಕಾಲದಲ್ಲಿ ಶ್ರೀಮಠವುಸರ್ವತೋಮುಖವಾಗಿ ಅಭಿವೃದ್ಧಿ ಕಂಡಿದ್ದು ಅಪಾರ ಭಕ್ತಿ ಬಳಗವನ್ನು ಸಂಪಾದಿಸಿದೆ. ಶ್ರೀಮ.ನಿ.ಪ್ರ. ಮಡಿವಾಳಯ್ಯ ಮಹಾಸ್ವಾಮಿಗಳು ಶ್ರೀಮಠದಲ್ಲಿ ನಿತ್ಯ ಧಾರ್ಮಿಕ ಆಚರಣೆಗಳನ್ನುನಡೆಸುವುದರ ಮೂಲಕ, ತಮ್ಮ ಶಿವಾನುಭವಗೋಷ್ಠಿಗಳ ಮೂಲಕ ಧರ್ಮಜಾಗೃತಿಯನ್ನುಂಟು ಮಾಡಿದರು. ಇವರು ಸದಾ ಕ್ರಿಯಾಶೀಲರಾಗಿದ್ದು ಭಕ್ತರಿಗೆ ಕಾಯಕಯೋಗದಬಗ್ಗೆ ಅರಿವು ಮೂಡಿಸಿ ಸಮಾಜವನ್ನು ಅಭಿವೃದ್ದಿಪಡಿಸಿದರು. ಇವರು ಸಮಷ್ಠಿ ಸಮಾಜದಅಭಿವೃದ್ದಿಗೆ ಶ್ರಮಿಸಿ ಜಾತಿ ಭೇದವನ್ನು ತೊಡೆದು ಹಾಕಲು ಶ್ರಮಿಸಿದರು. ಶ್ರೀಗಳುಶೈಕ್ಷಣಿಕವಾಗಿಯೂ ಶ್ರೀಮಠದ ಕಾರ್ಯಚಟುವಟಿಕೆಗಳನ್ನು ವಿಸ್ತರಿಸಿದ್ದು 1974ರ ವಸಂತಪಂಚಮಿಯಂದು ಶ್ರೀ ಕೊತ್ತಲ ಬಸವೇಶ್ವರ ಭಾರತಿ ಶಿಕ್ಷಣ ಸಮಿತಿ (ರಿ) ಸಂಸ್ಥೆಯನ್ನುಸ್ಥಾಪಿಸಿದ್ದು ಇಂದು ಈ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ಸುಮಾರು 37 ಶಾಲಾ ಕಾಲೇಜುಗಳುಕಾರ್ಯನಿರ್ವಹಿಸುತ್ತಿವೆ.ಶ್ರೀ ಮ.ನಿ.ಪ್ರ. ಮಡಿವಾಳಯ್ಯ ಮಹಾಸ್ವಾಮಿಗಳು ಶ್ರೀಮಠವನ್ನು ಧಾರ್ಮಿಕ,ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ಸಾಂಸ್ಕøತಿಕವಾಗಿ ಸರ್ವಾಂಗೀಣವಾಗಿಅಭಿವೃದ್ದಿಪಡಿಸಿ 1987ರಲ್ಲಿ ಲಿಂಗೈಕ್ಯರಾದರು. ಶ್ರೀಗಳ ಐಕ್ಯಾನಂತರ ಶ್ರೀಮಠವು ಸುಮಾರು18 ವರ್ಷಗಳ ಕಾಲ ಖಾಲಿ ಉಳಿದಿದ್ದು ಆ ಸಮಯದಲ್ಲಿ ಭಕ್ತರೇ ಶ್ರೀಮಠದಲ್ಲಿ ಧಾರ್ಮಿಕಆಚರಣೆಗಳನ್ನು ಮುಂದುವರೆಸಿದ್ದಾರೆ. 18 ವರ್ಷಗಳ ಕಾಲ ಖಾಲಿ ಉಳಿದ ಶ್ರೀಮಠಕ್ಕೆ2005ರ ಫೆಬ್ರವರಿ 20 ರಂದು ಮಠದ ಭಕ್ತರೇ ಈಗಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಸದಾಶಿವಮಹಾಸ್ವಾಮಿಗಳನ್ನು ಪಟ್ಟಕ್ಕೆ ತಂದಿದ್ದು ಮಳಖೇಡದ ಶ್ರೀ ಭಂಗೀಮಠದ ಶ್ರೀಗಳುಅನುಗ್ರಹಿಸಿದ್ದಾರೆ.2005ರಲ್ಲಿ ಶ್ರೀಮಠದ ಅಧಿಕಾರ ಸ್ವೀಕರಿಸಿದ ಶ್ರೀ ಮ.ನಿ.ಪ್ರ. ಸದಾಶಿವಮಹಾಸ್ವಾಮಿಗಳು ಶ್ರೀಮಠದ ಧಾರ್ಮಿಕ ಆಚರಣೆಗಳನ್ನು ಚುರುಕುಗೊಳಿಸಿದರು.ಧಾರವಾಡದ ಮುರುಘಾ ಮಠದಲ್ಲಿ ನೆಲೆನಿಂತು ತಮ್ಮ ಪದವಿ ಶಿಕ್ಷಣ ಹಾಗೂ ಆಧ್ಯಾತ್ಮದಅರಿವನ್ನು ಕಂಡುಕೊಂಡಿದ್ದ ಶ್ರೀಗಳು ಶ್ರೀಮಠದ ಸರ್ವತೋಮುಖ ಅಭಿವೃದ್ಧಿಗೆಶ್ರಮಿಸುತ್ತಿದ್ದಾರೆ. ಶ್ರೀಮಠದ ಶಿಕ್ಷಣ ಸಂಸ್ಥೆಯನ್ನು ಉನ್ನತೀಕರಿಸಿರುವ ಶ್ರೀಗಳುವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವನ್ನೀಯುತ್ತಿದ್ದಾರೆ. ಶ್ರೀಮಠದ ವತಿಯಿಂದ ಬಡರೋಗಿಗಳ ಚಿಕಿತ್ಸೆಗೆ ಉಚಿತ ಆಸ್ಪತ್ರೆಯಿದ್ದು ಅಸಂಖ್ಯಾತ ಜನರು ಆಸ್ಪತ್ರೆಯ ಪ್ರಯೋಜನಪಡೆಯುತ್ತಿದ್ದಾರೆ.ಶ್ರೀಮಠದಲ್ಲಿ ಪ್ರತಿ ತಿಂಗಳ 14ನೇ ತಾರೀಖಿನಂದು “ಬೆಳಕಿನೆಡೆಗೆ” ವಿಚಾರಸಂಕಿರಣ ಆಯೋಜನೆಗೊಳ್ಳುತ್ತಿದ್ದು ಭಕ್ತರಲ್ಲಿ ವೈಚಾರಿಕ ಚಿಂತನೆಯನ್ನು ಬೆಳೆಸುವಕಾರ್ಯವಾಗುತ್ತಿದೆ. ಪ್ರತಿ ವರ್ಷ ಜನವರಿ 14ರಂದು ಶ್ರೀಮಠದ ಗುರುಗಳ ಅಧ್ಯಕ್ಷತೆಯಲ್ಲಿ“ಸೇಡಂ ಉತ್ಸವ” ಬಹಳ ವಿಜೃಂಬಣೆಯಿಂದ ಆಯೋಜನೆಗೊಳ್ಳುತ್ತದೆ ಹಾಗೂಚೈತ್ರಮಾಸದಲ್ಲಿ ಶ್ರೀ ಗುರು ಕೊತ್ತಲ ಬಸವೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವನಡೆಯುತ್ತಿದ್ದು ಆ ಸಮಯದಲ್ಲಿ ರಥೋತ್ಸವ ಸೇರಿದಂತೆ ವಿವಿಧ ಧಾರ್ಮಿಕ, ಸಾಂಸ್ಕøತಿಕಕಾರ್ಯಕ್ರಮಗಳು ಜರುಗುತ್ತವೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಸದಾಶಿವ ಮಹಾಸ್ವಾಮಿಗಳು
Date of Birth :
10-06-1982
Place :
ಗುಡೂರು, ಹುನಗುಂದ ತಾ||
Pattadikara :
20-02-2005
Photo :
Programs
ಪ್ರತಿ ತಿಂಗಳ 14ರಂದು "ಬೆಳಕಿನೆಡೆಗೆ" ವಿಚಾರ ಸಂಕಿರಣ.
ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ ಹಾಗೂ ಲಿಂ|| ಶ್ರೀ ಮ.ನಿ.ಪ್ರ. ಮಡಿವಾಳ ಸ್ವಾಮಿಗಳ ಜಯಂತಿ ಮತ್ತು ಪುಣ್ಯಾರಾಧನೆ ಹಾಗೂ 63 ಪುರಾತನರ ಹೆಸರಿನ ಮೇಲೆ 63 ದಿನ ಸತ್ಸಂಗ, ಭಜನೆ ಮತ್ತು ಶ್ರಾವಣ ಮಾಸದ ಮೂರನೆ ಸೋಮವಾರ ಶ್ರೀ ಕೊತ್ತಲ ಬಸವೇಶ್ವರ ಸ್ವಾಮಿಯ ಹೂವಿನ ರಥೋತ್ಸವ.
ಚೈತ್ರ ಮಾಸದಲ್ಲಿ ಶ್ರೀ ಕೊತ್ತಲ ಬಸವೇಶ್ವರ ಜಾತ್ರಾ ಮಹೋತ್ಸವ (ರಥೋತ್ಸವ ಹಾಗೂ ವಿವಿಧ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳು)
ಪ್ರತಿ ವರ್ಷ ಜನವರಿ 14ರಂದು ಶ್ರೀಗಳ ಅಧ್ಯಕ್ಷತೆಯಲ್ಲಿ ಸೇಡಂ ಉತ್ಸವ ವಿಜೃಂಭಣೆಯಿಂದ ನಡೆಯುತ್ತದೆ.
Institutions
ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢ ಶಾಲೆ
ಡಿಎಡ್/ ಲಾ ಕಾಲೇಜ್
ಪದವಿ / ಪದವಿ ಪೂರ್ವ ಕಾಲೇಜು
ಸ್ನಾತಕ ಪದವಿ ಕಾಲೇಜು
ವಿದ್ಯಾರ್ಥಿ / ವಿದ್ಯಾರ್ಥಿಯರ ನಿಲಯ
ಬಡರೋಗಿಗಳ ಉಚಿತ ಆಸ್ಪತ್ರೆ
ಗೋಶಾ¯
Photos
Full Address Kannada
ಶ್ರೀ ಕೊತ್ತಲ ಬಸವೇಶ್ವರ ದೇವಸ್ಥಾನ (ಸಂಸ್ಥಾನ)
ಸೇಡಂ - 585 222 ಸೇಡಂ ತಾ||, ಕಲಬುರಗಿ ಜಿಲ್ಲೆ