ಶತಮಾನಕ್ಕೂ ಪೂರ್ವದಲ್ಲಿ ಬೆಂಗಳೂರು ಪಟ್ಟಣದ ಹಳೆಯ ಕೋಟೆಯಿಂದಹೊರಭಾಗದಲ್ಲಿದ್ದ ಪ್ರಮುಖ ವೀರಶೈವ ಲಿಂಗಾಯತ ಮಠಗಳಲ್ಲಿ ಆಗಿನ ಅಣ್ಣಿಪುರದಕೊಳದ ಮಠವೂ ಒಂದು. ಇಂದು ಬೆಂಗಳೂರಿನ ನಟ್ಟನಡುವೆ ಸೇರಿಕೊಂಡಿರುವ ಈಪ್ರದೇಶವು “ಲಾಲ್ ಬಾಗ್” ಎಂಬ ಸುಂದರ ಉದ್ಯಾನದ ಉತ್ತರದ ತುದಿಗೆಹೊಂದಿಕೊಂಡಂತಿದೆ. ಮಠದ ಮುಂಭಾಗದಲ್ಲಿ ಬೃಹದಾಕಾರದ ಕೊಳವು ಇದ್ದ ಕಾರಣ ಶ್ರೀಕೊಳದ ಮಠ ಎಂಬ ಹೆಸರು ಬಂದಿತೆಂದು ಹೇಳಲಾಗುತ್ತದೆ.ಮಠದ ಸ್ಥಾಪಿತ ಕಾಲಮಾನ ಹಾಗೂ ಸ್ಥಾಪಕರು ಯಾರು ಎಂಬುದರ ಬಗ್ಗೆಸ್ಪಷ್ಟವಾದ ಮಾಹಿತಿಗಳ ಲಭ್ಯತೆಯಿಲ್ಲ. ಮಠದ ಪ್ರಾಚೀನತೆಯನ್ನು ಕುರಿತಂತೆ ಈಗಿನಮಠಾಧೀಶರಾಗಿರುವ ಡಾ. ಶ್ರೀ ಶಾಂತವೀರ ಮಹಾಸ್ವಾಮಿಗಳು ಒಂದು ಸಾವಿರವರ್ಷಗಳಷ್ಟು ಪ್ರಾಚೀನವಾದ ಇತಿಹಾಸವುಳ್ಳ ಮಠವಿದೆಂದು ಹೇಳುತ್ತಾರೆ. ಆದರೆ ಈ ಬಗ್ಗೆದಾಖಲೆಗಳ ಲಭ್ಯವಿಲ್ಲ. ಇಲಾಖಾ ದಾಖಲೆಗಳ ಪ್ರಕಾರ ಮೈಸೂರು ಶ್ರೀ ಮುಮ್ಮಡಿ ಕೃಷ್ಣರಾಜಒಡೆಯರ ಆಳ್ವಿಕೆ (1800-1831)ಯಲ್ಲಿ ಇನಾಂಭೂಮಿಯನ್ನು ನೀಡಿದ ಬಗ್ಗೆ ದಾಖಲೆಗಳಿವೆ.ಅಂದರೆ 1800ಕ್ಕಿಂತಲೂ ಪೂರ್ವದಲ್ಲಿಯೇ ಈ ಮಠವು ಅಸ್ತಿತ್ವದಲ್ಲಿತ್ತೆಂಬುದು ಸ್ಪಷ್ಟವಾಗುತ್ತದೆ. ಅಂದರೆ ಶ್ರೀಮಠವು ಕೆಂಪೇಗೌಡರ ಕಾಲದ ಮಠವಾಗಿದ್ದು ಕನಿಷ್ಠ ನಾಲ್ಕುನೂರು ವರ್ಷಗಳ ಇತಿಹಾಸ ಹೊಂದಿದೆ.ಶ್ರೀ ಕೊಳದ ಮಠದ ಕರ್ತೃಗುರುಗಳ ಬಗ್ಗೆ ತಿಳಿದುಬರುವುದಿಲ್ಲವಾದರೂ ಶ್ರೀಶಿವಲಿಂಗ ದೇಶಿಕೇಂದ್ರ ಮಹಾಸ್ವಾಮಿಗಳ ಕಾಲದಿಂದ ಮಠದ ಪರಂಪರೆಯನ್ನುಗುರುತಿಸಬಹುದಾಗಿದೆ. ಇವರ ನಂತರದ ಶ್ರೀ ಸಿದ್ದಲಿಂಗ ದೇವರು “ಕರಣಹಸಿಗೆ” ಎಂಬಗ್ರಂಥವನ್ನು ರಚಿಸಿದವರಾಗಿದ್ದು ಇದರ ಆಧಾರದ ಮೇಲೆ ಇವರ ಕಾಲಮಾನ ಸುಮಾರು1875 ರಿಂದ 1890 ಆಗಿದ್ದಿರಬಹುದು. ಇವರ ನಂತರ ಶ್ರೀ ಬಸವಲಿಂಗದೇವರು, ಶ್ರೀಹುಚ್ಚಪ್ಪದೇವರು, ಶ್ರೀ ವೀರಭದ್ರ ದೇವರು ಹಾಗೂ ಶ್ರೀ ಶಾಂತವೀರ ಮರಿದೇವರುಗಳುಶ್ರೀಮಠದ ಪರಂಪರೆಯನ್ನು ಶ್ರೀಮಂತಗೊಳಿಸಿದ್ದಾರೆ. ಆದರೆ ಇವರುಗಳ ನಂತರಶ್ರೀಮಠವು ಸುಮಾರು ಇಪ್ಪತ್ತೇಳು ವರ್ಷಗಳ ಕಾಲ ಖಾಲಿ ಉಳಿದಿರುವಂತೆ ತೋರುತ್ತದೆ.ಈವರೆಗೂ ನಮಗೆ ತೋರಿಬರುವ ದಾಖಲೆಗಳಲ್ಲಿರುವಂತೆ ಶ್ರೀಮಠವನ್ನುಕೊಳದ ಮಠ ಸಂಸ್ಥಾನ ಎಂದೇ ಕರೆಯಲಾಗಿದ್ದು ಸ್ಪಷ್ಟವಾಗುತ್ತದೆ. ಸಂಸ್ಥಾನ ಎಂಬ ಮಾತಿಗೆಮೂಲನೆಲೆ ಸಮೂಹಗಳ ಕೇಂದ್ರ ಎಂಬುದಾಗಿದ್ದು, ಅದರಂತೆ ಒಂದು ಮಠಮೂಲವಾಗಿದ್ದುಕೊಂಡು ಅಂತಹ ಮಠ ಹಲವಾರು ಶಾಖಾ ಮಠಗಳ ರಚನೆಗೂಕಾರಣವಾಗಿರುತ್ತದೆ. ಈ ರೀತಿಯ ಮಠಗಳಿಗೆ ಸಂಸ್ಥಾನ ಮಠವೆಂಬುದಾಗಿ ಕರೆಯುತ್ತಿದ್ದುಅದೇ ರೀತಿ ಶ್ರೀ ಕೊಳದ ಮಠವು ಸಂಸ್ಥಾನ ಮಠವಾಗಿ ಹಲವಾರು ಶಾಖಾಮಠಗಳನ್ನುಹೊಂದಿತ್ತು.ಈ ರೀತಿಯಾಗಿ ಸಂಸ್ಥಾನ ಮಠದ ಉತ್ತರಾಧಿಕಾರಿಗಳಾಗಿ ನಂತರ 1916ರಏಪ್ರಿಲ್ 28 ರಂದು ವಿಧಿವತ್ತಾದ ಪಟ್ಟಾಧಿಕಾರವನ್ನು ಹೊಂದಿ ಶ್ರೀಮಠಕ್ಕೆ ಬಂದವರು ಈಗಿನಶ್ರೀಗಳಾದ ಶ್ರೀ ಮ.ನಿ.ಪ್ರ. ಡಾ. ಶಾಂತವೀರ ಮಹಾಸ್ವಾಮಿಗಳು. 1942ರ ಮಾರ್ಚ್ 6 ರಂದುಜನಿಸಿದ ಶ್ರೀಗಳು ತಮ್ಮ ಆರನೇ ವಯಸ್ಸಿನಲ್ಲಿಯೇ ಶ್ರೀಮಠದ ಉತ್ತರಾಧಿಕಾರಿಯಾಗಿನೇಮಕಗೊಂಡವರು. ಇವರು ತುಮಕೂರು, ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿವಾರಣಾಸಿಯಲ್ಲಿ ವೇದಾಂತ ಆಚಾರ್ಯ ಪದವಿಯನ್ನು ಪಡೆದಿರುವುದಲ್ಲದೆ ಸಂಸ್ಕøತ ಮತ್ತುಹಿಂದಿ ಭಾಷೆಗಳಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ.ಶ್ರೀ ಶಾಂತವೀರ ಮಹಾಸ್ವಾಮಿಗಳು ಬಹುಭಾಷಾ ಪಂಡಿತರಾಗಿದ್ದು ಕನ್ನಡ,ಹಿಂದಿ, ಸಂಸ್ಕøತ, ಆಗಮಶಾಸ್ತ್ರ, ತತ್ತ್ವಶಾಸ್ತ್ರಗಳಲ್ಲಿ ಆಳವಾದ ಅರಿವನ್ನು ಹೊಂದಿದ್ದಾರೆ.ಆಗಮ ಶಾಸ್ತ್ರದಲ್ಲಿ ಅಪಾರವಾದ ಆಸಕ್ತಿಯನ್ನು ಹೊಂದಿರುವ ಶ್ರೀಗಳು ಮಠದಲ್ಲಿ ಆಗಮಪ್ರತಿಷ್ಠಾನವನ್ನು ಸ್ಥಾಪಿಸಿ ಆಗಮಶಾಸ್ತ್ರದ ಸಂಶೋಧನೆ ಹಾಗೂ ಅಭ್ಯಾಸಕ್ಕೆ ನೆರವಾಗಿದ್ದಾರೆ.ಇವರ ವಿದ್ವತ್ತನ್ನು ಗುರುತಿಸಿ ಕರ್ನಾಟಕ ಸರ್ಕಾರ ಆಗಮ ಶಿಕ್ಷಣ ಪರೀಕ್ಷಾ ಸಲಹಾ ಸಮಿತಿಗೆಅಧ್ಯಕ್ಷರನ್ನಾಗಿ ನೇಮಿಸಿದೆ. ಶ್ರೀಗಳು ಅಖಿಲ ಭಾರತ ಸಾಧು ಸಮಾಜದ ಅಧ್ಯಕ್ಷರೂ, ಅಖಿಲಭಾರತ ಭಾಷಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು, ಅಖಿಲ ಭಾರತ ಸಂಸ್ಕøತ ಪ್ರಚಾರಸಮಿತಿಯ ಅಧ್ಯಕ್ಷರು, ಅಂತರಾಷ್ಟ್ರೀಯ ಆಧ್ಯಾತ್ಮಿಕ ನಿಗಮದ ಅಧ್ಯಕ್ಷರೂ ಆಗಿ ಸೇವೆಸಲ್ಲಿಸಿದ್ದಾರೆ. ್ರೀ ಶಾಂತವೀರ ಮಹಾಸ್ವಾಮಿಗಳು ಶ್ರೀ ಕೊಳದ ಮಠವನ್ನುಸರ್ವತೋಮುಖವಾಗಿ ಅಭಿವೃದ್ದಿಗೊಳಿಸಿದ್ದು ಸದಾ ಚಟುವಟಿಕೆಯಕೇಂದ್ರಬಿಂದುವನ್ನಾಗಿಸಿದ್ದಾರೆ. ಕಳೆದ ಐದು ದಶಕಗಳಲ್ಲಿ ಶ್ರೀಮಠವನ್ನು ಅಂತರಾಷ್ಟ್ರೀಯಮಟ್ಟದಲ್ಲಿ ಬಿಂಬಿಸುತ್ತಿರುವುದು ಶ್ರೀಗಳ ಹೆಗ್ಗಳಿಕೆ. ಪ್ರಗತಿಪರರೂ, ಸಮಾಜದ ಹಿತಚಿಂತಕರೂ, ಮೌಡ್ಯಗಳ ವಿರೋಧಿಗಳೂ ಆಗಿರುವ ಶ್ರೀಗಳು ಸ್ವತಃ ಸಾಹಿತಿಗಳೂ ಆಗಿದ್ದಾರೆ.ದೇಶದ ನಾನಾಭಾಗಗಳಲ್ಲಿ ಬರ, ನೆರೆಗಳಂತಹ ಪ್ರಕೃತಿ ವಿಕೋಪಗಳಾದಾಗ ಸ್ವತಃ ತಾವೇಮುಂದಾಳತ್ವವಹಿಸಿ ಹಣಸಂಗ್ರಹಿಸಿ ನೆರವು ನೀಡುತ್ತಾ ಬಂದಿರುವುದಲ್ಲದೇ ಕನ್ನಡ ನಾಡುನುಡಿಗೆ ಸೇವೆ ಸಲ್ಲಿಸುತ್ತಿದ್ದಾರೆ.ಪ್ರತಿ ವರ್ಷ ಮಠದಲ್ಲಿ ಭಾರತೀಯ ಭಾಷಾ ಸಮ್ಮೇಳನ, ವಿಶ್ವ ಶಾಂತಿ ಸಮ್ಮೇಳನ,ಸರ್ವಧರ್ಮ ಸಮನ್ವಯ ಸಮ್ಮೇಳನ ಮೊದಲಾದ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.ಈ ಸಂದರ್ಭಗಳಲ್ಲಿ ರಾಷ್ಟ್ರಮಟ್ಟದ ನಾಯಕರುಗಳು ಹಾಗೂ ಸಾಧಕರನ್ನು ಕರೆಸಿ ಆಯಾಕ್ಷೇತ್ರಗಳಲ್ಲಿ ದುಡಿದ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಗುತ್ತದೆ. ಶ್ರೀಗಳ ಎಲ್ಲಾ ರೀತಿಯ ಕಲೆ,ಸಂಸ್ಕøತಿ, ಸಾಹಿತ್ಯ ಸೇವೆಯನ್ನು ಗುರುತಿಸಿ ಅನೇಕ ಗೌರವ ಪುರಸ್ಕಾರಗಳು ಹುಡುಕಿಬಂದಿವೆ, 1982ರಲ್ಲಿ ಕರ್ನಾಟಕ ಸರ್ಕಾರದ ಸಂಸ್ಕøತ ವಿದ್ವಾಂಸ ಪ್ರಶಸ್ತಿ, 1991ರಲ್ಲಿ ಕರ್ನಾಟಕಸರ್ಕಾರದ ವೇದ ವಿದ್ವಾಂಸ ಪ್ರಶಸ್ತಿ, 2000ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ,ಈ ರೀತಿಯಾಗಿ ಅನೇಕ ಗೌರವ ಪುರಸ್ಕಾರಗಳು ಶ್ರೀಗಳಿಗೆ ಸಂದಿವೆ.ಕೊನೆಯದಾಗಿ ಶ್ರೀ ಕೊಳದ ಮಠವು ಒಂದು “ಸ್ಮಶಾನದಮಠ” ವೆಂಬುದಾಗಿಸ್ಥಳೀಯ ಜನರ ಬಹುತೇಕ ನಂಬಿಕೆಯಾಗಿದೆ. ಕಳೆದ ಶತಮಾನದಲ್ಲಿ ಕೊಳದ ಮಠಒಳಗೊಂಡಂತೆ ಬಹುತೇಕ ಮಠಗಳ ಆವರಣಗಳೆಲ್ಲ ಲಿಂಗಾಯತರ ಸ್ಮಶಾನಕೇಂದ್ರಗಳೇಆಗಿದ್ದವು. ಹಾಗೆ ಶ್ರೀ ಕೊಳದ ಮಠದಲ್ಲೂ ವೀರಶೈವರ, ಅನೇಕ ಪ್ರತಿಷ್ಠಿತ ವ್ಯಕ್ತಿಗಳ,ಮಹನೀಯರ, ಅನೇಕ ಮಠಾಧೀಶರ ಸಮಾದಿಗಳಿವೆ. ಮಠದ ಭಕ್ತರಾಗಿದ್ದ ಹಾಗೂ ಮಾಜಿಮಂತ್ರಿಗಳೂ ಆಗಿದ್ದ ಶ್ರೀ ಹೆಚ್. ಸಿದ್ದಯ್ಯನವರ ಸಮಾಧಿಯೂ ಈ ಮಠದ ಆವರಣದಒಳಗೆ ಇದ್ದು ಇವರ ಗೌರವಾರ್ಥವಾಗಿ ಕೊಳದ ಮಠದ ಮುಂಭಾಗದ ರಸ್ತೆಯನ್ನುಹೆಚ್.ಸಿದ್ದಯ್ಯರಸ್ತೆ ಎಂದು ನಾಮಕರಣ ಮಾಡಲಾಗಿತ್ತು. ಶ್ರೀಮಠದ ಆವರಣದಲ್ಲಿ ಗಂಜಾಂಮಠದ ಶ್ರೀ ನಂಜುಂಡ ಸ್ವಾಮಿಗಳು, ಶ್ರೀ ಚಿದ್ಘನ ಶಿವಾಚಾರ್ಯ ಸ್ವಾಮಿಗಳು. ನರಗುಂದದೇವರ ಮಠದ ಶ್ರೀ ಕರಿಬಸವ ಸ್ವಾಮಿಗಳು, ಶ್ರೀ ಶಂಕರ ದೇವರ ಮಠದ ಶ್ರೀ ಶಂಕರಸ್ವಾಮಿಗಳು, ಶ್ರೀ ಸರ್ಪಭೂಷಣ ಮಠದ ಶ್ರೀ ಮಹಾದೇವ ಸ್ವಾಮಿಗಳು, ಶ್ರೀ ಮುತ್ತಿನ ಕಂತೆಮಠದ ಶ್ರೀ ಶಿವಕಮಾರ ಸ್ವಾಮಿಗಳ ಗದ್ದುಗೆಗಳನ್ನು ಕಾಣಬಹುದು.
Swamiji
Swamiji Name :
ಶ್ರೀ ಮ.ನಿ.ಪ್ರ. ಡಾ. ಶಾಂತವೀರ ಮಹಾಸ್ವಾಮಿಗಳು
Date of Birth :
06-03-1942
Pattadikara :
28-04-1961
Photo :
Programs
ಪ್ರತಿ ಹುಣ್ಣಿಮೆ, ಅಮವಾಸ್ಯೆಗೆ ವಿಶೇಷ ಪೂಜೆ
Photos
Full Address Kannada
ಶ್ರೀ ಕೊಳದ ಮಠ ಮಹಾಸಂಸ್ಥಾನ
ಹೆಚ್. ಸಿದ್ದಯ್ಯ ರಸ್ತೆ (ಲಾಲ್ಬಾಗ್ ರೋಡ್)
ಬೆಂಗಳೂರು - 560 027