ಶಿವನ ಅಪ್ಪಣೆಯಂತೆ ಲೋಕೋದ್ಧಾರ ಮಾಡಲು ಆಗಮಿಸಿದರೆಂದು ಹೇಳಲಾದಪಂಚಗಣಾಧೀಶ್ವರರಲ್ಲಿ ಶ್ರೀ ಕೆಂಪೇಶ್ವರರು ಒಬ್ಬರು. ಇವರೆಲ್ಲಾ ಧರ್ಮ ಪ್ರಚಾರಕಾರ್ಯಾರ್ಥ ಪರ್ಯಟನೆ ಕೈಗೊಂಡು ಅಲ್ಲಲ್ಲಿ ನೆಲೆಗೊಂಡು ಭಕ್ತರನ್ನುದ್ಧರಿಸಿದ್ದಾರೆ. ಹೀಗೆಶ್ರೀ ಕೆಂಪೇಶ್ವರ ಸ್ವಾಮಿಗಳು ರಾಯದುರ್ಗದಲ್ಲಿ ನೆಲೆನಿಲ್ಲುತ್ತಾರೆ.ಶ್ರೀ ಕೆಂಪೇಶ್ವರರು ರಾಯದುರ್ಗದಲ್ಲಿ ಅಪಾರ ಭಕ್ತ ಬಳಗವನ್ನು ಹೊಂದಿವೈಭೋಗದಿಂದ ಅಡ್ಡಪಲ್ಲಕ್ಕಿ ಉತ್ಸವ ಆಚರಿಸಿಕೊಳ್ಳುತ್ತಿರುವಾಗ ಅಲ್ಲಿಗೆ ಬರುವ ತಮ್ಮಹಿಂದಿನ ಒಡನಾಡಿಯಾದ ಶ್ರೀ ರುದ್ರಸ್ವಾಮಿಗಳು ಇವರನ್ನು ನೋಡುತ್ತಾ ತಿಪ್ಪೆ ಮೇಲೆ ನಿಂತುಕೇಕೆ ಹಾಕುತ್ತಿರುತ್ತಾರೆ. ಆಗ ಕೆಂಪೇಶ್ವರರಿಗೆ ಜ್ಞಾನೋದಯವಾಗಿ ಕರ್ಮಯೋಗದಸಿದ್ಧಾಂತದ ನೆನಪಾಗಿ ಶ್ರೀ ರುದ್ರಸ್ವಾಮಿಗಳಿಗೆ ತಿಪ್ಪೇರುದ್ರಸ್ವಾಮಿಗಳೆಂಬ ಅಭಿದಾನವನ್ನಿತ್ತುಅವರೊಂದಿಗೆ ಹೊರಟು ಕೊನೆಗೆ ಹರಪನಹಳ್ಳಿಯಲ್ಲಿ ನೆಲೆನಿಲ್ಲುತ್ತಾರೆ.ನಂತರ ಹರಪನಹಳ್ಳಿಯ ಮೇಗಳಪೇಟೆಯಲ್ಲಿ ಕೊಟ್ಟೂರೇಶ್ವರರ ಅಪ್ಪಣೆಯಂತೆಭಕ್ತರ ಸಹಕಾರದಿಂದ ಮಠಕಟ್ಟಿದರು. ಮುಂದೆ ಇದೇ ಕೆಂಪಯ್ಯಸ್ವಾಮಿಗಳ ಮಠವಾಯಿತು.ಶ್ರೀಗಳು ತಮ್ಮ ಜೀವಿತಾವಧಿಯಲ್ಲಿ ಅನೇಕ ಪವಾಡಗಳನ್ನು ನಡೆಸಿ ಹಾಗೂ ಭಕ್ತರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ದೈವಮಾನವರಾಗಿದ್ದಾರೆ. ಶ್ರೀಗಳು ತಮ್ಮ ಜೀವಿತದ ಕೊನೆಯನ್ನುಮಠದಲ್ಲಿ ಕಳೆÀದ ನಂತರ ಭಕ್ತರು ಹಾಗೂ ಊರಿನ ಗಣ್ಯರ ಸಮ್ಮುಖದಲ್ಲಿ ಮಠದ ಬಳಿಯತೋಟದಲ್ಲಿ ನಿರ್ಮಿಸಿದ್ದ ಸಮಾಧಿ ಗದ್ದುಗೆಯಲ್ಲಿ ಜೀವಂತ ಸಮಾಧಿ ಹೋಗುತ್ತಾರೆ.ಮುಂದೆ ಭಕ್ತರು ಗುರುಗಳ ಸಮಾಧಿ ಸ್ಥಳದಲ್ಲಿ ಗದ್ದುಗೆ ಮಂಟಪ ನಿರ್ಮಿಸಿದ್ದಾರೆ,ಆದರೆ ಇಲ್ಲಿ ಈಗ ಗದ್ದುಗೆ ಮಂಟಪವಿದ್ದ ಸ್ಥಳದಲ್ಲಿ ಒಂದು ಸಾಧಾರಣ ಮಂಟಪ ಹಾಗೂಪುರಾತನವಾದ ಒಂದು ಬೃಹತ್ ಇಳಿಯುವ ಬಾವಿ ಇದೆ; ಆದರೆ ಈಗ ಈ ಸ್ಥಳ ಪಾಳುಬಿದ್ದಿದೆ. ಸುಮಾರು 350-400 ವರ್ಷಗಳ ಇತಿಹಾಸವಿರುವ ಮೂಲ ಮಠದ ಗದ್ದುಗೆಹಾಳಾಗಿದ್ದರಿಂದ ಭಕ್ತರು ಈಗ್ಗೆ 60 ವರ್ಷಗಳ ಹಿಂದೆ ಹರಪನಹಳ್ಳಿ-ಕೊಟ್ಟೂರು ಮಾರ್ಗದಮೇಗಳ ಪೇಟೆಯಲ್ಲಿ ಶ್ರೀ ಗುರು ಕೆಂಪೇಶ್ವರ ಸ್ವಾಮಿಗಳ ಮಠವನ್ನು ಸ್ಥಾಪಿಸಿದ್ದಾರೆ. ಇಲ್ಲಿ ಶ್ರೀಕೆಂಪೇಶ್ವರ ಸ್ವಾಮಿಗಳ ತೋರುಗದ್ದುಗೆ ಇದ್ದು ಧಾರ್ಮಿಕ ಆಚರಣೆಗಳನ್ನು ನಡೆಸಲಾಗುತ್ತಿದೆ.
Swamiji
Swamiji Name :
ಶ್ರೀ ಕೆಂಪೇಶ್ವರ ಸ್ವಾಮಿ ಮಠ
Photo :
Programs
ನಿತ್ಯ ರುದ್ರಾಭಿಷೇಕ, ಆರಾಧನೆ.
ಕಾರ್ತೀಕ ಮಾಸದಲ್ಲಿ ಕಾರ್ತೀಕೋತ್ಸವ.
ಪ್ರತಿ ಅಮವಾಸ್ಯೆ, ಹುಣ್ಣಿಮೆಗೆ ವಿಶೇಷ ಪೂಜೆ.
Photos
Full Address Kannada
ಶ್ರೀ ಕೆಂಪೇಶ್ವರ ಸ್ವಾಮಿ ಮಠ
ಹರಪನಹಳ್ಳಿ - 583 131
ದಾವಣಗೆರೆ ಜಿ.