ಇಂಚಗೇರಿ ಗ್ರಾಮದ ಮಧ್ಯಭಾಗದಲ್ಲಿ ಸುಮಾರು 11ನೇ ಶತಮಾನದಲ್ಲಿ ಸ್ಥಾಪಿತಗೊಂಡಿರುವ ಪುರಾತನ ಕಾಲದ ಶ್ರೀ ಕರಿಬಸವೇಶ್ವರ ಮಠವು ಅಸ್ತಿತ್ವದಲ್ಲಿದ್ದು ಶ್ರೀಮದ್ರಂಭಾಪುರಿ ಪೀಠದ ಶಾಖಾಮಠವಾಗಿ ಪುತ್ರವರ್ಗದ ಪರಂಪರೆಯಲ್ಲಿ ಬೆಳೆದುಬಂದಿದೆ.ಶ್ರೀಮಠದ ಕರ್ತೃಗುರುಗಳು ಶ್ರೀ ಕರಿಬಸವ ರಾಜದೇಶಿಕೇಂದ್ರ ಮಹಾಸ್ವಾಮಿಗಳು.ಕರ್ತೃಗುರುಗಳಾದ ಶ್ರೀ ಕರಿಬಸವ ರಾಜದೇಶಿಕೇಂದ್ರರು ದೇಶಸಂಚಾರಿಗಳಾಗಿಸಂಚಾರ ಮಾಡುತ್ತಾ ಮಹಾರಾಷ್ಟ್ರದ ಜತ್ ತಾಲ್ಲೂಕಿನ ಅಕಳವಾಡಿಯಲ್ಲಿ ನೆˉÉನಿಂತು,ಪವಾಡಗಳನ್ನು ನಡೆಸಿ ಮಠವನ್ನು ಸ್ಥಾಪಿಸಿದ್ದರು. ತದನಂತರ ಸಂಚಾರ ಕೈಗೊಂಡುಇಂಚಗೇರಿಗೆ ಆಗಮಿಸಿದ ಶ್ರೀಗಳು ಊರ ಹೊರಗೆ ಅನುಷ್ಠಾನ ಕೈಗೊಂಡು ಸಾಧನೆಯಸಿದ್ಧಿಯನ್ನು ಪಡೆದರು. ಆ ಮೂಲಕ ಅಪಾರ ಸಂಖ್ಯೆಯ ಭಕ್ತರನ್ನು ಸಂಪಾದಿಸಿಕೊಂಡುಅವರ ಸಹಕಾರದೊಂದಿಗೆ ಶ್ರೀಮಠವನ್ನು ವ್ಯವಸ್ಥಿತವಾಗಿ ಕಟ್ಟಿ ಬೆಳೆಸಿದರು.ಕರ್ತೃಗುರುಗಳ ನಂತರದ ಪರಂಪರೆಯಲ್ಲಿ ಇಲ್ಲಿಯವರೆಗೂ 47 ಜನ ಶ್ರೀಗಳುಪಟ್ಟಕ್ಕೆ ಬಂದಿದ್ದು ಈಗಿನ ಶ್ರೀಗಳು 48ನೆಯವರು ಎಂದು ಹೇಳˉÁಗಿದೆ. ಶ್ರೀಮಠದಪರಂಪರೆಯಲ್ಲಿ ಬಂದಿರುವ ಬಹುತೇಕ ಶ್ರೀಗಳು ಕತೃಗುರುಗಳ ಹೆಸರನ್ನೇ ಅಭಿದಾನಪಡೆದು ಬಂದಿರುವುದು ವಿಶೇಷ. ಹಿಂದಿನ ಶ್ರೀಗಳಾದ ಶ್ರೀ ಷ.ಬ್ರ. ತಪೋರತ್ನ ಪಂಡಿತಶಿವಾಚಾರ್ಯಸ್ವಾಮಿಗಳು ಕಾಶಿಯಲ್ಲಿ ಸಂಸ್ಕøತವನ್ನು ಅಭ್ಯಾಸ ಮಾಡಿ ವೇದಾಂತಾಚಾರ್ಯಪದವಿಯನ್ನು ಪಡೆದಿದ್ದರು. ಶ್ರೀಗಳು ತಮ್ಮ ಧಾರ್ಮಿಕ ಆಚರಣೆಗಳೊಂದಿಗೆ ವಾಕ್ಸಿದ್ಧಿಪುರುಷರಾಗಿ ಕೂಡ ಶ್ರೀಮಠವನ್ನು ಪ್ರಸಿದ್ಧಿಗೆ ತಂದರು.ಶ್ರೀಗಳು 1968ರ ಫೆಬ್ರವರಿ 26ರಲ್ಲಿ ಈಗಿನ ಶ್ರೀಗಳಾದ ಶ್ರೀ ಷ.ಬ್ರ. ಡಾ. ರೇಣುಕಾಶಿವಾಚಾರ್ಯ ಮಹಾಸ್ವಾಮಿಗಳನ್ನು ಪಟ್ಟಕ್ಕೆ ತಂದು 1988ರ ಆಗಸ್ಟ್ 7ರಲ್ಲಿಲಿಂಗೈಕ್ಯರಾಗಿದ್ದಾರೆ. ಈಗಿನ ಶ್ರೀಗಳು ಹಿರಿಯ ಗುರುಗಳ ಮಾರ್ಗದರ್ಶನದಲ್ಲಿ ಪರಿಪಕ್ವಗೊಂಡು ಶ್ರೀಮಠದ ಧಾರ್ಮಿಕ ಕಾರ್ಯಗಳನ್ನು ಮುಂದುವರೆಸಿಕೊಂಡು ಬಂದಿದ್ದಾರೆ.ಶ್ರೀಗಳು ಸಂಸ್ಕøತದಲ್ಲಿ ಪಿಹೆಚ್.ಡಿ. ಪದವೀಧರರಾಗಿದ್ದು ತಮ್ಮ ಪಾಂಡಿತ್ಯದಿಂದಶ್ರೀಮಠವನ್ನು ಸರ್ವಾಂಗೀಣವಾಗಿ ಅಭಿವೃದ್ಧಿಗೊಳಿಸುವಲ್ಲಿ ಶ್ರಮಿಸುತ್ತಿದ್ದಾರೆ. ಹಾಗೂಶಾಖಾಮಠಗಳ ಅಭಿವೃದ್ಧಿಗೂ ಒತ್ತುಕೊಟ್ಟು ಅವುಗಳನ್ನು ಅಭಿವೃದ್ಧಿಗೊಳಿಸುತ್ತಿದ್ದಾರೆ.
Swamiji
Swamiji Name :
ಶ್ರೀ ಷ.ಬ್ರ. ಡಾ. ರೇಣುಕ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
20-3-1943
Place :
ಇಂಚಗೇರಿ, ಇಂಡಿ ತಾ||
Pattadikara :
20-3-1943
Photo :
Programs
ಮಹಾ ಶಿವರಾತ್ರಿಗೆ ಶ್ರೀ ಕರಿಬಸವೇಶ್ವರ ಜಾತ್ರೆ.
ಮಣ್ಣೆತ್ತಿನ ಅಮವಾಸ್ಯೆಗೆ 21 ದಿನ ಪುರಾಣ ಪ್ರವಚನ, 2,500 ಜನ ಮುತ್ತೈದೆಯವರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ಸಾಮೂಹಿಕ ವಿವಾಹಗಳು.
ದೀಪಾವಳಿ ಪಾಡ್ಯದಿಂದ ಛಟ್ಟಿ ಅಮವಾಸ್ಯೆವರೆಗೆ 1 ತಿಂಗಳ ಕಾಲ ನಿತ್ಯ ದೀಪೋತ್ಸವ.
ಕಾರ್ತೀಕ ಮಾಸದಲ್ಲಿ ನಡೆಯುವ ಪಂಡರಾಪುರ ಜಾತ್ರೆ ಹಾಗೂ ಗುಡ್ಡಾಪುರ ದಾನಮ್ಮ ಜಾತ್ರೆಗೆ ತೆರಳುವ ಪಾದಯಾತ್ರಿಗಳಿಗೆ ನಿತ್ಯದಾಸೋಹ.