ಮೈಸೂರು ಜಿˉÉ್ಲ ಟಿ. ನರಸೀಪುರ ತಾಲ್ಲೂಕಿನ ಮುಡುಕುತೊರೆ ಗ್ರಾಮದಿಂದ 1ಕಿ.ಮೀ. ದೂರದಲ್ಲಿರುವ ಶ್ರೀ ಕಲ್ಮಠವು ವಿರಕ್ತ ಸಂಪ್ರದಾಯದ ಮಠವಾಗಿದ್ದು ಪುತ್ರವರ್ಗದಪರಂಪರೆಯಲ್ಲಿ ಬೆಳೆದುಬಂದಿದೆ. ಶ್ರೀಮಠವು ಪುರಾತನ ಕಾಲದ್ದಾಗಿದ್ದು ಪರಂಪರೆಯ ಬಗ್ಗೆಸ್ಪಷ್ಟತೆಯಿಲ್ಲ. ಶ್ರೀಮಠದ ಕರ್ತೃಗುರುಗಳೆಂದು ಶ್ರೀ ನಿ. ಪ್ರ. ಸ್ವ. ಒಪ್ಪತ್ತಿನ ಮಹಾಸ್ವಾಮಿಗಳನ್ನುಗುರುತಿಸˉÁಗಿದ್ದು ಕಾಲಮಾನದ ಬಗ್ಗೆ ತಿಳಿದುಬರುವುದಿಲ್ಲ.ಶ್ರೀ ಕಲ್ಮಠದ ಕಟ್ಟಡವು ಹಾಗೂ ಅದನ್ನು ಕಟ್ಟಿರುವ ವಿನ್ಯಾಸ ನೋಡಿದರೆ ಚೋಳರಕಾಲದಲ್ಲಿ ನಿರ್ಮಿಸಿರಬಹುದಾದ ಮಠವೆಂದು ಗುರುತಿಸಬಹುದಾಗಿದ್ದು ಶ್ರೀಮಠದಲ್ಲಿ 6ಗದ್ದುಗೆಗಳನ್ನು ಕಾಣಬಹುದು. ಚರಮೂರ್ತಿಗಳೊಬ್ಬರು ಸಂಚಾರದಲ್ಲಿ ಬೆಟ್ಟದಮಲ್ಲಿಕಾರ್ಜುನ ಸನ್ನಿಧಿಗೆ ಬಂದು ಕಾವೇರಿ ನದಿಯ ಪ್ರಶಾಂತ ಸ್ಥಳದಲ್ಲಿ ದೀರ್ಘಅನುಷ್ಠಾನಗೊಂಡಿದ್ದರು. ಇವರು ದಿನದಲ್ಲಿ ಒಂದೇ ವೇಳೆ ಆಹಾರ ಸೇವಿಸುತ್ತಿದ್ದರಿಂದ ಶ್ರೀಒಪ್ಪತ್ತೇಶ್ವರ ಮಹಾಸ್ವಾಮಿಗಳೆಂದು ಹೆಸರು ಬರಲು ಕಾರಣವಾಯಿತು. ಗುರುಗಳತಪೆÇೀನಿಷ್ಠೆಯನ್ನು ಕಂಡ ಭಕ್ತರು ಗುರುಗಳನ್ನು ಇˉÉ್ಲೀ ನೆˉÉಸುವಂತೆ ಒತ್ತಾಯ ಮಾಡಿದ್ದುಗುರುಗಳು ಇˉÉ್ಲೀ ನೆˉÉಸಿ ಮಠವನ್ನು ಸ್ಥಾಪಿಸಿದರು.ಕರ್ತೃ ಗುರುಗಳ ನಂತರದ ಪರಂಪರೆಯ ಎˉÁ್ಲ ಗುರುಗಳ ಬಗ್ಗೆ ಸ್ಪಪ್ಟವಾದಮಾಹಿತಿ ಲಭ್ಯವಿಲ್ಲ. ಹಿಂದಿನ ಗುರುಗಳಾದ ಶ್ರೀ ನಿ.ಪ್ರ.ಸ್ವ. ಸಿದ್ದಲಿಂಗ ಮಹಾಸ್ವಾಮಿಗಳುಹಾಗೂ ಶ್ರೀ ಶಿವರಾತ್ರೀಶ್ವರ ಮಠದ “ಮಂತ್ರಮಹರ್ಷಿ” ಎಂದೇ ಹೆಸರಾಗಿದ್ದ ಜಗದ್ಗುರು ಶ್ರೀಪಟ್ಟದ ಶಿವರಾತ್ರೀಶ್ವರ ಮಹಾಸ್ವಾಮಿಗಳು ಬಹಳ ಅನ್ಯೋನ್ಯತೆಯಿಂದ ಬೆಳೆದವರಾಗಿದ್ದರು.ಇಂತಹ ಶ್ರೀಗಳಿಂದಾಗಿ ಶ್ರೀಮಠವು ತನ್ನ ಪ್ರಸಿದ್ಧಿಯನ್ನು ಹೆಚ್ಚಿಸಿಕೊಂಡಿತು. ಸದಾ ಭಕ್ತರಶ್ರೇಯೋಭಿವೃದ್ಧಿಗೆ ಶ್ರಮಿಸಿದ ಶ್ರೀಗಳು 1954ರಲ್ಲಿ ಲಿಂಗೈಕ್ಯರಾದರು.ಪ್ರಸ್ತುತ ಶ್ರೀಗಳಾದ ಶ್ರೀ ನಿ.ಪ್ರ.ಸ್ವ. ಚಂದ್ರಶೇಖರ ಸ್ವಾಮಿಗಳು ತಮ್ಮ 12ನೇವಯಸ್ಸಿನಲ್ಲಿಯೇ 1955ರಲ್ಲಿ ಶ್ರೀಮಠದ ಪಟ್ಟಕ್ಕೆ ಬಂದಿದ್ದು ಕಳೆದ 6 ದಶಕಗಳಲ್ಲಿಶ್ರೀಮಠವನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಮಠದ ಆಸ್ತಿಯನ್ನುಅಭಿವೃದ್ಧಿಗೊಳಿಸಿ ತೋಟ ಮಾಡಿ ಆದಾಯ ಬರುವಂತೆ ಮಾಡಿದ್ದಾರೆ. ಮಠದ ಒಳಭಾಗದಕರ್ತೃಗದ್ದುಗೆಯನ್ನು ಅಭಿವೃದ್ಧಿಪಡಿಸಿದ್ದು ಶ್ರೀ ಮಲ್ಲಿಕಾರ್ಜುನ ಮತ್ತು ಭ್ರಮರಾಂಬೆದೇವಿಯ ಜಾತ್ರೆ ಉತ್ಸವಕ್ಕೆ ದಾಸೋಹ ವ್ಯವಸ್ಥೆಯನ್ನು ಮಾಡˉÁಗುತ್ತಿದೆ.
Swamiji
Swamiji Name :
ಶ್ರೀ ನಿ.ಪ್ರ.ಸ್ವ. ಚಂದ್ರಶೇಖರ ಸ್ವಾಮಿಗಳು
Date of Birth :
1943
Place :
ಮುಡುಕುತೊರೆ, ಟಿ.ನರಸೀಪುರ ತಾ||
Pattadikara :
1955
Programs
ಫೆಬ್ರವರಿಯಲ್ಲಿ ಶ್ರೀ ಮಠದ ಜಾತ್ರೆ ಮೇನಲ್ಲಿ ಪರ್ವತ ಪರ್ಸೆ ನಡೆಯುತ್ತದೆ.
Photos
Full Address Kannada
ಶ್ರೀ ಕಲ್ಮಠ
ಮುಡುಕುತೊರೆ
ಟಿ. ನರಸೀಪುರ ತಾ||, ಮೈಸೂರು ಜಿಲ್ಲೆ