ರಾಮನಗರ ಜಿˉÉ್ಲ ಮಾಗಡಿ ತಾಲ್ಲೂಕಿನ ಚಕ್ರಬಾವಿ ಗ್ರಾಮವು ತಾಲ್ಲೂಕುಕೇಂದ್ರದಿಂದ 15 ಕಿ.ಮೀ. ದೂರದಲ್ಲಿದ್ದು ಈ ಗ್ರಾಮದ ಹೊರಭಾಗದಲ್ಲಿ ಅಸ್ತಿತ್ತ್ವದಲ್ಲಿರುವಪುರಾತನ ಕಾಲದ ಶ್ರೀ ಜಂಗಮ ಮಠವು ತನ್ನ ಆಚರಣೆಗಳ ಮೂಲಕ ಈ ಭಾಗದ ಜನರಲ್ಲಿಧಾರ್ಮಿಕ ಅರಿವನ್ನು ಮೂಡಿಸುವಲ್ಲಿ ಶ್ರಮಿಸುತ್ತಿದೆ. ಶ್ರೀಮದ್ ಉಜ್ಜಯಿನಿ ಪೀಠದ ಶಾಖಾಮಠವಾಗಿರುವ ಶ್ರೀ ಜಂಗಮ ಮಠದ ಕರ್ತೃಗುರುಗಳ ಬಗ್ಗೆ ಹೆಚ್ಚಿನ ಮಾಹಿತಿಗಳು ದೊರಕಿಬರುವುದಿಲ್ಲ.ಸುಮಾರು 650 ವರ್ಷಗಳ ಹಿಂದೆ ಮಹಾತಪಸ್ವಿ ಶಿವಯೋಗಿಗಳೊಬ್ಬರು ಇಲ್ಲಿಅನುಷ್ಟಾನಗೊಂಡು ಧಾರ್ಮಿಕ ಆಚರಣೆಗಳನ್ನು ನಡೆಸಿ ಜೀವಂತ ಸಮಾದಿಯಾದರೆಂದುತಿಳಿದುಬರುತ್ತಿದ್ದು ಈ ಸ್ಥಳವು ಅತಿ ಜಾಗೃತ ಸ್ಥಳವಾಗಿದ್ದಿತು. ಮುಂದೆ ಉಜ್ಜಯಿನಿಮರುಳಸಿದ್ದರು ಇಲ್ಲಿ ಅನುಷ್ಟಾನಗೊಂಡು ಈ ಸ್ಥಳದ ಮಹಿಮೆಯನ್ನು ಜಗತ್ತಿಗೆ ಸಾರಿದರುಎಂದು ಹೇಳˉÁಗುತ್ತದೆ.ಈ ರೀತಿ ಸ್ಥಾಪಿತಗೊಂಡ ಶ್ರೀ ಜಂಗಮ ಮಠದಲ್ಲಿ ಈವರೆಗೂ 10 ಜನ ಶ್ರೀಗಳುಅಧಿಕಾರ ನಡೆಸಿದ್ದು ಶ್ರೀಮಠವನ್ನು ಪ್ರಸಿದ್ದಿಗೆ ತಂದಿದ್ದಾರೆ ಎಂದು ಹೇಳˉÁಗಿದ್ದುಗುರುಪರಂಪರೆಯ ಗುರುಗಳ ಬಗ್ಗೆ ದಾಖˉÉಗಳಿಲ್ಲ. ಪರಂಪರೆಯ ಹಿಂದಿನ ಗುರುಗಳುವಿದ್ವಾಂಸರಾಗಿ ವೇದ-ಜ್ಯೋತಿಷ್ಯಪಂಡಿತರಾಗಿದ್ದು ತಮ್ಮ ಧಾರ್ಮಿಕ ಆಚರಣೆಗಳ ಮೂಲಕಅಪಾರ ಭಕ್ತರನ್ನು ಸಂಪಾದಿಸಿಕೊಂಡು ಶ್ರೀಮಠವನ್ನು ಅಭಿವೃದ್ದಿ ಪಥದಲ್ಲಿ ಮುನ್ನಡೆಸಿದ್ದರು.ಈಗಿನ ಮಠಾದೀಶರಾದ ಶ್ರೀ ಷ.ಬ್ರ. ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು ಶ್ರೀಜಂಗಮ ಮಠಕ್ಕೆ ಪಟ್ಟಾಧಿಕಾರವನ್ನು 1970ರ ಅಕ್ಟೋಬರ್ 10ರಂದು ಸ್ವೀಕರಿಸಿದ್ದು ಇವರಕಾಲದಲ್ಲಿ ಶ್ರೀಮಠವು ಆರ್ಥಿಕವಾಗಿ ಸದೃಡಗೊಂಡಿದೆ. ಗುರುಗಳು ಸ ್ವತಃಕಾಯಕಯೋಗಿಗಳಾಗಿ, ಶಿವಪೂಜಾನಿಷ್ಟರಾಗಿ ಮಠವನ್ನು ಬೆಳೆಸಿದ್ದು ಶ್ರೀಮಠದಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸುತ್ತಿದ್ದಾರೆ. ಶ್ರೀಮಠದ ಜಮೀನನ್ನು ಅಭಿವೃದ್ಧಿ ಪಡಿಸಿತೋಟವನ್ನು ಮಾಡಿ ಶ್ರೀಮಠಕ್ಕೆ ಆದಾಯ ಮೂಲವನ್ನಾಗಿ ಶ್ರೀಗಳು ಮಾಡಿಕೊಂಡಿದ್ದಾರೆ.ಹಾಗೂ ಶ್ರೀಮಠದ ಸಮೀಪದ ವೀರ¨s Àದ್ರಸ್ವಾಮಿ ದೇವಾಲಯವು ಈಚೆಗೆಸ್ಥಾಪಿತಗೊಂಡಿದ್ದು ಭಕ್ತರ ಹಾಗೂ ಸರ್ಕಾರದ ಸಹಕಾರದೊಂದಿಗೆ ಶ್ರೀಗಳು ಇಲ್ಲಿಗೆ ಅರ್ದಕಿ.ಮೀ ದೂರದಲ್ಲಿರುವ ಲಕ್ಷೀದೇವಿ ಗುಡಿಯನ್ನು ಜೀರ್ಣೋದ್ದಾರಗೊಳಿಸುತ್ತಿದ್ದಾರೆ.
Swamiji
Swamiji Name :
ಶ್ರೀ ಷ.ಬ್ರ. ಸಿದ್ಧಲಿಂಗ ಸ್ವಾಮಿಗಳು
Date of Birth :
25-12-1954
Pattadikara :
10-10-1970
Photo :
Programs
ಪ್ರತಿ ಅಮವಾಸೆಗೆ ವಿಶೇಷ ಪೂಜೆ ಶಿವರಾತ್ರಿಯಂದು ಶ್ರೀ ಮಠದ ಜಾತ್ರೆ ಕಾರ್ತಿಕ ಮಾಸದಲ್ಲಿ ಕಾರ್ತಿಕೋತ್ಸವ