ವಿಜಯಪುರ ಜಿˉÉ್ಲಯ ಮಸೂತಿ ಗ್ರಾಮದ ಮಧ್ಯಭಾಗದಲ್ಲಿ ಸುಮಾರು 12ನೇಶತಮಾನದಲ್ಲಿ ಶ್ರೀ ಜಗದೀಶ್ವರ ಶಿವಾಚಾರ್ಯ ಸ್ವಾಮಿಗಳಿಂದ ಸ್ಥಾಪಿತಗೊಂಡಿರುವ ಶ್ರೀಜಗದೀಶ್ವರ ಹಿರೇಮಠವು ಅಸ್ಥಿತ್ವದಲ್ಲಿದ್ದು ಪಂಚಪೀಠಗಳಲ್ಲಿ ಒಂದಾಗಿರುವ ಶ್ರೀ ಕಾಶಿ ಪೀಠದಪರಂಪರೆಯಲ್ಲಿ ಬೆಳೆದುಬಂದಿದೆ.ಕರ್ತೃಗುರುಗಳಾದ ಶ್ರೀ ಜಗದೀಶ್ವರ ಶಿವಾಚಾರ್ಯ ಸ್ವಾಮಿಗಳು ಮಹಾನ್ಜಂಗಮ ಪುಂಗವರು, ಬಾಲ್ಯದಲ್ಲಿಯೇ ತಮ್ಮ ವಿಶಿಷ್ಟ ಗುಣಗಳಿಂದ, ಆಚರಣೆಗಳಿಂದ,ಪವಾಡಗಳಿಂದಾಗಿ ಹಿರಿಯರ ಅಚ್ಚರಿಗೆ ಕಾರಣರಾಗಿದ್ದರು. ಇಂತಹ ಗುರುಗಳುಪ್ರೌಢಾವಸ್ಥೆಗೆ ತಲುಪಿದ ಮೇˉÉ ಯೋಗಸಿದ್ದಿಯನ್ನು ಸಾಧಿಸಿಕೊಂಡು ಮಹಾನ್ಯೋಗಿಗಳೆನಿಸಿದರು. ತದನಂತರ ಗ್ರಾಮವನ್ನು ತೊರೆದು ˉÉೂೀಕಸಂಚಾರಕ್ಕೆ ಹೊರಟಶ್ರೀಗಳು ಸಮಾಜದ ಅಭ್ಯುದಯಕ್ಕೆ ಬಹುವಾಗಿ ಶ್ರಮಿಸಿದರು.ಹಾನಗಲ್ಲುವಿನಿಂದ ˉÉೂೀಕಸಂಚಾರ ಹೊರಟ ಜಗದೀಶ್ವರರು ಕಾಶಿ, ಕೇದಾರ,ಶ್ರೀಶೈಲ, ರಾಮೇಶ್ವರಗಳನ್ನೆˉÁ್ಲ ಸಂದರ್ಶಿಸಿ, ಅಲ್ಲಿಯ ಗುರುಗಳೆಲ್ಲರ ಆಶೀರ್ವಾದ ಪಡೆದುಪುನಃ ಕರುನಾಡಿನ ಕಡೆಗೆ ಮುಖಮಾಡಿದರು. ಹೀಗೆ ಸಂಚಾರದಲ್ಲಿದ್ದ ಶ್ರೀಗಳು ಅಲ್ಲಲ್ಲಿನೆˉÉಗೊಂಡು ಕೊನೆಗೆ ಮಸೂತಿ ಪುರದ ಹೊರಭಾಗದಲ್ಲಿನ ನಿರ್ಜನ ಪ್ರದೇಶವನ್ನು ಕಂಡುಇˉÉ್ಲೀ ಅನುಷ್ಠಾನಗೊಂಡರು.ಶ್ರೀ ಜಗದೀಶ್ವರರು ಊರ ಹೊರಗಿನ ನಿರ್ಜನ ಪ್ರದೇಶದಲ್ಲಿ ಅನುಷ್ಠಾನಗೊಂಡಿರುವ ವಿಷಯ ತಿಳಿದ ಗ್ರಾಮದ ಜನರು ಗುರುಗಳ ಪ್ರಭೆಯನ್ನು ಕಂಡು ಪುಳಕಿತರಾಗಿಅವರನ್ನು ಗ್ರಾಮಕ್ಕೆ ಕರೆದೊಯ್ದು ಶ್ರೀಮಠವನ್ನು ಕಟ್ಟಿಸಿಕೊಡುತ್ತಾರೆ. ಶ್ರೀಮಠದಲ್ಲಿ ಗುರುಗಳುತಮ್ಮ ಧಾರ್ಮಿಕ ಆಚರಣೆಗಳಿಂದ, ಧರ್ಮೋಪದೇಶಗಳಿಂದ ಗ್ರಾಮದ ಜನರಿಗೆ ಸೂಕ್ತಮಾರ್ಗದರ್ಶನ ನೀಡುವುದರೊಂದಿಗೆ ಗ್ರಾಮದಲ್ಲಿ ಧಾರ್ಮಿಕ ವಾತಾವರಣವನ್ನುಸೃಷ್ಠಿಸುತ್ತಾರೆ.ತಮ್ಮ ಸಕಲ ಜ್ಞಾನವನ್ನು ಧಾರೆಯೆರೆದು ಶ್ರೀಮಠದ ಸಕಲ ಜವಾಬ್ದಾರಿಯನ್ನು ಹೊರಿಸಿತಾವು ನಿರ್ಲಿಪ್ತರಾಗಿ ಭಕ್ತಜನರಿಗೆ ಆಶೀರ್ವದಿಸಿ ಲಿಂಗದೊಳಗಾದರು.ಶ್ರೀ ಶಿವಯೋಗಿ ಶಿವಾಚಾರ್ಯರು ಕೂಡ ಗುರುಗಳಂತೆಯೇ ತಮ್ಮ ಧಾರ್ಮಿಕಆಚರಣೆಗಳು ಹಾಗೂ ಜ್ಞಾನಸಿದ್ದಿಗಳಿಂದಾಗಿ ಭಕ್ತರಿಗೆ ಸನ್ಮಾರ್ಗ ತೋರಿ ಶ್ರೀಮಠದಅಭಿವೃದ್ಧಿಗೆ ಕಾರಣರಾಗಿದ್ದಾರೆ. ತದನಂತರ ಶ್ರೀಮಠವು ಖಾಲಿ ಉಳಿದಿದ್ದು ಮಧ್ಯದಲ್ಲಿ ಶ್ರೀರುದ್ರಮುನಿ ಶಿವಾಚಾರ್ಯ ಸ್ವಾಮಿಗಳು ಅಧಿಕಾರ ನಡೆಸಿದ ಬಗ್ಗೆ ಮಾಹಿತಿ ತಿಳಿದುಬರುತ್ತದೆ.ಆದರೆ ಪರಂಪರೆಯ ಬಗ್ಗೆ ನಿಖರವಾದ ಮಾಹಿತಿಗಳು ಸಿಗುವುದಿಲ್ಲ.ಈಗಿನ ಶ್ರೀಗಳಾದ ಶ್ರೀ ಪ್ರಭುಕುಮಾರ ಶಿವಾಚಾರ್ಯ ಸ್ವಾಮಿಗಳು ಇಲ್ಲಿಗೆಸಮೀಪದ ಕೂಡಗಿ ಗ್ರಾಮದಲ್ಲಿ 1969ರ ಆಗಸ್ಟ್ ಮೂವತ್ತರಂದು ಜನಿಸಿದವರಾಗಿದ್ದು,ಬೊಮ್ಮನಹಳ್ಳಿ ಗವಿಮಠ, ಹೊಸಪೇಟೆಯ ಶ್ರೀ ಕೊಟ್ಟೂರು ಸ್ವಾಮಿಮಠ, ಹಾಗರಗುಂಡಿಗೆಯವಿರಕ್ತಮಠ ಹಾಗೂ ಶಿವಯೋಗ ಮಂದಿರಗಳಲ್ಲಿ ಜ್ಯೋತಿಷ್ಯ, ವೈದಿಕ ಸಂಸ್ಕøತ ಇತ್ಯಾದಿಗಳಅಧ್ಯಯನಗೈದರು.ಶ್ರೀ ಪ್ರಭುಕುಮಾರ ಶಿವಾಚಾರ್ಯರು ಮಹಾರಾಷ್ಟ್ರದ ದುದನಿ ಗ್ರಾಮದ ಶ್ರೀಶಾಂತಲಿಂಗೇಶ್ವರ ಮಠದ ಪೂಜ್ಯ ಶ್ರೀ ಮ.ನಿ.ಪ್ರ ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳಿಂದ ಚಿನ್ಮಯದೀಕ್ಷೆ ಪಡೆದುಕೊಂಡು ಶ್ರೀ ಷ.ಬ್ರ. ಡಾ. ಗುರುಸಿದ್ದದೇವ ಶಿವಾಚಾರ್ಯಮಹಾಸ್ವಾಮಿಗಳು ರಾಜಗುರು ಹಿರೇಮಠ ಕೆಳದಿ ಇವರಿಂದ ಕಾಶೀಪೀಠದ ಪರಂಪರೆಗೆಅನುಸಾರವಾಗಿ ದಿನಾಂಕ 16-05-1991 ರ ಬಸವಜಯಂತಿ ಶುಭಮುಹೂರ್ತದಲ್ಲಿಶ್ರೀಮಠದ ಪಟ್ಟಾಧಿಕಾರವನ್ನು ವಹಿಸಿಕೊಂಡರು.ಶ್ರೀ ಪ್ರಭುಕುಮಾರ ಶಿವಾಚಾರ್ಯರು ಶ್ರೀಮಠದ ಅಧಿಕಾರ ವಹಿಸಿಕೊಂಡನಂತರ ಶ್ರೀಮಠವು ಧಾರ್ಮಿಕ, ಸಾಮಾಜಿಕ, ಸಾಹಿತ್ಯಿಕ ಹಾಗೂ ಸಾಂಸ್ಕøತಿಕವಾಗಿಕಾರ್ಯಚಟುವಟಿಕೆಗಳನ್ನು ಮುಂದುವರೆಸಿಕೊಂಡು ಬಂದಿದ್ದು, ಸರ್ವಾಂಗೀಣ ರೀತಿಯಲ್ಲಿಅಭಿವೃದ್ಧಿ ಕಂಡಿದೆ ಹಾಗೂ ಶ್ರೀಗಳು ಪೀಠಾಧ್ಯಕ್ಷರಾದ ನಂತರ ಬಲು ದಕ್ಷತೆಯಿಂದ ಪೀಠದಪಾವಿತ್ರ್ಯವನ್ನು ಕಾಪಾಡಿಕೊಂಡು ಬಂದಿದ್ದಾರೆ.ಶ್ರೀಗಳು ಶ್ರೀಮಠದ ಜಮೀನನ್ನು ಅಭಿವೃದ್ಧಿಗೊಳಿಸಿ ಆದಾಯ ಮೂಲವನ್ನಾಗಿಪರಿವರ್ತಿಸಿದ್ದು ಪ್ರತಿನಿತ್ಯ ಧಾರ್ಮಿಕ ಆಚರಣೆಗಳೊಂದಿಗೆ ಶ್ರೀಮಠದ ಆಶ್ರಯದಲ್ಲಿ ಅಕ್ಕನಬಳಗದಿಂದ ಶಿವಾನುಭವ ಗೋಷ್ಠಿ, ಶ್ರಾವಣ ಮಾಸದ ಪುರಾಣ ಪ್ರವಚನ, ಯಾತ್ರಾಮಹೋತ್ಸವದ ಮುಂತಾದ ಕಾರ್ಯಕ್ರಮಗಳನ್ನು ತಪ್ಪದೇ ನಡೆಸುತ್ತಾ ಬಂದಿದ್ದಾರೆ.ಶ್ರೀಗಳು ಸ್ವತಃ ಸಾಹಿತಿಗಳಾಗಿದ್ದು, ಜಗದೀಶ್ವರ ಪುಸ್ತಕ ಪ್ರಕಾಶ£ವ Àನ್ನು ಸ್ಥಾಪಿಸಿ ಅದರ ಮೂಲಕ ಪುಸ್ತಕಗಳ ಪ್ರಕಾಶನ ಮಾಡುತ್ತಿದ್ದಾರೆ. ತಾವು ಸ್ವತಃ ಸಾವಿರಕ್ಕೂ ಅಧಿಕತ್ರಿಪದಿಗಳನ್ನು ರಚಿಸಿ ಪುಸ್ತಕ ರೂಪದಲ್ಲಿ ಹೊರತಂದಿದ್ದು, ಬಹು ಸಂಕೀರ್ಣ ಸಾಹಿತ್ಯಪ್ರಕಾರವಾದ ದ್ವಿಪದಿಗಳನ್ನು ರಚಿಸಿ ಪ್ರಕಾಶಿಸಿದ್ದಾರೆ. ಹೀಗೆ ಶ್ರೀಮಠದ ಅಭಿವೃದ್ಧಿಭಕ್ತರೊಂದಿಗೆ ಒಡನಾಟ, ಸಾಹಿತ್ಯಿಕ ಸೇವೆಯಲ್ಲಿ ನಿರತರಾಗಿರವ ಶ್ರೀ.ಮ.ಘ.ಚ.ಪ್ರಭುಕುಮಾರ ಶಿವಾಚಾರ್ಯರು ಇತರರಿಗೂ ಆದರ್ಶಪ್ರಾಯರು.ಶ್ರೀಗಳು ಹೂವಿನ ಹಿಪ್ಪರಗಿಯಲ್ಲಿಯೂ ಶಾಖಾಮಠವನ್ನು ಸ್ಥಾಪಿಸಿ ಅಭಿವೃದ್ಧಿಪಡಿಸಿದ್ದು ಶೈಕ್ಷಣಿಕ ಸೇವೆಯಲ್ಲಿ ನಿರತರಾಗಿದ್ದಾರೆ. ಹಾಗೂ ಶ್ರೀ ಬಸವಲಿಂಗ ಸ್ವಾಮಿಗಳಿಂದಸ್ಥಾಪಿತಗೊಂಡಿದ್ದ ಎಂಡಿಗೇರಿ ಹಾಗೂ ದೊಡ್ಡಸಿದ್ದವ್ವನಹಳ್ಳಿ ಶಾಖಾಮಠಗಳನ್ನು ಅಭಿವೃದ್ಧಿಗೊಳಿಸಿ ನಿರಂತರ ಧಾರ್ಮಿಕ ಆಚರಣೆಗಳು ನಡೆಯುವ ವ್ಯವಸ್ಥೆ ಮಾಡಿದ್ದಾರೆ.
Swamiji
Swamiji Name :
ಶ್ರೀ ಮ.ಘ.ಚ. ಪ್ರಭುಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
1-6-1969
Place :
ಕೂಡಗಿ, ಬಸವನಬಾಗೇವಾಡಿ ತಾ||
Pattadikara :
16-05-1991
Photo :
Programs
ಬಸವ ಜಯಂತಿ ಆಚರಣೆ
ನೂಲು ಹುಣ್ಣಿಮೆ ಆದ ಎರಡನೇ ದಿನಕ್ಕೆ
ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ.
ಬೆನಕನ ಅಮವಾಸ್ಯೆ ದಿನ ಪ್ರಸ್ತುತ ಶ್ರೀಗಳ ಹುಟ್ಟುಹಬ್ಬ ಆಚರಣೆ
ಮತ್ತು ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು.
ಕಾರ್ತಿಕ ಮಾಸದಲ್ಲಿ ಪುರಾಣ ಪ್ರವಚನ ಹಾಗೂ ದೀಪೋತ್ಸವ