ಕಾವೇರಿ ನದಿಯ ದಡದಲ್ಲಿ ತಲಕಾಡುವಿನ ದಕ್ಷಿಣ ಭಾಗದಲ್ಲಿಸ್ಥಾಪನೆಯಾಗಿರುವ ಶ್ರೀ ಹಸ್ತಿಕೇರಿ ಮಠವು ಸುಮಾರು 450 ವರ್ಷಗಳ ಇತಿಹಾಸಹೊಂದಿದ್ದು ತನ್ನ ಪರಂಪರೆಯ ಕರ್ತೃತ್ವ ಶಕ್ತಿಯಿಂದಾಗಿ ಈ ಭಾಗದ ಪ್ರಮುಖ ಮಠವಾಗಿಗುರುತಿಸಿಕೊಂಡಿದೆ. ಶ್ರೀ ಹಸ್ತಿಕೇರಿ ಮಠವು ಶ್ರೀಮದ್ ಉಜ್ಜಯಿನಿ ಪೀಠದಶಾಖಾಮಠವಾಗಿದ್ದು ಪುತ್ರವರ್ಗದ ಪರಂಪರೆಯಲ್ಲಿ ಬೆಳೆದುಬಂದಿದೆ.ಶ್ರೀಮಠದ ಕರ್ತೃಗುರುಗಳಾದ ಪೂಜ್ಯ ಶ್ರೀ ಕರಿಬಸವ ಮಹಾಸ್ವಾಮಿಗಳ ಗದ್ದುಗೆಸೇರಿದಂತೆ ಶ್ರೀಮಠದಲ್ಲಿ ಒಟ್ಟು 07 ಗದ್ದುಗೆಗಳನ್ನು ಕಾಣಬಹುದಾಗಿದ್ದು ಇವುಗಳ ಆಧಾರದಮೇˉÉ ಶ್ರೀಮಠದಲ್ಲಿ ಒಟ್ಟು 8 ಜನ ಶ್ರೀಗಳು ಅಧಿಕಾರಕ್ಕೆ ಬಂದಿದ್ದಾರೆ ಎಂದುಅಂದಾಜಿಸಬಹುದು. ಆದರೆ 1924ರಲ್ಲಿ ಕಾವೇರಿ ನದಿಯಲ್ಲಿ ಪ್ರವಾಹ ಬಂದು ಬೃಹತ್ಮಠವು ಕೊಚ್ಚಿ ಹೋಗಿದ್ದು ಇನ್ನೂ ಅನೇಕ ಸಂಗತಿಗಳು ಕಣ್ಮರೆಯಾಗಿವೆ.ಪರಂಪರೆಯ ಹಿಂದಿನ ಗುರುಗಳಾದ ಶ್ರೀ ಷ.ಬ್ರ. ಸಿದ್ದಮಲ್ಲಿಕಾರ್ಜುನಶಿವಾಚಾರ್ಯ ಮಹಾಸ್ವಾಮಿಗಳು 131ವರ್ಷಗಳ ದೀರ್ಘಕಾಲ ಸಾರ್ಥಕ ಬದುಕನ್ನು ಬದುಕಿ1918ರಲ್ಲಿ ಲಿಂಗೈಕ್ಯರಾಗಿದ್ದಾರೆ. ಶ್ರೀಗಳು ಮಹಾನ್ ದೈವ ನಿಷ್ಠರಾಗಿದ್ದು ಮಠಕ್ಕೆ ಬರುತ್ತಿದ್ದಅಸಂಖ್ಯಾತ ಭಕ್ತರಿಗೆ ದಾಸೋಹ ನಡೆಸುತ್ತಿದ್ದರಂತೆ, ಇದನ್ನು ಕೇಳಿ ತಿಳಿದಿದ್ದ ಮೈಸೂರಿನ ಶ್ರೀಮುಮ್ಮಡಿ ಕೃಷ್ಣರಾಜ ಒಡೆಯರು ಶ್ರೀಮಠಕ್ಕೆ ಭೂಮಿಯನ್ನು ದಾನ ನೀಡಲು ಮುಂದಾದಾಗಗುರುಗಳು “ಭೂಮಿ ಆಸೆ ನಮಗೇಕೆ”? ಎಂದು ಹೇಳಿ ಪ್ರತಿ ವರ್ಷ ಉಪ್ಪಿನ ದಾನವನ್ನುಮಾತ್ರ ಸ್ವೀಕರಿಸುವುದಾಗಿ ಹೇಳಿದ್ದು ಹಿಂದಿನ 40 ವರ್ಷಗಳ ತನಕ ಈ ಸಂಪ್ರದಾಯಮುಂದುವರೆದಿತ್ತಂತೆ.ಪ್ರಸ್ತುತ ಶ್ರೀಗಳಾದ ಶ್ರೀ ಷ.ಬ್ರ. ಡಾ. ಸಿದ್ದಮಲ್ಲಿಕಾರ್ಜುನ ಶಿವಾಚಾರ್ಯಮಹಾಸ್ವಾಮಿಗಳು 1960ರಲ್ಲಿ ಶ್ರೀಮಠದ ಪಟ್ಟಾಧಿಕಾರಿ ವಹಿಸಿಕೊಂಡು ಬಂದುಶ್ರೀಮಠವನ್ನು ಸರ್ವಾಂಗೀಣವಾಗಿ ಅಭಿವೃದ್ಧಿಪಡಿಸುತ್ತಿದ್ದಾರೆ. ಶ್ರೀಗಳು ಆಯುರ್ವೇದದಲ್ಲಿಪದವಿಯನ್ನು ಪಡೆದಿದ್ದು ತಮ್ಮ ಮಠಕ್ಕೆ ಬರುವ ಭಕ್ತರಿಗಲ್ಲದೇ, ನಾಡನ್ನೆˉÁ್ಲ ಸುತ್ತಿ ಕಳೆದ 4ದಶಕಗಳಿಂದ ಅಸಂಖ್ಯಾತ ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ. ಅಲ್ಲದೇ ನಾಡಿನನಾನಾಭಾಗಗಳಲ್ಲಿನ ಶಿಬಿರಗಳಲ್ಲಿ ವಿಷವೈದ್ಯ, ಯೋಗಾಸನ, ಪ್ರಕೃತಿ ಚಿಕಿತ್ಸೆ ಹಾಗೂಆಯುರ್ವೇದ ವಿಷಯಗಳಲ್ಲಿ ವಿಶೇಷ ಉಪನ್ಯಾಸ ನೀಡುತ್ತಿದ್ದಾರೆ.
Swamiji
Swamiji Name :
ಶ್ರೀ ಷ.ಬ್ರ. ಡಾ|| ಸಿದ್ದಮಲ್ಲಿಕಾರ್ಜುನ ಶಿವಾಚಾರ್ಯ
Date of Birth :
08-10-1939
Place :
ವಿಜಾಪುರ, ಟಿ.ನರಸೀಪುರ ತಾ||
Pattadikara :
1960
Photo :
Programs
ಪ್ರತಿ ಅಮವಾಸ್ಯೆ, ಹುಣ್ಣಿಮೆಗೆ ವಿಶೇಷ ಪೂಜೆ
ಕಾರ್ತಿಕ ಹಾಗೂ ಶ್ರಾವಣ ಮಾಸಗಳಲ್ಲಿ ವಿಶೇಷ ಪೂಜೆ
ಪ್ರತಿ 15 ದಿನಗಳಿಗೊಮ್ಮೆ "ಶ್ರೀ ದತ್ತಾತ್ರೇಯ ಸದಾನಂದ ಧ್ಯಾನಕೇಂದ್ರ"
ಬೆಂಗಳೂರು ಇವರಿಂದ ಮಠದಲ್ಲಿ ಜಾಗೃತಿ ಭಜನೆ ಕಾರ್ಯಕ್ರಮಗಳು
ಶ್ರೀ ಮಠದಲ್ಲಿ ನಿತ್ಯ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳು
Photos
Full Address Kannada
ಶ್ರೀ ಹಸ್ತಿಕೇರಿ ಮಠ
ತಲಕಾಡು - 571 122
ಟಿ. ನರಸೀಪುರ ತಾ|| ಮೈಸೂರು ಜಿಲ್ಲೆ