ಕಲಬುರಗಿ ಜಿಲ್ಲಾಕೇಂದ್ರದಿಂದ 55 ಕಿ.ಮೀ. ದೂರದಲ್ಲಿರುವ ಸೇಡಂ ಪಟ್ಟಣವುಪ್ರಮುಖ ವ್ಯಾಪಾರಿ ಕೇಂದ್ರವಾಗಿದೆ. ಪುರಾತನ ವೀರಶೈವ ಧಾರ್ಮಿಕ ಕೇಂದ್ರವಾಗಿರುವಸೇಡಂ ಪಟ್ಟಣದ ಹಳೇಬಜಾರ್ ಪ್ರದೇಶದಲ್ಲಿ ಅಸ್ತಿತ್ತ್ವದಲ್ಲಿರುವ ಶ್ರೀ ಹಾಲಪ್ಪಯ್ಯವಿರಕ್ತಮಠವು ತನ್ನ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯ ಚಟುವಟಿಕೆಗಳ ಮೂಲಕ ಈಭಾಗದಲ್ಲಿ ಧಾರ್ಮಿಕ ವಾತಾವರಣವನ್ನು ಸೃಷ್ಟಿಸುತ್ತಿದೆ.15ನೇ ಶತಮಾನದ ಯಡೆಯೂರು ಸಿದ್ದಲಿಂಗೇಶ್ವರರ ಕಾಲಘಟ್ಟದಲ್ಲಿ ಪೂಜ್ಯ ಶ್ರೀನಾಗಮುರುಘೇಶ್ವರ ಶಿವಯೋಗಿಗಳಿಂದ ಅಸ್ತಿತ್ವಕ್ಕೆ ಬಂದಿತೆಂದು ಹೇಳಲಾಗುವ ಶ್ರೀಹಾಲಪ್ಪಯ್ಯ ವಿರಕ್ತಮಠದ ಪರಂಪರೆಯಲ್ಲಿ ಈವರೆಗೂ 11 ಜನ ಶ್ರೀಗಳು ಅಧಿಕಾರನಡೆಸಿದ್ದು ಶ್ರೀಮಠವನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಬಂದಿದ್ದಾರೆ. ಶ್ರೀಮಠದಪರಂಪರೆಯಲ್ಲಿ ಬಂದಿರುವ ಎಲ್ಲಾ ಗುರುಗಳು ವೀರಶೈವ ಧರ್ಮದ ಆಚಾರ ವಿಚಾರಗಳು,ಬಸವಾದಿ ಶಿವಶರಣರ ತತ್ವೋಪದೇಶಗಳನ್ನು ಮಾಡುತ್ತ ಭಕ್ತರನ್ನು ಸನ್ಮಾರ್ಗಕ್ಕೆ ತಂದಿದ್ದುಧಾರ್ಮಿಕ ಪ್ರಜ್ಞೆ ಮೂಡಿಸಿದ್ದಾರೆ.ಹಿಂದಿನ ಗುರುಗಳಾದ ಶ್ರೀ ಮ.ನಿ.ಪ್ರ. ಹಾಲಪ್ಪಯ್ಯ ಮಹಾಸ್ವಾಮಿಗಳು ಶ್ರೀಮಠದಅಧಿಕಾರ ವಹಿಸಿಕೊಂಡ ನಂತರ ಶ್ರೀಮಠವು ಹೆಚ್ಚು ಪ್ರಸಿದ್ದಿಗೆ ಬಂದಿದ್ದು ಈಕಾರಣದಿಂದಾಗಿ ಶ್ರೀಮಠವನ್ನು ಶ್ರೀ ಹಾಲಪ್ಪಯ್ಯ ವಿರಕ್ತ ಮಠವೆಂದು ಕರೆಯಲಾಗುತ್ತಿದೆ.ಶ್ರೀಗಳು ಶಿವಪೂಜಾನಿಷ್ಠರಾಗಿ ತಮ್ಮ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಮೂಲಕ ಶ್ರೀಮಠವನ್ನು ಸಮರ್ಥವಾಗಿ ಮುನ್ನಡೆಸಿ 1993ರ ಡಿಸೆಂಬರ್ 17ರಲ್ಲಿಲಿಂಗೈಕ್ಯರಾಗಿದ್ದಾರೆ.ಈಗಿನ ಶ್ರೀಗಳಾದ ಪೂಜ್ಯ ಶ್ರೀ ಪಂಚಾಕ್ಷರಿ ಸ್ವಾಮಿಗಳು ಪರಂಪರೆಯ ಗುರುಗಳಹಾದಿಯಲ್ಲಿ ಶ್ರೀಮಠದ ಧಾರ್ಮಿಕ ಆಚರಣೆಗಳನ್ನು ಮುನ್ನಡೆಸುತ್ತಿದ್ದಾರೆ. ಶ್ರೀಗಳುಕಲಬುರಗಿಯಲ್ಲಿ ಸ್ನಾತಕ ಪದವಿ ಪಡೆದಿದ್ದು, ಹಾವೇರಿಯ ಶ್ರೀ ಸಿಂಧಗಿ ಮಠ ಮತ್ತುಶಿವಮೊಗ್ಗ ಜಿಲ್ಲೆ ಶ್ರೀ ವೀರಾಪುರ ಮಠಗಳಲ್ಲಿ ಆಧ್ಯಾತ್ಮ ಶಿಕ್ಷಣ ಪಡೆದಿದ್ದಾರೆ. ಶ್ರೀಗಳುಶ್ರೀಮಠದ ಸರ್ವಾಂಗೀಣ ಅಭಿವೃದ್ಧಿಗೆ ಕಾರ್ಯಯೋಜನೆ ರೂಪಿಸಿಕೊಂಡು ಶ್ರಮಿಸುತ್ತಿದ್ದು,ಶ್ರೀಮಠದಲ್ಲಿ ಮಾರ್ಗಶಿರ ಮಾಸದಲ್ಲಿ ಶ್ರೀ ಹಾಲಪ್ಪಯ್ಯ ಶಿವಯೋಗಿಗಳ ಪುಣ್ಯಾರಾಧನೆನಡೆಸುತ್ತಿದ್ದಾರೆ. ಶ್ರೀ ಮಠದ ಮೂಲಮಠವು ಊರ ಹೊರಗಿದ್ದು ಕ್ರಮೇಣ ಶ್ರೀಮಠವುಈಗಿನ ಸ್ಥಳಕ್ಕೆ ಸ್ಥಳಾಂತರಗೊಂಡಿದೆ.
Swamiji
Swamiji Name :
ಪೂಜ್ಯ ಶ್ರೀ ಪಂಚಾಕ್ಷರಿ ಸ್ವಾಮಿಗಳು
Date of Birth :
01-06-1980
Place :
ಸೇಡಂ, ಕಲಬುರಗಿ ತಾ||
Photo :
Programs
ಮಾರ್ಗಶಿರ ಮಾಸ ಶುದ್ಧ ತೃತೀಯದಂದು
ಲಿ|| ಶ್ರೀ.ಮ.ನಿ.ಪ್ರ. ಹಾಲಪ್ಪಯ್ಯ ಶಿವಯೋಗಿಗಳ
ಪುಣ್ಯಸ್ಮರಣೆ ಹಾಗೂ 11 ದಿನಗಳ ಕಾಲ
ವಿವಿಧ ಕಾರ್ಯಕ್ರಮಗಳು
ಬಸವಜಯಂತಿ, ಅಕ್ಕಮಹಾದೇವಿ ಜಯಂತಿ
ಹಾಗೂ ಪುಟ್ಟರಾಜ ಗವಾಯಿಗಳ
ಜಯಂತಿಗಳ ಆಚರu
Photos
Full Address Kannada
ಶ್ರೀ ಹಾಲಪ್ಪಯ್ಯ ವಿರಕ್ತಮಠ
ಹಳೇ ಬಜಾರ್, ಸೇಡಂ - 585 222
ಸೇಡಂ ತಾ|| ಕಲಬುರಗಿ ಜಿಲ್ಲೆ