Shree Guruvanna Devara Matha

Shree Guruvanna Devara Matha Claimed

ಶ್ರೀ ಗುರುವಣ್ಣ ದೇವರ ಮಠ

Average Reviews

Description

ಶ್ರೀ ಗುರುವಣ್ಣ ದೇವರ ಮಠ – ಬೆಂಗಳೂರು

ಕರ್ತೃ – ಶ್ರೀ ಮ.ನಿ.ಪ್ರ. ಗುರುವಣ್ಣ ದೇವರು

ಬೆಂಗಳೂರು ನಗರದ ಹೃದಯಭಾಗದಲ್ಲಿರುವ ಬಿನ್ನಿ ವೃತ್ತದಿಂದ ಮಾಗಡಿಮುಖ್ಯರಸ್ತೆಗೆ ಇಳಿಯುತ್ತಿದ್ದಂತೆ ರೈಲ್ವೇ ಸೇತುವೆಯಿಂದ ಎಡಭಾಗದಲ್ಲಿರುವ ರಸ್ತೆಯನ್ನುಪ್ರವೇಶಿಸಿದರೆ ಬಿನ್ನಿಸ್ಟನ್ ಗಾರ್ಡನ್ ಎಂದು ಕರೆಯಲ್ಪಡುವ ಪ್ರದೇಶವಿದೆ. ಆ ಪ್ರದೇಶದಒಳಹೊಕ್ಕರೆ ನಗರದ ಜಂಜಾಟಗಳಿಂದ ದೂರದಲ್ಲಿರುವಂತೆ ಬಾಸವಾಗುವ ಸಹಜ ಸುಂದರಪರಿಸರವಿರುವ ಮಠವನ್ನು ಕಾಣಬಹುದು. ಆ ಮಠವೇ ಶ್ರೀ ಗುರುವಣ್ಣ ದೇವರ ಮಠ.ಸುಮಾರು 350 ವರ್ಷಗಳ ಇತಿಹಾಸವಿದೆಯೆಂದು ಹೇಳಲಾಗುವ ಶ್ರೀಮಠದಕರ್ತೃಗುರುಗಳೆಂದು ಪೂಜ್ಯ ಶ್ರೀ ಮ.ನಿ.ಪ್ರ.ಸ್ವ. ಗುರುವಣ್ಣ ದೇವರನ್ನು ಹೆಸರಿಸಲಾಗಿದೆ.ಶ್ರೀಮಠದ ಬಗ್ಗೆ ಸರ್ಕಾರದ ದಾಖಲೆಗಳಲ್ಲಿ ಹಾಗೂ ಇಲ್ಲಿರುವ ಶಾಸನಗಳಲ್ಲಿದಾಖಲಾಗಿರುವಂತೆ ಸರಿಸುಮಾರು 350 ವರ್ಷಗಳ ಹಿಂದಿನವರೆಗಿನ ಇತಿಹಾಸವನ್ನುದಾಖಲಿಸಬಹುದಾಗಿದೆ. ಇದಕ್ಕೂ ಪೂರ್ವದಲ್ಲಿ ಶ್ರೀಮಠವಿರಬಹುದಾದರೂ ದಾಖಲೆಗಳಲಭ್ಯತೆಯಿಲ್ಲ. ಶ್ರೀ ಗುರುವಣ್ಣ ದೇವರ ಮಠದ ಮೊದಲ ಹೆಸರು ಶ್ರೀ ಗುರುವಣ್ಣನವರಮಠವೆಂತಲೂ, ಮೊದಲು ಶ್ರೀಮಠವು ದೊಡ್ಡಪೇಟೆ ಪ್ರದೇಶದ ತುಳಸೀ ತೋಟದಭಾಗದಲ್ಲಿ ಅಸ್ತಿತ್ವದಲ್ಲಿತ್ತೆಂತಲೂ ತಿಳಿದು ಬರುತ್ತದೆ. ಬಹುಶಃ 350 ವರ್ಷಗಳ ಹಿಂದೆ ಶ್ರೀಗುರುವಣ್ಣ ದೇವರು ಎಂಬ ಮಹಾಮಹಿಮ ವಿರಕ್ತರು ತುಳಸೀ ತೋಟದ ಪ್ರದೇಶದಲ್ಲಿಅನುಷ್ಟಾನಗೊಂಡು ಶ್ರೀಮಠವನ್ನು ಸಾ್ಥಪಿಸಿ ಪ್ರಸಿದ್ದಿಯಲ್ಲಿದ್ದರು ಎಂಬುದಾಗಿಅಂದಾಜಿಸಬಹುದು. ಕರ್ತೃಗುರುಗಳ ನಂತರದಲ್ಲಿ ಒಬ್ಬರು ವಿರಕ್ತರು ಶ್ರೀಮಠದಪರಂಪರೆಯಲ್ಲಿ ಬಂದಿದ್ದಾರೆಂದು ಗುರುತಿಸಲಾಗಿದೆಯಾದರೂ ಸ್ಪಷ್ಟತೆಯಿಲ್ಲ. ಆದರೆ ಇವರಗದ್ದುಗೆಯನ್ನು ಶ್ರೀಮಠದ ಆವರಣದಲ್ಲಿ ಕಾಣಬಹುದಾಗಿದೆ.ಶ್ರೀಮಠದ ಪರಂಪರೆಯ ಮೂರನೇ ಗುರುಗಳಾದ ಶ್ರೀ ಮ.ನಿ.ಪ್ರ.ಸ್ವ.ಮುದ್ದುವೀರ ಮಹಾಸ್ವಾಮಿಗಳ ಕಾಲಮಾನ ಸುಮಾರು 1800-1835. ಶ್ರೀಗಳ ಕಾಲದಲ್ಲಿಶ್ರೀಮಠ ಹೆಚ್ಚು ಪ್ರಚಲಿತಕ್ಕೆ ಬಂದಂತೆ ಕಾಣುತ್ತಿದ್ದು ಅಪಾರ ಭಕ್ತ ಬಳಗವನ್ನುಸಂಪಾದಿಸಿಕೊಂಡಿದ್ದರು. ಮುಂದೆ ಶ್ರೀ ಮುದ್ದುವೀರ ಸ್ವಾಮಿಗಳು 1824ರಲ್ಲಿ ಮಾಗಡಿಯವೀರಣ್ಣ ಎಂಬ ವಟುವನ್ನು ಆಯ್ಕೆ ಮಾಡಿಕೊಂಡು ಅವರಿಗೆ ಸೂಕ್ತ ಧಾರ್ಮಿಕ ಹಾಗೂಶೈಕ್ಷಣಿಕ ತರಬೇತಿಯನ್ನು ನೀಡಿ “ರುದ್ರದೇವರು” ಎಂಬ ಅಭಿದಾನವನ್ನಿತ್ತು 1835ರ ವೇಳೆಗೆಶ್ರೀಮಠದ ಪೀಠಾಧಿಕಾರವನ್ನು ವಹಿಸಿಕೊಟ್ಟರು. ಅಲ್ಲಿಂದ 1870ರವರೆಗೆ ಶ್ರೀ ರುದ್ರದೇವರೇಶ್ರೀಮಠವನ್ನು ಮುನ್ನಡೆಸಿರುವುದು ದಾಖಲೆಗಳಲ್ಲಿ ಕಂಡುಬರುತ್ತದೆ.ಶ್ರೀ ಮ.ನಿ.ಪ್ರ.ಸ್ವ. ರುದ್ರದೇವರ ಕಾಲದಲ್ಲಿ ಶ್ರೀಮಠಕ್ಕೆ ಅಲ್ಪ ಭೂಮಿರೂಢಿಸಿಕೊಂಡಂತೆ ಕಂಡುಬರುತ್ತಿದ್ದು ಇವರ ಕಾಲದಲ್ಲಿ ನೆಲಮಂಗಲ ತಾಲ್ಲೂಕಿನಸೊಂಡೆಕೊಪ್ಪ ಗ್ರಾಮದಲ್ಲಿ ಶಾಖಾಮಠವಿದ್ದುದು ತಿಳಿದುಬರುತ್ತದೆ. ಇವರ ನಂತರಅಧಿಕಾರಕ್ಕೆ ಬಂದ ಶ್ರೀ ಮ.ನಿ.ಪ್ರ.ಸ್ವ. ಗುರುಮಹಾಂತ ಮಹಾಸ್ವಾಮಿಗಳು ಶ್ರೀಮಠವನ್ನುದೊಡ್ಡಪೇಟೆ ಪ್ರದೇಶದಿಂದ ಈಗಿರುವ ಮಠದ ಸ್ಥಳಕ್ಕೆ ಶ್ರೀಮಠದ ಆಡಳಿತವನ್ನು ಸ್ಥಳಾಂತರಿಸಿಕೊಂಡು ಅಭಿವೃದ್ಧಿಗೊಳಿಸಿದರು (ಇದಕ್ಕೂ ಪೂರ್ವದಲ್ಲಿ ಶ್ರೀಮಠವಿರುವಈಗಿರುವ ಜಾಗ ಮಠದಿಂದಲೇ ವ್ಯವಸಾಯಕ್ಕೆ ಒಳಪಟ್ಟಿತ್ತು). ಇವರು 1870ರಲ್ಲಿ ಶ್ರೀಮಠದಅಧಿಕಾರ ವಹಿಸಿಕೊಂಡಿದ್ದು 1888ರಲ್ಲಿ 6ನೇ ಶ್ರೀಗಳಾದ ಶ್ರೀ ಮ.ನಿ.ಪ್ರ.ಸ್ವ. ನಂಜುಂಡಮಹಾಸ್ವಾಮಿಗಳಿಗೆ ಶ್ರೀಮಠದ ಆಡಳಿತವನ್ನು ಹಸ್ತಾಂತರಿಸಿರುವುದು ತಿಳಿದುಬರುತ್ತದೆ.ಶ್ರೀ ಮ.ನಿ.ಪ್ರ.ಸ್ವ. ನಂಜುಂಡ ಮಹಾಸ್ವಾಮಿಗಳು ಸಂಸ್ಕøತ, ಕನ್ನಡ, ತೆಲುಗುಭಾಷೆಗಳಲ್ಲಿ ವಿದ್ವಾಂಸರೂ, ಕೈವಲ್ಯ ಸಾಹಿತ್ಯದ ರಚನಕಾರರೂ, ಪ್ರಖ್ಯಾತ ವೀರಶೈವತತ್ತ್ವಸಾಹಿತ್ಯ ವಿಶಾರದರೂ ಆಗಿದ್ದರು. “ವೀರಶೈವ ಕೌಸ್ತುಭ”, “ಶಿವಸ್ತುತಿ ಮಣಿಮಾಲಾ”,“ವೀರ ಮಾಹೇಶ್ವರ ವಿಜಯ”, “ದಶಕರ್ಮ ವಿಧಿ” (ಗರ್ಭಾದಾನ ವಿಧಿ), “ನೂತನಗೃಹಪ್ರವೇಶ ವಿಧಿ” (ಪಟ್ಟಾಭಿಷೇಕ ವಿಧಿ), “ವೀರಶೈವ ಅಂತ್ಯೇಷ್ಟ ವಿಧಿ”, “ಶಿವಪೂಜಾವಿಧಿ”, “ಪಾದಪೂಜಾ ವಿಧಿ”, “ಶಿವಾನುಭವ ಶಾಸ್ತ್ರ” (ಕರಣ ಹಸಿಗೆ), “ರಾಜಶೇಖರವಿಳಾಸ” 13, 14 ಆಶ್ವಾಸಗಳು ಇವೇ ಮೊದಲಾದ ವೀರಶೈವ ಧರ್ಮ ಆಚರಣೆಗೆಸಂಬಂಧಿಸಿದ ಅನೇಕ ಕೃತಿಗಳನ್ನು ರಚಿಸಿ ಪ್ರಕಟಿಸಿದ್ದರು. ಇವರು ಶ್ರೀಮಠವನ್ನುಸರ್ವರೀತಿಯಲ್ಲೂ ಅಭಿವೃದ್ಧಿಗೊಳಿಸಲು ಶ್ರಮಿಸಿದ್ದು ಬೆಂಗಳೂರಿನ ಪ್ರಮುಖ ಧಾರ್ಮಿಕಕೇಂದ್ರಗಳಲ್ಲಿ ಒಂದಾಗಿ ರೂಪಿಸಿದರು.ಶ್ರೀ ನಂಜುಂಡ ಮಹಾಸ್ವಾಮಿಗಳು ಶಾಂತಪುರದ ಭಕ್ತರ ಮನೆಯಲ್ಲಿ ಶಿವಪೂಜೆಗೆಹೋಗಿದ್ದ ಸಮಯದಲ್ಲಿ ಅನಾರೋಗ್ಯಕ್ಕೀಡಾಗಿ ಕಂಚುಗಲ್ ಬಂಡೆ ಮಠದ ಶ್ರೀತೋಂಟದಾರ್ಯ ಮಹಾಸ್ವಾಮಿಗಳಿಗೆ ಪತ್ರ ಬರೆದು ಶ್ರೀಗುರುವಣ್ಣ ದೇವರ ಮಠದಮುಂದಿನ ಉತ್ತರಾಧಿಕಾರಿಗಳನ್ನಾಗಿ ಶ್ರೀಮಠದ ವಟುಗಳಾದ ಶ್ರೀ ಮಹಾಂತ ದೇವರನ್ನುಪಟ್ಟಕ್ಕೆ ತರಬೇಕೆಂದೂ, ಅದರ ಮುಂದಾಳತ್ವವನ್ನು ತಾವೇ ವಹಿಸಿಕೊಳ್ಳಬೇಕೆಂದೂಬರೆದರು. ಕೆಲದಿನಗಳ ನಂತರ ಶ್ರೀಗಳು ಶಾಂತಪುರದಲ್ಲಿಯೇ ಲಿಂಗೈಕ್ಯರಾಗಿದ್ದು ಗುರುಗಳಇಚ್ಛೆಯಂತೆ ಶ್ರೀಗಳ ಪಾರ್ಥೀವ ಶರೀರವನ್ನು ಬೆಂಗಳೂರಿನ ಮಠಕ್ಕೆ ತಾರದೇ ಸಮೀಪದಶ್ರೀ ಕಂಚುಗಲ್ ಮಠದಲ್ಲಿಯೇ ಗದ್ದುಗೆ ಮಾಡಲಾಗಿದ್ದು ಪೂಜ್ಯನೀಯವಾಗಿದೆ.ಶ್ರೀ ನಂಜುಂಡಸ್ವಾಮಿಗಳು 1920ರಲ್ಲಿ ಲಿಂಗೈಕ್ಯರಾದಾಗ ಉತ್ತರಾಧಿಕಾರಿಗಳಾಗಿನೇಮಕಗೊಂಡಿದ್ದ ಶ್ರೀ ಮಹಾಂತ ದೇವರಿಗೆ ಕೇವಲ 15 ವರ್ಷ ವಯಸ್ಸು. ಶ್ರೀ ಮಹಾಂತದೇವರು ತಮ್ಮ ವಿದ್ಯಾಭ್ಯಾಸ ಪೂರ್ಣಗೊಳಿಸಿ ಶ್ರೀಮಠದ ಸಂಪೂರ್ಣ ಅಧಿಕಾರವಹಿಸಿಕೊಳ್ಳುವ ಹೊತ್ತಿಗೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಶ್ರೀಮಠದ ನಾಲ್ಕು ಎಕರೆಜಮೀನನ್ನು ಕಬಳಿಸಿಕೊಂಡಿದ್ದರು. ಶ್ರೀಗಳು ಶ್ರೀಮಠದ ಪೂರ್ಣ ಅಧಿಕಾರ ವಹಿಸಿಕೊಂಡುಕೈಬಿಟ್ಟು ಹೋಗಿದ್ದ ಮಠದ ಆಸ್ತಿ-ಪಾಸ್ತಿಗಳ ರಕ್ಷಣೆಯಲ್ಲಿ ನಿರತರಾದರು. ಸುದೀರ್ಘನಾಲ್ಕೂವರೆ ದಶಕಗಳ ಕಾಲ ಶ್ರೀಮಠ ಹಾಗೂ ಸಮಾಜದ ಶ್ರೇಯೋಭಿವೃದ್ದಿಗೆ ಶ್ರಮಿಸಿದಶ್ರೀಗಳು ಶ್ರೀಮಠದಲ್ಲಿ ಸಂಸ್ಕøತ ಪಾಠಶಾಲೆಯನ್ನು ಪ್ರಾರಂಭಿಸಿದ್ದರು. ಅನೇಕ ಅಭಿವೃದ್ಧಿಕಾರ್ಯಗಳನ್ನು ಮಾಡಿದ್ದ ಶ್ರೀಗಳು ದೇವರಹೊಸಹಳ್ಳಿಯ ಬೆಟ್ಟದ ಮೇಲಿನ ಶ್ರೀ ವೀರಭದ್ರದೇವಸ್ಥಾನದ ದಾಸೋಹಭವನ ಮತ್ತು ಅರ್ಚಕರ ವಸತಿಗೃಹವನ್ನು ನಿರ್ಮಿಸಿಕೊಟ್ಟಿದ್ದರು.ತಮ್ಮ ಆಚರಣೆಗಳು ಹಾಗೂ ಚಿಂತನೆಗಳಿಂದ ಹೆಸರಾಗಿದ್ದ ಶ್ರೀಗಳು 1967ರ ಫೆಬ್ರವರಿ 16 ರಂದು ಈಗಿನ ಹಿರಿಯ ಶ್ರೀಗಳಾದ ಶ್ರೀ ಮ.ನಿ.ಪ್ರ.ಸ್ವ. ಮಲ್ಲಿಕಾರ್ಜುನ ಮಹಾಸ್ವಾಮಿಗಳನ್ನುತಮ್ಮ ಉತ್ತಾರಾಧಿಕಾರಿಯಾಗಿ ಆಯ್ಕೆಮಾಡಿಕೊಂಡು ಪಟ್ಟಾಧಿಕಾರದ ಅನುಗ್ರಹ ನೀಡಿ1973ರಲ್ಲಿ ಲಿಂಗೈಕ್ಯರಾದರು.ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಹಿಂದಿನ ಗುರುಗಳ ಪರಂಪರೆಯಆದರ್ಶವನ್ನೇ ಮುಂದುವರೆಸಿಕೊಂಡು ಬಂದಿದ್ದು ಶ್ರೀಮಠದ ಸರ್ವಾಂಗೀಣ ಅಭಿವೃದ್ದಿಗೆಶ್ರಮಿಸಿದ್ದಾರೆ. ಶ್ರೀಮಠದ ಧಾರ್ಮಿಕ ಆಚರಣೆಗಳನ್ನು ಚುರುಕುಗೊಳಿಸಿದ ಶ್ರೀಗಳು ಮಠದಆಸ್ತಿಯನ್ನು ವ್ಯವಸ್ಥಿತಗೊಳಿಸಿ ಒಂದು ಹೊಸ ರೂಪವನ್ನು ನೀಡಿದ್ದಾರೆ. ಶ್ರೀಮಠವನ್ನುಹಂತಹಂತವಾಗಿ ಅಭಿವೃದ್ದಿಗೊಳಿಸಿರುವ ಶ್ರೀಗಳು ಆಧುನಿಕ ಬೆಂಗಳೂರು ಮಹಾನಗರದಹೃದಯಭಾಗದಲ್ಲಿರುವ ಶ್ರಿಮಠದ ಪರಿಸರವನ್ನು ಕಲುಷಿತಗೊಳಿಸದೇ ಮಠಸಂಸ್ಕøತಿಯನ್ನುಉಳಿಸಿ ಬೆಳೆಸಿದ್ದಾರೆ. ಶ್ರೀಗಳು ಶ್ರೀಮಠದಲ್ಲಿ ಶಿವಪೂಜಾ ಮಂದಿರ ಹಾಗೂ ಭವ್ಯವಾದ“ಮಹಾಂತ ಶ್ರೀ ಪ್ರಾರ್ಥನಾ ಮಂದಿರ” ಕಟ್ಟಿಸಿದ್ದಾರೆ. ಕಗ್ಗೆರೆಯಲ್ಲಿರುವ ತೋಂಟದ ಶ್ರೀಸಿದ್ದಲಿಂಗೇಶ್ವರ ಕ್ಷೇತ್ರದ ಗದ್ದುಗೆಯ ಗರ್ಭಗುಡಿ ಹಾಗೂ ಹೊರಗಿನ ಗುಡಿಗೆ ಅಮೃತಶಿಲೆಯನ್ನು ಹಾಕಿಸಿಕೊಟ್ಟಿದ್ದಾರೆ.ಹಿರಿಯ ಶ್ರೀಗಳು 2002ರ ಜೂನ್ 17ರಂದು ತಮ್ಮ ಉತ್ತರಾಧಿಕಾರಿಗಳನ್ನಾಗಿಈಗಿನ ಕಿರಿಯ ಶ್ರೀಗಳಾದ ಶ್ರೀ ಮ.ನಿ.ಪ್ರ.ಸ್ವ. ನಂಜುಂಡ ಮಹಾಸ್ವಾಮಿಗಳನ್ನು ಪಟ್ಟಕ್ಕೆತಂದಿದ್ದು, ಕಿರಿಯ ಶ್ರೀಗಳು ಹಿರಿಯ ಶ್ರೀಗಳ ಮಾರ್ಗದರ್ಶನದಲ್ಲಿ ಶ್ರೀಮಠವನ್ನುಸಮರ್ಥವಾಗಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಸದಾ ಹಸನ್ಮುಖಿಗಳಾಗಿ, ಬಂದ ಭಕ್ತರಕಷ್ಟ-ಸುಖಗಳಿಗೆ ಸ್ಪಂದಿಸುತ್ತಾ ಜನಾನುರಾಗಿಯಾಗಿರುವ ಶ್ರೀಗಳು ಸಮಾಜದ ಒಳಿತಿಗಾಗಿ,ಸಾಮರಸ್ಯಕ್ಕಾಗಿ ಅವಿರತ ಶ್ರಮಿಸುತ್ತಿದ್ದಾರೆ. ಗುರು-ವಿರಕ್ತರೆಂಬ ಬೇದ ತೋರದೇ ಎಲ್ಲಾಗುರುಗಳ ಒಗ್ಗೂಡುವಿಕೆಗೆ ಶ್ರಮಿಸುತ್ತಿರುವ ಶ್ರೀಗಳ ಕಾರ್ಯ ಸ್ತುತ್ಯಾರ್ಹ. ಇವರಸ್ನೇಹಶೀಲತೆಗೆ ಮಣಿದು ನಾಡಿನ ಯಾವುದೇ ಭಾಗಗಳಿಂದ ಬೆಂಗಳೂರಿಗೆ ಬರುವಪೀಠಾಧಿಪತಿಗಳು ಶ್ರೀಮಠದಲ್ಲಿಯೇ ವಾಸ್ತವ್ಯ ಹೂಡುವುದು ವಿಶೇಷ.ಶ್ರೀಮಠದ ಆವರಣದಲ್ಲಿ ಐದು ಗದ್ದುಗೆಗಳಿದ್ದು ಇವುಗಳನ್ನು ನವೀಕರಿಸಲಾಗಿದೆ.ಕಂಚುಗಲ್ ಬಂಡೆ ಮಠದಲ್ಲಿ ಎರಡು ಗದ್ದುಗೆಗಳಿವೆ. ಇವುಗಳನ್ನ ನಿತ್ಯ ಪೂಜೆಗೆಒಳಪಡಿಸಲಾಗಿದ್ದು. ಗುರುಗಳು ನಿತ್ಯ ಯಾವುದಾದರೂ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡುಸಮಾಜದ ಒಳಿತಿಗಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಶ್ರೀಮಠದಲ್ಲಿ ನಿತ್ಯ ಧಾರ್ಮಿಕಆಚರಣೆಗಳೊಂದಿಗೆ ಪ್ರತಿ ಅಮವಾಸ್ಯೆಗಳಲ್ಲಿ ರುದ್ರಾಭಿಷೇಕ, ಶಿವರಾತ್ರಿ, ಕಾರ್ತಿಕಗಳಲ್ಲಿವಿಶೇಷ ಧಾರ್ಮಿಕ ಆಚರಣೆಗಳನ್ನು ಆಚರಿಸಿಕೊಂಡು ಬರಲಾಗುತ್ತಿದೆ.

Swamiji

Swamiji Name :
ಶ್ರೀ ಮ.ನಿ.ಪ್ರ.ಸ್ವ. ಮಲ್ಲಿಕಾರ್ಜುನ ಮಹಾಸ್ವಾಮಿಗಳು
Place :
ಬೆಂಗಳೂರು
Pattadikara :
16-02-1967
Photo :
Swamiji Name :
ಶ್ರೀ ಮ.ನಿ.ಪ್ರ.ಸ್ವ. ನಂಜುಂಡ ಮಹಾಸ್ವಾಮಿಗಳು
Date of Birth :
18-02-1975
Place :
ಬೆಂಗಳೂರು
Pattadikara :
17-6-2002
Photo :

Programs

ಪ್ರತಿ ಅಮವಾಸ್ಯೆಗೆ ರುದ್ರಾಭಿಷೇಕ, ವಿಶೇಷ ಪೂಜೆ, ಶ್ರೀಗಳ ದರ್ಶನ
ಶಿವರಾತ್ರಿಗೆ ಜಾಗರಣೆ, ರುದ್ರಾಭಿಷೇಕ, ವಿಶೇಷ ಪೂಜೆ
ಕಾರ್ತಿಕ ಮಾಸದ ಕೃತಿಕದ ದಿನ ಕಾರ್ತಿಕೋತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು

Photos

Full Address Kannada

ಶ್ರೀ ಗುರುವಣ್ಣ ದೇವರ ಮಠ
ಬಿನ್ನಿಸ್ಟನ್ ಗಾರ್ಡನ್, ಮಾಗಡಿ ರಸ್ತೆ,
ಬೆಂಗಳೂರು-560 023

Map

Near by Places

ಶಿರಸಿ ಸರ್ಕಲ್ - 1 ಕಿ.ಮೀ.
ರೈಲ್ವೆ ಸ್ಟೇಷನ್ - 2 ಕಿ.ಮೀ.
ಕೆಂ.ಬ.ನಿ. - 2 ಕಿ.ಮೀ.

Statistic

158 Views
0 Rating
0 Favorite
1 Share
error: Content is protected !!