ಕರ್ತೃ – ಶ್ರೀ ಷ.ಬ್ರ. ಗುರುಪಾದೇಶ್ವರ ಶಿವಾಚಾರ್ಯ ಸ್ವಾಮಿಗಳು
ವಿಜಯಪುರ ಜಿಲ್ಲೆ ಇಂಡಿ ತಾಲ್ಲೂಕಿನ ಹಾವಿನಾಳ-ಹತ್ತಳ್ಳಿ ಅವಳಿ ಗ್ರಾಮಗಳುತಾಲ್ಲೂಕು ಕೇಂದ್ರದಿಂದ ಸುಮಾರು 35 ಕಿ.ಮೀ. ದೂರದಲ್ಲಿದ್ದು ಈ ಗ್ರಾಮಗಳ ಭಕ್ತರಪ್ರಮುಖ ಧಾರ್ಮಿಕ ಕೇಂದ್ರವಾಗಿರುವ ಶ್ರೀ ಗುರುಪಾದೇಶ್ವರ ಹಿರೇಮಠವು ಹತ್ತಳ್ಳಿಗ್ರಾಮದಲ್ಲಿ ಅಸ್ತಿತ್ವದಲ್ಲಿದ್ದು ಶ್ರೀ ಷ.ಬ್ರ. ಗುರುಪಾದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳಿಂದಸ್ಥಾಪಿತವಾಗಿದೆ. ಶ್ರೀಮಠವು ತನ್ನ ಧಾರ್ಮಿಕ ಆಚರಣೆಗಳ ಮೂಲಕ ಈ ಭಾಗದ ಜನರಲ್ಲಿಧಾರ್ಮಿಕ ಪ್ರಜ್ಞೆ ಯನ್ನು ಮೂಡಿಸುವಲ್ಲಿ ಯಶಸ್ವಿಯಾಗಿದೆ.ಶ್ರೀ ಗುರುಪಾದೇಶ್ವರ ಹಿರೇಮಠವು ಶ್ರೀಶೈಲ ಶಾಖಾ ಮಠವಾಗಿ ಪುತ್ರವರ್ಗದಪರಂಪರೆಯಲ್ಲಿ ಬೆಳೆದುಬಂದಿದೆ. ಕರ್ತೃಗುರುಗಳಾದ ಶ್ರೀ ಷ.ಬ್ರ. ಗುರುಪಾದೇಶ್ವರಶಿವಾಚಾರ್ಯ ಮಹಾಸ್ವಾಮಿಗಳು ತಪೋನಿಷ್ಠರಾಗಿ ಭಕ್ತರ ಸಹಕಾರದೊಂದಿಗೆಶ್ರೀಮಠವನ್ನು ಸ್ಥಾಪಿಸಿದ್ದು ಭಕ್ತರಿಗೆ ಸನ್ಮಾರ್ಗ ತೋರಿದ್ದಾರೆ. ಶ್ರೀಮಠಕ್ಕೆ ಸಂಬಂಧಿಸಿದಂತೆಧಾರ್ಮಿಕ ಕಾರ್ಯಕ್ರಮಗಳಲ್ಲಿ ಈ ಎರಡೂ ಗ್ರಾಮಗಳ ಭಕ್ತರು ಪಾˉÉ್ಗೂಂಡು ಶ್ರೀಗಳದರ್ಶನ ಪಡೆಯುತ್ತಿದ್ದರು.ಪುರಾತನ ಕಾಲದ ಶ್ರೀಮಠದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಳುದೊರೆಯುವುದಿಲ್ಲ. ಅದಕ್ಕೆ ಕಾರಣ ಶ್ರೀಮಠವು ಬಹುಶಃ ಆಗಾಗ ಖಾಲಿ ಉಳಿದಿರುವುದುಹಾಗೂ ಪರಂಪರೆಯ ಎˉÁ್ಲ ಗುರುಗಳು ಕರ್ತೃಗುರುಗಳ ಹೆಸರನ್ನೇ ಅಭಿದಾನಪಡೆದಿರುವುದು. ಹಿಂದಿನ ಶ್ರೀಗಳಾದ ಲಿಂ. ಶ್ರೀ ಷ.ಬ್ರ. ಗುರುಪಾದೇಶ್ವರ ಶಿವಾಚಾರ್ಯರುಪರಂಪರೆಯ ಗುರುಗಳ ಹಾದಿಯಲ್ಲಿ ಶ್ರೀಮಠವನ್ನು ಮುನ್ನಡೆಸಿ ಲಿಂಗೈಕ್ಯರಾಗಿದ್ದಾರೆ.ಈಗಿನ ಶ್ರೀಗಳಾದ ಶ್ರೀ.ಷ.ಬ್ರ ಗುರುಪಾದೇಶ್ವರ ಶಿವಾಚಾರ್ಯ ಸ್ವಾಮಿಗಳು ಶ್ರೀಮಠಕ್ಕೆ ಪಟ್ಟಾಧಿಕಾರಗೊಂಡು ಬಂದಂದಿನಿಂದ ಶ್ರೀಮಠದ ಧಾರ್ಮಿಕ ಆಚರಣೆಗಳನ್ನುಚುರುಕುಗೊಳಿಸಿದ್ದು ಭಕ್ತರ ಸಹಕಾರದೊಂದಿಗೆ ಶ್ರೀಮಠದ ಅಭಿವೃದ್ಧಿ ಕಾರ್ಯಗಳಿಗೆಕಾರ್ಯಯೋಜನೆಯನ್ನು ರೂಪಿಸಿಕೊಂಡು ಆ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ.ಶ್ರೀಮಠದ ವತಿಯಿಂದ ಪ್ರಾಥಮಿಕ ಶಾˉÉಯನ್ನು ಆರಂಭಿಸˉÁಗಿದ್ದು ಈ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ.
Swamiji
Swamiji Name :
ಶ್ರೀ ಷ.ಬ್ರ. ಗುರುಪಾದೇಶ್ವರ ಶಿವಾಚಾರ್ಯ ಸ್ವಾಮಿಗಳು
Date of Birth :
1-6-1966
Place :
ಇಬ್ರಾಂಪುರ, ವಿಜಯಪುರ ತಾ||
Pattadikara :
15-5-1985
Photo :
Programs
ಭಾದ್ರಪದ ಮಾಸ ದಶಮಿಗೆ ಲಿಂ. ಶ್ರೀ ಷ.ಬ್ರ. ಗುರುಪಾದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ಪುಣ್ಯಾರಾಧನೆ. 3 ವರ್ಷಕ್ಕೊಮ್ಮೆ ಮಠದಲ್ಲಿ ಪುರಾಣ ಪ್ರವಚನ ಹಾಗೂ ಸಾಮೂಹಿಕ ವಿವಾಹಗಳು ಮತ್ತು ಧಾರ್ಮಿಕ ಕಾರ್ಯಕ್ರಮಗಳು.