ವಿಜಯಪುರ ಜಿˉÉ್ಲ ಇಂಡಿ ತಾಲ್ಲೂಕಿನ ಕಾತ್ರಾಳ ಗ್ರಾಮವು ತಾಲ್ಲೂಕುಕೇಂದ್ರದಿಂದ 34 ಕಿ.ಮೀ. ದೂರದಲ್ಲಿದ್ದು ಈ ಗ್ರಾಮದಿಂದ ಸುಮಾರು ಒಂದು ಕಿ.ಮೀ.ಅಂತರದಲ್ಲಿ 25 ವರ್ಷಗಳ ಹಿಂದೆ ಪೂಜ್ಯ ಶ್ರೀ ಯೋಗಾನಂದ ಸ್ವಾಮಿಗಳಿಂದಸ್ಥಾಪಿತಗೊಂಡಿರುವ ವಿಜಯಪುರದ ಶ್ರೀ ಜ್ಞಾನಯೋಗಾಶ್ರಮದ ಶಾಖೆಯಾಗಿರುವ ಶ್ರೀಗುರುದೇವ ಆಶ್ರಮವು ಅಸ್ತಿತ್ವದಲ್ಲಿದ್ದು ತನ್ನ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಈ ಭಾಗದಲ್ಲಿ ಹೆಸರು ಮಾಡಿದೆ.ವಿಜಯಪುರ ಜ್ಞಾನಯೋಗಾಶ್ರಮವು ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳಿಂದಸ್ಥಾಪಿಸಲ್ಪಟ್ಟಿದ್ದು ತದನಂತರ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳಿಂದ ಮುಂದುವರೆದಿದ್ದುಜ್ಞಾನಯೋಗಾಶ್ರಮದ ಶಿಷ್ಯರ ಬಳಗ ಬಹಳ ದೊಡ್ಡ ಪ್ರಮಾಣದಲ್ಲಿದೆ. ಅಂತಹ ಶ್ರೀಮಲ್ಲಿಕಾರ್ಜುನ ಮಹಾಸ್ವಾಮಿಗಳ ಪ್ರಮುಖ ಶಿಷ್ಯರಲ್ಲಿ ಒಬ್ಬರು ಪೂಜ್ಯ ಶ್ರೀ ಯೋಗಾನಂದಸ್ವಾಮಿಗಳು.ಪೂಜ್ಯ ಶ್ರೀ ಯೋಗಾನಂದ ಸ್ವಾಮಿಗಳು ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳಕೃಪಾಶೀರ್ವಾದ ಬಲದಿಂದ ಹಾಗೂ ಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ಕಾತ್ರಾಳ ಗ್ರಾಮದ ಹೊರವಲಯದಲ್ಲಿ ಸುಮಾರು 1988-89ರಲ್ಲಿ ಶ್ರೀಗುರುದೇವ ಆಶ್ರಮವನ್ನು ಸ್ಥಾಪಿಸಿ ಈ ಭಾಗದ ಜನರಲ್ಲಿ ಧಾರ್ಮಿಕ ಪ್ರಜ್ಞೆಯನ್ನುಮೂಡಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.ಶ್ರೀಗಳು ಧಾರ್ಮಿಕ ಆಚರಣೆಗಳ ಜೊತೆಯಲ್ಲಿ ಸಾಮಾಜಿಕ ಕಾರ್ಯಕ್ರಮಗಳಲ್ಲಿಭಾಗವಹಿಸುತ್ತಾ ಸಾಮಾಜಿಕ ಸಾಮರಸ್ಯ ಮೂಡಿಸುವಲ್ಲಿ ಶ್ರಮಿಸುತ್ತಿದ್ದಾರೆ. ಶ್ರೀಮಠದಲ್ಲಿ ಪ್ರತಿಹುಣ್ಣಿಮೆಗೆ ‘ಸಹ ಭೋಜನ’ ಎಂಬ ಕಾರ್ಯಕ್ರಮ ನಡೆಸುತ್ತಿದ್ದು, ಶ್ರಾವಣ ಮಾಸದಕೊನೆಯ ದಿನ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ನಡೆಸˉÁಗುತ್ತಿದೆ. ಹಾಗೂ ಪ್ರತಿವರ್ಷ ಡಿಸೆಂಬರ್ 31 ಮತ್ತು ಜನವರಿ 1, 2ನೇ ತಾರೀಖು ವಾರ್ಷಿಕೋತ್ಸವ ಮತ್ತುಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸˉÁಗುತ್ತಿದೆ.
Swamiji
Swamiji Name :
ಪೂಜ್ಯ ಶ್ರೀ ಯೋಗಾನಂದ ಸ್ವಾಮಿಗಳು
Date of Birth :
1-6-1968
Place :
ಚಡಚಣ, ಇಂಡಿ ತಾ||
Photo :
Programs
ಪ್ರತಿ ಹುಣ್ಣಿಮೆಗೆ 'ಸಹಭೋಜನ'. ಶ್ರಾವಣ ಮಾಸದಲ್ಲಿ ಕೊನೆಯ ದಿನ ವಿಶೇಷ ಪೂಜಾ ಕಾರ್ಯಕ್ರಮಗಳು.
ಪ್ರತಿ ವರ್ಷ ಡಿಸೆಂಬರ್ 31, ಜನವರಿ 1, ಮತ್ತು 2ನೇ ತಾರೀಖುಗಳಂದು ವಾರ್ಷಿಕೋತ್ಸವ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು.
Full Address Kannada
ಶ್ರೀ ಗುರುದೇವ ಆಶ್ರಮ ಕಾತ್ರಾಳ,
ಜಿಗಜಿವಣಿ ಪೋಸ್ಟ್ - 586 204
ಇಂಡಿ ತಾ||, ವಿಜಯಪುರ ಜಿ||