Shree Guru Marulasiddeshwara Swamy Kshetra

Shree Guru Marulasiddeshwara Swamy Kshetra

ಶ್ರೀ ಗುರು ಮರುಳಸಿದ್ದೇಶ್ವರ ಸ್ವಾಮಿ ಕ್ಷೇತ್ರ - ಜಿ.ಮಾದಾಪುರ

Average Reviews

Description

ಶ್ರೀ ಗುರು ಮರುಳಸಿದ್ದೇಶ್ವರ ಸ್ವಾಮಿ ಕ್ಷೇತ್ರ – ಜಿ.ಮಾದಾಪುರ

ಕಡೂರು ತಾಲ್ಲೂಕಿನ ಜಿ.ಮಾದಾಪುರ ಗ್ರಾಮದ ಹೊರವಲಯದಲ್ಲಿ ವೇದಾವತಿನದಿ ತಟದಲ್ಲಿರುವ ಶ್ರೀ ಗುರು ಮರುಳ ಸಿದ್ದೇಶ್ವರಸ್ವಾಮಿ ಕ್ಷೇತ್ರವು ಬಹಳ ಪ್ರಾಚೀನವು ಹಾಗೂಇತಿಹಾಸ ಪ್ರಸಿದ್ದ ಪುಣ್ಯಕ್ಷೇತ್ರವೂ ಆಗಿದೆ. ಶ್ರೀ ಗುರುವು ನೆಲೆಸಿದ ಕ್ಷೇತ್ರದಲ್ಲಿ ನಂಬಿದ ಭಕ್ತರಾದಶರಣ, ಶರಣೆಯರ ಕಷ್ಟ ಕಾರ್ಪಣ್ಯ ಸಂಕಷ್ಟಗಳನ್ನು ಪರಿಹರಿಸುತ್ತಾ, ಸಂಕಷ್ಟ ನಿವಾರಕ”ಮರುಳಸಿದ್ದ”ನೆಂದೇ ಭಕ್ತರ ಮನಸ್ಸಿನಲ್ಲಿ ನೆಲೆನಿಂತಿದ್ದಾನೆ.ಕಡೂರು ತಾಲ್ಲೂಕಿನ ನಿಡುವಳ್ಳಿಯಲ್ಲಿ ಜನಿಸಿದ ಶ್ರೀ ಮರುಳಸಿದ್ದೇಶ್ವರ ಸ್ವಾಮಿಗಳುಬಾಲ್ಯದಲ್ಲೇ ಆಧ್ಯಾತ್ಮವನ್ನು ಮೈಗೂಡಿಸಿಕೊಂಡು ಪ್ರೌಡಾವಸ್ಥೆಗೆ ಬಂದ ಮೇಲೆಲೋಕಸಂಚಾರ ಕೈಗೊಂಡು ನಾಡಲ್ಲೆಲ್ಲಾ ಸಂಚರಿಸಿದರು. ಗುರುಗಳು ಅನುಷ್ಟಾನಗೊಂಡಸ್ಥಳಗಳೆಲ್ಲಾ ಜಾಗೃತ ಸ್ಥಳಗಳಾಗಿ ರೂಪುಗೊಂಡಿವೆ. ಚಿಕ್ಕಮಗಳೂರು ಜಿಲ್ಲೆ ತರೀಕೆರೆತಾಲ್ಲೂಕಿನ ಬುಕ್ಕಾಂಬುದಿಯ ಬೆಟ್ಟದ ಮೇಲೆ ಅನುಷ್ಟಾನಗೊಂಡು ನಂತರ ಪಕ್ಕದನಾರಣಾಪುರ ಗ್ರಾಮದಲ್ಲಿ ಪವಾಡ ತೋರಿದ್ದಾರೆ.ನಾರಣಾಪುರ ಗ್ರಾಮದಿಂದ ಮುಂದುವರೆದು ಅಲ್ಲಲ್ಲಿ ಸಂಚರಿಸುತ್ತಾ ಕೊನೆಗೆಕಡೂರು ತಾಲ್ಲೂಕಿನ ಮಾದಾಪುರಕ್ಕೆ ಬಂದು ವೇದಾನದಿ ದಡದಲ್ಲಿ ಅನುಷ್ಠಾನ ಕುಳಿತು ಈಪ್ರಾಂತ್ಯವನ್ನು ತಪೆÇೀಭೂಮಿಯನ್ನಾಗಿ ಮಾಡಿದ್ದಾರೆ. ಶ್ರೀ ಮರುಳ ಸಿದ್ದೇಶ್ವರ ಸ್ವಾಮಿಗಳುಅನುಷ್ಠಾನ ಕುಳಿತ ಜಾಗೃತ ಸ್ಥಳದಲ್ಲಿ ಮಠವನ್ನು ಕಟ್ಟಿ ತೋರುಗದ್ದುಗೆಯನ್ನುಸ್ಥಾಪಿಸಲಾಗಿದ್ದು ನಿತ್ಯ ಆಚರಣೆಗಳು ನಡೆಯುತ್ತಿವೆ.ಪ್ರಸ್ತುತ ಶ್ರೀಮಠವನ್ನು ಶ್ರೀ ಗುರು ಮರುಳಸಿದ್ದೇಶ್ವರ ಸ್ವಾಮಿ ವೀರಶೈವಸೇವಾಭಿವೃದ್ದಿ ಟ್ರಸ್ಟ್ (ರಿ.) ವಿಶ್ವಸ್ಥ ಮಂಡಳಿಯವರು ಭಕ್ತರ ಸಹಕಾರದೊಂದಿಗೆಮುನ್ನಡೆಸಿಕೊಂಡು ಬರುತ್ತಿದ್ದಾರೆ. ಇತ್ತೀಚೆಗೆ 2012ರ ಏಪ್ರಿಲ್‍ನಲ್ಲಿ ಶ್ರೀ ಗುರುಮರುಳಸಿದ್ದೇಶ್ವರಸ್ವಾಮಿ, ಶ್ರೀ ನಂದಿಬಸವೇಶ್ವರ ಸ್ವಾಮಿ ಮತ್ತು ಶ್ರೀ ಜಟ್ಯಪ್ಪ ಸ್ವಾಮಿಯವರನೂತನ ದೇವಾಲಯಗಳನ್ನು ಅಭಿವೃದ್ದಿಪಡಿಸಿದ್ದು ಆ ಸಮಯದಲ್ಲಿ ಭಾವೈಕ್ಯತಾ ಧಾರ್ಮಿಕಸಮಾರಂಭವನ್ನು ನಡೆಸಲಾಗಿದೆ.

Swamiji

Swamiji Name :
ಶ್ರೀ ಗುರು ಮರುಳಸಿದ್ದೇಶ್ವರ ಸ್ವಾಮಿ ಸುಕ್ಷೇತ್ರ
Photo :

Programs

ಪ್ರತಿ ದಿನ ರುದ್ರಾಭಿಷೇಕ ಹಾಗೂ ತ್ರಿಕಾಲ ಪೂಜೆ
ಕಾರ್ತಿಕ ಮಾಸದಲ್ಲಿ ಕಾರ್ತಿಕೋತ್ಸವ

Photos

Full Address Kannada

ಶ್ರೀ ಗುರುಮರುಳಸಿದ್ದೇಶ್ವರ ಸ್ವಾಮಿ ಕ್ಷೇತ್ರ
ಜಿ.ಮಾದಾಪುರ, ಗರ್ಜಿ ಪೋಸ್ಟ್ - 577 140
ಕಡೂರು ತಾ||, ಚಿಕ್ಕಮಗಳೂರು ಜಿಲ್ಲೆ

Map

Near by Places

ಮಾದಾಪುರ - 1 ಕಿ.ಮೀ.
ಯಗಟಿ ಸುಕ್ಷೇತ್ರ - 8 ಕಿ.ಮೀ.
ಕಡೂರು - 15 ಕಿ.ಮೀ.

Statistic

88 Views
0 Rating
0 Favorite
0 Share
error: Content is protected !!