Shree Guru Karibasaveshwara Swami Gadduge Matha
Claimed
ಶ್ರೀ ಗುರು ಕರಿಬಸವೇಶ್ವರ ಸ್ವಾಮಿ ಗದ್ದುಗೆ ಮಠ
Average Reviews
Description
ಶ್ರೀ ಗುರು ಕರಿಬಸವೇಶ್ವರ ಸ್ವಾಮಿ ಗದ್ದುಗೆ ಮಠ
ಪೂಜ್ಯ ಶ್ರೀ ಪರಮೇಶ್ವರ ಸ್ವಾಮಿಗಳು
ಚನ್ನಗಿರಿ ತಾಲ್ಲೂಕು ಕರೇಕಟ್ಟೆಯಲ್ಲಿ ತಂದೆ ಚನ್ನಯ್ಯನವರು ಹಾಗೂ ತಾಯಿಚಂದ್ರಮ್ಮನವರ ಮಗನಾಗಿ 1970ರಲ್ಲಿ ಜನಿಸಿದ ಶ್ರೀ ಪರಮೇಶ್ವರ ಸ್ವಾಮಿಗಳ ತಂದೆತಾಯಿಗಳ ಇಚ್ಛೆಯಂತೆ ಸಂಸಾರಸ್ಥರಾದರು. ಆದರೂ ಶ್ರೀಗಳ ಮನವು ಆಧ್ಯಾತ್ಮಸಾಧನೆಯೆಡೆಗೆ ತುಡಿಯುತ್ತಿತ್ತು. ಹೀಗಿರಲು ಮಡದಿಯೂ ಕೂಡ ಪತಿಯ ಇಚ್ಛೆಗೆಅನುಗುಣವಾಗಿ ನಡೆದುಕೊಳ್ಳತೊಡಗಿದರು.ಶ್ರೀಗಳು ಅಲ್ಲಿಂದ ಮುಂದೆ ದಾವಣಗೆರೆಗೆ ಬಂದು ನೆಲೆಸಿ ಶ್ರೀ ಕರಿಬಸವೇಶ್ವರರಪವಾಡಗಳನ್ನು ಜನರಿಗೆ ತಿಳಿಸಿಕೊಡುತ್ತಾ, ಅಜ್ಜಯ್ಯನವರ ಹೇಳಿಕೆಗಳನ್ನು ಭಕ್ತರಿಗೆತಲುಪಿಸುತ್ತಾ ಸಾಗಿದರು.ಈಗ್ಗೆ ನಾಲ್ಕು ವರ್ಷಗಳ ಹಿಂದೆ ಭಕ್ತರು ಶ್ರೀಗಳ ಹತ್ತಿರ ಮಠದ ಸ್ಥಾಪನೆ ಬಗ್ಗೆಚರ್ಚೆ ಮಾಡಿ, ದಾವಣಗೆರೆ ಹೊರವಲಯದ ಯರಗುಂಟೆ ಸಮೀಪದಲ್ಲಿ ಮಠಕ್ಕೆ ಅಡಿಗಲ್ಲುಹಾಕಿದರು. 2011 ರ ನವೆಂಬರ್ 22 ರಂದು ಶ್ರೀ ಮಠದ ಸ್ಥಾಪನೆಯಾಯಿತು. ಅಲ್ಲಿಂದಪ್ರತಿವರ್ಷ ನವೆಂಬರ್ 22 ರಂದು ಶ್ರೀ ಮಠದ ರಥೋತ್ಸವವನ್ನು ಶ್ರೀಗಳು ಭಕ್ತರಸಹಕಾರದಿಂದ ನಡೆಸಿಕೊಡುತ್ತಿದ್ದಾರೆ.ಶ್ರೀ ಮಠದಲ್ಲಿ ಪ್ರತಿದಿನ ಪೂಜೆ ಪುನಸ್ಕಾರಗಳು ಹಾಗೂ ಪ್ರತಿ ಸೋಮವಾರ,ಗುರುವಾರ ಅಮವಾಸ್ಯೆ ಮತ್ತು ಹುಣ್ಣಿಮೆಗೆ ಶ್ರೀ ಅಜ್ಜಯ್ಯನವರ ಅಪ್ಪಣೆ ನಡೆಯುತ್ತದೆ.ಹಾಗೂ ಚೈತ್ರ ಮಾಸದಲ್ಲಿ 9 ದಿನಗಳ ಕಾಲ ಶರಣರ, ಮಹಾತ್ಮರ ಪುರಾಣ-ಪ್ರವಚನಗಳನ್ನುಶ್ರೀಗಳು ನಡೆಸಿಕೊಡುತ್ತಾ ಮಠವನ್ನು ಮುನ್ನಡೆಸುತ್ತಿದ್ದಾರೆ.
Swamiji
Swamiji Name :
ಪೂಜ್ಯ ಶ್ರೀ ಪರಮೇಶ್ವರ ಸ್ವಾಮಿಗಳು
Date of Birth :
9-7-1970
Place :
ಕರೀಕಟ್ಟೆ, ಚನ್ನಗಿರಿ ತಾ.
Programs
ಪ್ರತಿ ಸೋಮವಾರ, ಗುರುವಾರ, ಅಮವಾಸ್ಯೆ ಹಾಗೂ ಹುಣ್ಣಿಮೆಗೆ ಶ್ರೀ ಅಜ್ಜಯ್ಯನವರಿಂದ ಅಪ್ಪಣೆ ಹಾಗೂ ರುದ್ರಾಭಿಷೇಕ.
ಶ್ರಾವಣ ಮಾಸದಲ್ಲಿ 3ನೇ ಸೋಮವಾರ ಶ್ರೀ ಗುರು ಕರಿಬಸವೇಶ್ವರ ಪುಣ್ಯಾರಾಧನೆ.
ಚೈತ್ರ ಮಾಸದಲ್ಲಿ 9 ದಿನಗಳ ಕಾಲ ಮಹಾತ್ಮರ ಪುರಾಣ ಪ್ರವಚನ ನವೆಂಬರ್ 22ಕ್ಕೆ ರಥೋತ್ಸವ ಹಾಗೂ ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳು.
Full Address Kannada
ಶ್ರೀ ಗುರು ಕರಿಬಸವೇಶ್ವರ ಸ್ವಾಮಿ ಗದ್ದುಗೆ ಮಠ ಅಶೋಕ ನಗರ,
ಯರಗುಂಟೆ ದಾವಣಗೆರೆ - 577 006.