ಶ್ರೀ ಗುರು ಕಲ್ಮುರುಡೇಶ್ವರ ಸ್ವಾಮಿ ಸುಕ್ಷೇತ್ರ – ಸಖರಾಯಪಟ್ಟಣಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕಿನ ಸಖರಾಯಪಟ್ಟಣವು ತಾಲ್ಲೂಕುಕೇಂದ್ರದಿಂದ 23 ಕಿ.ಮೀ. ದೂರದಲ್ಲಿದ್ದು ಈ ಗ್ರಾಮದ ಹೊರವಲಯದಲ್ಲಿ ವೇದಾವತಿನದಿಯ ದಡದ ಬಿಲ್ವಪತ್ರೆ ವನದಲ್ಲಿ ಶ್ರೀ ಕಲ್ಮುರುಡೇಶ್ವರ ಮಠವು ಸ್ಥಾಪನೆಯಾಗಿದೆ.ಸಿಂದಿಗೆರೆಯ ಸಮೀಪದ ಕರಡಿಗವಿಯಲ್ಲಿ ಅನುಷ್ಠಾನ ನಿರತರಾಗಿದ್ದು ಶ್ರೀ ಕಲ್ಮುರುಡೇಶ್ವರರುಹುಲಿಕೆರೆ ಭಕ್ತರ ಒತ್ತಾಯಕ್ಕೆ ಮಣಿದು ಹುಲಿಕೆರೆಗೆ ಬಂದು ನೆಲೆಸಿ ನಂತರಸಖರಾಯಪಟ್ಟಣದ ಈ ಪ್ರಶಾಂತ ಸ್ಥಳದಲ್ಲಿ ಅನುಷ್ಠಾನಗೊಂಡು ನಿರಂತರವಾಗಿ ಭಕ್ತರನ್ನುಸನ್ಮಾರ್ಗದತ್ತ ಮುನ್ನಡೆಸುತ್ತಿದ್ದರು. ಶ್ರೀಗಳು ಲಿಂಗೈಕ್ಯರಾದ ನಂತರ ಅವರ ಗದ್ದುಗೆಯಮೇಲೆ ಶ್ರೀ ಕಲ್ಮುರುಡೇಶ್ವರ ಮಠವು ಸ್ಥಾಪನೆಯಾಗಿ ಧರ್ಮಜಾಗೃತಿ ಸ್ಥಳವಾಗಿ ಪ್ರಸಿದ್ದಿಪಡೆದಿದೆ.ಶ್ರೀ ಕಲ್ಮುರುಡೇಶ್ವರ ಮಠವು ಪ್ರಸ್ತುತ ಶ್ರೀ ಕಲ್ಮುರುಡೇಶ್ವರ ದತ್ತಿ ಸಂಸ್ಥೆಯಮೂಲಕ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಧರ್ಮ ಪ್ರಕಾಶಅರಳಗುಪ್ಪೆ ಶ್ರೀ ಚಂದ್ರೇಗೌಡರು ಶ್ರೀ ಕಲ್ಮುರುಡೇಶ್ವರ ಪೀಠದ ದರ್ಶನ ಪಡೆದು ಮಠದಜೀರ್ಣೋದ್ದಾರ ಕಾರ್ಯ ಕೈಗೊಂಡರು. ತದನಂತರ ಮಠದ ಕಾರ್ಯಕ್ರಮಗಳುನಿರಂತರವಾಗಿ ನಡೆಯಬೇಕೆಂಬ ಉದ್ದೇಶದಿಂದ ದತ್ತಿ ಸಮಿತಿಯನ್ನು ಸ್ಥಾಪಿಸಿದರು.ಅಂದಿನಿಂದ ಶ್ರೀಮಠವು ದತ್ತಿ ಸಮಿತಿ ಮೂಲಕ ನಿರ್ವಹಿಸಲ್ಪಡುತ್ತಿದೆ.ಶ್ರೀ ಕಲ್ಮುರುಡೇಶ್ವರ ದತ್ತಿ ಸಂಸ್ಥೆಯು ಭಕ್ತರ ಸಹಕಾರದೊಂದಿಗೆ ಅನೇಕ ಅಭಿವೃದ್ದಿಕಾರ್ಯಗಳನ್ನು ಹಮ್ಮಿಕೊಂಡು ಆ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ಅಪಾರಭಕ್ತಬಳಗವನ್ನು ಹೊಂದಿರುವ ಶ್ರೀ ಮಠದಲ್ಲಿ ನಿತ್ಯ ಧಾರ್ಮಿಕ ಆಚರಣೆಗಳು ನಡೆಯುತ್ತಿದ್ದುಶ್ರಾವಣ, ಕಾರ್ತಿಕ ಮಾಸಗಳಲ್ಲಿ ನಿತ್ಯ ವಿಶೇಷ ಧಾರ್ಮಿಕ ಆಚರಣೆಗಳು ಆಚರಿಸಲ್ಪಡುತ್ತವೆ.
Programs
ಪ್ರತಿ ಅಮವಾಸ್ಯೆ, ಹುಣ್ಣಿಮೆಗಳಲ್ಲಿ ವಿಶೇಷ ಪೂಜೆ
ಶ್ರಾವಣ ಮಾಸದಲ್ಲಿ ವಿಶೇಷ ಪೂಜೆ
ಕಾರ್ತಿಕ ಮಾಸದಲ್ಲಿ ದೀಪೆÇೀತ್ಸವ
Photos
Full Address Kannada
ಶ್ರೀ ಗುರು ಕಲ್ಮುರುಡೇಶ್ವರ ಸ್ವಾಮಿ
ಸುಕ್ಷೇತ್ರ ಸಖರಾಯಪಟ್ಟಣ - 577 135
ಕಡೂರು ತಾ||, ಚಿಕ್ಕಮಗಳೂರು ಜಿಲ್ಲೆ