ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಎಂ.ಗುಡದೂರು ಗ್ರಾಮವು ತಾಲ್ಲೂಕುಕೇಂದ್ರದಿಂದ 15 ಕಿ.ಮೀ. ದೂರದಲ್ಲಿದ್ದು ಈ ಗ್ರಾಮದಲ್ಲಿ ಶ್ರೀ ದೊಡ್ಡ ಬಸವಾರ್ಯರಿಂದಸುಮಾರು 165 ವರ್ಷಗಳ ಹಿಂದೆ ಸ್ಥಾಪಿತಗೊಂಡಿರುವ ಶ್ರೀ ಗುರುದೊಡ್ಡಬಸವೇಶ್ವರಮಠವು ಅಸ್ತಿತ್ವದಲ್ಲಿದ್ದು ತನ್ನ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಈ ಭಾಗದ ಪ್ರಮುಖಧಾರ್ಮಿಕ ಕೇಂದ್ರವಾಗಿ ಕಂಗೊಳಿಸುತ್ತಿದೆ.ಕರ್ತೃಗುರುಗಳಾದ ಪರಮಪೂಜ್ಯ ಶ್ರೀ ದೊಡ್ಡಬಸವಾರ್ಯ ತಾತನವರೆಂದರೆ ಈಭಾಗದಲ್ಲಿ ದೊಡ್ಡ ಹೆಸರು. ಶ್ರೀಗಳು ಸಂಸಾರಿಗಳಾಗಿದ್ದುಕೊಂಡು ಕೂಡ ಅದರಬಾಹುಬಂಧನಕ್ಕೆ ಸಿಲುಕದೆ ತಮ್ಮ ಆಧ್ಯಾತ್ಮ ಸಾಧನೆಯಿಂದ ಹಾಗೂ ಸದಾ ಸಂಚಾರಮಾಡುತ್ತಾ ಭಕ್ತರ ಸಮಸ್ಯೆಗಳಿಗೆ ಉತ್ತರವಾದವರು. ಶ್ರೀಗಳು ಮಹಾಮಹಿಮ ಪುರುಷರಾಗಿದ್ದು ಮೊದಲು ಎಂ.ಗುಡದೂರಿನಲ್ಲಿ ಶ್ರೀಮಠವನ್ನು ಸ್ಥಾಪಿಸಿ ತದನಂತರ ಬಾಗಲಕೋಟೆಜಿಲ್ಲೆಯ ಕಂಬಳಿಹಾಳ ಮತ್ತು ರಾಯಚೂರು ಜಿಲ್ಲೆಯ ಸಜ್ಜಲಗುಡ್ಡಗಳಲ್ಲಿ ಮಠಗಳನ್ನುಸ್ಥಾಪಿಸಿ ಈ ಎಲ್ಲಾ ಕ್ಷೇತ್ರಗಳನ್ನು ಪುಣ್ಯಕ್ಷೇತ್ರಗಳನ್ನಾಗಿ ಮಾಡಿದರು.ಕರ್ತೃ ಶ್ರೀ ಗುರು ದೊಡ್ಡ ಬಸವಾರ್ಯ ತಾತನವರು ಎಡಗುಂಡಿಯಲ್ಲಿ ಜನಿಸಿ ಶ್ರೀಬಸವಂತ ಶಿವಯೋಗಿವರ್ಯರಲ್ಲಿ ಆಧ್ಯಾತ್ಮದ ಸವಿಯನ್ನುಂಡು ಪಳಗಿದವರು. ಶ್ರೀಗಳುಗುಡದೂರು ಮಠವನ್ನು ಸ್ಥಾಪಿಸಿ ಧಾರ್ಮಿಕ ಆಚರಣೆಗಳು ಮತ್ತು ತಮ್ಮ ನಿತ್ಯ ದಾಸೋಹಕ್ರಮಗಳಿಂದಾಗಿ ಈ ಭಾಗದಲ್ಲಿ ಹೆಚ್ಚು ಪ್ರಚಲಿತಕ್ಕೆ ಬಂದರು. ಶ್ರೀಗಳು ಗುಡದೂರಿನಲ್ಲಿಸಂಗಮೇಶ್ವರ, ಹಂಚಿನಾಳದಲ್ಲಿ ನವಲಿಂಗಗಳು, ಸಾಸ್ವಿಹಾಳದಲ್ಲಿ ರಾಮಲಿಂಗೇಶ್ವರ (ಕಾಶಿ),ಕಂಬಳಿಹಾಳದಲ್ಲಿ ಶರಣಬಸವೇಶ್ವರ, ಸಜ್ಜಲಗುಡ್ಡದಲ್ಲಿ ಶಾಂತಲಿಂಗೇಶ್ವರ ಲಿಂಗಗಳನ್ನುಪಂಚಮಠಗಳಲ್ಲಿ ಸ್ಥಾಪಿಸಿ ಈ ಭಾಗದ ಜನರಿಗೆ ಎಲ್ಲಾ ಪುಣ್ಯಕ್ಷೇತ್ರಗಳ ದರ್ಶನವನ್ನುಮಾಡಿಸಿದವರು.ಕರ್ತೃಗುರುಗಳು ಮುದೇನೂರಿನ ಯಮುನಮ್ಮಳನ್ನು ಲಿಂಗದೀಕ್ಷಾ ಸಂಸ್ಕಾರಮಾಡಿ ತಪದ ಶಕ್ತಿ ದಾರೆಯೆರೆದು ಶರಣಮ್ಮ ಎಂಬ ಅಭಿದಾನ ಕೊಟ್ಟು ಜಗದಜಗನ್ಮಾತೆಯಾಗಿ ಬೆಳಗೆಂದು ಹರಸಿದರು. ಆ ಶರಣಮ್ಮ ತಾಯಿಯೇ ಕಂಬಳಿಹಾಳ ಮತ್ತುಸಜ್ಜಲಗುಡ್ಡಗಳನ್ನು ಸುಕ್ಷೇತ್ರಗಳನ್ನಾಗಿ ಕಂಗೊಳಿಸುವಂತೆ ಮಾಡಿದ ಮಹಾಮಾತೆಯವರು.ಹಾಗೆಯೇ ಗುರುಗಳು ಸಂಸಾರದ ಬಂಧನದಲ್ಲಿ ಸಿಲುಕಿದ್ದ ಬಾಲಪ್ಪ ಅಜ್ಜನಿಗೆ ಸಂಸ್ಕಾರನೀಡಿ, ಆಶೀರ್ವದಿಸಿ ಬಂಧನಮುಕ್ತರನ್ನಾಗಿ ಮಾಡಿದವರು.ಕರ್ತೃಗುರುಗಳ ನಂತರ ಬಂದವರು 2ನೇ ಪೀಠಾಧಿಪತಿಗಳಾದ ಪರಮಪೂಜ್ಯಶ್ರೀ ಬಸವಾರ್ಯ ತಾತನವರು. ಗುರುಗಳು ಕರ್ತೃಗುರುಗಳ ಹಾದಿಯಲ್ಲಿಯೇ ಶ್ರೀಮಠದಲ್ಲಿಧಾರ್ಮಿಕ ಕಾರ್ಯಗಳ ಜೊತೆಯಲ್ಲಿ ಸಾಮಾಜಿಕವಾಗಿಯೂ ಶ್ರೀಮಠವು ಪ್ರಸಿದ್ಧಿಗೊಳ್ಳಲು ಮಠಮಾರ್ಗದರ್ಶನ43ಶ್ರಮವಹಿಸಿದರು. ಶ್ರೀಗಳು ಮಹಾಮಹಿಮಪುರುಷರಾಗಿದ್ದು ತಮ್ಮ ಆದ್ಯಾತ್ಮಿಕ ಸಾಧನೆಯಮೂಲಕ ಈ ಭಾಗದ ಜನರಲ್ಲಿ ಧರ್ಮದ ಅರಿವು ಮೂಡಿಸಿದರು.ಶ್ರೀ ಬಸವಾರ್ಯ ತಾತನವರು ಶ್ರೀಮಠದ ಅಧಿಕಾರ ವಹಿಸಿಕೊಂಡ ನಂತರಶ್ರೀಮಠದ ಸರ್ವಾಂಗೀಣ ಅಭಿವೃದ್ಧಿಯನ್ನು ಕೈಗೆತ್ತಿಕೊಂಡರು. ಹಾಗೆಯೇ ಕರ್ತೃಗುರುಗಳಿಂದ ಸಂಸ್ಕಾರ ಹೊಂದಿ ಕಂಬಳಿಹಾಳ ಮತ್ತು ಸಜ್ಜಲಗುಡ್ಡಗಳ ಮಹಾಮಾತೆಯಾಗಿಹೆಸರು ಹೊಂದಿದ್ದ ಶ್ರೀ ಶರಣಮ್ಮ ತಾಯಿಯವರ ಮಾರ್ಗದರ್ಶನ ಪಡೆದು ಶ್ರೀಮಠದಲ್ಲಿತಾಯಿಯವರ ಸತ್ಸಂಕಲ್ಪದಂತೆ 63 ಲಿಂಗಗಳನ್ನು ಸ್ಥಾಪಿಸಿ ಜಗವನ್ನೇ ಬೆಳಗಿದರು.ಪ್ರಸ್ತುತ 3ನೇ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ನೀಲಕಂಠಾರ್ಯ ತಾತನವರು ಹಿಂದಿನ ಪರಂಪರೆಯ ಹಾದಿಯಲ್ಲಿ ಸಮಾಜದ ಭಕ್ತರ ಉದ್ಧಾರಕ್ಕಾಗಿ ಶ್ರಮಿಸುತ್ತಿದ್ದಾರೆ. ಶ್ರೀಗಳು ಶ್ರೀಮಠದ ಅಧಿಕಾರ ವಹಿಸಿಕೊಂಡು ಶ್ರೀಮಠದಲ್ಲಿ ಧಾರ್ಮಿಕ ಹಾಗೂಸಾಮಾಜಿಕ ಕಾರ್ಯಕ್ರಮಗಳಿಂದ ಭಕ್ತರ ಸಹಕಾರದೊಂದಿಗೆ ಮುಂದುವರೆಯುತ್ತಿದ್ದಾರೆ.ಗುಡದೂರ ಶ್ರೀಗಳು ಹಾಗೂ ಕಂಬಳಿಹಾಳ-ಸಜ್ಜಲಿಗುಡ್ಡದ ಶ್ರೀ ದೊಡ್ಡಬಸವಾರ್ಯತಾತನವರು ಉಭಯರೂ ಕರ್ತೃಗುರುಗಳು ಹಾಗೂ ತಾಯಿ ಶರಣಮ್ಮನವರ ಆಶೀರ್ವಾದಬಲದಿಂದ ಒಂದಾಗಿ ಹೊಂದಿಕೊಂಡು ಒಬ್ಬರಿಗೊಬ್ಬರು ಸ್ಪಂದಿಸುತ್ತಾ ಶ್ರೀಮಠಗಳನ್ನುಮುನ್ನಡೆಸಿಕೊಂಡು ಬರುತ್ತಿದ್ದಾರೆ.ಶರಣಸ್ಥಳದ ಸಂಪ್ರದಾಯದ ಶ್ರೀ ದೊಡ್ಡ ಬಸವೇಶ್ವರ ಮಠವು ಮೊದಲುಗ್ರಾಮದ ಮಧ್ಯಭಾಗದಲ್ಲಿ ಸ್ಥಾಪನೆಯಾಗಿದ್ದು ಈಗ ಊರಿನ ಹೊರಭಾಗದಲ್ಲಿ ಸ್ಥಾಪಿತಗೊಂಡಿದೆ. ಶ್ರೀಮಠಕ್ಕೆ ಹೊಸ ಕಟ್ಟಡವನ್ನು ನಿರ್ಮಿಸಲಾಗಿದ್ದು ಮಠದ ಕರ್ತೃಗುರುಗಳಾದಶ್ರೀ ದೊಡ್ಡಬಸವಾರ್ಯ ತಾತ ಮತ್ತು ಶ್ರೀ ಬಸವಾರ್ಯ ತಾತನವರ ಗದ್ದುಗೆಗಳಿಗೆ ಮಂಟಪವನ್ನು ಕಟ್ಟಿಸಿ ಗೋಪುರವನ್ನು ನಿರ್ಮಿಸಲಾಗಿದ್ದು ಪ್ರತಿನಿತ್ಯ ಪೂಜೆ ಸಲ್ಲಿಸಲಾಗುತ್ತಿದೆ.ಶ್ರೀಮಠದಲ್ಲಿ ಪ್ರತಿನಿತ್ಯ ಧಾರ್ಮಿಕ ಆಚರಣೆಗಳ ಜೊತೆಗೆ ಪ್ರತಿ ಅಮವಾಸ್ಯೆಗೆಗದ್ದುಗೆಗಳಿಗೆ ರುದ್ರಾಭಿಷೇಕವನ್ನು ಮಾಡಲಾಗುತ್ತಿದೆ ಜೊತೆಗೆ ದಸರಾದಲ್ಲಿ ಶರನ್ನವರಾತ್ರಿಕಾರ್ಯಕ್ರಮವನ್ನು ಆಯೋಜಿಸಿ ಶ್ರೀದೇವಿ ಪುರಾಣ ಪಾರಾಯಣ ಮಾಡಲಾಗುತ್ತದೆ.ಕಾರ್ತೀಕ ಬಹುಳ ತ್ರಯೋದಶಿಗೆ ಕರ್ತೃಗುರುಗಳಾದ ಶ್ರೀ ದೊಡ್ಡ ಬಸವಾರ್ಯ ತಾತನವರಪುಣ್ಯಾರಾಧನೆ ಮಹೋತ್ಸವ ನಡೆಯುತ್ತಿದ್ದು ಶ್ರೀಮಠದ ಜಾತ್ರೆಯು ಮಾಘ ಶುದ್ಧ ದಶಮಿಗೆಆಯೋಜನೆಗೊಳ್ಳುತ್ತದೆ. ಆ ಸಮಯದಲ್ಲೇ ಶ್ರೀಮಠದ ರಥೋತ್ಸವವು ಜರುಗುತ್ತದೆ.
Swamiji
Swamiji Name :
ಪೂಜ್ಯ ಶ್ರೀ ನೀಲಕಂಠಾರ್ಯ ತಾತನವರು
Date of Birth :
23-8-1950
Place :
ಎಂ. ಗುಡದೂರು, ಕುಷ್ಟಗಿ ತಾ||
Photo :
Programs
ಪ್ರತಿ ಅಮವಾಸ್ಯೆಗೆ ರುದ್ರಾಭಿಷೇಕ.
ಮಾಘ ಶುದ್ಧ ಸಪ್ತಮಿಗೆ ಶ್ರೀಮಠದ ರಥೋತ್ಸವ ಮತ್ತು ಜಾತ್ರೆ.
ಕಾರ್ತೀಕ ಬಹುಳ ತ್ರಯೋದಶಿಗೆ ಶ್ರೀ ಕರ್ತೃ ಗುರುಗಳ ಪುಣ್ಯಾರಾಧನೆ.
ದಸರಾದಲ್ಲಿ ಶರನ್ನವರಾತ್ರಿ ಕಾರ್ಯಕ್ರಮ, ದೇವಿಪುರಾಣ, ಘಟ ಸ್ಥಾಪನೆ.
ಶಿವರಾತ್ರಿ ನಂತರ ಸಪ್ತಮಿಯಂದು ಹಿಂದಿನ ಗುರುಗಳ ಪುಣ್ಯಾರಾಧನೆ.
Institutions
ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢ ಶಾಲೆ.
ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ ನಿಲಯ.
Photos
Full Address Kannada
ಶ್ರೀ ಗುರು ದೊಡ್ಡಬಸವೇಶ್ವರ ಮಠ
ಎಂ. ಗುಡದೂರು, ಮಾದಾಪುರ ಪೋಸ್ಟ್ - 584 112,
ಕುಷ್ಟಗಿ ತಾ||, ಕೊಪ್ಪಳ ಜಿ||