ಶ್ರೀ ಗುಡ್ಡದ ಬಸವರಾಜೇಂದ್ರ ವಿರಕ್ತಮಠ (ಆನಂದಾಶ್ರಮ), ಖೇಡಗಿ
Average Reviews
Description
ಶ್ರೀ ಗುಡ್ಡದ ಬಸವರಾಜೇಂದ್ರ ವಿರಕ್ತಮಠ (ಆನಂದಾಶ್ರಮ), ಖೇಡಗಿ
ಕರ್ತೃ – ಶ್ರೀ ಮ.ನಿ.ಪ್ರ. ಗುಡ್ಡದ ಬಸವರಾಜೇಂದ್ರ ಶಿವಯೋಗಿಗಳು
ವಿಜಯಪುರ ಜಿˉÉ್ಲಯ ಖೇಡಗಿ ಗ್ರಾಮದ ಹೊರಭಾಗದಲ್ಲಿ ಭೀಮ ನದಿಯ ದಡದಲ್ಲಿ ಶ್ರೀ ಬಸವರಾಜೇಂದ್ರ ಮಹಾಸ್ವಾಮಿಗಳಿಂದ ಕಳೆದ ಶತಮಾನದಲ್ಲಿ ಸ್ಥಾಪಿಸಲ್ಪಟ್ಟಿರುವಶ್ರೀ ಗುಡ್ಡದ ಬಸವರಾಜೇಂದ್ರ ವಿರಕ್ತ ಮಠವು ತನ್ನ ಧಾರ್ಮಿಕ, ಸಾಮಾಜಿಕಕಾರ್ಯಕ್ರಮಗಳ ಮೂಲಕ ಈ ಭಾಗದ ಭಕ್ತರನ್ನು ಸನ್ಮಾರ್ಗದತ್ತ ಕೊಂಡೊಯ್ಯುತ್ತಿದೆ.ಶ್ರೀಮಠದ ಕರ್ತೃಗುರುಗಳಾದ ಶ್ರೀ ಮ.ನಿ.ಪ್ರ.ಬಸವರಾಜೇಂದ್ರ ಮಹಾಸ್ವಾಮಿಗಳುಎಮ್ಮಿಗನೂರು ಗ್ರಾಮದವರಾಗಿದ್ದು ಯೌವ್ವನಾವಸ್ಥೆಯಲ್ಲಿಯೇ ಬಂಥನಾಳುವಿನ ಶ್ರೀಸಂಗನಬಸವ ಸ್ವಾಮಿಗಳ ಆದರ್ಶಗಳನ್ನು ಮೈಗೂಡಿಸಿಕೊಂಡವರು. ತದನಂತರˉÉೂೀಕಸಂಚಾರ ಹೊರಟ ಶ್ರೀಗಳು ಖೇಡಗಿ ಗ್ರಾಮಕ್ಕೆ ಆಗಮಸಿ ಭೀಮ ನದಿತೀರದಲ್ಲಿಅನುಷ್ಟಾನಗೊಂಡು ಭಕ್ತರನುದ್ಧರಿಸಿದರು. ಹಾಗೂ ಭಕ್ತರ ಸಹಕಾರದೊಂದಿಗೆ ಶ್ರೀಮಠವನ್ನುಸ್ಥಾಪಿಸಿದ ಶ್ರೀಗಳು ವೀರಶೈವ ಧರ್ಮದ ಆಚರಣೆಗಳನ್ನು ಪ್ರಚುರಗೊಳಿಸಿದರು.ಕರ್ತೃಗುರುಗಳ ನಂತರ ಶ್ರೀ ಧರ್ಮಣ್ಣ ಸಾಧು ಮಹಾರಾಜರು ಮಠದಉಸ್ತುವಾರಿ ವಹಿಸಿಕೊಂಡಿದ್ದು ಶ್ರೀಮಠವನ್ನು ಅಭಿವೃದ್ಧಿಗೊಳಿಸಿದ್ದಾರೆ. ಇವರು ಮಠದ ಸುತ್ತ63 ಬಿಲ್ವಪತ್ರೆ ಮರಗಳನ್ನು ಬೆಳೆಸಿದ್ದಲ್ಲದೆ, 63 ಲಿಂಗಗಳ ಪ್ರತಿಷ್ಠಾಪನೆಯನ್ನು ಮಾಡಿಸಿದರು.ಹಾಗೂ ಶ್ರೀ ಬಸವೇಶ್ವರ ಗುಡಿಯನ್ನು ಕಟ್ಟಿಸಿ ನಿತ್ಯ ಪೂಜೆ ನಡೆಯುವ ವ್ಯವಸ್ಥೆ ಮಾಡಿದರು.ಇವರ ನಂತರ ಗ್ರಾಮಸ್ಥರೇ ಶ್ರೀಮಠದ ಧಾರ್ಮಿಕ ಆಚರಣೆಗಳನ್ನು ಮುಂದುವರೆಸಿದ್ದಾರೆ.ತದನಂತರ ಮಠದ ಭಕ್ತರು ಈಗಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಶಿವಬಸವರಾಜೇಂದ್ರ ಮಹಾಸ್ವಾಮಿಗಳನ್ನು ಉತ್ತರಾಧಿಕಾರಿಗಳಾಗಿ ನೇಮಿಸಿ ಪಟ್ಟಕ್ಕೆ ತಂದಿದ್ದಾರೆ.ಶ್ರೀಗಳು ಕ್ರಿಯಾಶೀಲರಾಗಿ ಶ್ರೀಮಠದಲ್ಲಿ ಧಾರ್ಮಿಕ ಆಚರಣೆಗಳನ್ನು ಚುರುಕುಗೊಳಿಸಿದ್ದು,ಮಠದ ಸಮುಚ್ಛಯ ಹಾಗೂ ಕರ್ತೃಗದ್ದುಗೆಗಳನ್ನು ಅಭಿವೃದ್ಧಿ ಪಡಿಸಿದ್ದಾರೆ. ಶ್ರೀಮಠದಜಮೀನನ್ನು ಅಭಿವೃದ್ಧಿಪಡಿಸಿದ ಶ್ರೀಗಳು ಆದಾಯ ಮೂಲವನ್ನಾಗಿ ಪರಿವರ್ತಿಸಿದ್ದಾರೆ.ಶ್ರೀಮಠದಲ್ಲಿ ಯುಗಾದಿಯಿಂದ 13 ದಿನಗಳ ಕಾಲ ಪುರಾಣ ಪ್ರವಚನ ನಡೆಯುತ್ತಿದ್ದುಕೊನೆಯ ದಿನ ಶ್ರೀಮಠದ ಜಾತ್ರೆ ನಡೆಯುತ್ತದೆ ಹಾಗೂ ಶ್ರಾವಣ ಮಾಸದಲ್ಲಿ ಶ್ರೀ ಹಿರಿಯಗುರುಗಳ ಪುಣ್ಯಾರಾಧನೆ ಮಹೋತ್ಸವವನ್ನು ನಡೆಸˉÁಗುತ್ತದೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಶಿವಬಸವರಾಜೇಂದ್ರ ಮಹಾಸ್ವಾಮಿಗಳು
Date of Birth :
1-6-1966
Place :
ಅಫಜˉïಪುರ, ಕಲಬುರ್ಗಿ ಜಿ||
Pattadikara :
10-6-1991
Photo :
Programs
ಭಾದ್ರಪದ ವದ್ಯ 3ರಂದು ಕರ್ತೃಗಳ ಪುಣ್ಯಾರಾಧನೆ.
ಶ್ರೀಗಳು ಪ್ರತಿದಿನ ಭಕ್ತರಿಗೆ ಅನೇಕ ರೋಗಗಳ ನಿವಾರಣೆಗೆ ಔಷಧೋಪಚಾರ ಗಳನ್ನು ನೀಡುತ್ತಾರೆ.