ಕಣ್ವ ಮಹರ್ಷಿಗಳ ತಪೋಭೂಮಿ ಹಾಗೂ ಪಾಂಡವರ ನೆಲೆಭೂಮಿಯಾಗಿರುವಪೌರಾಣಿಕ ಹಿನ್ನೆಲೆಯ ಕಿಲಾಕಣ್ವಕುಪ್ಪಿಯಿಂದಾಗಿ ಜಗಳೂರು ತಾಲ್ಲೂಕು ಪ್ರಸಿದ್ದಿಗೊಂಡಿದೆ.ಈ ಪುಣ್ಯಭೂಮಿಯಲ್ಲಿ ಉಜ್ಜಿಯಿನಿ ಪೀಠದ ಜಗದ್ಗುರುಗಳಾಗಿದ್ದ ಶ್ರೀ ಗುರುಸಿದ್ದಶಿವಾಚಾರ್ಯ ಭಗವತ್ಪಾದರು ತಪೋನುಷ್ಠಾನಗೊಂಡು ಗವಿಮಠವನ್ನು ಸ್ಥಾಪಿಸಿದ್ದುಶ್ರೀಮಠವು ಉಜ್ಜಯಿನಿ ಪೀಠದ ಶಾಖಾಮಠವಾಗಿ ಬೆಳೆದು ಬಂದಿತು. ಕಾಲಾನಂತರಲೋಕಸಂಚಾರಕ್ಕೆ ಬಂದ ಶ್ರೀ ಶಾಂತವೀರ ಸ್ವಾಮಿಗಳು ಉಜ್ಜಿಯಿನಿ ಪೀಠದ ಗುರುಗಳಅಪ್ಪಣೆಯ ಮೇರೆಗೆ ಗವಿಮಠಕ್ಕೆ ಬಂದು ಅಭಿವೃದ್ಧಿಪಡಿಸಿ ಕೆಲದಿನಗಳ ನಂತರಜಗಳೂರಿನಲ್ಲಿ ವಾಸ್ತವ್ಯ ಹೂಡಿ ಲಿಂಗೈಕ್ಯರಾದರು.ತದನಂತರ ಇಮ್ಮಡಿ ಶ್ರೀ ಶಾಂತಲಿಂಗ ಶಿವಾಚಾರ್ಯರು ಶ್ರೀಮಠದ ಅಧಿಕಾರವಹಿಸಿಕೊಂಡು ಮುನ್ನಡೆದಿದ್ದಾರೆ. ನಂತರದಲ್ಲಿ ಶ್ರೀ ಮುರುಘೇಂದ್ರ ಸ್ವಾಮಿಗಳು ಕಣ್ವಕುಪ್ಪೆಗೆಆಗಮಿಸಿ ಅನುಷ್ಠಾನಗೊಂಡು ಅಧಿಕಾರ ವಹಿಸಿಕೊಂಡರು. ಇವರು ಆತ್ಮಸಂಸ್ಕಾರಕ್ಕಾಗಿಆಂಧ್ರಪ್ರದೇಶದ ಮುಪ್ಪಲಕುಂಟಿಯಲ್ಲಿ 21 ತಿಂಗಳು ಅನುಷ್ಠಾನ ಮಾಡಿ ಸಾಧನೆಮಾಡಿದ್ದಾರೆ.ಶ್ರೀ ಗವಿಮಠದ ಸರ್ವಾಂಗೀಣ ಅಭಿವೃದ್ಧಿಗೆ ಕಾರಣೀಭೂತರಾದ ಶ್ರೀ ಮುಮ್ಮಡಿಶಾಂತಲಿಂಗ ಶಿವಾಚಾರ್ಯರು ಮಠಕ್ಕೆ ಪಾದಾರ್ಪಣೆ ಮಾಡಿದ ಮೇಲೆ ಬಹಳಷ್ಟು ಅಭಿವೃದ್ಧಿಕಾರ್ಯಗಳು ನಡೆದಿವೆ. ಹಾನಗಲ್ಲು ತಾಲ್ಲೂಕಿನ ಕೋಡಿ ಮಲ್ಲಾಪುರದಲ್ಲಿ ಶಾಖಾಮಠವನ್ನುಸ್ಥಾಪಿಸಿ ಶ್ರೀ ರೇಣುಕ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೆ. ಕರ್ನಾಟಕ ಆಂಧ್ರಗಳನ್ನು ಸುತ್ತಿಶಿವದೀಕ್ಷೆ ಮತ್ತು ವೀರಶೈವ ಧರ್ಮದ ಬಗ್ಗೆ ಪ್ರವಚನ ಮಾಡುತ್ತಾ ಕಣ್ವಕುಪ್ಪೆ ಮಠವನ್ನುಹೆಚ್ಚು ಪ್ರಚಾರಕ್ಕೆ ತಂದಿದ್ದಾರೆ.ಪ್ರಸ್ತುತ ಶ್ರೀ ಷ.ಬ್ರ. ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳುಶ್ರೀಮಠದ ಅಧಿಕಾರವನ್ನು ವಹಿಸಿಕೊಂಡು ನೂತನವಾಗಿ ಪ್ರವಾಸಿಗರ ಭವನ, ದಾಸೋಹಭವನ ಮುಂತಾದ ಕಟ್ಟಡಗಳನ್ನು ನಿರ್ಮಿಸಿ, ಭಕ್ತರು ಮಠಕ್ಕೆ ಬಂದು ಹೋಗಲುವ್ಯವಸ್ಥೆಯನ್ನು ಮಾಡಿಕೊಟ್ಟು ಧಾರ್ಮಿಕವಾಗಿ, ಸಾಮಾಜಿಕವಾಗಿ, ಸಾಹಿತ್ಯಿಕವಾಗಿ,ಸಾಂಸ್ಕøತಿಕವಾಗಿ ಮಠವು ಪ್ರಗತಿ ಸಾಧಿಸುವ ಕಡೆಗೆ ಶ್ರಮಿಸುತ್ತಿದ್ದಾರೆ.
Swamiji
Swamiji Name :
ಶ್ರೀ ಷ.ಬ್ರ. ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
22-12-1982
Place :
ಚಿಕ್ಕಮಾಗಡಿ, ಶಿಕಾರಿಪುರ ತಾ.
Pattadikara :
10-5-2006
Photo :
Programs
ವೈಶಾಖ ಶುದ್ಧ ದ್ವಾದಶಿಗೆ ಲಿಂ|| ಶ್ರೀ ಷ.ಬ್ರ. ಮುಮ್ಮಡಿ ಶಾಂತಲಿಂಗ ಸ್ವಾಮಿಗಳ ಪುಣ್ಯಾರಾಧನೆ ಮತ್ತು ಶ್ರೀ ಷ.ಬ್ರ.ನಾಲ್ವಡಿ ಶಾಂತಲಿಂಗ ಮಹಾಸ್ವಾಮಿಗಳ ಪಟ್ಟಾಧಿಕಾರ ವರ್ಧಂತಿ ಮಹೋತ್ಸವ, ಇದರ ನಿಮಿತ್ತ ಶಿವದೀಕ್ಷೆ, ಸರಳ ಸಾಮೂಹಿಕ ವಿವಾಹ.
ಮಕರ ಸಂಕ್ರಾತಿಯಂದು ವಿಶೇಷ ಪೂಜೆ, ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳು.
ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ ಹಾಗೂ ವಿಶೇಷ ಪೂಜೆ.