Shree Durdundeshwara Mahanta Shivayogi Chandravana Ashrama

Shree Durdundeshwara Mahanta Shivayogi Chandravana Ashrama Claimed

ಶ್ರೀ ದುರ್ದಂಡೇಶ್ವರ ಮಹಾಂತ ಶಿವಯೋಗಿ ಚಂದ್ರವನ ಆಶ್ರಮ

Average Reviews

Description

ಶ್ರೀ ದುರ್ದಂಡೇಶ್ವರ ಮಹಾಂತ ಶಿವಯೋಗಿ ಚಂದ್ರವನ ಆಶ್ರಮ

ಶ್ರೀ ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿ ಮಹಾಸ್ವಾಮಿಗಳು

ಮಂಡ್ಯ ಜಿˉÁ್ಲ ಶ್ರೀರಂಗಪಟ್ಟಣವು ಒಂದು ಕಾಲದಲ್ಲಿ ಮೈಸೂರು ರಾಜ್ಯದರಾಜಧಾನಿಯಾಗಿ ಮೆರೆದಿತ್ತು. ಎˉÁ್ಲ ಧರ್ಮದವರ, ಪಂಥಗಳ ನೆˉÉವೀಡಾದ ಈ ಪ್ರಸಿದ್ದಐತಿಹಾಸಿಕ ಪ್ರವಾಸಿ ಕೇಂದ್ರದಲ್ಲಿ ವೀರಶೈವ ಧರ್ಮವು ನಿದಾನವಾಗಿ ನೆˉÉಯೂರಿದೆ.ಇಂತಹ ತಾಲ್ಲೂಕಿನ ಕಾವೇರಿ ತೀರ ಪಶ್ಚಿಮವಾಹಿನಿಯಲ್ಲಿ ಪುರಾತನ ಶ್ರೀ ಕಾಶಿಚಂದ್ರಮೌಳೇಶ್ವರ ದೇವಸ್ಥಾನವಿದ್ದು ತೀರಾ ಇತ್ತೀಚೆಗೆ 2003ರಲ್ಲಿ ಇಲ್ಲಿ ಶ್ರೀ ದುರ್ದಂಡೇಶ್ವರಮಹಾಂತ ಶಿವಯೋಗಿ ಚಂದ್ರವನ ಆಶ್ರಮವು ಸ್ಥಾಪಿತಗೊಂಡಿದೆ.ಪಾಂಡವಪುರ ತಾಲ್ಲೂಕು ಬೇಬಿ ಗ್ರಾಮದ ಶ್ರೀ ದುರ್ದಂಡೇಶ್ವರ ಮಹಾಂತಶಿವಯೋಗಿಗಳವರ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿಸ್ವಾಮಿಗಳಿಂದ ಸ್ಥಾಪಿತಗೊಂಡಿರುವ ಶ್ರೀ ಚಂದ್ರವನ ಆಶ್ರಮವು ಕಳೆದೊಂದು ದಶಕದಲ್ಲಿ ತನ್ನಕಾರ್ಯಕ್ರಮಗಳ ಮೂಲಕ ಅಪಾರ ಭಕ್ತಬಳಗವನ್ನು ಹೊಂದಿ ಧಾರ್ಮಿಕ ಜಾಗೃತಿಮೂಡಿಸುತ್ತಿದೆ. ಆಶ್ರಮವು ಕೇವಲ ಧಾರ್ಮಿಕ ಆಚರಣೆಗಳಿಗೆ ಸೀಮಿತವಾಗದೇ ಸಮಷ್ಠಿಸಮಾಜದ ಏಳಿಗೆಗೆ ಶ್ರಮಿಸುತ್ತಿದೆ.1999ರ ಜನವರಿ 28ರಂದು ಬೇಬಿ ಗ್ರಾಮದ ಶ್ರೀ ದುರ್ದಂಡೇಶ್ವರ ಮಹಾಂತಶಿವಯೋಗಿ ಮಠದ ಅಧಿಕಾರ ಸ್ವೀಕರಿಸಿದ ಶ್ರೀಗಳು ತದನಂತರ 2003ರಲ್ಲಿ ಕಾವೇರಿ ತೀರಪಶ್ಚಿಮ ವಾಹಿನಿಯ ಶ್ರೀ ಕಾಶಿ ಚಂದ್ರಮೌಳೇಶ್ವರ ದೇವಸ್ಥಾನದ ಸಮೀಪ ಶ್ರೀ ಚಂದ್ರವನಆಶ್ರಮವನ್ನು ಸ್ಥಾಪಿಸಿದರು ಹಾಗೂ ಆಶ್ರಮದ ಜೊತೆಗೆ ಶ್ರೀ ಕಾಶಿ ಚಂದ್ರಮೌಳೇಶ್ವರದೇವಸ್ಥಾನವನ್ನು ಅಭಿವೃದ್ದಿಪಡಿಸಿದರು. ಈ ಮೂಲಕ ಕಳೆದು ಹೋಗಬಹುದಾಗಿದ್ದಪುರಾತನ ಇತಿಹಾಸವನ್ನು ಸಂರಕ್ಷಿಸಿ ಅಲ್ಲಿ ಆಚರಣೆಗಳನ್ನು ನಡೆಸುತ್ತಿದ್ದಾರೆ.ಶ್ರೀಗಳು ಆಶ್ರಮದಲ್ಲಿ ತಮ್ಮ ಗುರುಗಳಾದ ಲಿಂ. ಶ್ರೀ ಮ.ನಿ.ಪ್ರ.ಸ್ವ. ಮರದೇವರುಶಿವಯೋಗಿಗಳ ಪುತ್ಥಳಿಯನ್ನು ಸ್ಥಾಪಿಸಿದ್ದು ಜೊತೆಗೆ ನವಗ್ರಹಗಳು, ಯಾತ್ರಿ ನಿವಾಸ,ಗೋಶಾˉÉಯನ್ನು ಪ್ರಾರಂಭಿಸಿದ್ದಾರೆ. ಇನ್ನೂ ಅನೇಕ ಅಭಿವೃದ್ಧಿ ಯೋಜನೆಗಳನ್ನುಹಾಕಿಕೊಂಡಿರುವ ಶ್ರೀಗಳು ವರ್ಷದಲ್ಲಿ ಆಗಾಗ್ಗೆ ಆರೋಗ್ಯ-ಜಾಗೃತಿ, ವ್ಯಕ್ತಿ ವಿಕಸನ,ಧಾರ್ಮಿಕ ಚಿಂತನ ಶಿಬಿರಗಳನ್ನು ಆಯೋಜಿಸುತ್ತಾ ಭಕ್ತರ ಬೌದ್ದಿಕ ಮಟ್ಟವನ್ನುಉನ್ನತೀಕರಿಸುತ್ತಿದ್ದಾರೆ. ಜೊತೆಯಲ್ಲಿ ಶ್ರೀಮಠದ ವತಿಯಿಂದ ಕೆಲ ಪ್ರಶಸ್ತಿಗಳನ್ನು ಅರ್ಹರಿಗೆನೀಡಿ ಗೌರವಿಸುತ್ತಿರುವುದು ಗಮನಾರ್ಹ ಸಂಗತಿ.

Swamiji

Swamiji Name :
ಶ್ರೀ ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿ ಮಹಾಸ್ವಾಮಿಗಳು
Date of Birth :
03-08-1976
Place :
ತೆಂಡೇಕೆರೆ, ಪಾಂಡವಪುರ ತಾ||
Pattadikara :
28-11-1999
Photo :

Programs

ಪ್ರತಿ ಹುಣ್ಣಿಮೆಗೆ ಬೆಳದಿಂಗಳ ಕಾರ್ಯಕ್ರಮ ಹಾಗೂ ದೀಪಾರತಿ ಸತ್ಸಂಗ ¥ತಿÀ್ರ ಅಮವಾಸ್ಯೆಗೆ ಕಾಶಿ ಚಂದ್ರಮೌಳೇಶ್ವರ ಸ್ವಾಮಿಗೆ ರುದ್ರಾಭಿಷೇಕ,ಪೂಜೆ £ವ Àರಾತ್ರಿಗೆ 9 ದಿನಗಳ ಕಾಲ ಶ್ರೀಗಳ ಮೌನ ಹಾಗೂ ಪ್ರತಿ ದಿನ ವಿಶೇಷ ಕಾರ್ಯಕ್ರಮಗಳು (ಶ್ರೀದೇವಿಗೆ ವಿವಿದ ಅಲಂಕಾರ & 2000 ಮುತ್ತೈದೆಯರಿಗೆ ಉಡಿ) ¸ಂÀ ಕ್ರಾಂತಿಗೆ ಶ್ರೀ ಕಾಶಿ ಚಂದ್ರಮೌಳೇಶ್ವರ ಸ್ವಾಮಿಗೆ ಸೂರ್ಯಕಿರಣ ಸ್ಪರ್ಶ ಹಾಗೂ ವಿಶೇಷ ಪೂಜೆ ಶಿವರಾತ್ರಿಗೆ ವಿಶೇಷ ಪೂಜೆ (ಭಕ್ತರಿಂದ)

Photos

Full Address Kannada

ಶ್ರೀ ದುರ್ದಂಡೇಶ್ವರ ಮಹಾಂತ ಶಿವಯೋಗಿ ಚಂದ್ರವನ ಆಶ್ರಮ
ಪಶ್ಚಿಮ ವಾಹಿನಿ, ಕಾವೇರಿ ತೀರ
ಶ್ರೀರಂಗಪಟ್ಟಣ ತಾ||, ಮಂಡ್ಯ ಜಿಲ್ಲೆ

Map

Near by Places

ಮೈಸೂರು ರೋಡ್ - 2 ಕಿ.ಮೀ.
ಮೈಸೂರು - 15 ಕಿ.ಮೀ.
ಮಂಡ್ಯ - 20 ಕಿ.ಮೀ.

Statistic

386 Views
0 Rating
0 Favorite
0 Share
error: Content is protected !!