ಮುದ್ದೇಬಿಹಾಳ ತಾಲ್ಲೂಕಿನ ಮಸಬಿನಾಳ ಗ್ರಾಮದಲ್ಲಿ ಸುಮಾರು ಒಂದುಶತಮಾನದ ಹಿಂದೆ ಶ್ರೀ ಮ.ನಿ.ಪ್ರ. ಶಿವಾನಂದ ಸ್ವಾಮಿಗಳಿಂದ ಪುನರುಜ್ಜೀವನಗೊಂಡಿರುವಶ್ರೀ ದಾಸೋಹ ಸಂಸ್ಥಾನ ವಿರಕ್ತಮಠವು ಅಸ್ತಿತ್ವದಲ್ಲಿದ್ದು ತನ್ನ ಧಾರ್ಮಿಕ, ಸಾಮಾಜಿಕ,ಶೈಕ್ಷಣಿಕ ಚಟುವಟಿಕೆಗಳ ಮೂಲಕ ಈ ಭಾಗದಲ್ಲಿ ಪ್ರಸಿದ್ದಿಗೆ ಬಂದಿದೆ.ಜೇವರ್ಗಿ ತಾಲ್ಲೂಕಿನ ಸೊನ್ನಾ ಗ್ರಾಮದಿಂದ ˉÉೂೀಕಸಂಚಾರ ಹೊರಟ ಶ್ರೀಶಿವಾನಂದ ಸ್ವಾಮಿಗಳು ಅನೇಕ ಧಾರ್ಮಿಕ ಕ್ಷೇತ್ರಗಳನ್ನು ಸಂದರ್ಶಿಸುತ್ತಾ ಮಸಬಿನಾಳಗ್ರಾಮಕ್ಕೆ ಆಗಮಿಸಿದರು. ಇಲ್ಲಿ ಆಗˉÉೀ ಜೀರ್ಣಗೊಂಡಿದ್ದ ಮಠವನ್ನು ಜೀರ್ಣಾಭಿವೃದ್ಧಿಗೊಳಿಸಿದ ಶ್ರೀಗಳು ಇಲ್ಲಿಯೇ ನೆˉÉನಿಂತು ಭಕ್ತರಿಗೆ ನಿತ್ಯ ಶಿವಾನುಭವಗೋಷ್ಠಿಗಳ ಮೂಲಕವೀರಶೈವ ಧರ್ಮದ ಆಚರಣೆಗಳನ್ನು ಪ್ರಚುರಗೊಳಿಸಿದರು. ಕೇವಲ ಧಾರ್ಮಿಕ, ಸಾಮಾಜಿಕವಾಗಿ ಅಲ್ಲದೆ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿಯೂ ಮುಂಚೂಣಿಯಲ್ಲಿದ್ದು ಹೋರಾಡಿದ ಶ್ರೀಗಳು ಸುಮಾರು 115 ವರ್ಷಗಳ ಕಾಲಸಾರ್ಥಕ ಜೀವನ ನಡೆಸಿ ತಮ್ಮ ಕಾˉÁವಧಿಯಲ್ಲಿ ಶ್ರೀಮಠದ ಜೊತೆಗೆ ಸುತ್ತಲಿನ ಹತ್ತಾರುಮಠಗಳನ್ನು ಜೀರ್ಣಾಭಿವೃದ್ಧಿಗೊಳಿಸಿದರು. ಭಕ್ತರಿಗೆ ಕಾಯಕದ ಅರಿವನ್ನು ಮೂಡಿಸುತ್ತಿದ್ದರಲ್ಲದೇ ಪ್ರತಿನಿತ್ಯ ಅನ್ನದಾಸೋಹ ನಡೆಸುತ್ತಿದ್ದರು.ಕರ್ತೃಗುರುಗಳ ನಂತರ ಅಧಿಕಾರಕ್ಕೆ ಬಂದ ಶ್ರೀ ಮ.ನಿ.ಪ್ರ. ಗುರುಸಿದ್ಧ ಸ್ವಾಮಿಗಳುಹಿರಿಯ ಶ್ರೀಗಳ ಕೃಪಾಕಟಾಕ್ಷದಿಂದ ಬೆಳೆದವರು. ಶ್ರೀಮಠದ ಅಧಿಕಾರವಹಿಸಿಕೊಂಡಶ್ರೀಗಳು ಭಕ್ತರ ಸಹಕಾರದೊಂದಿಗೆ ಶ್ರೀಮಠವನ್ನು ಮುನ್ನಡೆಸಿ 1995ರಲ್ಲಿ ಲಿಂಗೈಕ್ಯರಾದರು.ಈಗಿನ ಶ್ರೀಗಳಾದ ಶ್ರೀ ಮ.ನಿ.ಪ್ರ.ಸಿದ್ದರಾಮ ಸ್ವಾಮಿಗಳು 1999ರ ಮೇ 17 ರಂದುಶ್ರೀಮಠದ ಅಧಿಕಾರ ವಹಿಸಿಕೊಂಡು ಶ್ರೀಮಠದಲ್ಲಿ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ಆರ್ಥಿಕವಾಗಿಯೂ ಸ್ವಾವಲಂಬಿಯಾಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಶ್ರೀಮಠದ ಹಳೆಯ ಕಟ್ಟಡವನ್ನು ನವೀಕರಣಗೊಳಿಸಿದ ಶ್ರೀಗಳು ಮಠದ ಜಮೀನನ್ನುಅಭಿವೃದ್ಧಿಗೊಳಿಸಿ ಆದಾಯವನ್ನು ಹೆಚ್ಚಿಸಿದ್ದಾರೆ ಹಾಗೂ ಶೈಕ್ಷಣಿಕ ಸಂಸ್ಥೆಗಳ ಮೂಲಕಬಡಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸಿದ್ದಾರೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಸಿದ್ಧರಾಮ ಸ್ವಾಮಿಗಳು
Date of Birth :
1-6-1964
Place :
ಮಡಿಕೇಶ್ವರ, ಮುದ್ದೇಬಿಹಾಳ ತಾ||
Pattadikara :
17-05-1999
Photo :
Programs
ಪ್ರತಿ ಅಮವಾಸ್ಯೆಗೆ ವಿಶೇಷ ಪೂಜೆ.
ಶ್ರಾವಣ ಮಾಸದಲ್ಲಿ ನಿತ್ಯ ಪುರಾಣ ಪ್ರವಚನ ಹಾಗೂ ಶ್ರೀ ಹಿರಿಯ ಗುರುಗಳ ಪುಣ್ಯಸ್ಮರಣೋತ್ಸವ.
Institutions
ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢ ಶಾಲೆ
ಪದವಿ ಪೂರ್ವ ಕಾಲೇಜು
Full Address Kannada
ಶ್ರೀ ದಾಸೋಹ ಸಂಸ್ಥಾನ ವಿರಕ್ತ ಮಠ
ಮಸಬಿನಾಳ- 586 203
ಬಸವನಬಾಗೇವಾಡಿ ತಾ||, ವಿಜಯಪುರ ಜಿ||