ಕುಷ್ಟಗಿ ತಾಲ್ಲೂಕಿನ ಮುದೇನೂರು ಗ್ರಾಮದಲ್ಲಿ ಪರಮಪೂಜ್ಯ ಶ್ರೀ ಚಂದ್ರಶೇಖರಸ್ವಾಮಿಗಳಿಂದ 1939ರಲ್ಲಿ ಸ್ಥಾಪನೆಯಾಗಿರುವ, ಶ್ರೀ ರಂಭಾಪುರಿ ಪೀಠದ ಶಾಖಾಮಠವಾಗಿಬೆಳೆದುಬಂದಿರುವ ಶ್ರೀ ಚಂದ್ರಶೇಖರ ಸ್ವಾಮಿ ಮಠದಿಂದಾಗಿ ಈ ಗ್ರಾಮವು ಧಾರ್ಮಿಕಸಂಸ್ಕಾರವನ್ನು ಪಡೆದು ಮುನ್ನಡೆಯುತ್ತಿದೆ. ಕರ್ತೃಗುರುಗಳಾದ ಶ್ರೀ ಚಂದ್ರಶೇಖರ ಸ್ವಾಮಿಗಳುಧಾರ್ಮಿಕ ಚಿಂತಕರಾಗಿಯೂ ಕೂಡ ಹೆಸರು ಮಾಡಿದ್ದು ಈ ಭಾಗದ ಜನರಿಗೆ ವೀರಶೈವಧರ್ಮದ ಆಚರಣೆಗಳ ಬಗ್ಗೆ ಅರಿವು ಮೂಡಿಸುವಲ್ಲಿ ಯಶಸ್ವಿಯಾಗಿ ಭಕ್ತರಿಗೆ ಸೂಕ್ತಮಾರ್ಗದರ್ಶನ ನೀಡಿದ್ದಾರೆ.ಶ್ರೀ ಚಂದ್ರಶೇಖರ ಸ್ವಾಮಿಗಳು ಮೊದಲು ಅಮರಾವತಿಯಲ್ಲಿ ವೈದ್ಯವೃತ್ತಿಯನ್ನುನಡೆಸುತ್ತಿದ್ದವರು, ತದನಂತರ ಜೀವನದಲ್ಲಿ ವೈರಾಗ್ಯ ತಾಳಿ ಆಧ್ಯಾತ್ಮ ಚಿಂತನೆಯಿಂದ ಲೋಕಸಂಚಾರಕ್ಕೆ ಹೊರಟು ಈ ಗ್ರಾಮಕ್ಕೆ ಬಂದು ನೆಲೆಸುತ್ತಾರೆ. ಶ್ರೀಗಳು ಗ್ರಾಮಕ್ಕೆ ಬಂದು ಇಲ್ಲಿನದೇವಸ್ಥಾನದಲ್ಲಿ ನೆಲೆನಿಂತು ಧಾರ್ಮಿಕ ಆಚರಣೆಗಳನ್ನು ನಡೆಸಿಕೊಂಡು ಬಂದಿದ್ದು ಇವರಆಚರಣೆಗಳಿಂದ ಪ್ರಭಾವಿತಗೊಂಡ ಗ್ರಾಮದ ಜನರು ಶ್ರೀಗಳ ಆಶಯದಂತೆ ಮಠ ಸ್ಥಾಪನೆಮಾಡಲು ಶ್ರಮಿಸಿದರು.ಕರ್ತೃಗುರುಗಳ ತರುವಾಯ 1972ರಲ್ಲಿ ಅಧಿಕಾರ ವಹಿಸಿಕೊಂಡ ಈಗಿನ ಹಿರಿಯಶ್ರೀಗಳಾದ ಪರಮಪೂಜ್ಯ ಶ್ರೀ ಶಶಿಧರ ಸ್ವಾಮಿಗಳು ಶ್ರೀಮಠವನ್ನು ಸಮರ್ಥವಾಗಿ ಮುನ್ನಡೆಸಿದ್ದಾರೆ. ಶ್ರೀಗಳು ಎಂ.ಎಸ್ಸಿ. ಪದವೀಧರರಾಗಿದ್ದು ಪ್ರಾಧ್ಯಾಪಕ ವೃತ್ತಿಯಲ್ಲಿದ್ದವರು. ಶ್ರೀಗಳುಕರ್ತೃಗುರುಗಳಂತೆಯೇ ಜೀವನದಲ್ಲಿ ಆಧ್ಯಾತ್ಮದ ಒಲವನ್ನು ಬೆಳೆಸಿಕೊಂಡು ಪ್ರಾಧ್ಯಾಪಕವೃತ್ತಿಯನ್ನು ತೊರೆದು ಬಂದವರು.ಶ್ರೀ ಶಶಿಧರ ಸ್ವಾಮಿಗಳು ಶ್ರೀಮಠದಲ್ಲಿ ಧಾರ್ಮಿಕ ಆಚರಣೆಗಳನ್ನು ಚುರುಕುಗೊಳಿಸಿದ್ದು ಈ ಭಾಗದ ಕಾರ್ಯಕ್ರಮಗಳಲ್ಲಿ ಭಾಗವಹಿಸಿಕೊಂಡು ಬರುತ್ತಿದ್ದಾರೆ. ಶ್ರೀಗಳು ಸ್ವತಃಸಾಹಿತಿಗಳಾಗಿದ್ದು ಮಂಗಲ ಕುಸುಮಾಂಜಲಿ, ಹೃದಯದ ಹಂಬಲ, ವೀರಶೈವ ತತ್ವಾದರ್ಶನಇನ್ನೂ ಮುಂತಾದ 18 ಕೃತಿಗಳನ್ನು ಬರೆದು ಪ್ರಕಟಿಸಿದ್ದಾರೆ. ಪ್ರಗತಿಪರ ಚಿಂತಕರಾದ ಶ್ರೀಗಳುಧರ್ಮವನ್ನು ವೈಚಾರಿಕ ನೆಲೆಗಟ್ಟಿನಲ್ಲಿ ಬೆಳೆಸತೊಡಗಿದ್ದಾರೆ. ಶ್ರೀಗಳು ತಮ್ಮ ಉತ್ತರಾಧಿಕಾರಿಗಳನ್ನಾಗಿ ಶ್ರೀ ಅಭಿನವ ಚಂದ್ರಶೇಖರ ಶಿವಾಚಾರ್ಯರನ್ನು 2011ರ ಮಾರ್ಚ್ 3 ರಂದು ಪಟ್ಟಕ್ಕೆತಂದಿದ್ದು ಉಭಯ ಶ್ರೀಗಳ ನೇತೃತ್ವದಲ್ಲಿ ಶ್ರೀಮಠವು ಮುನ್ನಡೆಯುತ್ತಿದೆ.
Swamiji
Swamiji Name :
ಶ್ರೀ ಷ.ಬ್ರ. ಅಭಿನವ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು
Date of Birth :
8-2-1979
Place :
ಗುಮ್ಮಗೋಳ, ಮುಂಡರಗಿ
Pattadikara :
3-3-2011
Photo :
Programs
ಪ್ರತಿ ನಿತ್ಯ ರುದ್ರಾಭಿಷೇಕ.
ಫಾಲ್ಗುಣ ಮಾಸದಲ್ಲಿ ಶ್ರೀಮಠದ ಜಾತ್ರಾ ಮಹೋತ್ಸವ.
ಜೇಷ್ಠ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ.
Institutions
ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢ ಶಾಲೆ.
ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ ನಿಲಯ.
Photos
Full Address Kannada
ಶ್ರೀ ಚಂದ್ರಶೇಖರ ಸ್ವಾಮಿ ಮಠ
ಮುದೇನೂರು - 584 112
ಕುಷ್ಟಗಿ ತಾ||, ಕೊಪ್ಪಳ ಜಿ||