ಕರ್ತೃ – ಶ್ರೀ ಷ.ಬ್ರ. ಕೋರಣಯ್ಯ ಶಿವಾಚಾರ್ಯ ಮಹಾಸ್ವಾಮಿಗಳು
ಕಲಬುರಗಿ ಜಿಲ್ಲೆ ಜೇವರ್ಗಿ ತಾಲ್ಲೂಕಿನ ಮಾಗಣಗೇರಿ ಗ್ರಾಮವು ತಾಲ್ಲೂಕುಕೇಂದ್ರದಿಂದ 60 ಕಿ.ಮೀ.ದೂರದಲ್ಲಿದ್ದು ಈ ಗ್ರಾಮದ ಮಧ್ಯಭಾಗದಲ್ಲಿ ಪುರಾತನ ಕಾಲದಶ್ರೀ ಬೃಹನ್ಮಠ ಹಿರೇಮಠವು ಅಸ್ತಿತ್ತ್ವದಲ್ಲಿದ್ದು ತನ್ನ ಪ್ರಾಚೀನ ಪರಂಪರೆಯಿಂದಾಗಿ ತನ್ನಧಾರ್ಮಿಕ ಆಚರಣೆಗಳ ಮೂಲಕ ಗ್ರಾಮದಲ್ಲಿ ಧಾರ್ಮಿಕ ಜಾಗೃತಿಯನ್ನುಂಟು ಮಾಡಿದೆ.ಶ್ರೀಮದ್ ಉಜ್ಜಯಿನಿ ಪೀಠದ ಶಾಖಾಮಠವಾಗಿ ಪಂಚಪೀಠಗಳ ಸಂಪ್ರದಾಯವನ್ನುಪಾಲಿಸಿಕೊಂಡು ಬಂದಿರುವ ಶ್ರೀ ಬೃಹನ್ಮಠ ಹಿರೇಮಠವು ಈ ಭಾಗದ ಪ್ರಮುಖ ವೀರಶೈವಮಠಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ.ಶ್ರೀ ಮಠವು ಕಳೆದ ಎಂಟು ಶತಮಾನಗಳಿಗೂ ಪೂರ್ವದಲ್ಲಿಯೇಸ್ಥಾಪಿತಗೊಂಡಿತ್ತೆಂದು ಹೇಳಲಾಗುತ್ತಿದ್ದು ಕರ್ತೃಗುರುಗಳೆಂದು ಶ್ರೀ.ಷ.ಬ್ರ.ಕೋರಣ್ಣಯ್ಯಶಿವಾಚಾರ್ಯ ಮಹಾಸ್ವಾಮಿಗಳನ್ನು ಗುರುತಿಸಲಾಗಿದೆ. ಕರ್ತೃಗುರುಗಳುಮಹಾತಪಸ್ವಿಗಳಾಗಿದ್ದು ತಮ್ಮ ಪವಾಡಗಳಿಂದ ಮನೆಮಾತಾಗಿದ್ದರು. ಇವರ ಆಚರಣೆಗಳಫಲದಿಂದಾಗಿ ಅಪಾರ ಭಕ್ತರು ಶ್ರೀಮಠದ ಪ್ರಭಾವಕ್ಕೆ ಒಳಗಾಗಿ ಮಠವನ್ನುಅಭಿವೃದ್ಧಿಪಡಿಸಿದ್ದರು. ಕರ್ತೃ ಗುರುಗಳು ಮಠವನ್ನು ಸ್ಥಾಪಿಸಿದ್ದಾಗಿಂದ ಚರ ಮತ್ತು ಸ್ಥಿರಪಟ್ಟಾಧಿಕಾರಿಗಳು ಮಠದ ಆಡಳಿತವನ್ನು ನಡೆಸಿಕೊಂಡು ಬಂದಿದ್ದರು.ಶ್ರೀಮಠದ ಪರಂಪರೆಯಲ್ಲಿ ಈವರೆಗೂ 19 ಜನ ಶ್ರೀಗಳು ಅಧಿಕಾರ ನಡೆಸಿದ್ದುಅವರುಗಳ ಹೆಸರುಗಳು ಲಭ್ಯವಿಲ್ಲ. ಪರಂಪರೆಯ ಹಿಂದಿನ ಗುರುಗಳಾದ ಶ್ರೀ.ಷ.ಬ್ರ.ಚನ್ನವೃಷಭೇಂದ್ರ ಮಹಾಸ್ವಾಮಿಗಳು ಪೂಜಾನಿಷ್ಠರಾಗಿ, ಜ್ಞಾನಿಗಳಾಗಿ ಮಠವನ್ನುಸಮಾಜಮುಖಿಯಾಗಿ ಬೆಳೆಸಿದರು. ಶ್ರೀಗಳು ಲೋಕಸಂಚಾರ ಕೈಗೊಂಡು ಅಲ್ಲಲ್ಲಿಅನುಷ್ಠಾನಗೊಂಡು ಅಪಾರ ಭಕ್ತಬಳಗವನ್ನು ಹೊಂದಿ ಮಠ ಹಾಗೂ ಸಮಾಜವನ್ನುಬೆಳೆಸುವ ಮೂಲಕ ವೀರಶೈವ ಧರ್ಮವನ್ನು ಅಭಿವೃದ್ಧಿಪಡಿಸಿದರು.ಈಗಿನ ಶ್ರೀಗಳಾದ ಶ್ರೀ.ಷ.ಬ್ರ.ಡಾ|| ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮಿಗಳುಸಂಸ್ಕøತ ಪಾಂಡಿತ್ಯವನ್ನು ಹೊಂದಿದ್ದು, ಪಿ.ಎಚ್.ಡಿ. ಪದವೀಧರರಾಗಿದ್ದಾರೆ. ಗುರುಗಳುತಮ್ಮ ಜ್ಞಾನದಿಂದ “ವೇದಾಂತಾಚಾರ್ಯ” ಹಾಗೂ “ಸಾಹಿತ್ಯ ರತ್ನ” ಎಂಬ ಬಿರುದುಗಳನ್ನುಪಡೆದಿದ್ದು ವೀರಶೈವ ಧರ್ಮದ ಬಗ್ಗೆ ಆಳವಾದ ಅರಿವನ್ನು ಹೊಂದಿದ್ದಾರೆ. ಪ್ರಸ್ತುತ ಶ್ರೀಗಳುಮಠವನ್ನು ನವೀಕರಿಸಿದ್ದಲ್ಲದೇ ಶ್ರೀಮಠವನ್ನು ಧಾರ್ಮಿಕ, ಸಾಮಾಜಿಕ ಹಾಗೂಶೈಕ್ಷಣಿಕವಾಗಿ ಅಭಿವೃದ್ಧಿಪಡಿಸುತ್ತಿದ್ದಾರೆ.
Swamiji
Swamiji Name :
ಶ್ರೀ ಷ.ಬ್ರ. ಡಾ|| ವಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
15-10-1951
Photo :
Programs
ಮಾಘ ಮಾಸದಲ್ಲಿ ಶ್ರೀಮಠದ ಜಾತ್ರೆ ವiತ್ತು
ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ, ಪುರಾಣ ಪ್ರವಚನ,
ದನಗಳ ಜಾತ್ರೆ, ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳು
ಶ್ರಾವಣ ಮಾಸದಲ್ಲಿ ನಿತ್ಯ ವಿಶೇಷ ಇಷ್ಟಲಿಂಗ ಪೂಜೆ
ನವರಾತ್ರಿಯಲ್ಲಿ ಶ್ರೀದೇವಿ ಪುರಾಣ ಪಾರಾಯಣ
Institutions
ಕಿರಿಯ / ಹಿರಿಯ ಪ್ರಾಥಮಿಕ ಶಾಲೆ
Photos
Full Address Kannada
ಶ್ರೀ ಬೃಹನ್ಮಠ ಹಿರೇಮಠ
ಮಾಗಣಗೇರಿ - 585 325
ಜೇವರ್ಗಿ ತಾ||, ಕಲಬುರಗಿ ಜಿಲ್ಲೆ