ವಿಜಯಪುರ ಜಿಲ್ಲೆಯ ಗುಂಡಕನಾಳ ಗ್ರಾಮದ ಮಧ್ಯಭಾಗದಲ್ಲಿ ಸ್ಥಾಪಿತಗೊಂಡಿರುವ ಶ್ರೀ ಬೃಹನ್ಮಠವು ತನ್ನ ಧಾರ್ಮಿಕ ಆಚರಣೆಗಳು ಹಾಗೂ ಪರಂಪರೆಯಿಂದಾಗಿಈ ಭಾಗದಲ್ಲಿ ಧಾರ್ಮಿಕ ವಾತಾವರಣವನ್ನು ನೆˉÉಗೊಳಿಸಿದೆ. ಶ್ರೀ ಬೃಹನ್ಮಠವು ಶ್ರೀಮದ್ಉಜ್ಜಯಿನಿ ಪೀಠದ ಶಾಖಾಮಠವಾಗಿದ್ದು ಪುತ್ರವರ್ಗದ ಪರಂಪರೆಯಲ್ಲಿ ಬೆಳೆದು ಬಂದಿದೆ.ಶ್ರೀಮಠದ ಮೂಲ ಪುರುಷರು ಶ್ರೀ ಶಿವಜಾತ ಒಡೆಯರು ಎಂದು ಹೇಳˉÁಗಿದೆ.11ನೇ ಶತಮಾನದ ಲಿಂಗಸೂಗೂರು ತಾಲ್ಲೂಕಿನ ಕರ್ಡಕˉï ಶಾಸನದ ಪ್ರಕಾರ 5ನೇಬಲ್ಲಮರಾಜನ ಕುಲಗುರುಗಳು ಶ್ರೀ ಶಿವಜಾತ ಒಡೆಯರೆಂದು ತಿಳಿದುಬರುತ್ತದೆ. ಶ್ರೀಗಳುಪರಮ ತಪಸ್ವಿಗಳು ವೈರಾಗ್ಯ ಮೂರ್ತಿಗಳು ಆಗಿದ್ದರು. ಹಾಗೂ ˉÉೂೀಕ ಸಂಚಾರಮಾಡುತ್ತಾ ಅಲ್ಲಲ್ಲಿ ನೆˉÉ ನಿಂತು ಆ ಸ್ಥಳಗಳನ್ನು ಜಾಗೃತಗೊಳಿಸಿ ಚರಮೂರ್ತಿಗಳನ್ನುನೇಮಿಸುತ್ತಿದ್ದರು. ಹಾಗೆ ಸ್ಥಾಪಿತಗೊಂಡ ಮಠವೇ ಗುಂಡಕನಾಳದ ಶ್ರೀ ಬೃಹನ್ಮಠ.ಕರ್ತೃಗುರುಗಳ ನಂತರ ಅನೇಕ ಶ್ರೀಗಳು ಅಧಿಕಾರ ನಡೆಸಿದ್ದರೂ ಅವರ ಬಗ್ಗೆತಿಳಿದುಬರುವುದಿಲ್ಲ. ಪರಂಪರೆಯಲ್ಲಿ ಬರುವ ಲಿಂ. ಶ್ರೀ.ಷ.ಬ್ರ. ಗುರುಲಿಂಗ ಶಿವಾಚಾರ್ಯಸ್ವಾಮಿಗಳು ತಪೋನಿಷ್ಠರಾಗಿದ್ದು ಭಕ್ತರನ್ನುದ್ಧರಿಸಿದ್ದರು ಎಂದು ತಿಳಿದುಬರುತ್ತದೆ. ಶ್ರೀಗಳುಜೇವರ್ಗಿ ತಾಲ್ಲೂಕಿನ ಅಂದೋˉÁ ಗ್ರಾಮದ ಶರಣ ಕರಣಯ್ಯ ಸ್ವಾಮಿಗಳಿಗೆ ಶರಣ ದೀಕ್ಷೆನೀಡಿ ತಮ್ಮ ತಪೋಬಲವನ್ನು ಧಾರೆ ಎರೆದು ಅವರನ್ನು ಶಾಪಾನುಗ್ರಹ ಸಮರ್ಥರನ್ನಾಗಿಮಾಡಿದ್ದರು. ಹಾಗೆಯೇ ಗುಡೂರ ಗ್ರಾಮದ ಶ್ರೀ ಸಂಗಣ್ಣ ಶರಣರಿಗೆ ಶಿವದೀಕ್ಷೆಯನ್ನು ನೀಡಿಅವರನ್ನು ವಾಕ್ಸಿದ್ದ ಪುರುಷರನ್ನಾಗಿ ಮಾಡಿದ್ದರು ಎಂದು ತಿಳಿದುಬರುತ್ತದೆ.ಅನೇಕ ಶತಮಾನಗಳ ನಂತರ ಶ್ರೀಮಠದ ಉತ್ತರಾಧಿಕಾರಿಗಳಾಗಿ ನೇಮಕಗೊಂಡು 2006ರಲ್ಲಿ ಉಜ್ಜಯಿನಿ ಜಗದ್ಗುರುಗಳ ದಿವ್ಯಸಾನಿದ್ಯದಲ್ಲಿ ಪಟ್ಟಾಧಿಕಾರಗೊಂಡವರು ಈಗಿನ ಶ್ರೀಗಳಾದ ಶ್ರೀ ಷ.ಬ್ರ. ಗುರುಲಿಂಗ ಶಿವಾಚಾರ್ಯ ಸ್ವಾಮಿಗಳು.ಶ್ರೀಗಳು ಸಿದ್ದಗಂಗಾ ಮಠದ ವಿದ್ಯಾರ್ಥಿಗಳಾಗಿದ್ದು ಡಾ|| ಶಿವಕುಮಾರ ಮಹಾಸ್ವಾಮಿಗಳವರಕೃಪಾಶೀರ್ವಾದದಿಂದ ಶಕ್ತಿ, ವಿಶಿಷ್ಟಾದ್ವೈತ ವೇದಾಂತ, ವಿದ್ವತ್ ವೀರಶೈವಾ ಆಗಮಪ್ರವೀಣರೆನಿಸಿದರು. ಇಂತಹ ಶ್ರೀಗಳು ಶ್ರೀಮಠದ ಅಧಿಕಾರ ವಹಿಸಿಕೊಂಡು ಶ್ರೀಮಠವನ್ನುಅಭಿವೃದ್ಧಿ ಪಥದತ್ತ ಮುನ್ನಡೆಸುತ್ತಿದ್ದಾರೆ.
Swamiji
Swamiji Name :
ಶ್ರೀ ಷ.ಬ್ರ. ಗುರುಲಿಂಗ ಶಿವಾಚಾರ್ಯ ಸ್ವಾಮಿಗಳು
Date of Birth :
6-7-1976
Place :
ಗುಂಡಕನಾಳ, ಮುದ್ದೇಬಿಹಾಳ ತಾ||
Pattadikara :
22-2-2006
Photo :
Programs
ಶಿವರಾತ್ರಿಗೆ ಪುರಾಣ ಪ್ರವಚನ.
ಶ್ರಾವಣ ಮಾಸದಲ್ಲಿ ನಿತ್ಯ ಇಷ್ಟಲಿಂಗ ಪೂಜೆ ಮತ್ತು ಶ್ರೀಗಳ ಅನುಷ್ಠಾನ.
ಶಿವರಾತ್ರಿಗೆ ಶ್ರೀದೇವಿ ಪುರಾಣ ಪ್ರವಚನ.
Photos
Full Address Kannada
ಶ್ರೀ ಬೃಹನ್ಮಠ ಗುಂಡಕನಾಳ,
ನಾವದಗಿ ಪೋಸ್ಟ್ - 586 214
ಮುದ್ದೇಬಿಹಾಳ ತಾ||, ವಿಜಯಪುರ ಜಿ||