ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ವಿಜಯಪುರಪಟ್ಟಣವು ಒಂದು ವ್ಯಾಪಾರಿ ಕೇಂದ್ರವಾಗಿದ್ದು ಈ ಪಟ್ಟಣದ ಹೊರಭಾಗದಲ್ಲಿಅಸ್ತಿತ್ತ್ವದಲ್ಲಿರುವ ಮಠವೇ ಶ್ರೀ ಬಸವ ಕಲ್ಯಾಣ ಮಠ. ಸುಮಾರು 1988ರ ಸುಮಾರಿಗೆಸ್ಥಾಪಿತಗೊಂಡಿರುವ ಶ್ರೀ ಬಸವಕಲ್ಯಾಣ ಮಠವು ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕಕಾರ್ಯಚಟುವಟಿಕೆಗಳ ಮೂಲಕ ಈ ಭಾಗದ ಜನಮನದಲ್ಲಿ ಬೇರೂರಿದೆ.ವಿಜಯಪುರ ಪಟ್ಟಣದ ಉತ್ತರ ಭಾಗದಲ್ಲಿ ಅವಳಿ ಬಿಲ್ವ ಮರಗಳು ಬೆಳೆದಕಾರಣಕ್ಕೆ ಇಲ್ಲಿನ ವೀರಶೈವ-ಲಿಂಗಾಯತ ಮುಖಂಡರು ಈ ಪವಿತ್ರ ಸ್ಥಳವನ್ನು“ಸಂಗಮೇಶ್ವರ” ಎಂದು ಹೆಸರಿಸಿ ಸಂಗಮ ಬಸವಣ್ಣನವರ ಮೂರ್ತಿಯನ್ನುಪ್ರತಿಷ್ಠಾಪಿಸುತ್ತಾರೆ. ಮುಂದೆ ಮುಖಂಡರುಗಳೇ ಸೇರಿ ಅಂಕಕಟ್ಟಿ ನಂಜುಂಡಪ್ಪ, ಬಸವಯ್ಯಹಾಗೂ ದೊಡ್ಡಪ್ಪಯ್ಯನವರು ಎಂಬ ಭಕ್ತರ ಸಹಕಾರದೊಂದಿಗೆ ಈಶ್ವರ ಲಿಂಗ,ನವಗ್ರಹಗಳನ್ನು ಸ್ಥಾಪಿಸಿ ಧಾರ್ಮಿಕ ವಾತಾವರಣವನ್ನು ಸೃಷ್ಠಿ ಮಾಡಿದರು.ಈ ರೀತಿ ಈ ಕ್ಷೇತ್ರದಲ್ಲಿ ಧಾರ್ಮಿಕ ವಾತಾವರಣ ಸೃಷ್ಠಿಯಾದ ಮೇಲೆ ಈ ಕ್ಷೇತ್ರಕ್ಕೆಗುರುಗಳ ಅವಶ್ಯಕತೆಯಿದೆಯೆಂದರಿತು ಸಿದ್ದಗಂಗೆಯ ಡಾ. ಶ್ರೀ ಶಿವಕುಮಾರಮಹಾಸ್ವಾಮಿಗಳಲ್ಲಿ ಬಿನ್ನವಿಸಿಕೊಂಡಾಗ ಗುರುಗಳು ಈ ಕ್ಷೇತ್ರಕ್ಕೆ ಶ್ರೀ ಬಸವಕಲ್ಯಾಣ ಮಠಎಂದು ನಾಮಕರಣ ಮಾಡಿ 1988ರಲ್ಲಿ ಶ್ರೀ ನಿ.ಪ್ರ.ಸ್ವ. ಮಹಾದೇವ ಸ್ವಾಮಿಗಳನ್ನು ನೂತನಮಠಕ್ಕೆ ನೇಮಕಗೊಳಿಸಿ ಪಟ್ಟಾಧಿಕಾರದ ಅನುಗ್ರಹ ನೀಡಿದರು.ಶ್ರೀ ಮಹಾದೇವ ಸ್ವಾಮಿಗಳು ಸಿದ್ದಗಂಗೆಯಲ್ಲಿಯೇ ಪ್ರೌಢಶಿಕ್ಷಣ, ಪದವಿ ಹಾಗೂಬಿ.ಎಡ್ ತರಬೇತಿಯನ್ನು ಪಡೆದು ಶ್ರೀ ಶಿವಕುಮಾರ ಮಹಾಸ್ವಾಮಿಗಳ ಕೃಪಾದೃಷ್ಠಿಯಲ್ಲಿಬೆಳೆದವರು. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸಂಸ್ಕøತ ಸಾಹಿತ್ಯದಲ್ಲಿಸ್ನಾತಕೋತ್ತರ ಪದವಿ ಪೂರೈಸಿದ ಶ್ರೀಗಳು ಗುರುಗಳ ಅನುಗ್ರಹದಲ್ಲಿ ಶ್ರೀ ಬಸವ ಕಲ್ಯಾಣಮಠದ ಅಧಿಕಾರವನ್ನು ವಹಿಸಿಕೊಂಡರು. ಶ್ರೀ ಮಹಾದೇವ ಸ್ವಾಮಿಗಳು ಶ್ರೀಮಠದಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಚಟುವಟಿಕೆಗಳನ್ನು ಚುರುಕುಗೊಳಿಸಿದ್ದು ಶ್ರೀಮಠಕ್ಕೆನೂತನ ಕಟ್ಟಡ ನಿರ್ಮಿಸಿ ಹಂತಹಂತವಾಗಿ ಅಭಿವೃದ್ದಿಗೊಳಿಸುತ್ತಿದ್ದಾರೆ ಹಾಗೂ ಸಮಷ್ಠಿಸಮಾಜದ ಸಂಘಟನೆಗೆ ಶ್ರಮಿಸುತ್ತಿರುವ ಶ್ರೀಗಳು ಶೈಕ ್ಷಣಿಕವಾಗಿಯೂಕಾರ್ಯೋನ್ಮುಖರಾಗಿದ್ದಾರೆ.
Swamiji
Swamiji Name :
ಶ್ರೀ ನಿ.ಪ್ರ.ಸ್ವ. ಮಹಾದೇವ ಮಹಾಸ್ವಾಮಿಗಳು
Date of Birth :
16-06-1959
Place :
ಬಿಳುಗಲಿ, ಮಂಡ್ಯ ಜಿ||
Pattadikara :
1988
Photo :
Programs
ಪ್ರತಿ ಹುಣ್ಣಿಮೆಗೆ ವಿಶೇಷ ಪೂಜೆ
ಬಸವ ಜಯಂತಿ ಆಚರಣೆ
ಕಾರ್ತಿಕ ಮಾಸದಲ್ಲಿ ಸಪ್ತಾಹ ಕಾರ್ಯಕ್ರಮ
ಮತ್ತು ಕಡಲೆಕಾಯಿ ಪರ್ಸೆ
Photos
Full Address Kannada
ಶ್ರೀ ಬಸವ ಕಲ್ಯಾಣ ಮಠ ವಿಜಯಪುರ - 562 135
ದೇವನಹಳ್ಳಿ ತಾ||, ಬೆಂಗಳೂರು ಗ್ರಾಮಾಂತರ ಜಿ.