ಶಿಕಾರಿಪುರ ಪಟ್ಟಣದಲ್ಲಿ ಬಯಲು ರಂಗಮಂದಿರದ ಹಿಂಭಾಗ 1999 ರ ಆಗಸ್ಟ್15 ರಂದು ಪೂಜ್ಯಶ್ರೀ ಮಾತೆ ಶರಣಾಂಬಿಕೆಯವರಿಂದ ಪ್ರಾರಂಭವಾದ ಬಸವಾಶ್ರಮವುನೊಂದವರ ನಂದಾದೀಪವಾಗಿ ತಮ್ಮ ಕೊಡುಗೆಯನ್ನು ಸಮಾಜಕ್ಕೆ ನೀಡುತ್ತಿದೆ.ಪೂಜ್ಯಶ್ರೀ ಮಾತೆ ಶರಣಾಂಬಿಕೆಯªರು ಬಸವಾಶ್ರಮವನ್ನು ಆಧ್ಯಾತ್ಮಿಕ ಹಾಗೂವೈಚಾರಿಕತೆಯ ಮುಖ್ಯ ಕೇಂದ್ರವನ್ನಾಗಿ ಮಾಡಬೇಕೆಂದು ಪಣತೊಟ್ಟು ಆ ನಿಟ್ಟಿನಲ್ಲಿಸಮಾಜದ ಶುದ್ಧೀಕರಣ ಮಾಡಬೇಕೆಂದು ಹೋರಾಡುತ್ತಿದ್ದಾರೆ. ಆ ನಿಟ್ಟಿನಲ್ಲಿ ಬಸವ ಸೇವಾಟ್ರಸ್ಟ್ ಎಂಬ ಸಾಮಾಜಿಕ ಚಿಂತನಾ ಸಂಸ್ಥೆಯನ್ನು ಹುಟ್ಟು ಹಾಕಿ ಅದರ ಮೂಲಕ ಬಸವ ತತ್ವಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಹಾಗೆಯೇ 2001 ರಲ್ಲಿ ‘ಶ್ರೀ ಬಸವ ಸೇವಾಅನಾಥಾಲಯ’ದ ಸ್ಥಾಪನೆ, 2006 ರಲ್ಲಿ ‘ಕದಳಿ ವೇದಿಕೆ’ಯನ್ನು ಸ್ಥಾಪಿಸಿದ್ದಾರೆ. ಇವುಗಳಮೂಲಕ ಸಮಾಜದ ಅಭಿವೃದ್ಧಿಯಲ್ಲಿ ತೊಡಗಿಕೊಂಡಿದ್ದಾರೆ.ಪೂಜ್ಯಶ್ರೀ ಮಾತೆಯವರು ನೂತನವಾಗಿ ಆಶ್ರಮದ ಕಟ್ಟಡವನ್ನು ನಿರ್ಮಿಸಿರುವುದಲ್ಲದೆ ಇತ್ತೀಚೆಗೆ ಶಿಕಾರಿಪುರದ ಹೊರವಲಯದಲ್ಲಿ 6 ಎಕರೆ ಭೂಮಿಯನ್ನು ಖರೀದಿಸಿವಿಶ್ವ ಬಸವ ಕೇಂದ್ರವನ್ನು ಸ್ಥಾಪಿಸಲು ಶ್ರಮಿಸುತ್ತಿದ್ದಾರೆ.
Swamiji
Swamiji Name :
ಪೂಜ್ಯ ಶ್ರೀ ಮಾತೆ ಶರಣಾಂಬಿಕೆಯವರು
Date of Birth :
18-7-1970
Place :
ಮುಗುಳುಗೆರೆ ಶಿಕಾರಿಪುರ ತಾ||
Photo :
Programs
ಪ್ರತಿ ತಿಂಗಳ ಮೊದಲನೆ ಸೋಮವಾರ ಮತ್ತು ಮಂಗಳವಾರ "ಜ್ಯೋತಿ" ಕಾರ್ಯಕ್ರಮ. ಪ್ರತಿ ಜನವರಿ 27 ರಿಂದ ಐದು ದಿನಗಳ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು. ಶಿವರಾತ್ರಿ, ಬಸವಜಯಂತಿ, ಅಕ್ಕಮಹಾದೇವಿ ಜಯಂತಿ ಆಚರಣೆ.
Institutions
ಸರ್ವಜ್ಞ ಸಂಗೀತ ಪಾಠಶಾಲೆ. ಅನಾಥಾಶ್ರಮ.
Photos
Full Address Kannada
ಬಸವಾಶ್ರಮ, ಬಯಲು ರಂಗಮಂದಿರ ಹಿಂಭಾಗ ಶಿಕಾರಿಪುರ - 577 427 ಶಿಕಾರಿಪುರ ತಾ., ಶಿವಮೊಗ್ಗ ಜಿ.