ಶ್ರೀಮದ್ರಾಜಾಪುರ ವೀರಧರ್ಮ ಸಿಂಹಾಸನ ಸಂಸ್ಥಾನ ಮಠ – ರಾಜಾಪುರ
ಕರ್ತೃ – ಪರಮ ಪೂಜ್ಯ ಶ್ರೀ ರುದ್ರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು
ಬೆಂಗಳೂರು ನಗರದಿಂದ ಬನ್ನೇರುಘಟ್ಟ ಮಾರ್ಗವಾಗಿ ಆನೇಕಲ್ ಪಟ್ಟಣಕ್ಕೆಸಾಗುವ ಹಾದಿಯಲ್ಲಿ ಸಿಗುವ ರಾಜಾಪುರ ಗ್ರಾಮದ ಮಧ್ಯಭಾಗದಲ್ಲಿ ಶ್ರೀ ಮದ್ರಾಜಾಪುರವೀರಧರ್ಮ ಸಿಂಹಾಸನ ಸಂಸ್ಥಾನ ಮಠವು ಸ್ಥಾಪನೆಯಾಗಿ ವೀರಶೈವ ಧರ್ಮದ ಉನ್ನತಿಗೆಶ್ರಮಿಸುತ್ತಿದೆ. ಶ್ರೀ ರಂಭಾಪುರಿ ಪೀಠದ ಪೀಠಾಧ್ಯಕ್ಷರಾಗಿದ್ದ ಶ್ರೀ ರೇವಣಸಿದ್ದರು ಈ ಸ್ಥಳದಲ್ಲಿಅನುಷ್ಟಾನಗೊಂಡು, ಸ್ಥಳವನ್ನು ಜಾಗೃತಗೊಳಿಸಿ ತಮ್ಮ ಶಿಷ್ಯರಾದ ಶ್ರೀ ರುದ್ರೇಶ್ವರಶಿವಾಚಾರ್ಯ ಮಹಾಸ್ವಾಮಿಗಳನ್ನು ಪಟ್ಟಾಧಿಕಾರ ಮಾಡಿದರೆಂದು ಹೇಳಲಾಗುತ್ತದೆ. ಆದರೆಸ್ಪಷ್ಟತೆಯಿಲ್ಲ.ಶ್ರೀಮಠದ ಪರಂಪರೆಯಲ್ಲಿ ಶತಶತಮಾನಗಳಿಂದ ಹಲವಾರು ಶ್ರೀಗಳು ಅಧಿಕಾರನಡೆಸಿದ್ದಾರೆಂದು ಹೇಳಲಾದರೂ ನಮಗೆ ಈಚೆಗಿನ ಮೂರು ಶ್ರೀಗಳ ಕುರಿತಾಗಿ ದಾಖಲೆಗಳಲಭ್ಯತೆಯಿದೆ. ಪರಂಪರೆಯಲ್ಲಿ ಬಂದಿರುವ ಶ್ರೀ ಪಟ್ಟದ ಚನ್ನಬಸವ ದೇಶೀಕೇಂದ್ರಶಿವಾಚಾರ್ಯರ ಕಾಲದಲ್ಲಿ ಶ್ರೀಮಠವು ಹೆಚ್ಚು ಪ್ರಸಿದ್ದಿಗೆ ಬಂದಂತೆ ತೋರುತ್ತದೆ. 1853ರಲ್ಲಿಜನಿಸಿದ್ದ ಶ್ರೀಗಳು ಶ್ರೀಮಠವನ್ನು ಸರ್ವಾಂಗೀಣವಾಗಿ ಅಭಿವೃದ್ದಿಗೊಳಿಸಿದ್ದು, ಇವರಸೇವೆಯಿಂದ ಶ್ರೀ ರಂಭಾಪುರಿ ಪೀಠದ ಅಂದಿನ ಜಗದ್ಗುರುಗಳಾಗಿದ್ದ ಶ್ರೀ ಶಿವಾನಂದಶಿವಾಚಾರ್ಯ ಭಗವತ್ಪಾದರ ಕೃಪಾದೃಷ್ಟಿಗೆ ಪಾತ್ರರಾಗಿದ್ದರು.ಇವರ ನಂತರ ಬಂದ ಶ್ರೀ ವೃಷಭೇಂದ್ರ ದೇಶಿಕೇಂದ್ರ ಮಹಾಸ್ವಾಮಿಗಳುಗುರುವಿರಕ್ತರೆಂಬ ಬೇದವನ್ನು ತೊಡೆದು ಹಾಕಲು ಶ್ರಮಿಸಿದ ಮಹನೀಯರು. ಅಷ್ಟಾಂಗಯೋಗದ ಮೂಲಕ ಶಿವಯೋಗವನ್ನು ಸಾಧಿಸಿದ ಇವರು ಆಚಾರ ವಿಚಾರಗಳಿಂದ ಅಪಾರಭಕ್ತರನ್ನು ಸಂಪಾದಿಸಿದ್ದರು. ಇವರ ನಂತರ ಬಂದ ಹಿಂದಿನ ಶ್ರೀಗಳಾದ ಶ್ರೀ ಪಟ್ಟದ ರೇಣುಕಶಿವಾಚಾರ್ಯ ಮಹಾಸ್ವಾಮಿಗಳು ದೇಶದ ನಾನಾಭಾಗಗಳಲ್ಲಿ ಸಂಚರಿಸಿ ವೀರಶೈವಧರ್ಮದ ತತ್ತ್ವಗಳನ್ನು ಪ್ರಚುರಪಡಿಸಿ ಧರ್ಮವನ್ನು ಬೆಳೆಸಿದ್ದಲ್ಲದೇ ಮಠವನ್ನುಅಭಿವೃದ್ದಿಗೊಳಿಸಿದರು.ಈಗಿನ ಶ್ರೀಗಳಾದ ಶ್ರೀ ಪಟ್ಟದ ರಾಜೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳುಪರಂಪರೆಯ ಗುರುಗಳ ಹಾದಿಯಲ್ಲಿ ಶ್ರೀಮಠವನ್ನು ಪ್ರಗತಿಪಥದಲ್ಲಿ ಕೊಂಡೊಯ್ಯುತ್ತಿದ್ದಾರೆ.ಮಠದ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಚಟುವಟಿಕೆಗಳನ್ನು ಚುರುಕುಗೊಳಿಸಿರುವಶ್ರೀಗಳು ಭಕ್ತರ ಸಂಪ್ರೀತಿಗೆ ಪಾತ್ರರಾಗಿದ್ದಾರೆ.
Swamiji
Swamiji Name :
ಶ್ರೀ. ಷ.ಬ್ರ. ಪಟ್ಟದ ರಾಜೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು
Photo :
Programs
ಪ್ರತಿ ಹುಣ್ಣಿಮೆ, ಅಮವಾಸ್ಯೆಗೆ ವಿಶೇಷ ಪೂಜೆ
Photos
Full Address Kannada
ಶ್ರೀಮದ್ರಾಜಾಪುರ ವೀರಧರ್ಮ ಸಿಂಹಾಸನ ಸಂಸ್ಥಾನ ಮಠ
ರಾಜಾಪುರ, ಹೊನ್ನಾಗರ (ಪೋ) - 562 106
ಆನೇಕಲ್ ತಾ||, ಬೆಂಗಳೂರು ನಗರ ಜಿಲ್ಲೆ